Connect with us

FILM

ಯುವ ಉದ್ಯಮಿ ಜೊತೆ ಅಮಲಾ ಪೌಲ್ ಲಿಪ್ ಲಾಕ್

Published

on

ಹೆಬ್ಬುಲಿ ಬೆಡಗಿ ನಟಿ ಅಮಲಾ ಪೌಲ್ ಉದ್ಯಮಿಯೊಬ್ಬರ ಜೊತೆ ಲಿಪ್ ಲಾಕ್ ಮಾಡಿರುವ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದೆ.

ಹೆಬ್ಬುಲಿ ಬೆಡಗಿ ನಟಿ ಅಮಲಾ ಪೌಲ್ ಉದ್ಯಮಿಯೊಬ್ಬರ ಜೊತೆ ಲಿಪ್ ಲಾಕ್ ಮಾಡಿರುವ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದೆ.

ನಟಿ ಅಮಲಾ ಜೊತೆ ಲಿಪ್ ಲಾಕ್ ಮಾಡಿಕೊಂಡಿದ್ದ ವಿಡಿಯೋವನ್ನು ಜಗತ್ ದೇಸಾಯಿ ಇನ್ಸ್ಟಾದಲ್ಲಿ ಶೇರ್ ಮಾಡಿದ್ದರು.

ಜಗತ್ ದೇಸಾಯಿ ಯುವ ಉದ್ಯಮಿಯಾಗಿದ್ದು, ಅವರೊಂದಿಗೆ ಅಮಲಾ ಎರಡನೇ ಮದುವೆ ಆಗಲಿದ್ದಾರೆ ಎನ್ನುವುದು ಈಗ ಬಹಿರಂಗವಾಗಿದೆ.

ಅಮಲಾ ಪೌಲ್, ಸಿನಿಮಾಗಳಿಗಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿ ಆದವರು.2014ರಲ್ಲಿ ತಮಿಳು ನಿರ್ದೇಶಕ ವಿಜಯ್ ಅವರನ್ನು ಪ್ರೀತಿಸಿ ಮದುವೆಯಾದರು.

ಆದರೆ, ಆ ಸಂಬಂಧ ತುಂಬಾ ದಿನ ಉಳಿಯಲಿಲ್ಲ. ಮದುವೆಯಾದ ಮೂರೇ ಮೂರು ವರ್ಷಕ್ಕೆ ಜೀವನ ಮುರಿದು ಬಿತ್ತು. ಇದೀಗ ಬಾಯ್ ಫ್ರೆಂಡ್ ಜೊತೆಗಿನ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

FILM

ನಟಿಗೆ ದುಬಾರಿ IPL ಟಿಕೆಟ್ ಖರೀದಿ ಮಾಡಿದ ‘ದಳಪತಿ ವಿಜಯ್’.! ಆ ನಟಿ ಯಾರು ಗೊತ್ತಾ?

Published

on

ಚೆನ್ನೈ/ಮಂಗಳೂರು: ದಳಪತಿ ವಿಜಯ್ ಸಿನೆಮಾ ಬಂದ್ರೆ ಸಾಕು ಜನರು ಥಿಯೇಟರ್‌ಗೆ ಮುಗಿ ಬೀಳ್ತಾರೆ. ಸಾಲು ಸಾಲು ಸೂಪರ್ ಹಿಟ್ ಮೂವಿಗಳನ್ನು ನೀಡಿರುವ ಈ ನಟ ಈಗ ಕೆಲವೊಂದು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ರಾಜಕೀಯದತ್ತ ಒಲವು ಮಾಡಿರುವ ವಿಜಯ್ ರಾಜಕೀಯಕ್ಕೆ ಸೇರುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಇನ್ನೇನು ಚಿತ್ರರಂಗಕ್ಕೆ ಫುಲ್‌ಸ್ಟಾಪ್‌ ಇಟ್ಟು ರಾಜಕೀಯದತ್ತ ಮುಖ ಮಾಡಲಿದ್ದಾರೆ.  ಈ ಮಧ್ಯೆ ವಿಜಯ್ ನಟಿಯೊಬ್ಬರಿಗೆ ದುಬಾರಿ ಐಪಿಎಲ್‌ ಟಿಕಿಟ್ ಖರೀದಿ ಮಾಡಿದ್ದಾರೆ.

vijay

ಈ ನಟಿ ಯಾರು ಗೊತ್ತಾ?

ವಿಜಯ್ ನಟಿ ಒಬ್ಬರಿಗೆ ಐಪಿಎಲ್‌ನ ದುಬಾರಿ ಟಿಕಿಟ್ ಖರೀದಿ ಮಾಡಿಕೊಟ್ಟಿದ್ದಾರೆ. ಈ ಮ್ಯಾಚ್ ಚೆನ್ನೈನಲ್ಲಿ ನಡಿದಿತ್ತು. ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಹಾಟ್ ಮ್ಯಾಚ್‌ ಇದಾಗಿತ್ತು. ಇನ್ನು ಈ ನಟಿ ಬೇರೆ ಯಾರೂ ಅಲ್ಲ ಮಾಣಿಕ್ಯ ಸಿನೆಮಾದ “ವರಲಕ್ಷ್ಮೀ ಶರತ್ ಕುಮಾರ್”. ಈ ವಿಚಾರವನ್ನುಖುದ್ದು ವರಲಕ್ಷ್ಮೀ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.  ‘ನಾನು ಐಪಿಎಲ್‌ ನ ಎರಡು ಮ್ಯಾಚ್‌ ವೀಕ್ಷಣೆ ಮಾಡಿದ್ದು ನನಗೆ ವಿಜಯ್ ಅವರು ಟಿಕೆಟ್ ಖರೀದಿ ಮಾಡಿಕೊಟ್ಟಿದ್ದರು’ ಎಂದು ಹೇಳಿದ್ದಾರೆ.

“ನಿವೇದಿತಾಜೈನ್”ಗೆ ಸಾವಿನ ಸುಳಿವು ಮೊದಲೇ ಇತ್ತಾ.!? ಈಬಗ್ಗೆ ನಿವೇದಿತಾ ತಾಯಿ ಹೇಳಿದ್ದೇನು ಗೊತ್ತಾ?

ವರಲಕ್ಷ್ಮೀ ಶರತ್ ಕುಮಾರ್ ಕನ್ನಡ, ತೆಲುಗು, ಮಲಯಾಳಂ, ತಮಿಳು ಸಿನೆಮಾಗಳಲ್ಲಿ ನಟಿಸಿದ್ದಾರೆ. ಇನ್ನು ‘ಮಾಣಿಕ್ಯ’ ಸಿನೆಮಾದಲ್ಲಿ ಸುದೀಪ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ರನ್ನ’, ವಿಸ್ಮಯ’ ಕನ್ನಡ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಅದಲ್ಲದೇ ಇತ್ತೀಚಿಗೆ ಯಾವ ಕನ್ನಡ ಸಿನೆಮಾದಲ್ಲೂ ಕಾಣಿಸಿಕೊಂಡಿಲ್ಲ. ‘ಹನುಮಾನ್’ ಸಿನೆಮಾದಲ್ಲಿ ನಟಿಸಿದ್ದಾರೆ. ಇನ್ನು ಆರ್ಟ್‌ ಗ್ಯಾಲರಿ ಓನರ್‌ ನಿಕೋಲೈ ಸಹದೇವ್‌ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Continue Reading

FILM

“ನಿವೇದಿತಾಜೈನ್”ಗೆ ಸಾ*ವಿನ ಸುಳಿವು ಮೊದಲೇ ಇತ್ತಾ.!? ಈಬಗ್ಗೆ ನಿವೇದಿತಾ ತಾಯಿ ಹೇಳಿದ್ದೇನು ಗೊತ್ತಾ?

Published

on

ಮಂಗಳೂರು: ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ನಾಯಕಿಯರು ದುರಂತ ಎಂಬಂತೆ ಸಾವಿನ ಕದ ತಟ್ಟಿದ್ದಾರೆ. ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಮಿಂಚುತ್ತಿದ್ದ ಮೋಹಕ ನಟಿಯರು ದುರಂತವಾಗಿ ಸಾವಿಗೀಡಾಗಿದ್ದಾರೆ. ಅದರಲ್ಲಿ ಒಬ್ಬರು ಮುದ್ದು ಮುಖದ ಚೆಲುವೆ ನೀಳಕಾಯದ ಸುಂದರಿ ನಿವೇದಿತಾ ಜೈನ್. ಹೌದು, ಅಲ್ಪ ಕಾಲ ಬದುಕಿದ್ದರೂ ಇವರು ನಟಿಸಿರುವ ಸಿನೆಮಾಗಳು ಹಿಟ್‌ ಲಿಸ್ಟ್‌ನಲ್ಲಿ ಸೇರಿಕೊಂಡಿದೆ. ಆದರೆ ಸಣ್ಣ ವಯಸ್ಸಿಲ್ಲಿಯೇ ಇಹಲೋಕ ಸೇರಿರುವುದು ಮಾತ್ರ ದುರಂತವೇ ಸರಿ.

niveditha jain

ಇನ್ನು ಸಣ್ಣ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಿವೇದಿತಾ ತನ್ನ 14 ನೇ ವರ್ಷಕ್ಕೆ ಮಿಸ್‌ ಬೆಂಗಳೂರು ಪಟ್ಟ ಮುಡಿಗೇರಿಸಿಕೊಂಡಿದ್ದರು.  ಒಂಭತ್ತನೇ ತರಗತಿಯಲ್ಲಿರುವಾಗಲೇ ಮಿಸ್ ಬೆಂಗಳೂರು ಆಗಿದ್ದರು. ಇಲ್ಲಿಂದ ಇವರ ಬದುಕೇ ಬದಲಾಯಿತಂತೆ. ಇನ್ನು ಇವರ ಫೊಟೊಗಳು ಪೇಪರ್ , ಮೆಗಾಝಿನ್‌ಗಳಲ್ಲಿ ಪ್ರಕಟಗೊಂಡಿತ್ತು. ಈ ಸಮಯದಲ್ಲಿ ರಾಘವೇಂದ್ರ ರಾಜಕುಮಾರ್ ನಟಿಸಲಿದ್ದ “ಶಿವರಂಜಿನಿ” ಚಿತ್ರಕ್ಕೆ ನಾಯಕಿಯಾಗಿ ಅಪ್ರೋಚ್ ಮಾಡಲಾಗಿತ್ತು. ಇದಕ್ಕಿಂತ ಮೊದಲು ನಿವೇದಿತಾಳಿಗೆ ಅನೇಕ ಸಿನೆಮಾ ಆಫರ್‌ಗಳು ಬಂದರೂ ಕೂಡಾ ಇವರು ಇಂಟ್ರಸ್ಟ್ ತೋರಿಸಿರಲಿಲ್ಲ. ಆದರೆ ಡಾ. ರಾಜ್‌ಕುಮಾರ್ ಅವರ ಕಡೆಯಿಂದ ರಾಘಣ್ಣನ ಸಿನೆಮಾಗೆ ನಾಯಕಿಯಾಗಿ ನಟಿಸುವಂತೆ ಆಫರ್ ಬಂದಿತ್ತು. ಇನ್ನು ತುಂಬಾನೆ ಚಿಕ್ಕವಳಾಗಿದ್ದ ಇವರಿಗೆ ಸಿನೆಮಾಗಳಲ್ಲಿ ನಟಿಸುವ ಆಸಕ್ತಿ ಇಲ್ಲವಾಗಿತ್ತು. ಆದರೆ ನಿವೇದಿತಾಳಿಗೆ ರಾಜ್‌ಕುಮಾರ್‌ರವರ ಜೊತೆ ನಟಿಸಲು ಬಹಳ ಆಸಕ್ತಿ ಇತ್ತಂತೆ. ಹಾಗಾಗಿ ಅವರ ಬ್ಯಾನರ್‌ನಲ್ಲಿ ಮೂಡಿಬರುವ “ಶಿವರಂಜಿನಿ” ಸಿನೆಮಾಗೆ ನಟನೆ ಮಾಡಲು ಒಪ್ಪಿದ್ದರಂತೆ ನಿವೇದಿತಾ.

 ಸಲ್ಮಾನ್ ಖಾನ್ ಜೊತೆ ನಟಿಸಲಿದ್ದಾರೆ ರಶ್ಮಿಕಾ ಮಂದಣ್ಣ; ಯಾವ ಸಿನಿಮಾ? ಇಲ್ಲಿದೆ ಡಿಟೇಲ್ಸ್

ನಟಿಯ ಸಾವಿನ ಸುಳಿವು ಮೊದಲೇ ಇತ್ತಾ..?

niveditha

ನಿವೇದಿತಾ ಜೈನ್‌ ಇವರ ಸಾವಿನ ಬಗ್ಗೆ ನೂರಾರು ಮಾತುಗಳು ಕೇಳಿ ಬರುತ್ತಿತ್ತು. ವದಂತಿಗಳು ಹಬ್ಬಿತ್ತು. ಇನ್ನು ನಿವೇದಿತಾ ಬದುಕಿ ಬಾಳಿದ್ದು ಮಾತ್ರ ಕೇವಲ 19 ವರ್ಷ. ಆದರೆ ಅಷ್ಟರಲ್ಲೇ 12ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಅಭಿನಯಿಸಿದ್ರು.  ಬದುಕಿ ಉಳಿದಿದ್ರೆ ಈಗ ಬಾಲಿವುಡ್‌ ನಲ್ಲೂ ಸ್ಟಾರ್ ಆಗ್ತಿದ್ರು ಈಕೆ.  ಮಗಳ ಸಾವಿನ ಬಗ್ಗೆ ಸ್ವತಃ ಅವರ ತಾಯಿ ಪ್ರಿಯಾ ಜೈನ್ ಖಾಸಗಿ ಯೂಟ್ಯೂಬ್ ಚಾನೆಲ್ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಮತ್ತೆ ಡೀಪ್ ಫೇಕ್ ಗೆ ಬಲಿಯಾದ ಆಲಿಯಾ ಭಟ್; ನಟಿಯ ವೀಡಿಯೋ ನೋಡಿ ಫ್ಯಾನ್ಸ್ ಶಾಕ್!

ಕೇರಳದ ವ್ಯಕ್ತಿಯಿಂದ ಸಿಕ್ಕಿತ್ತು ಸಾವಿನ ಮುನ್ಸೂಚನೆ:

ಕೊಲ್ಲೂರು ದೇವಸ್ಥಾನಕ್ಕೆ ನಿವೇದಿತಾ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದರು. ಈ ವೇಳೆ ಕೇರಳದಿಂದ ಬಂದವರು 45 ದಿನಗಳ ಉಪವಾಸದಲ್ಲಿದ್ದು ಪೂಜೆ ಮಾಡುತ್ತಿದ್ದರು. ಅವರು ಏಕಾಏಕಿ ನಮ್ಮನ್ನು ಅವರ ಬಳಿ ಕರೆಸಿಕೊಂಡರು. ನಮ್ಮ ಮನೆಯ ಎಲ್ಲಾ ವಿಚಾರವನ್ನು ಸ್ಪಷ್ಟವಾಗಿ ವಿವರಿಸಿದರು. ಮನೆಯ ಅಡುಗೆ ಕೋಣೆ ಯಾವ ಭಾಗದಲ್ಲಿದೆ. ಯಾವ ಭಾಗದಲ್ಲಿ ದೇವರ ಕೋಣೆ ಇದೆ ಹೀಗೆ..ಎಲ್ಲಾ ಇರೋದನ್ನು ಕಂಡ ಹಾಗೆ ಹೇಳಿದ್ದರು. ಇನ್ನು ಮಗಳು ನಿವೇದಿತಾಳನ್ನು ನೋಡಿ ಇವಳು ಅಲ್ಪಾಯುಷಿ ಎಂದು ಹೇಳಿದ್ರು.  ಇವಳ ಹಣೆಗೆ ಬಲವಾದ ಪೆಟ್ಟು ಬೀಳಲಿದೆ. ನೀವು ಕೂಡಲೇ ಮನೆಯನ್ನು ಬದಲಾಯಿಸಿ ಎಂದು ಹೇಳಿದ್ದರು. ನಾವು ಕೂಡಾ ಬೇರೆ ಮನೆಯನ್ನು ಹುಡುಕಾಡಲು ಆರಂಭಿಸಿದೆವು. ಆದರೆ ದುರಾದೃಷ್ಟವಶಾತ್ ನಮಗೆ ಮನೆ ಸಿಗಲಿಲ್ಲ. ನಮ್ಮ ಮಗಳು ಕೂಡಾ ನಮ್ಮ ಪಾಳಿಗೆ ಉಳಿಲಿಲ್ಲಾ. ಅವರು ಏನು ಹೇಳಿದ್ದರೋ ಹಾಗೆ ನಡೆದು ಹೋಯಿತು ಎಂದು ನಿವೇದಿತಾ ತಾಯಿ ಪ್ರಿಯಾ ಜೈನ್ ಹೇಳಿದ್ರು.

ಇನ್ನು ಈ ಬಗ್ಗೆ ಕೆಲವು ವರದಿಗಳಲ್ಲಿ ನಿವೇದಿತಾ ಈ ವಿಷಯ ತಿಳಿದ ಕೂಡಲೇ ದಿಗ್ಭ್ರಾಂತಳಾಗಿದ್ದಾಳೆ ಎಂದೆಲ್ಲ ಸುದ್ದಿಯಾಗಿತ್ತು. ಆದರೆ ನಿವೇದಿತಾ ಜೈನ್ ‘ನಮ್ಮದೇ ಆದ ಕರ್ಮ ಇರುತ್ತೆ ನಂಗೆ ಅಷ್ಟು ಬೇಗ ಏನೂ ಆಗವುದಿಲ್ಲ’ ಅಂತ ಹೇಳುತ್ತಿದ್ದರು. ಇನ್ನು ಜೀವನದಲ್ಲಿ ತುಂಬಾನೇ ಪಾಸಿಟಿವ್ ಆಗಿದ್ರಂತೆ ನಿವೇದಿತಾ.

 

Continue Reading

FILM

ಸಲ್ಮಾನ್ ಖಾನ್ ಜೊತೆ ನಟಿಸಲಿದ್ದಾರೆ ರಶ್ಮಿಕಾ ಮಂದಣ್ಣ; ಯಾವ ಸಿನಿಮಾ? ಇಲ್ಲಿದೆ ಡಿಟೇಲ್ಸ್

Published

on

ಮಂಗಳೂರು / ಮುಂಬೈ : ರಶ್ಮಿಕಾ ಮಂದಣ್ಣ ಯಾರಿಗೆ ತಾನೇ ಗೊತ್ತಿಲ್ಲ. ಸ್ಯಾಂಡಲ್ ವುಡ್ ನ ‘ಕಿರಿಕ್ ಪಾರ್ಟಿ’ ಮೂಲಕ ಜನಮನ ಗೆದ್ದು, ಸದ್ಯ ಪರಭಾಷೆ ಅಂಗಳಲ್ಲಿ ಮಿಂಚುತ್ತಿರುವ ನಟಿ. ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಬಾಲಿವುಡ್ ಸಿನಿಮಾ ‘ಅನಿಮಲ್’ ಇತ್ತೀಚೆಗೆ ತೆರೆಕಂಡು ಭಾರೀ ಯಶಸ್ಸನ್ನು ಬಾಚಿಕೊಂಡಿತ್ತು. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಜೊತೆ ಅವರು ನಟಿಸಿದ್ದರು. ಇನ್ನು ರಶ್ಮಿಕಾ ಮಂದಣ್ಣ ಬಾಲಿವುಡ್ ಅಂಗಳದಲ್ಲಿ ಭದ್ರವಾಗಿ ನೆಲೆಯೂರಲಿದ್ದಾರೆ ಎಂದೇ ಭಾಸವಾಗಿತ್ತು. ಇದೀಗ ಮತ್ತೊಂದು ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ.

ಭಾಯ್ ಜಾನ್ ಜೊತೆ ರಶ್ಮಿಕಾ :


‘ಅನಿಮಲ್’ ಸಿನಿಮಾ ಭಾರೀ ಯಶಸ್ಸನ್ನು ಬಾಚಿಕೊಂಡಿತ್ತು. ಇದೀಗ ರಶ್ಮಿಕಾ ಮಂದಣ್ಣ ನಟ ಸಲ್ಮಾನ್ ಖಾನ್ ಜೊತೆ ನಟಿಸಲಿದ್ದಾರೆ. ಎ.ಆರ್. ಮುರುಗದಾಸ್ ನಿರ್ದೇಶನದ ಮುಂದಿನ ಬಹುನಿರೀಕ್ಷಿತ ‘ಸಿಕಂದರ್’ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಈ ಚಿತ್ರ ಮುಂದಿನ ಈದ್ ಹಬ್ಬಕ್ಕೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

2022 ರಲ್ಲಿ ಅಮಿತಾಬ್ ಬಚ್ಚನ್ ನಟನೆಯ ‘ಗುಡ್ ಬೈ’ ಸಿನಿಮಾ ಮೂಲಕ ರಶ್ಮಿಕಾ ಬಾಲಿವುಡ್ ಅಂಗಳಕ್ಕೆ ಲಗ್ಗೆ ಇಟ್ಟಿದ್ದರು. ಬಳಿಕ ಮಿಷನ್ ಮಜ್ನು ಸಿನಿಮಾದಲ್ಲಿ ನಟಿಸಿದ್ದರು. ಆದಾದ ಬಳಿಕ ಅನಿಮಲ್ ಸಿನಿಮಾ ಭಾರೀ ಯಶಸ್ಸು ತಂದು ಕೊಟ್ಟಿತ್ತು. ಸದ್ಯ ಅವರು ಅಲ್ಲು ಅರ್ಜುನ್ ಜೊತೆ ನಟಿಸಿದ ‘ಪುಷ್ಪ : ದಿ ರೂಲ್’ ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. ಅಲ್ಲದೇ ತಮಿಳೀನಲ್ಲಿ ಧನುಷ್ ಜೊತೆಗೆ ಕುಬೇರ ಸಿನಿಮಾ ದಲ್ಲಿ ನಟಿಸುತ್ತಿದ್ದಾರೆ. ವಿಕ್ಕಿ ಕೌಶಲ್ ಜೊತೆ ‘ಚಾವ’ ಸಿನಿಮಾದಲ್ಲಿ ಅವರು ಬಿಝಿಯಾಗಿದ್ದಾರೆ.

ರಶ್ಮಿಕಾ ಟ್ವೀಟ್ :

ಸಲ್ಮಾನ್ ಖಾನ್ ಜೊತೆಗೆ ಇದೇ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಎ.ಆರ್.ಮುರುಗದಾಸ್ ನಿರ್ದೇಶನದ ‘ಸಿಕಂದರ್’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಪಾತ್ರವಾಗುತ್ತಿರುವ ಬಗ್ಗೆ ನಡಿಯಾಲ್ವಾಲ ಗ್ರಾಂಡ್ ಸನ್ ಖಾತೆಯ ಮೂಲಕ ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ : ಪ್ರಜ್ವಲ್ ಪ್ರಕರಣದ ನಡುವೆ ಖಾಸಗಿ ವೀಡಿಯೋ ವೈರಲ್; ಜ್ಯೋತಿ ರೈ ಹೇಳಿದ್ದೇನು?

ರಶ್ಮಿಕಾ ಮಂದಣ್ಣ ಕೂಡ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಮುಂದಿನ ಸಿನಿಮಾದ ಬಗ್ಗೆ ಕೇಳುತ್ತಿದ್ದವರಿಗೆ ಇಲ್ಲಿದೆ ಮಾಹಿತಿ. ಸರ್ಪ್ರೈಸ್…ಸಿಕಂದರ್ ಸಿನಿಮಾದ ಭಾಗವಾಗಿರುವುದು ನನಗೆ ಹೆಮ್ಮೆಯ ವಿಚಾರ ಎಂದು ಬರೆದುಕೊಂಡಿದ್ದಾರೆ.

Continue Reading

LATEST NEWS

Trending