Connect with us

    DAKSHINA KANNADA

    ಉಪ್ಪಿನಂಗಡಿ: ಲಾರಿ ದುರಸ್ತಿ ವೇಳೆ 3 ಮೆಕಾನಿಕ್‌ ಮೇಲೆ ಹರಿದ ಪಿಕ್‌ಅಪ್‌-ರಸ್ತೆಯಲ್ಲೇ ರಕ್ತದೋಕುಳಿ

    Published

    on

    ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಜತ್ತೂರು ಗ್ರಾಮದ ವರಾಲು ಬೆದ್ರೋಡಿ ಎಂಬಲ್ಲಿ ಕೆಟ್ಟು ನಿಂತಿದ್ದ ಲಾರಿಯೊಂದನ್ನು ದುರಸ್ತಿ ಪಡಿಸುತ್ತಿದ್ದ ಮೂವರು ಮೆಕಾನಿಕ್‌ಗಳ ಮೇಲೆ ಪಿಕಪ್‌ವೊಂದು ಹರಿದು ಮೂವರೂ ಸಾವನವಿದ ವಾರುಣ ಘಟನೆ ನಿನ್ನೆ ಸಂಜೆ ಸಂಭವಿಸಿದೆ.


    ಬೆಂಗಳೂರು ಮೂಲದ ಮಧು (35), ಅಬ್ದುಲ್ ರೆಹಮಾನ್ (25), ಅಫೈಲ್ ಯಾನೆ ಅಬಾನ್ (35) ಮೃತರು.

    ಆಸಿಫ್ ಎಂಬವರು ಚಾಲಕರಾಗಿದ್ದ ಖಾಸಗಿ ಸಂಸ್ಥೆಗೆ ಸೇರಿದ್ದ ಲಾರಿಯೊಂದು ಬೆದ್ರೋಡಿ ಎಂಬಲ್ಲಿ ರಾ.ಹ. 75ರಲ್ಲಿ ಕಳೆದ ಮೂರು ದಿನಗಳಿಂದ ಕೆಟ್ಟು ನಿಂತಿದ್ದು,

    ದುರಸ್ತಿ ಕಾರ್ಯಕ್ಕಾಗಿ ಬೆ೦ಗಳೂರಿನಿ೦ದಲೇ ಮೆಕಾನಿಕ್‌ಗಳನ್ನು ಕಳುಹಿಸಿಕೊಟ್ಟಿತ್ತು. ಅದರಂತೆ ಕೆಟ್ಟು ನಿಂತಿದ್ದ ಲಾರಿಯನ್ನು ದುರಸ್ತಿ ಮಾಡುತ್ತಿದ್ದ ವೇಳೆ ವೇಗವಾಗಿ ಬಂದ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಕರ್ತವ್ಯ ನಿರತ ಫಿಟ್ಟರ್‌ಗಳ ಮೇಲೆ ಹರಿಯಿತು.

    ಪರಿಣಾಮ ಮಧು ಹಾಗೂ ರೆಹಮಾನ್ ಸ್ಥಳದಲ್ಲೇ ಸಾವನ್ನಪ್ಪಿದರೆ,

    ಎರಡೂ ಕಾಲುಗಳನ್ನು ಕಳೆದುಕೊಂಡಿದ್ದ ಅಪ್ಪಲ್ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.

    ಮಧು, ಬೇರೊಂದು ಲಾರಿಯ ಚಾಲಕನಾಗಿದ್ದು, ತನ್ನ ಸಂಸ್ಥೆಯ ಲಾರಿಯೊಂದು ಕೆಟ್ಟು ನಿಂತಿರುವುದಕ್ಕೆ ಮೆಕಾನಿಕ್ ಗಳನ್ನು ಬೆಂಗಳೂರಿನಿಂದ ಕರೆತಂದು ಲಾರಿಯ ದುರಸ್ತಿ ಕಾರ್ಯದಲ್ಲಿ ಮೆಕಾನಿಕ್‌ಗಳೊಂದಿಗೆ ಸಹಕರಿಸುತ್ತಿದ್ದರು.

    ಘಟನೆ ವೇಳೆ ಕೆಟ್ಟು ನಿಂತಿದ್ದ ಲಾರಿಯ ಚಾಲಕ ಆಸೀಫ್ ಲಾರಿಯಿಂದ ತುಸು ದೂರ ನಿಂತಿದ್ದ ಕಾರಣ ಅವಘಡದಿಂದ ಪಾರಾದಂತಾಗಿದೆ.
    ಘಟನೆ ಸಂಭವಿಸಿದಾಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ರಾವಾನಿಸಲು ನೆರವಾದರು.

    ಬಳಿಕ ಆಂಬುಲೆನ್ಸ್ ಚಾಲಕ ನೌಫಾಲ್, ಫಾರೂಕ್, ಆಸಿಫ್ ಮೊದಲಾದವರು ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಲ್ಲಿ ಕೈ ಜೋಡಿಸಿದರು.

    DAKSHINA KANNADA

    ಮಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರಿಗೆ ಯುವಕನಿಂದ ಸೆ*ಕ್ಸ್ ಆಫರ್..!?

    Published

    on

    ಮಂಗಳೂರು: ಹಾಡು ಹಗಲಲ್ಲೇ ಹೆಣ್ಣುಮಕ್ಕಳು ರಸ್ತೆಯಲ್ಲಿ ನಡೆದಾಡುವುದು ಹೇಗೆ ಎಂಬ ಪ್ರಶ್ನೆ ಮೂಡುವಂತಹ ಹೇಯ ಘಟನೆಯೊಂದು ಮಂಗಳೂರಿನಲ್ಲಿ ನಡೆದು ಹೋಗಿದೆ.

    ಸೆ.24 ಬೆಳಗ್ಗೆ 10.30 ರ ಸುಮಾರಿಗೆ ಮಂಗಳೂರಿನ ನವಭಾರತ್ ಸರ್ಕಲ್ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂಧರ್ಭ ಯುವತಿಯರ ಬಳಿ ಬಂದ ಕಾಮುಕ ಯುವತಿಯರಿಗೆ ಕಿರುಕುಳ ನೀಡಿದ್ದಲ್ಲದೆ ಹಣ ಕೊಡುತ್ತೇನೆ ಬರುತ್ತೀರಾ ಅಂತಾ ಸೆ*ಕ್ಸ್ ಆಫರ್ ಕೂಡ ನೀಡಿದ್ದಾನೆ. ತಕ್ಷಣ ಯುವತಿಯರು ಯುವಕನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು ಆತನನ್ನು ತಳ್ಳಿ, ಶರ್ಟ್ ಬಿಚ್ಚಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಆರೋಪಿ ಶಬರಿ ಎಂಬಾತನ‌ ಮೇಲೆ ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಲಾಗಿದೆ.

    Continue Reading

    DAKSHINA KANNADA

    ಕಾರಣಿಕ ತೋರಿಸಿದ ಗುಳಿಗ ದೈವ..! ವೆನ್ಲಾಕ್‌ ಆಸ್ಪತ್ರೆಯಲ್ಲಿ ದೈವದ ಕಟ್ಟೆ ನಿರ್ಮಾಣ..!

    Published

    on

    ಮಂಗಳೂರು : ದೈವಗಳು ನಂಬಿದವರ ಕೈ ಬಿಡುವುದಿಲ್ಲ ಎಂಬ ತುಳುನಾಡಿನ ಜನರ ನಂಬಿಕೆಗೆ ಇಂಬು ಕೊಡುವಂತಹ ಅನೇಕ ಘಟನೆಗಳು ನಡೆದಿವೆ. ಇನ್ನು ದೈವ ನಂಬಿಕೆ ಇಲ್ಲದೆ ಅಪಚಾರ ಮಾಡಿದವರಿಗೂ ತಾನು ಏನು ಎಂದು ದೈವ ತೋರಿಸಿಕೊಟ್ಟ ಉದಾಹರಣೆಗಳು ಕೂಡ ಸಾಕಷ್ಟಿವೆ. ಇದೀಗ ಅಂತಹುದೇ ಒಂದು ಘಟನೆ ದಕ್ಷಿಣ ಕನ್ನಡ ಜಿಲ್ಲಾಸ್ಪತ್ರೆ ವೆನ್ಲಾಕ್‌ನಲ್ಲಿ ನಡೆದಿದ್ದು, ದೈವದ ಕಾರಣಿಕಕ್ಕೆ ಈ ಘಟನೆ ಸಾಕ್ಷಿಯಾಗಿದೆ.

    ಮಂಗಳೂರು ಜಿಲ್ಲಾಸ್ಪತ್ರೆಯಲ್ಲಿ ಸರ್ಜಿಕಲ್‌ ಸೂಪರ್ ಸ್ಪೆಷಾಲಿಟಿ ವಿಭಾಗ ನಿರ್ಮಾಣಕ್ಕೆ ಹಲವು ವರ್ಷಗಳ ಹಿಂದೆ ಚಾಲನೆ ನೀಡಲಾಗಿತ್ತು. ಹೊಸ ಕಟ್ಟಡ ಕಾಮಗಾರಿಗಾಗಿ ಇಲ್ಲಿದ್ದ ಹಲವು ಮರಗಳನ್ನು ಕಡಿಯುವ ಕೆಲಸವನ್ನು ಗುತ್ತಿಗೆದಾರರು ಮಾಡಿದ್ದರು. ಈ ವೇಳೆ ಇಲ್ಲಿ ಗುಳಿಗ ದೈವದ ಸಾನಿಧ್ಯವಿದ್ದ ಮರವೊಂದು ಇದ್ದು ಅದನ್ನು ಕಡಿಯದಂತೆ ಹಲವರು ಗುತ್ತಿಗೆದಾರನಿಗೆ ಮನವಿ ಮಾಡಿದ್ದರು. ಆದ್ರೆ, ಅಭಿವೃದ್ದಿ ಕಾಮಗಾರಿಗೆ ದೈವ ದೇವರು ಇಲ್ಲಾ ಅಂತ ಮರ ಕಡಿಯಲು ಮುಂದಾಗಿದ್ದ. ಈ ವೇಳೆ ಪರಿಸರ ಹೋರಾಟಗಾರರು ಮರವನ್ನು ಬೇರೆಡೆ ಸ್ಥಳಾಂತರ ಮಾಡಿ ಮರದ ಜೀವ ಉಳಿಸಿದ್ದರು.

    ಯಾವಾಗ ದೈವ ಸಾನಿಧ್ಯವಿದ್ದ ಮರವನ್ನು ತೆರವು ಮಾಡಲಾಗಿತ್ತೋ ಅಂದಿನಿಂದ ಇಲ್ಲಿ ಗುತ್ತಿಗೆದಾರನಿಗೆ ಹಲವು ಸಂಕಷ್ಟಗಳು ಎದುರಾಗಿವೆ. ಕಾರ್ಮಿಕರು ಹಲವು ಅವಘಡಗಳಿಗೆ ಸಿಲುಕಿ ಆಸ್ಪತ್ರೆ ಸೇರಿದ್ದಾರೆ. ಕಾಮಗಾರಿಯ ವೇಳೆ ನಾಗರ ಹಾವು ಕೂಡ ಬಲಿಯಾದ ಘಟನೆ ನಡೆದಿದೆ. ಕೊನೆಗೂ ಕುಂಟುತ್ತಾ ಸಾಗಿದ್ದ ಕಾಮಗಾರಿ ಇತ್ತೀಚೆಗಷ್ಟೇ ಪೂರ್ಣಗೊಂಡು ಆಸ್ಪತ್ರೆಯ ಉದ್ಘಾಟನೆಯೂ ಆಗಿದೆ. ಆದ್ರೆ, ಆಸ್ಪತ್ರೆಯಲ್ಲಿ ಅದೇನೋ ನೆಗಟಿವ್ ಎನರ್ಜಿ ಇದೆ ಅನ್ನೋ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗೆ ಅನಿಸಿದೆ. ಹಲವು ಎಡರುತೊಡರುಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ ಜ್ಯೋತಿಷಿ ಮೊರೆ ಹೋಗಿದ್ದಾರೆ. ಈ ವೇಳೆ ಇಲ್ಲಿ ಗುಳಿಗ ದೈವದ ನೆಲೆಯನ್ನು ಕಿತ್ತು ಹಾಕಿದ್ದು ದೈವ ಅತಂತ್ರವಾಗಿದೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ನಾಗ ಹತ್ಯೆಯಿಂದ ನಾಗ ದೋಷ ಕೂಡ ಇದೆ ಅನ್ನೋ ವಿಚಾರ ಗೊತ್ತಾಗಿದೆ.

    ಇದೀಗ ಜ್ಯೋತಿಷಿಗಳ ಸಲಹೆಯಂತೆ ವೆನ್ಲಾಕ್ ಆಸ್ಪತ್ರೆಯ ಈ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಆಶ್ಲೇಷ ಬಲಿ ನಡೆಸಿ ನಾಗನನ್ನು ಸಂತೃಪ್ತಿ ಪಡಿಸಲಾಗಿದೆ. ಅಷ್ಟೇ ಅಲ್ಲದೆ, ಇಲ್ಲಿರೋ ಅಶ್ವತ ಮರದ ಬುಡದಲ್ಲಿ ಗುಳಿಗ ದೈವವನ್ನು ಪ್ರತಿಷ್ಠಾಪಿಸಿ ದೈವದ ಕೋಪವನ್ನು ಶಮನ ಮಾಡಲಾಗಿದೆ.

    ಶರವು ದೇವಸ್ಥಾನಕ್ಕೆ ಸೇರಿದ ಶರವು ಗುಳಿಗ ದೈವದ ಸಾನಿಧ್ಯ ಈ ಪ್ರದೇಶದಲ್ಲಿ ಇದ್ದು, ಇಲ್ಲಿನ ಮರ ತೆರವು ಮಾಡಿದ ಕಾರಣ ದೈವ ಅತಂತ್ರವಾಗಿತ್ತು. ರೈಲ್ವೇ ನಿಲ್ದಾಣದ ಬಳಿಯ ಶ್ರೀ ಮುತ್ತಪ್ಪನ್ ದೈವದ ಗುಡಿಯ ಬಳಿ ನೆಲೆಯಾಗಿತ್ತು ಎಂದು ಜ್ಯೋತಿಷ್ಯರಿಂದ ತಿಳಿದು ಬಂದಿತ್ತು. ಇದೀಗ ಗುಳಿಗ ದೈವದ ಪ್ರತಿಷ್ಠಾಪನೆಯಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಿದೆ.

     

    ಕಂಪ್ಲೀಟ್ ಸ್ಟೋರಿಗಾಗಿ ವಿಡಿಯೋ ನೋಡಿ:

    Continue Reading

    DAKSHINA KANNADA

    ಹಿರಿಯ ಸಾಮಾಜಿಕ ಹೋರಾಟಗಾರ ಪಿ.ಬಿ.ಡೇಸಾ ನಿಧ*ನ

    Published

    on

    ಮಂಗಳೂರು : ಹಿರಿಯ ಸಾಮಾಜಿಕ ಹೋರಾಟಗಾರ ಪಿ.ಬಿ.ಡೇಸಾ ನಿಧ*ನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಇಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಇಹಲೋಕ ತ್ಯಜಿಸಿದರು.

    ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್  ರಾಜ್ಯಾಧ್ಯಕ್ಷರಾಗಿದ್ದ ಡೇಸಾ, ಮಾನವ ಹಕ್ಕು ಹೋರಾಟಗಾರರಾಗಿದ್ದರು. ಅನ್ಯಾಯ, ಅಕ್ರಮಗಳ ವಿರುದ್ಧ ಧ್ವನಿ ಎತ್ತುತ್ತಿದ್ದರು. ಅಲ್ಲದೇ,  ಪೊಲೀಸರ ದೌರ್ಜ*ನ್ಯದ ವಿರುದ್ಧ ಸಂಘಟಿತ ಹೋರಾಟ ನಡೆಸುತ್ತಿದ್ದರು.

    ಇದನ್ನೂ ಓದಿ : 2.5 ಲಕ್ಷಕ್ಕೆ ನವಜಾತ ಶಿಶು ಮಾರಾಟ ಯತ್ನ; 10 ಮಂದಿಯ ಬಂಧನ

    ಅನೇಕ ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದ ಅವರ ಮೇಲೆ ಹಿಂದೊಮ್ಮೆಅವರ ಕಚೇರಿಯಲ್ಲೇ ಕೊ*ಲೆಯತ್ನವೂ ನಡೆದಿತ್ತು.  ಡೇಸಾ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಯಾವುದೇ ಧಾರ್ಮಿಕ ಕ್ರಿಯೆ ನಡೆಸದೆ ಮೃ*ತದೇಹವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ನಾಳೆ ಹಸ್ತಾಂತರ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

    Continue Reading

    LATEST NEWS

    Trending