Connect with us

DAKSHINA KANNADA

Sullia: ಮನೆ ನಿರ್ಮಿಸಿಕೊಡುವುದಾಗಿ ಬಡ ಮಹಿಳೆಗೆ ವಂಚಿಸಿದ ಮುಖಂಡ..!

Published

on

ಸುಳ್ಯ: ವಿವಿಧ ಸಂಘಟನೆಗಳು ಇಂದು ಬಡವರ ಕಣ್ಣಿರನ್ನು ಒರೆಸುವ ಕೆಲಸ ಮಾಡುತ್ತಿರುವ ಶ್ಲಾಘನೀಯವಾದ ವಿಚಾರ. ಆದರೆ ಇಂದಿಗೂ ಕೂಡಾ ಕೆಲವೊಂದು ಹಿಂದು ಸಂಘಟನೆಗಳು, ಸಂಘಟನೆಗಳ ನಾಯಕರು ಬಡವರಿಗೆ ನೆರವಾಗುವುದಾಗಿ ಹೇಳಿ ಅವರಿಂದಲೇ ಹಣ ಪಡೆದು ವಂಚನೆ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇದೆ.

ಅದಕ್ಕೆ ಒಂದು ಉದಾಹರಣೆ ಸುಳ್ಯದ ಲತೇಶ್‌ ಗುಂಡ್ಯ ಎಂಬಾತ ಮಾಡಿದ ವಂಚನೆ ಪ್ರಕರಣ. ಹಿಂದೂ ಸಂಘಟನೆಗಳ ಹೆಸರು ಬಳಸಿಕೊಂಡು ‘ಹಿಂದೂ ಮುಖಂಡ ಲತೇಶ್ ಗುಂಡ್ಯ 420 ಕೆಲಸಕ್ಕೆ ಇಳಿದಿದ್ದಾನೆ ಎಂದು ಹೇಳಲಾಗುತ್ತಿದೆ. ತೀರಾ ಬಡತನದಿಂದ ಕೂಡಿದ ಮಹಿಳೆಗೆ  ಮೋಸ ಮಾಡಿ ಹಣ ಲೂಟಿ ಹೊಡೆದಿರುವ ಆರೋಪವನ್ನು ಈತ ಎದುರಿಸುತ್ತಿದ್ದಾನೆ. ಸುಳ್ಯ ಜಾಲ್ಸೂರು ಸಮೀಪದ ಕುಂದ್ರುಕೋಡಿಯ ಲಕ್ಷ್ಮೀ ಎಂಬವರಿಗೆ  ಉಚಿತವಾಗಿ ಮನೆ ಕಟ್ಟಿಕೊಡುವುದಾಗಿ ಭರವಸೆ ನೀಡಿ ವಂಚನೆ ಎಸಗಿದ್ದಾನೆ ಎನ್ನಲಾಗಿದೆ.

ಸಂಘಟನೆಗಳ ಹೆಸರನ್ನ ಬಳಸಿಕೊಂಡು ಮನೆ ನಿರ್ಮಾಣದ ಭರವಸೆ ನೀಡಿದ್ದ ಲತೇಶ್ ಗುಂಡ್ಯ ಮನೆ ಕಟ್ಟಿಕೊಡುತ್ತೇನೆಂದು ಲಕ್ಷ್ಮೀ ಅವರಿಂದಲೇ 52 ಸಾವಿರ ಹಣ ಪಡೆದು ಮೋಸಮಾಡಿದ್ದಾನೆ. ಲಕ್ಷ್ಮೀ ಕುಟುಂಬ ಈ ಹಿಂದೆ ಜೋಪಡಿ ಮನೆಯಲ್ಲಿತ್ತು. ಲಕ್ಷ್ಮೀ ಮತ್ತು ಅವರ ಮೂರು ಹೆಣ್ಣು ಮಕ್ಕಳು ಈ ಜೋಪಡಿಯಲ್ಲಿ ವಾಸ ಮಾಡಿಕೊಂಡಿದ್ದರು. ಈ ವೇಳೆ ಮನೆ ಕಟ್ಟಿಕೊಡುತ್ತೇನೆಂದು ಹೇಳಿಕೊಂಡು ಬಂದ ಲತೇಶ್ ಗುಂಡ್ಯ ಸಂಘಟನೆಯ ಹೆಸರಲ್ಲಿ ಉಚಿತವಾಗಿ ಮನೆಕಟ್ಟಿಕೊಡುವುದಾಗಿ ಹೇಳಿದ್ದಾನೆ. ಬಳಿಕ ಹಣ ನಮ್ಮಲ್ಲಿ ಕಡಿಮೆ ಇರುವುದಾಗಿ ಹೇಳಿ ಲಕ್ಷ್ಮೀ ಅವರಿಂದಲೇ 10 ಸಾವಿರ ಹಣ ಪಡೆದು ಹೋಗಿದ್ದಾನೆ. ಇದಾದ ಬಳಿಕ ಹತ್ತು ಸಾವಿರ ಸಾಕಾಗುವುದಿಲ್ಲ, ನೀವು ಗ್ರಾ.ಪಂ. ಗೆ ಅರ್ಜಿ ಹಾಕಿ ಮಂಜೂರಾದ ಹಣವನ್ನ ನೀಡಿ ಎಂದಿದ್ದಾನೆ. ಇದನ್ನೇ ನಂಬಿದ ಬಡ ಮಹಿಳೆ ಲಕ್ಷ್ಮೀ ಮತ್ತೆ 42 ಸಾವಿರದ 800 ಹಣವನ್ನೂ ಲತೇಶ್ ಗುಂಡ್ಯಗೆ ನೀಡಿದ್ದಾರೆ.

ಇಷ್ಟೆಲ್ಲ ಹಣ ನೀಡಿದ ಬಳಿಕ ಮನೆ ನಿರ್ಮಿಸಿ ಕೊಡದೆ ಫೋನ್ ಸಂಪರ್ಕಕ್ಕೂ ಸಿಗದೆ ಲಕ್ಷ್ಮೀಗೆ ಸತಾಯಿಸಿದ ಲತೇಶ್ ಗುಂಡ್ಯ ಫೋನ್‌ಗೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದಾನೆ ಎನ್ನುವ ಆರೋಪವನ್ನು ಲಕ್ಷ್ಮೀ ಮಾಡಿದ್ದಾರೆ. ಸದ್ಯ ಇದ್ದ ಜೋಪಡಿ ಮನೆಯನ್ನೂ ಕೆಡವಲು ಹೇಳಿದ್ದ ಲತೇಶ್ ಗುಂಡ್ಯನ ಮಾತು ಕೇಳಿ ಜೋಪಡಿಯನ್ನೂ ಕೆಡವಿದ ಲಕ್ಷ್ಮೀ ಬಾಡಿಗೆ ಮನೆಯಲ್ಲಿದ್ದು, ಸಂಕಷ್ಟ ಎದುರಿಸುತ್ತಿದ್ದಾರೆ. ಇದೀಗ ಲಕ್ಷ್ಮೀ ಲತೇಶ್ ಗುಂಡ್ಯನ ವಂಚನೆ ಬಗ್ಗೆ ವಿಶ್ವ ಹಿಂದೂ ಪರಿಷತ್ ಗೆ ದೂರು ನೀಡಿದ್ದಾರೆ. ಮನೆ ನಿರ್ಮಿಸಿಕೊಡುತ್ತೇನೆಂದು ಹೇಳಿದ್ದಲ್ಲದೇ ಸಂಘಟನೆಯ ಹೆಸರಿನಲ್ಲಿ ವಂಚನೆ ಮಾಡಿರುವ ಇದೇ ಆರೋಪಿ ಲತೇಶ್ ಗುಂಡ್ಯ ಕಳೆದ ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಎಂಎಲ್ ಎ ಟಿಕೆಟ್ ಆಕಾಂಕ್ಷಿಯಾಗಿದ್ದ. ವಂಚಕ ಲತೇಶ್ ಗುಂಡ್ಯನಿಂದ ತನಗೆ ಅನ್ಯಾಯವಾಗಿದ್ದು, ನ್ಯಾಯ ದೊರಕಿಸಿಕೊಡುವಂತೆ ಅವರು ಮನವಿ ಮಾಡಿದ್ದಾರೆ.

 

Ancient Mangaluru

ಕುಂದಾಪುರ: 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯ ಇಲಾಖೆ ನೌಕರ

Published

on

ಕುಂದಾಪುರ: ಅರಣ್ಯ ಇಲಾಖೆ ವಶದಲ್ಲಿದ್ದ ವಾಹನ ಬಿಡುಗಡೆಗೆ ಲಂಚ ಸ್ವೀಕರಿಸುತ್ತಿದ್ದ  ಕುಂದಾಪುರ ಅರಣ್ಯ ಇಲಾಖೆಯ ನೌಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಕ್ಷೇಮಾಭಿವೃದ್ಧಿ ನೌಕರ ಬಿ.ಮಂಜುನಾಥ್ ಪೂಜಾರಿ ಬಂಧಿತ ಆರೋಪಿ.

ಅರಣ್ಯ ಇಲಾಖೆ ವಶದಲ್ಲಿದ್ದ ಆಲೂರಿನ ಆದಿತ್ಯ ಎಂಬವರ ವಾಹನ ಬಿಡುಗಡೆಗಾಗಿ ಮಂಜುನಾಥ್ ಪೂಜಾರಿ 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದನು.  ಲಂಚ ನೀಡಲು ನಿರಾಕರಿಸಿದ ಆದಿತ್ಯ ಈ ಬಗ್ಗೆ ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಆದಿತ್ಯ ಅವರಿಂದ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ  ಸಂದರ್ಭ ಮಂಜುನಾಥ್ ಪೂಜಾರಿಯನ್ನು ಬಂಧಿಸಿದರು.  ಲೋಕಾಯುಕ್ತ ಎಸ್ಪಿ ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ  ಕೆ.ಸಿ. ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಮತ್ತು ರಫೀಕ್ ಹಾಗೂ ಸಿಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Continue Reading

DAKSHINA KANNADA

ಉಡುಪಿ : ಬೈಕ್ ಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಜೀವಾಂತ್ಯ

Published

on

ಉಡುಪಿ : ಉಡುಪಿಯ ಬ್ರಹ್ಮಾವರದ ಧರ್ಮಾವರಂ ಎಂಬಲ್ಲಿ ಬೈಕಿಗೆ ಬಸ್‌ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಉಪ್ಪಿನಕೋಟೆಯ 31 ವರ್ಷ ಪ್ರಾಯದ ಪ್ರೀತಮ್‌ ಡಿ’ ಸಿಲ್ವಾ ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ ನಡೆದಿದೆ.

ಪ್ರೀತಮ್‌ ಅವರು ಬೈಕ್‌ ಚಲಾಯಿಸಿಕೊಂಡು ಬ್ರಹ್ಮಾವರ ಆಕಾಶವಾಣಿ ಪೆಟ್ರೋಲ್‌ ಪಂಪ್‌ ಕಡೆಯಿಂದ ಸರ್ವಿಸ್‌ ರೋಡ್‌ನ‌ಲ್ಲಿ ಆಗಮಿಸಿ ಉಪ್ಪಿನಕೋಟೆಗೆ ತೆರಳಲು ಡಿವೈಡರ್‌ ಬಳಿ ಸಾಗುತ್ತಿದ್ದಾಗ ಎದುರಿನಿಂದ ಬಂದ ಖಾಸಗಿ ಬಸ್‌ ಢಿಕ್ಕಿ ಹೊಡೆಯಿತು. ಅವಿವಾಹಿತರಾಗಿದ್ದ ಪ್ರೀತಮ್‌ ಕೆಟರಿಂಗ್‌ ಉದ್ಯಮ ನಡೆಸುತ್ತಿದ್ದರು. ಪ್ರೀತಮ್‌ ಅವರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Continue Reading

DAKSHINA KANNADA

ಮನೆ ಬಿಟ್ಟು ಓಡಿ ಹೋಗಿದ್ದ ಬಂಟ್ವಾಳದ ಪ್ರೇಮಿಗಳು ಕಾಸರಗೋಡಿನಲ್ಲಿ ಪತ್ತೆ

Published

on

ಬಂಟ್ವಾಳ : 4 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕು ಸಜೀಪಮುನ್ನೂರು ಗ್ರಾಮದ ಉದ್ದೊಟ್ಟು ನಿವಾಸಿಗಳಾದ ಅಕ್ಕ ಪಕ್ಕದ ಮನೆಗಳ ಯುವಕ ಹಾಗೂ ಯುವತಿಯನ್ನು ಬಂಟ್ವಾಳ ಪೊಲೀಸರು ಕೇರಳದ ಕಾಸರಗೋಡು ಜಿಲ್ಲೆಯ ಕಾಂಞಂಗಾಡಿನಲ್ಲಿ ಪತ್ತೆ ಹಚ್ಚಿ ಊರಿಗೆ ಕರೆ ತಂದಿದ್ದಾರೆ.

ಉದ್ದೊಟ್ಟು ನಿವಾಸಿ ಅಬ್ದುಲ್‌ಹಮೀದ್‌ಅವರ ಪುತ್ರಿ ಆಯಿಸತ್‌ರಸ್ಮಾ(18) ಮತ್ತು ಹೈದರ್‌ಅವರ ಪುತ್ರ ಮಹಮ್ಮದ್‌ಸಿನಾನ್‌ (23) ಅವರು ನ. 23 ರಂದು ತಂತಮ್ಮ ಮನೆಗಳಲ್ಲಿ ಮಲಗಿದ್ದವರು ನ. 24ರಂದು ಬೆಳಗಾಗುವಷ್ಟರಲ್ಲಿ ಕಾಣೆಯಾಗಿದ್ದರು. ಮನೆಯವರ ದೂರಿನಂತೆ ಹುಡುಕಾಟ ನಡೆಸಿದ ಬಂಟ್ವಾಳ ಪೊಲೀಸರು ಅವರಿಬ್ಬರನ್ನೂ ಕಾಂಞಂಗಾಡಿನಲ್ಲಿ ಪತ್ತೆ ಹಚ್ಚಿದ್ದು, ಠಾಣೆಗೆ ತಂದು ವಿಚಾರಿಸಿದಾಗ ತಾವಿಬ್ಬರೂ ಪರಸ್ಪರ ಪ್ರೀತಿಸಿದ್ದು, ಮದುವೆಯಾಗುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

Continue Reading

LATEST NEWS

Trending