Connect with us

    LATEST NEWS

    ಬಾಗಿಲು ತೆರೆದ ಕೇದಾರನಾಥ…ಹರಿದು ಬರುತ್ತಿರುವ ಭಕ್ತ ಸಾಗರ!

    Published

    on

    ಮಂಗಳೂರು/ ಉತ್ತರಾಖಂಡ :   ಚಾರ್ ಧಾಮ್ ಯಾತ್ರೆ ಮಾಡುವ ಆಸೆ ಹಲವಾರು ಭಕ್ತರಲ್ಲಿ ಇರುತ್ತದೆ. ಇದೀಗ ಭಕ್ತರ ಕನಸು ಈಡೇರುವ ಸಮಯ ಬಂದಿದ್ದು, ಇಂದಿನಿಂದ(ಮೇ 10) ಚಾರ್ ಧಾಮ್‌ ಯಾತ್ರೆ ಆರಂಭಗೊಂಡಿದೆ. ಕೇದಾರನಾಥ, ಬದರಿನಾಥ ಹಾಗೂ ಗಂಗೋತ್ರಿ ಧಾಮಗಳಿಗೆ ತೆರಳಬೇಕು ಎಂಬ ಹೆಬ್ಬಯಕೆ ಹೊಂದಿರುವವರು ಪ್ರಯಾಣ ಹೊರಡಬಹುದಾಗಿದೆ.
    ಮೇ 10 ರಂದು ಉತ್ತರಾಖಂಡದ ಚಾರ್ ಧಾಮ್ ಯಾತ್ರೆ ಆರಂಭವಾಗಿದೆ. ಬೆಳಿಗ್ಗೆ 6:55 ಕ್ಕೆ ಕೇದಾರನಾಥದ ಬಾಗಿಲು ತೆರೆಯಲಾಯಿತು ಮತ್ತು 10:29 ಕ್ಕೆ ಯಮುನೋತ್ರಿಯ ಬಾಗಿಲು ತೆರೆಯಲಾಯಿತು. ಮಧ್ಯಾಹ್ನ 12:25ಕ್ಕೆ ಗಂಗೋತ್ರಿ ಧಾಮದ ಬಾಗಿಲು ತೆರೆಯಲಾಗಿದೆ. ಬದರಿನಾಥ ದೇವಸ್ಥಾನದಲ್ಲಿ ಮೇ 12 ರಿಂದ ದರ್ಶನ ಆರಂಭವಾಗಲಿದೆ.


    22.15 ಲಕ್ಷ ಭಕ್ತರು ನೋಂದಣಿ :

    ಕೇದಾರನಾಥದ ಬಾಗಿಲು ತೆರೆದ ನಂತರ ಸಿಎಂ ಪುಷ್ಕರ್ ಸಿಂಗ್ ಧಾಮಿ ಪತ್ನಿ ಸಮೇತ ದೇವರ ದರ್ಶನ ಪಡೆದರು. ಈ ನಾಲ್ಕು ಧಾಮಗಳಲ್ಲಿ ದಿನದ ತಾಪಮಾನವು 0 ರಿಂದ 3 ಡಿಗ್ರಿಗಳಷ್ಟು ದಾಖಲಾಗುತ್ತಿದೆ. ರಾತ್ರಿ ವೇಳೆ ಮೈನಸ್‌ ಡಿಗ್ರಿ ತಲುಪುತ್ತಿದೆ. ಆದ್ರೆ, ಇದ್ಯಾವುದನ್ನೂ ಪರಿಗಣಿಸದೆ ಸುಮಾರು 10 ಸಾವಿರ ಭಕ್ತರು ಕೇದಾರನಾಥ ಧಾಮಕ್ಕೆ 16 ಕಿ.ಮೀ ದೂರ ಇರೋ ಗೌರಿಕುಂಡ್ ತಲುಪಿದ್ದಾರೆ.

    15 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಹರಿದ್ವಾರ ಮತ್ತು ಋಷಿಕೇಶ ತಲುಪಿದ್ದಾರೆ. ಇಲ್ಲಿಯವರೆಗೆ 22.15 ಲಕ್ಷಕ್ಕೂ ಹೆಚ್ಚು ಭಕ್ತರು ಚಾರ್ ಧಾಮ್ ಯಾತ್ರೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷ ದಾಖಲೆಯ 55 ಲಕ್ಷ ಜನರು ಭೇಟಿ ನೀಡಿದ್ದರು.

    ಎಷ್ಟು ಭಕ್ತರಿಗೆ ಅವಕಾಶ?

    ಕೇದಾರನಾಥ-ಬದರಿನಾಥ ದೇವಸ್ಥಾನ ಸಮಿತಿ ಅಧ್ಯಕ್ಷ ಅಜಯೇಂದ್ರ ಅಜಯ್ ಪ್ರಕಾರ, ಮೇ 9 ರಂದು ಸಂಜೆ 4 ಗಂಟೆಗೆ ಬಾಬಾನ ಪಂಚಮುಖಿ ಡೋಲಿ ಕೇದಾರಧಾಮ್ ತಲುಪಿದಾಗ, 5 ಸಾವಿರ ಜನರು ಸೇರಿದ್ದರು. ಈ ಬಾರಿ ಕೇದಾರನಾಥಕ್ಕೆ ಭಕ್ತರ ಭೇಟಿಯನ್ನು ಸೀಮಿತಗೊಳಿಸಲಾಗಿದೆ. ಪ್ರತಿ ನಿತ್ಯ ಕೇವಲ 15 ಸಾವಿರ ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

    ಕಳೆದ ವರ್ಷ ದಾಖಲೆಯ 55 ಲಕ್ಷ ಜನರು ಆಗಮಿಸಿದ್ದರಿಂದ ವ್ಯವಸ್ಥೆಗೆ ಅಡ್ಡಿಯಾಗಿತ್ತು. ಹೀಗಾಗಿ ಉತ್ತರಾಖಂಡ ಪೊಲೀಸ್ ಮತ್ತು ಪ್ರವಾಸೋದ್ಯಮ ಇಲಾಖೆ ಮೊದಲ ಬಾರಿಗೆ ಈ ತೀರ್ಮಾನ ಕೈಗೊಂಡಿದೆ. ಒಂದು ದಿನದಲ್ಲಿ 15 ಸಾವಿರ ಭಕ್ತರು ಕೇದಾರನಾಥ ಧಾಮಕ್ಕೆ, 16 ಸಾವಿರ ಮಂದಿ ಬದರಿನಾಥ ಧಾಮಕ್ಕೆ, 9 ಸಾವಿರ ಭಕ್ತರು ಯಮುನೋತ್ರಿಗೆ ಮತ್ತು 11 ಸಾವಿರ ಮಂದಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ.

    ಸೂಕ್ತ ವ್ಯವಸ್ಥೆ :
    ಮೊದಲ ಬಾರಿಗೆ ಚಾರ್ ಧಾಮ್ ಯಾತ್ರೆ ಮಾರ್ಗದಲ್ಲಿ 400ಕ್ಕೂ ಹೆಚ್ಚು ವೈದ್ಯರ ನಿಯೋಜನೆ ಮಾಡಲಾಗಿದೆ. ಇವರಲ್ಲಿ 256 ತುರ್ತು ವೈದ್ಯಕೀಯ ಅಧಿಕಾರಿಗಳು ಮತ್ತು ತಜ್ಞ ವೈದ್ಯರು ಸೇರಿದ್ದಾರೆ. ಭಕ್ತರು ಪ್ರಯಾಣದ ಸಮಯದಲ್ಲಿ ಕನಿಷ್ಠ 7 ದಿನಗಳವರೆಗೆ ಯೋಜಿಸಬೇಕು. ಇದರಿಂದ ದೇಹವು ಹೆಚ್ಚುತ್ತಿರುವ ಮತ್ತು ಕಡಿಮೆಯಾಗುವ ತಾಪಮಾನಕ್ಕೆ ಒಗ್ಗಿಕೊಳ್ಳುತ್ತದೆ.

    ಇದನ್ನೂ ಓದಿ : ಮಂಗಳೂರಿನಲ್ಲಿ ಬೆಳಕಿಗೆ ಬಂತು ಬಹುದೊಡ್ಡ ಆನ್ಲೈನ್ ವಂಚನೆ ಪ್ರಕರಣ; ಕೋಟಿಗಟ್ಟಲೆ ಕಳೆದುಕೊಂಡ ನಿವೃತ್ತ ಇಂಜಿನಿಯರ್

    ಸೂಪರ್‌ಫಾಸ್ಟ್ ನೆಟ್‌ವರ್ಕ್ ಲಭ್ಯ :

    ಕೇದಾರನಾಥದ ಸಂಪೂರ್ಣ ಟ್ರ್ಯಾಕ್‌ನಲ್ಲಿ 4G ಮತ್ತು 5G ನೆಟ್‌ವರ್ಕ್ ಲಭ್ಯವಿರುತ್ತದೆ. ಇದಕ್ಕಾಗಿ 4 ಟವರ್‌ಗಳನ್ನು ಅಳವಡಿಸಲಾಗಿದೆ. ಕಳೆದ ವರ್ಷ, ಈ ಟ್ರ್ಯಾಕ್‌ನಲ್ಲಿ ಕೆಲವು ಸ್ಥಳಗಳಲ್ಲಿ ಮಾತ್ರ ನೆಟ್‌ವರ್ಕ್ ಲಭ್ಯವಿತ್ತು. ನೀವು ದೇವಾಲಯದಲ್ಲಿ ವೈ-ಫೈ ಬಳಸಬೇಕಾದರೆ, ನೀವು ಸರ್ಕಾರಿ ಸ್ಲಿಪ್ ಪಡೆಯಬೇಕಾಗಿತ್ತು, ಆದರೆ ಈಗ ಅಲ್ಲಿಯೂ ಸೂಪರ್‌ಫಾಸ್ಟ್ ನೆಟ್‌ವರ್ಕ್ ಇರುತ್ತದೆ.

    ಆನ್‌ಲೈನ್ ಪೂಜೆ ಬುಕಿಂಗ್ :

    ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯೋಗೇಂದ್ರ ಸಿಂಗ್ ಪ್ರಕಾರ, ಈ ಬಾರಿ ಆನ್‌ಲೈನ್ ಪೂಜೆ ಜೂನ್ 30 ರವರೆಗೆ ಮಾತ್ರ ನಡೆಯಲಿದೆ. ಇದರಲ್ಲಿ ಶ್ರೀಮದ್ ಭಾಗವತ ಓದಲು 51 ಸಾವಿರ ರೂ. ಹಾಗೂ ಮಹಾಭಿಷೇಕಕ್ಕೆ 12 ಸಾವಿರ ರೂ. ನಿರ್ಧರಿಸಲಾಗಿದೆ.

    ಚಾರ್ಟರ್ಡ್‌ ಹೆಲಿಕಾಪ್ಟರ್‌ ಸೇವೆ :

    ಇದೇ ಮೊದಲಬಾರಿ ಇಲ್ಲಿ ಚಾರ್ಟರ್ಡ್‌ ಹೆಲಿಕಾಪ್ಟರ್‌ ಸೇವೆಯನ್ನು ಆರಂಭಿಸಲಾಗಿದೆ. ನಾಲ್ಕು ಜನರು ಪ್ರಯಾಣಿಸಬಹುದಾದ ಹೆಲಿಕಾಪ್ಟರ್‌ಗೆ 3.5 ಲಕ್ಷ ರೂ ಖರ್ಚು ಮಾಡಬೇಕಾಗುತ್ತದೆ. ಇನ್ನು ಚಾರ್‌ಧಾಮ್‌ಗೆ ಹೆಲಿಕಾಪ್ಟರ್‌ ಬುಕ್ ಮಾಡಿದ್ರೆ ಒಬ್ಬರಿಗೆ 1.95 ಸಾವಿರ ಚಾರ್ಜ್ ಆಗಲಿದೆ. ಇದರಲ್ಲಿ ವಸತಿ , ಊಟ ಎಲ್ಲವೂ ಸೇರಿದ್ದು, ಹೆಲಿಕಾಪ್ಟರ್‌ ಪ್ರವಾಸಿಗರು ಇದ್ದಲ್ಲೇ ತಂಗುತ್ತದೆ. ಹಾಗೊಂದು ವೇಳೆ ಚಾರ್‌ ಧಾಮ್‌ ಭೇಟಿ ನೀಡಿ ಒಂದೇ ದಿನದಲ್ಲಿ ವಾಪಾಸ್ ಆದ್ರೆ ಒಬ್ಬರಿಗೆ 1.05 ಲಕ್ಷ ಪಾವತಿಸಬೇಕಾಗುತ್ತದೆ.

    ಯಾವೆಲ್ಲ ದೇವಾಲಯಗಳ ಬಾಗಿಲು ತೆರೆಯಲಿದೆ?

    • ಮೇ 12 ರಂದು ಬೆಳಗ್ಗೆ 6 ಗಂಟೆಗೆ ಬದರಿನಾಥ ಧಾಮದ ಬಾಗಿಲು ತೆರೆಯಲಿದೆ.
    • ಸಿಖ್ಖರ ಪವಿತ್ರ ಸ್ಥಳವಾದ ಹೇಮಕುಂಡ್ ಸಾಹಿಬ್‌ನ ಬಾಗಿಲು ಮೇ 25 ರಂದು ತೆರೆಯುತ್ತದೆ.
    • ಎರಡನೇ ಕೇದಾರ ಶ್ರೀ ಮದ್ಮಹೇಶ್ವರಜಿಯ ಬಾಗಿಲು ಮೇ 20 ರಂದು ತೆರೆಯುತ್ತದೆ.
    • ಮೂರನೇ ಕೇದಾರ ತುಂಗನಾಥ ಜೀ ಬಾಗಿಲು ಮೇ 10 ರಂದು ತೆರೆಯುತ್ತದೆ.
    • ಪಂಚ ಬದ್ರಿಯಲ್ಲಿರುವ ಪ್ರಸಿದ್ಧ ಭವಿಷ್ಯ ಬದ್ರಿಯ ಬಾಗಿಲು ಮೇ 12 ರಂದು ತೆರೆಯುತ್ತದೆ.
    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಹರೇಕಳ ಹಾಜಬ್ಬ ಶಾಲೆಯ ಕಂಪೌಂಡ್ ಕುಸಿತ..! ವಿದ್ಯಾರ್ಥಿನಿ ಸಾ*ವು..!

    Published

    on

    ಮಂಗಳೂರು : ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ನ್ಯೂಪಡ್ಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್‌ ವಾಲ್ ಕುಸಿತಗೊಂಡಿದೆ. ಕುಸಿತಗೊಂಡ ವಾಲ್‌ ಅಡಿಗೆ ಸಿಲುಕಿದ 3 ನೇ ತರಗತಿ ವಿದ್ಯಾರ್ಥಿನಿ ಅಸುನೀಗಿದ್ದಾಳೆ. ಹರೇಕಳ ಗ್ರಾ.ಪಂ ವ್ಯಾಪ್ತಿಯ ನ್ಯೂಪಡ್ಪುವಿನಲ್ಲಿ ಮೇ 20ರ ಸಂಜೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಸಂಜೆ ವೇಳೆ ಸುರಿದ ಧಾರಕಾರ ಮಳೆಯಿಂದಾಗಿ ದುರ್ಘಟನೆ ಸಂಭವಿಸಿದೆ.


    ನ್ಯೂಪಡ್ಪು ನಿವಾಸಿ ಸಿದ್ದೀಖ್ – ಜಮೀಲಾ ದಂಪತಿ ಪುತ್ರಿ ಶಾಝಿಯಾ ಬಾನು (7) ಮೃತ ಬಾಲಕಿ. ಹರೇಕಳ ಹಾಜಬ್ಬರ ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಡಿಪು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಶಿಬಿರ ನಡೆಯುತ್ತಿದೆ. ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳು ಇದ್ದ ಹಿನ್ನೆಲೆಯಲ್ಲಿ ಶಾಲೆಯ ಸಮೀಪದಲ್ಲೇ ಇರುವ ವಿದ್ಯಾರ್ಥಿನಿ ಶಾಝಿಯಾ ಭಾನು ಭಾಗವಹಿಸಿದ್ದಳು.

    ಸಂಜೆ ವೇಳೆ ಮನೆಗೆ ಹಿಂತಿರುಗುವ ಸಂದರ್ಭ ಶಾಲಾ ಕಂಪೌಂಡ್ ಗೇಟಿನಲ್ಲಿ ಆಟವಾಡುವ ಸಂದರ್ಭ ಕಂಪೌಂಡ್ ಬಾಲಕಿ ಶಾಝಿಯಾ ಮೇಲೆ ಕುಸಿದುಬಿದ್ದಿದೆ. ತಕ್ಷಣ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ, ಬಾಲಕಿ ಪ್ರಾಣಪಕ್ಷಿ ಹಾರಿಹೋಗಿತ್ತು. ಬೆಳಿಗ್ಗೆಯಿಂದ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಆಗಾಗ್ಗ ಮಳೆಯಾಗುತ್ತಿದ್ದು, ಇದರಿಂದಾಗಿ ಕಂಪೌಂಡ್ ಶಿಥಿಲಗೊಂಡು ಬಿದ್ದಿದೆ. ಘಟನಾ ಸ್ಥಳಕ್ಕೆ ಹರೇಕಳ ಗ್ರಾ.ಪಂ ಅಧಿಕಾರಿಗಳು, ಕೊಣಾಜೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Continue Reading

    LATEST NEWS

    ಗುಜರಾತ್‌ ಎಟಿಎಸ್‌ನಿಂದ ನಾಲ್ವರು ಐಸಿಸ್ ಉಗ್ರರ ಸೆರೆ..!

    Published

    on

    ಮಂಗಳೂರು ( ಗುಜರಾತ್) :   ಗುಜಾರಾತ್‌ನಲ್ಲಿ ನಾಲ್ವರು ಐಸಿಸ್ ಉಗ್ರರನ್ನು ಗುಜರಾತ್ ಎಟಿಸಿ ಅಧಿಕಾರಿಗಳು ಬಂಧಿಸಿದ್ದಾರೆ.  ಅಹಮ್ಮದಾ ಬಾದ್ ವಿಮಾನ ನಿಲ್ದಾಣದಲ್ಲಿ ಈ ನಾಲ್ವರು ಉಗ್ರರನ್ನು ಎಟಿಎಸ್‌ ಅಧಿಕಾರಿಗಳು ಬಂಧಿಸಿದ್ದಾರೆ. ಚೆನೈ ಮೂಲಕ ಅಹಮ್ಮದಾಬಾದ್ ತಲುಪಿದ್ದ ಈ ನಾಲ್ವರೂ ಮೂಲತಃ ಶ್ರೀಲಂಕದವರು ಎಂದು ಮಾಹಿತಿ ಲಭ್ಯವಾಗಿದೆ.

    ಎರಡು ವಾರಗಳ ಹಿಂದೆ ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಬಾಂಬ್‌ ಸ್ಫೋಟದ ಈ ಮೇಲ್‌ ಸಂದೇಶ ಬಂದಿತ್ತು. ಈ ವಿಚಾರವಾಗಿ ಎಟಿಎಸ್ ಅದಿಕಾರಿಗಳು ಹಲವು ಆಯಾಮಗಳಲ್ಲಿ ತನಿಕೆಯನ್ನು ನಡೆಸಿದ್ದರು. ಈ ತನಿಕೆಯ ಮುಂದುವರೆದ ಭಾಗವಾಗಿ ಈ ನಾಲ್ವರು ಐಸಿಸ್ ಉಗ್ರರರನ್ನು ಬಂಧಿಸಲಾಗಿದೆ. ಬಂದಿತರು ದೇಶದಲ್ಲಿ ವಿದ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಎಟಿಎಸ್‌ಗೆ ಲಭ್ಯವಾಗಿದೆ. ಅಲ್ಲದೆ ಇವರಿಗೆ ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆ ನಂಟು ಇದೆ ಅನ್ನೋ ಅಂಶ ಕೂಡಾ ಬೆಳಕಿಗೆ ಬಂದಿದೆ. ಆರೋಪಿಗಳ ಮೊಬೈಲ್‌ ಪರಿಶೀಲನೆ ನಡೆಸಿದ ವೇಳೆ ಈ ವಿಚಾರ ಗೊತ್ತಾಗಿದೆ ಎಂದು ಎಟಿಎಸ್ ಮೂಲಗಳು ಬಹಿರಂಗಪಡಿಸಿದೆ.

    Continue Reading

    FILM

    ಐಶ್ವರ್ಯಾ ರೈ ಜೊತೆಗೂಡಿ ಬಿಗ್‌ ಬಿ ಫ್ಯಾಮಿಲಿ ಮತದಾನ…!

    Published

    on

    ಮಂಗಳೂರು ( ಮಹಾರಾಷ್ಟ್ರ ) : ಚುನಾವಣೆಯಲ್ಲಿ ಮತ ಚಲಾಯಿಸಿರುವ ಐಶ್ವರ್ಯಾ ರೈ ಬಚ್ಚನ್ ಕುಟುಂಬದ ಜೊತೆ ಮತಕೇಂದ್ರಕ್ಕೆ ಆಗಮಿಸಿದ್ದಾರೆ. ಅಮಿತಾಬಚ್ಚನ್‌, ಜಯಾಬಚ್ಚನ್ ಜೊತೆಯಲ್ಲಿ ಒಂದೇ ಕಾರಿನಲ್ಲಿ ಮತಗಟ್ಟೆಗೆ ಆಗಮಿಸಿದ್ದಾರೆ. ಈ ಮೂಲಕ ಹಲವು ಸಮಯದಿಂದ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಶೇಕ್‌ ಬಚ್ಚನ್‌ ದಾಂಪತ್ಯ ವಿಚಾರವಾಗಿ ಇದ್ದ ಗಾಸಿಪ್‌ಗೆ ತೆರೆ ಎಳೆದಿದ್ದಾರೆ.


    ಐದನೇ ಹಂತದ ಮತದಾನದಲ್ಲಿ ಅನೇಖ ಸೆಲಬ್ರಿಟಿಗಳು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಮತದಾನವಾಗಿದ್ದು, ಬಾಲಿವುಡ್ ನಟ ನಟಿಯರು ಮತದನಾ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದ್ದಾರೆ. ನಟ ಅಕ್ಷಯ್ ಕುಮಾರ್ ಬೆಳಗ್ಗೆ 7 ಗಂಟೆಗೆ ಮತದಾನ ಕೇಂದ್ರಕ್ಕೆ ಹಾಜರಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಭಾರತೀಯ ಪೌರತ್ವ ಪಡೆದ ನಂತರ ಅಕ್ಷಯ್ ಕುಮಾರ್ ಮೊದಲ ಬಾರಿಗೆ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

    ಪಿಂಕ್ ಡ್ರೆಸ್ನಲ್ಲಿ ಆಗಮಿಸಿದ ಜಾನ್ವಿ ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ತೆರಳಿ ಮತಯಾಚನೆ ಮಾಡಿದರು. ಮತದಾನ ಕೇಂದ್ರದಲ್ಲಿ ಜಾನ್ವಿ ಕಪೂರ್ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು. ವಿಶೇಷ ಮಹಿಳಾ ಪೊಲೀಸರು ನಟಿ ಜಾನ್ವಿಗೆ ಭದ್ರತೆ ಒದಗಿಸಿದರು.

    ಅದೇ ರೀತಿ ಶಾರುಖ್ ಖಾನ್ ಅವರು ತಮ್ಮ ಕುಟುಂಬದೊಂದಿಗೆ ಮತದಾನ ಮಾಡುತ್ತಿರುವುದು ಕಂಡುಬಂದಿದೆ. ಹೀಗೆ ಹೃತಿಕ್ ರೋಷನ್, ರಾಕೇಶ್ ರೋಷನ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮತದಾನ ಮಾಡಿದರು. ಇನ್ನು ವರುಣ್ ಧವನ್ ಜೊತೆಗೆ ತಂದೆ ಡೇವಿಡ್ ಧವನ್, ಧರ್ಮೇಂದ್ರ, ಆಶಾ ಭೋಂಸ್ಲೆ ಮತ್ತು ಇತರರು ಬೂತ್‌ನಲ್ಲಿ ಮತದಾನ ಮಾಡಿದರು.

    Continue Reading

    LATEST NEWS

    Trending