LATEST NEWS
ಬೇಟೆಯಾಡಲು ಅರಣ್ಯ ಪ್ರದೇಶಕ್ಕೆ ಪ್ರವೇಶಿಸಿದ ವಾಹನ ವಶಪಡಿಸಿಕೊಂಡ ಪೊಲೀಸರು
ಬೇಟೆಯಾಡಲು ಅರಣ್ಯ ಪ್ರದೇಶಕ್ಕೆ ದಾವಿಸಿದ ವಾಹನ ಪೊಲೀಸರ ವಶ
ಕುಂದಾಪುರ: ಹರ್ಕೂರು ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆಯಾಡುವ ಉದ್ದೇಶದಿಂದ ಕಾಡಿಗೆ ಅಕ್ರಮ ಪ್ರವೇಶ ಮಾಡಿದ ವಾಹನವನ್ನು ಅರಣ್ಯ ಇಲಾಖಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಬುಧವಾರ ತಡರಾತ್ರಿ ಕುಂದಾಪುರ ತಾಲೂಕು ಹರ್ಕೂರು ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆಯಾಡುವ ಉದ್ದೇಶದಿಂದ ಈ ವಾಹನ ಅಕ್ರಮ ಪ್ರವೇಶ ಮಾಡಿತ್ತು.ತಕ್ಷಣವೇ ಅರಣ್ಯ ಇಲಾಖಾ ಸಿಬ್ಬಂದಿಗಳು ದಾಳಿ ಮಾಡಿದ್ದು, ಅವರನ್ನು ಕಂಡು ಬೇಟೆಗಾರರು ಪರಾರಿಯಾದ ಘಟನೆ ನಡೆದಿದೆ. ತಡರಾತ್ರಿ 2 ಗಂಟೆ ಸುಮಾರಿಗೆ ಅರಣ್ಯಧಿಕಾರಿ ಪ್ರಭಾಕರ್ ಮತ್ತು ತಂಡ ಗಸ್ತು ತಿರುಗುತ್ತಿದ್ದ ವೇಳೆ ಹರ್ಕೂರು ಮೀಸಲು ಅರಣ್ಯದಲ್ಲಿ ಬೋಲೆರೋ ವಾಹನವೊಂದು ಸಂಚರಿಸುತ್ತಿರುವುದನ್ನು ಗಮನಿಸಿದ್ದಾರೆ.ಬುಧವಾರ ತಡರಾತ್ರಿ ಕುಂದಾಪುರ ತಾಲೂಕು ಹರ್ಕೂರು ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆಯಾಡುವ ಉದ್ದೇಶದಿಂದ ಈ ವಾಹನ ಅಕ್ರಮ ಪ್ರವೇಶ ಮಾಡಿತ್ತು.
ಅಧಿಕಾರಿಗಳನ್ನು ಕಂಡು ದುಷ್ಕರ್ಮಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಸುಮಾರು ಹದಿನೈದು ಕಿ.ಮಿ ಬೊಲೋರೊ ವಾಹನವನ್ನು ಬೆನ್ನಟ್ಟಿದ್ದ ಅಧಿಕಾರಿಗಳು ಬೊಲೆರೋ ವಾಹನ, ಕಬ್ಬಿಣದ ರಾಡ್, ಟರ್ಪಾಲ್ ಮತ್ತು ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ವಾಹನದಲ್ಲಿದ್ದವರು ಪರಾರಿಯಾಗಿದ್ದಾರೆ. ಅರಣ್ಯ ಇಲಾಖೆಯ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
LATEST NEWS
‘ಡುಮ್ಮಿ’ ಎಂದು ಹೀಯಾಳಿಸಿದಕ್ಕೆ ಪತ್ನಿ ಆತ್ಮಹ*ತ್ಯೆ..!
ಬೆಂಗಳೂರು: ಡುಮ್ಮಿ ಎಂದು ಹೀಯಾಳಿಸಿದಕ್ಕೆ ಪತ್ನಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬಸವೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಜುನಾಥ ನಗರ ನಿವಾಸಿ ಸಂಧ್ಯಾ(31 ವ) ಆತ್ಮಹ*ತ್ಯೆಗೆ ಶರಣಾದವರು. ಈಕೆ ಖಾಸಗಿ ಪ್ರೌಢ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪತಿ ಡುಮ್ಮಿ ಎಂದು ಹೀಯಾಳಿಸಿ ಜಗಳ ಮಾಡುತ್ತಿದ್ದರು. ಇದರಿಂದ ನೊಂದು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಬಾಲಕನ ಹ*ತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತಮ್ಮನನ್ನೇ ಕೊಂದ ಅಣ್ಣ; ಮೊಬೈಲ್ ನಿಂದ ಹೋಯ್ತು ಪ್ರಾಣ!
ಸಂಧ್ಯಾ, ಜಯಪ್ರಕಾಶ್ ದಂಪತಿಗೆ ನಾಲ್ಕು ವರ್ಷದ ಪುತ್ರನಿದ್ದಾನೆ. ಮಗನ ಅನಾರೋಗ್ಯ ಸಮಸ್ಯೆಯಿಂದಾಗಿ ವೈದ್ಯಕೀಯ ಚಿಕಿತ್ಸೆಗೆ ಸಾಕಷ್ಟು ಹಣ ವ್ಯಯಿಸಿದ್ದರು. ಇದರಿಂದಾಗಿ ದಂಪತಿ ಮಧ್ಯೆ ಮನಸ್ತಾಪಗಳು ಉಂಟಾಗಿತ್ತು. ಈ ಮಧ್ಯೆ ಜಯಪ್ರಕಾಶ್ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದರು. ಈ ಸಮಯದಲ್ಲಿ ಸಂಧ್ಯಾರವರಿಗೆ ಗರ್ಭಪಾತವಾಗಿದೆ. ಇದಾದ ಬಳಿಕ ಸಂಧ್ಯಾರವರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿ ದೇಹದ ತೂಕವು ಹೆಚ್ಚಾಗಿತ್ತು. ಗಂಡ ಹೆಂಡತಿಯ ನಡುವೆ ಜಗಳ ನಡೆಯುತ್ತಿತ್ತು. ಇನ್ನು ಸಂಧ್ಯಾಳನ್ನು ಪತಿ ಜಯಪ್ರಕಾಶ್ ಡುಮ್ಮಿ ಎಂದು ಹೀಯಾಳಿಸುತ್ತಿದ್ದರು. ಇದರಿಂದ ನೊಂದ ಮಹಿಳೆ ಗುರುವಾರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಆ ವೇಳೆಗೆ ಸಂಧ್ಯಾ ಕೊನೆಯುಸಿರು ಚೆಲ್ಲಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
LATEST NEWS
ಇದು ಪುರುಷರು ಮಾತ್ರ ಭಾಗವಹಿಸುವ ಜಾತ್ರೆ..! ಮಾಂಸದೂಟ ಇಲ್ಲಿನ ವಿಶೇಷ..!
ಮಂಗಳೂರು / ಮಧುರೈ : ಅದು ಹತ್ತೂರಿನ ಜನರು ಭಾಗವಹಿಸುವ ಊರ ಜಾತ್ರೆಯಾಗಿದ್ದು ಕನಿಷ್ಟ ಅಂದ್ರೂ ಹತ್ತರಿಂದ ಹದಿನೈದು ಸಾವಿರ ಜನರು ಭಾಗವಹಿಸ್ತಾರೆ. ಆದ್ರೆ, ವಿಶೇಷ ಅಂದ್ರೆ ಈ ಜಾತ್ರೆಯಲ್ಲಿ ಎಲ್ಲೂ ಒಂದೇ ಒಂದು ಹೆಣ್ಣು ಮಕ್ಕಳು ಕಾಣೋದಿಕ್ಕೆ ಸಿಗೋದಿಲ್ಲ. ಹೆಣ್ಣು ಮಕ್ಕಳು ಈ ಜಾತ್ರೆ ಗದ್ದೆಗೆ ಇಳಿಬೇಕು ಅಂದ್ರೆ ಇಲ್ಲಿ ಪುರುಷರು ಊಟ ಮಾಡಿ ಬಿಟ್ಟು ಹೋದ ಬಾಳೆ ಎಲೆಗಳು ಒಣಗಿ ಹೋಗಬೇಕು. ಅಂದ್ರೆ ಕನಿಷ್ಟ ಅಂದ್ರೂ ಒಂದು ವಾರದ ಬಳಿಕವಷ್ಟೇ ಹೆಣ್ಣು ಮಕ್ಕಳು ಈ ಜಾತ್ರೆಗೆ ಬರಬಹುದು.
ಇದು ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಮಂಗಲಂ ಬಳಿಯ ಸೂರಿಕಂಬಟ್ಟಿ ಪಂಚಾಯತ್ನಲ್ಲಿ ನಡೆಯುವ ವಿಶೇಷ ಜಾತ್ರೆ. ಪೆರುಮಾಳ್ಕೋವಿಲ್ಪಟ್ಟಿ ಗ್ರಾಮ ದೇವರಾದ ಕರುಂಪರೈ ಮುತ್ತಯ್ಯ ದೇವಸ್ಥಾನದಲ್ಲಿ ಈ ಜಾತ್ರೆ ನಡೆಯುತ್ತದೆ. ಇದು ಮಾಂಸಾಹಾರಿ ಊಟದ ಜಾತ್ರೆಯಾಗಿದ್ದು, ಉತ್ಸವದ ಸಂಪ್ರದಾಯದಂತೆ ಪುರುಷರು ಮಾತ್ರ ಭಾಗವಹಿಸುತ್ತಾರೆ.
ದೇವರಿಗೆ ಮೇಕೆ ಬ*ಲಿ :
ಗ್ರಾಮ ದೇವರಿಗೆ ಭಕ್ತರು ತಮ್ಮ ಕೃಷಿ ಸಮೃದ್ಧಿಯಾಗಲು, ರೋಗ ರುಜಿನಗಳು ಬಾರದೇ ಇರಲು ಇಲ್ಲಿಗೆ ಕಪ್ಪು ಆಡುಗಳನ್ನು ಹರಕೆ ಹೇಳಿರುತ್ತಾರೆ. ಹರಕೆ ಹೇಳಿದ ಆಡುಗಳನ್ನು ಈ ಪರಿಸರದಲ್ಲಿ ತಂದು ಬಿಟ್ಟ ಬಳಿಕ ಆ ಆಡುಗಳಿಗೆ ಯಾರೂ ತೊಂದರೆ ಕೊಡುವಂತಿಲ್ಲ. ಯಾವ ತೋಟಕ್ಕೆ ಹೋಗಿ ಮೇವು ತಿಂದ್ರೂ ಅದು ಸಾಕ್ಷಾತ್ ಮುತ್ತಯ್ಯ ಕರುಪ್ಪು ಸ್ವಾಮಿಯೇ ಮೇವು ತಿನ್ನುತ್ತಿದ್ದಾರೆ ಅಂತ ಭಕ್ತರು ನಂಬಿಕೆ ಇಟ್ಟಿದ್ದಾರೆ. ಮುತ್ತಯ್ಯ ಸ್ವಾಮಿಗೆ ನಡೆಯುವ ವಾರ್ಷಿಕ ಜಾತ್ರೆಯಲ್ಲಿ ಇದೇ ಮೇಕೆಗಳನ್ನು ಬ*ಲಿ ಕೊಡಲಾಗುತ್ತದೆ. ಹಬ್ಬಕ್ಕೆ ಒಂದು ವಾರ ಮೊದಲು ಗ್ರಾಮಾಂತರ ಪ್ರದೇಶದಲ್ಲಿ ತಿರುಗಾಡುವ ಎಲ್ಲ ಮೇಕೆಗಳನ್ನು ಸಂಗ್ರಹಿಸಿ ಸ್ವಾಮಿಗೆ ಬ*ಲಿ ಕೊಡುತ್ತಾರೆ.
ಈ ಹಿನ್ನೆಲೆಯಲ್ಲಿ ಇಂದು ( ಮೆ 18 ) ಬೆಳಗ್ಗೆ ಉತ್ಸವ ಆರಂಭವಾಗಿದ್ದು, ದೇವಸ್ಥಾನದಲ್ಲಿ ಮುತ್ತಯ್ಯ ಸ್ವಾಮಿಗೆ ಪೊಂಗಲ್ ಹಾಕಿ ಪೂಜೆಗೆ ಚಾಲನೆ ನೀಡಲಾಯಿತು. ನಂತರ 125 ಮೇಕೆಗಳನ್ನು ಬ*ಲಿ ನೀಡಿ 2500 ಕೆಜಿ ಅಕ್ಕಿಯನ್ನು ಬೇಯಿಸಲಾಯಿತು. ನಂತರ ಬೇಯಿಸಿದ ಅನ್ನ ಮತ್ತು ಮಾಂಸವನ್ನು ಸ್ವಾಮಿಗೆ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರಿಗೆ ಅನ್ನದಾನ ಮಾಡಲಾಯಿತು.
ಮಹಿಳೆಯರಿಗಿಲ್ಲ ಪ್ರವೇಶ :
ಈ ಜಾತ್ರೆಯಲ್ಲಿ ಈ ಬಾರಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಪುರುಷರು ಭಾಗವಹಿಸಿ ಅನ್ನ ಪ್ರಸಾದ ಸ್ವೀಕರಿಸಿದ್ದಾರೆ. ಇವರು ಆಹಾರ ಸೇವಿಸಿದ ಎಲೆಗಳನ್ನು ಹಾಗೆ ಬಿಟ್ಟು ಬಿಡುವುದು ಕೂಡಾ ಇಲ್ಲಿನ ಪ್ರಮುಖ ಸಂಪ್ರದಾಯದಲ್ಲಿ ಒಂದು. ಹೀಗೇ ಬಿಟ್ಟು ಹೋದ ಎಲೆಗಳು ಒಣಗುವ ತನಕ ಈ ಪ್ರದೇಶಕ್ಕೆ ಮಹಿಳೆಯರು ಎಂಟ್ರಿ ಕೊಡುವಂತಿಲ್ಲ. ಎಲೆಗಳು ಒಣಗಿದೆ ಎಂದು ದೇವಸ್ಥಾನದ ಪೂಜಾರರು ಹೇಳಿದ ಬಳಿಕ ಮಹಿಳೆಯರು ಜಾತ್ರೆಯಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ.
ಇದನ್ನೂ ಓದಿ : ಬಾಲಕನ ಹ*ತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತಮ್ಮನನ್ನೇ ಕೊಂದ ಅಣ್ಣ; ಮೊಬೈಲ್ ನಿಂದ ಹೋಯ್ತು ಪ್ರಾಣ!
ಮಾಂಸದೂಟದ ಹಬ್ಬದಲ್ಲಿ ತಿರುಮಂಗಲಂ, ಸೊರಿಕಂ ಪಟ್ಟಿ, ಪೆರುಮಾಳ್ ಕೋವಿಲ್ಪಟ್ಟಿ, ಕರಡಿಕ್ಕಲ್. ಮಾವಿಲಿಪಟ್ಟಿ, ಚೇಕನುರಾಣಿ, ಚೋಳವಂತನ್, ಕರುಮತ್ತೂರು, ಚೆಲ್ಲಂಪಟ್ಟಿ ಸೇರಿದಂತೆ ವಿವಿಧ ಪ್ರದೇಶಗಳ ಪುರುಷ ಭಕ್ತರು ಮಾತ್ರ ಭಾಗವಹಿಸಿದ್ದರು.
LATEST NEWS
ಬಾಲಕನ ಹ*ತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತಮ್ಮನನ್ನೇ ಕೊಂದ ಅಣ್ಣ; ಮೊಬೈಲ್ ನಿಂದ ಹೋಯ್ತು ಪ್ರಾಣ!
ಬೆಂಗಳೂರು : ಆ ಬಾಲಕ ಅಜ್ಜಿ ಮನೆಯಲ್ಲಿದ್ದುಕೊಂಡು ಓದುತ್ತಿದ್ದ. ಬೇಸಿಗೆ ರಜೆಯ ಹಿನ್ನೆಲೆ ತಂದೆ – ತಾಯಿ, ಅಣ್ಣನೊಂದಿಗೆ ಸಮಯ ಕಳೆಯಲು ಬಂದಿದ್ದ. ಆದರೆ ವಿಧಿಯಾಟ ಬೇರೆಯಾಗಿತ್ತು. ರಜೆಯ ಸಂಭ್ರಮದಲ್ಲಿ ಬಂದಿದ್ದವನಿಗೆ ಅಣ್ಣನೇ ಪರಲೋಕದ ದಾರಿ ತೋರಿಸಿದ್ದ.
ಪ್ರಕರಣಕ್ಕೆ ಟ್ವಿಸ್ಟ್ , ಅಣ್ಣನೇ ಹಂ*ತಕ:
ಆನೇಕಲ್ ತಾಲೂಕಿನ ನೆರಿಗಾ ಗ್ರಾಮ ಅಂದು ಬೆಚ್ಚಿ ಬಿದ್ದಿತ್ತು. ಬಹಿರ್ದೆಸೆಗೆ ತೆರಳಿದ್ದ ಬಾಲಕ ಪ್ರಾಣೇಶ್(15) ಶ*ವವಾಗಿ ಪತ್ತೆಯಾಗಿದ್ದ. ಯಾರು ಈ ದುಷ್ಕೃತ್ಯ ಮೆರೆದವರು ಎಂದು ಪ್ರಕರಣ ಬೆಂಬತ್ತಿದ ಪೊಲೀಸರಿಗೆ ಸಾಕ್ಷಿಗಳು ಬಾಲಕನ ಅಣ್ಣನತ್ತ ಬೆಟ್ಟು ಮಾಡಿ ತೋರಿಸಿದ್ದವು.
ತಮ್ಮನನ್ನೇ ಕೊ*ಲೆಗೈದಿದ್ದ ಅಣ್ಣ 18 ವರ್ಷದ ಅಣ್ಣ ಶಿವಕುಮಾರ್ ಪೊಲೀಸ್ ಬಲೆಗೆ ಬಿದ್ದಿದ್ದ. ಮೊಬೈಲ್ ಚಟವೇ ಈ ಕೊ*ಲೆಗೆ ಕಾರಣ ಎಂಬ ಸತ್ಯ ತನಿಖೆಯಿಂದ ಬಯಲಾಗಿದೆ.
ಮೊಬೈಲ್ ನಿಂದಾಗಿ ಹೋಯ್ತು ಜೀವ:
ಮೂಲತಃ ಆಂಧ್ರ ಮೂಲದ ಸೂಳೆಕೆರಿ ಗ್ರಾಮದ ಚನ್ನಮ್ಮ ಮತ್ತು ಬಸವರಾಜ್ ಎಂಬ ಕೂಲಿಕಾರ್ಮಿಕ ದಂಪತಿ 3 ತಿಂಗಳ ಹಿಂದೆ ಗಾರೇ ಕೆಲಸಕ್ಕೆಂದು ಆಂಧ್ರದಿಂದ ನೆರಿಗಾ ಗ್ರಾಮಕ್ಕೆ ಬಂದು ನೆಲೆಸಿದ್ದರು. ದೊಡ್ಡ ಮಗನಿಗೆ ವಿದ್ಯೆ ತಲೆಗೆ ಹತ್ತಲಿಲ್ಲ ಎಂದು ತಮ್ಮೊಂದಿಗೆ ಕರೆದುಕೊಂಡು ಬಂದು ಗಾರೇ ಕೆಲಸಕ್ಕೆ ಹಾಕಿದ್ದರು. ಚಿಕ್ಕ ಮಗನಿಗೆ ಓದಿನಲ್ಲಿ ಆಸಕ್ತಿ ಇದ್ದ ಕಾರಣ ಅಜ್ಜಿ ಮನೆಯಲ್ಲೇ ಬಿಟ್ಟು ಓದಿಸುತ್ತಿದ್ದರು. ಆಂಧ್ರದ ಕರ್ನೂಲ್ನಲ್ಲಿ ಅಜ್ಜಿ ಮನೆಯಲ್ಲೇ ಇದ್ದುಕೊಂಡು ಸರ್ಕಾರಿ ಶಾಲೆಯಲ್ಲಿ ಪ್ರಾಣೇಶ್ ಏಳನೇ ತರಗತಿ ಓದುತ್ತಿದ್ದ. ಶಾಲೆಗೆ ಬೇಸಿಗೆ ರಜೆ ಹಿನ್ನೆಲೆ ತಂದೆ ತಾಯಿ ಇದ್ದ ನೆರಿಗಾ ಗ್ರಾಮಕ್ಕೆ ಬಂದಿದ್ದ.
ಸಮಯ ಸಿಕ್ಕಾಗಲೆಲ್ಲ ಅಣ್ಣ ಶಿವಕುಮಾರ್ನ ಮೊಬೈಲ್ ತೆಗೆದುಕೊಂಡು ಆಟ ಆಡ್ತಿದ್ದ. ಇದು ಶಿವಕುಮಾರ್ಗೆ ಕೋಪ ತರಿಸಿತ್ತು. ಹೀಗಾಗಿ ಮೇ 15 ರಂದು ತಮ್ಮ ಬಹಿರ್ದೆಸೆಗೆ ಹೋದಾಗ ಅವನನ್ನು ಹಿಂಬಾಲಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಪ್ರಾಣೇಶ್ನ ತಲೆ, ಹೊಟ್ಟೆ ಭಾಗಕ್ಕೆ ಹೊಡೆದು ಹ*ತ್ಯೆ ಮಾಡಿದ್ದಾನೆ. ಬಳಿಕ ಮನೆಗೆ ಬಂದು ತನಗೆ ಏನು ಗೊತ್ತಿಲ್ಲ ಎಂಬಂತೆ ಓಡಾಡಿಕೊಂಡಿದ್ದ.
ನಾಟಕವಾಡಿದ್ದ ಶಿವಕುಮಾರ್ :
ತಂದೆ ತಾಯಿ ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ಚಿಕ್ಕ ಮಗ ನಾಪತ್ತೆಯಾಗಿರುವುದು ಪತ್ತೆಯಾಗಿದೆ. ಎಲ್ಲೆಡೆ ಹುಡುಕಾಡಿದ್ದಾರೆ. ಈ ವೇಳೆ ತಮ್ಮನ ಶ*ವ ಬಿದ್ದಿದೆ ಎಂದು ಓಡೋಡಿ ಬಂದು ಶಿವಕುಮಾರ ಪೋಷಕರಿಗೆ ಕೊಲೆಯಾಗಿದೆ ಎಂದು ತಿಳಿಸಿದ್ದಾನೆ. ಪೋಷಕರು ಈ ಬಗ್ಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ : ಐದು ಮಕ್ಕಳಿದ್ದಾರೆಂದು ಚಿಂತೆಗೊಳಗಾದ ತಂದೆ..! ಅಕ್ಕನಿಂದಲೇ ಇಬ್ಬರು ಸಹೋದರಿಯರ ಕೊ*ಲೆ..!
ಈ ವೇಳೆ ತಮ್ಮನ ಶವವನ್ನ ನಾನೇ ಮೊದಲು ನೋಡಿದ್ದೆ ಎಂದು ಹೇಳುತ್ತಿದ್ದ ಶಿವಕುಮಾರನ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ಠಾಣೆಗೆ ಕರೆದು ಕೊಂಡು ಹೋಗಿ ಬಾಯಿ ಬಿಡಿಸಿದ್ದಾರೆ. ಈ ವೇಳೆ ಸತ್ಯಾಂಶ ಬಯಲಾಗಿದೆ. ಅಲ್ಲದೇ, ಆರೋಪಿ ಶಿವಕುಮಾರ್, ನಿರ್ಮಾಣ ಹಂತದ ಕಟ್ಟಡದಿಂದ ಸುತ್ತಿಗೆ ತಂದಿದ್ದ. ಸುತ್ತಿಗೆಯನ್ನ ಜೇಬಿನಲ್ಲಿ ಇಟ್ಟುಕೊಳ್ಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಒಬ್ಬ ಮಗ ಇಹಲೋಕ ತ್ಯಜಿಸಿದ, ಇನ್ನೊಬ್ಬ ಮಗ ಜೈಲು ಪಾಲಾದ ನೋವಿನಿಂದ ಪೋಷಕರು ಕಣ್ಣೀರು ಹಾಕ್ತಿದ್ದಾರೆ.
- LATEST NEWS6 days ago
ಖಾಲಿ ಬಿಯರ್ ಬಾಟಲಿಗಳಿಂದ ಲಕ್ಷಾಧಿಪತಿಯಾದ ವ್ಯಕ್ತಿ..!
- LATEST NEWS6 days ago
ಪ್ರೇಯಸಿಯ ಜೊತೆ ಗೋವಾ ಟೂರ್..! ಕ್ಷೌರಿಕನಿಗೆ ದುಬಾರಿಯಾದ ಟೂರ್..!
- DAKSHINA KANNADA6 days ago
ದೇವರಿಗೆ ಇಟ್ಟ ಹೂವುಗಳನ್ನು ಒಣಗಿದ ನಂತರ ಹೀಗೆ ಮಾಡಿ..!
- LATEST NEWS7 days ago
Watch : ಇಬ್ಬರು ಪುರುಷರೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪತ್ನಿ; ಹಿಗ್ಗಾಮುಗ್ಗ ಥಳಿಸಿದ ಪತಿ