LATEST NEWS
“ತುರ್ತು ಪರಿಸ್ಥಿತಿ ಸೃಷ್ಟಿಸಿ ಸಂವಿಧಾನದ ಮೇಲೆ ಇಂದಿರಾಗಾಂಧಿ ಅತ್ಯಾಚಾರ ಮಾಡಿದ್ದು, ಒಂದು ಕರಾಳ ಅಧ್ಯಾಯ”
ಮಂಗಳೂರು: 1975 ಈ ದೇಶದ ಸಂವಿಧಾನದ ಮೇಲೆ ಇಂದಿರಾಗಾಂಧಿ ಅತ್ಯಾಚಾರ ಮಾಡಿದ ಒಂದು ಕರಾಳ ಅಧ್ಯಾಯ ಈ ದೇಶದ ಚರಿತ್ರೆಯಲ್ಲಿ ದಾಖಲಾಗಿದೆ. ಇಂದಿರಾಗಾಂಧಿ ತಾನು ಸಂವಿಧಾನ ಹಾಗೂ ಕಾನೂನಿಗಿಂತ ಅತೀತಳು ಅನ್ನುವ ಸೊಕ್ಕಿನಿಂದ ಇಡೀ ಪ್ರಜಾಪ್ರಭುತ್ವದ ಸಾರವನ್ನು ಕಸಿದುಕೊಂಡಳು ಎಂದು ರಾಜ್ಯ ಗೃಹಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಮಂಗಳೂರಿನ ದಕ್ಷಿಣ ಮಂಡಲ ಬಿಜೆಪಿ ವತಿಯಿಂದ ನಗರದ ಟಿ.ವಿ ರಮಣ ಪೈ ಸಭಾಂಗಣದಲ್ಲಿ ನಿನ್ನೆ ನಡೆದ ತುರ್ತು ಪರಿಸ್ಥಿತಿಯ ಹೋರಾಟಗಾರರಿಗೆ ಸನ್ಮಾನ ಹಾಗೂ ಸಾಧಕರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
1947 ಆ.14 ಮಧ್ಯರಾತ್ರಿ ಎಷ್ಟು ಸಂತೋಷ ಸಡಗರವನ್ನು ಈ ದೇಶವಾಸಿಗಳಲ್ಲಿ ತಂದುಕೊಂಡಿತೋ ಅದೇ ರೀತಿ 1975ರ ಜೂ.25 ಮಧ್ಯರಾತ್ರಿ ಈ ದೇಶದ ಸಂವಿಧಾನವನ್ನು ಕಸಿದುಕೊಂಡಿದ್ದ ದಿನ. ಇತ್ತೀಚಿನ ಯುವಕರಿಗೆ ಇದರ ಬಿಸಿ, ಅಗಾಧತೆ ಗೊತ್ತಿಲ್ಲ.
ಆಗ ರಾಜನಾರಾಯಣ್ ಅವರು ಅಲಹಾಬಾದ್ ಕೋರ್ಟ್ನಲ್ಲಿ ಇಂದಿರಾಗಾಂಧಿಯವರ ಚುನಾವಣೆ ನ್ಯಾಯೋಚಿತವಾಗಿಲ್ಲ ಎಂದು ಅರ್ಜಿ ಹಾಕಿದರು. ಅದರ ವಿಚಾರಣೆ ನಡೆದು ಇಂದಿರಾ ಗಾಂಧಿ ಪ್ರಧಾನಿ ಪಟ್ಟದಿಂದ ಕೆಳಗಿಳಿಯಬೇಕು ಎಂದು ಕೋರ್ಟ್ ತೀರ್ಪು ಬಂತು.
ಇಂದಿರಾ ಕೋರ್ಟ್ ತೀರ್ಪಿಗೆ ತಲೆಬಾಗುತ್ತಾರೆಂದು ಎಲ್ಲರೂ ಭಾವಿಸಿದ್ದರು. ಆದರೆ ಇಂದಿರಾಗಾಂಧಿ ನಾನು ಸಂವಿಧಾನಕ್ಕಿಂತ ಅತೀತಳು, ಈ ದೇಶದ ಕಾನೂನಿಗಿಂತ ಅತೀತಳು ಅನ್ನುವ ಸೊಕ್ಕಿನಿಂದ ಇಡೀ ಪ್ರಜಾಪ್ರಭುತ್ವದ ಸಾರವನ್ನು ವಾಕ್ ಸ್ವಾತಂತ್ರ್ಯ,
ಬದುಕುವ ಹಕ್ಕನ್ನು ಕಸಿಕೊಂಡರು. ಈ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದರು. ಯಾವುದೇ ಪತ್ರಿಕೆ ಆಕೆಯ ವಿರುದ್ಧ ಬರೆಯದಂತೆ ಸೆನ್ಸಾರ್ ವಿಧಿಸಿದರು. ಈವತ್ತು ಬಹಳ ಮಂದಿ ಪತ್ರಕರ್ತರು, ಬುದ್ದಿವಂತರು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಾರೆ.
ಜೂ.25ರ ರಾತ್ರಿ ವಾಜಪೇಯಿ, ಅಡ್ವಾಣಿ, ಜಾರ್ಜ್ ಫರ್ನಾಂಡಿಸ್, ದೇವೇಗೌಡ, ರಾಮಕೃಷ್ಣ ಸಹಿತ ದೇಶದ ಉದ್ದಗಲ ಸಹಿತ ರಾಜಕೀಯ ನಾಯಕರು ಬಂಧನಕ್ಕೊಳಗಾದರು. ಆರ್ಎಸ್ಎಸ್ನ ಸರಸಂಘಚಾಲಕರು ಹಾಗೂ ಪ್ರಚಾರಕರನ್ನ ಜೈಲಿನೊಳಗೆ ಇಟ್ಟು, ಇಡೀ ದೇಶದವನ್ನೇ ಜೈಲಾಗಿಸಿದರು. ಇದೇ ವೇಳೆ ಅನೇಯ ಸ್ವಯಂ ಸೇವಕರಿಗೆ ಚಿತ್ರಹಿಂಸೆ ನೀಡಿದರು.
ಇದರಿಂದ ಅವರ ಕುಟುಂಬಗಳು ನಾಶ ಆದವು. ಪೊಲೀಸರ ಹೊಡೆತದಿಂದ ಅನೇಕರು ಅಂಗವಿಕಲರಾದರು. ನನಗಿನ್ನೂ ನೆನಪಿದೆ ಇದರ ವಿರುದ್ಧ ಭಾಷಣ ಮಾಡಿ ಜೈಲು ತುಂಬುವ ಆಂದೋಲನಕ್ಕೆ ಜನಸಂಘ ಹಾಗೂ ಆರ್ಎಸ್ಎಸ್ ಕರೆ ನೀಡಿತ್ತು. ಆಗ ಶಿವಮೊಗ್ಗದಲ್ಲಿ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಯಾದ ನಾನು ಭಾಷಣಕ್ಕೆ ಪ್ರೇಕ್ಷಕನಾಗಿ ಹೋಗುವಂತೆ ಸೂಚನೆ ಇತ್ತು. ಅಲ್ಲಿ ಯಾವುದೇ ಪ್ರತಿಕಿಯೆ ನೀಡಬಾರದೆಂದು ಮೊದಲೇ ಸೂಚನೆ ಇತ್ತು.
ಅಲ್ಲಿ ಜನಸಂಘದ ನಾಯಕ ಸುಬ್ರಹ್ಮಣ್ಯ ಅಯ್ಯರ್ ಭಾಷಣ ಮಾಡಿ ಕೊನೆಗೆ ಭಾರತ್ ಮಾತಾಕಿ ಅಂದ್ರು, ಸ್ವಯಂ ಸೇವಕರಿಗೆ ಭಾರತ್ ಮಾತಾಕಿ ಅಂದ್ರೆ ಸುಮ್ನಿರಲು ಗೊತ್ತಿಲ್ಲ. ಗೊತ್ತಿಲ್ಲದೇ ಜೈ ಅಂದ್ಬಿಟ್ಟೆ ನಾನು,
ಆಗ ಹಿಂದಿನಿಂದ ಬಂದ ಪೊಲೀಸ್ ಶರ್ಟ್ಗೆ ಕೈ ಹಾಕಿ ಮುಖ ನೋಡಿ ಬಹಳ ದಿನದಿಂದ ನಿನ್ನನ್ನು ಹುಡುಕುತ್ತಿದ್ದೇವೆ ಎಂದು ಜೈಲಿಗೆ ಕರೆದುಕೊಂಡು ಹೋದರು. 6 ತಿಂಗಳು ಜೈಲಿನಲ್ಲಿದ್ದೆ ಎಂದು ತುರ್ತು ಪರಿಸ್ಥಿತಿಯ ಕರಾಳತೆಯನ್ನು ನೆನಪಿಸಿಕೊಂಡರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಮಾತನಾಡಿ, ಈ ಕಾರ್ಯಕ್ರಮದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಹೋರಾಟ ಮಾಡಿದ 16 ಮಂದಿಯನ್ನು ಗೌರವಿಸುವ ಅವಕಾಶ ದೊರೆತಿದ್ದು ನನ್ನ ಪಾಲಿನ ಸೌಭಗ್ಯ. ತುರ್ತು ಪರಿಸ್ಥಿತಿಯಲ್ಲಿ ಹೋರಾಡುವ ಅವಕಾಶ ಸಿಗಲಿಲ್ಲ.
ಆದರೆ ಹೋರಾಟದಲ್ಲಿ ಭಾಗವಹಿಸಿದವರನ್ನು ಸ್ಪರ್ಶಿಸಿದ ಮಹನೀಯರನ್ನು ಗೌರವಿಸುವ ಅವಕಾಶ ನನಗೆ ಬಂದಿರುವುದು ಸಂತೋಷ ಎಂದರು.
ವಿವಿಧ ಸಾಧಕರ ಸನ್ಮಾನ
ಇದೇ ವೇಳೆ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ ಜೈಲು ಸೇರಿದ್ದ ಮುಖಂಡರನ್ನು ಹಾಗೂ ದಕ್ಷಿಣ ಮಂಡಲದ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಕಂಬಳದಲ್ಲಿ ಸತತ ಎರಡು ವರ್ಷ ಚಾಂಪಿಯನ್ ಪ್ರಶಸ್ತಿ ಗಿಟ್ಟಿಸಿದ ಪದವು ಡಾಲ್ಫಿ ಡಿಸೋಜ ಮತ್ತು ಡೆರಿಕ್ ಡಿ’ಸೋಜ ಮಾಲೀಕತ್ವದ ‘ಧೂಜ ಹೆರ್ಮುಂಡೆ ಮೋಡ’ ಕೋಣಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ್ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಎಂಎಲ್ಸಿ ಮೋನಪ್ಪ ಭಂಡಾರಿ, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರು, ಉಪಾಧ್ಯಕ್ಷ್ಯ ಸಂತೋಷ್ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಶೆಟ್ಟಿ, ಕಸ್ತೂರಿ ಪಂಜ ಮತ್ತಿತರರು ಉಪಸ್ಥಿತರಿದ್ದರು.
LATEST NEWS
ಲೈಂ*ಗಿಕ ದೌರ್ಜ*ನ್ಯ ಆರೋಪ : ವಿಕಿಪೀಡಿಯಾದಲ್ಲಿ ಸೇವ್ ಆಯ್ತು ಪ್ರಜ್ವಲ್ ರೇವಣ್ಣ ಕೇಸ್!
ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಪ್ರಜ್ವಲ್ ಸಾವಿರಾರು ಹೆಣ್ಣುಮಕ್ಕಳ ಮೇಲಿನ ಲೈಂ*ಗಿಕ ದೌರ್ಜ*ನ್ಯ ಆರೋಪ ಎದುರಿಸುತ್ತಿದ್ದಾರೆ. ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿಸಿದ ಬೆನ್ನಲ್ಲೆ ಪ್ರಕರಣದ ವಿವರ ‘ಗೂಗಲ್ ವಿಕೀಪಿಡಿಯಾ’ (Wikipedia) ದಲ್ಲಿ ದಾಖಲಾಗಿದೆ.
ಹೌದು, ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೋಗಳುಳ್ಳ ಪೆನ್ಡ್ರೈವ್ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಗೂಗಲ್ ನಲ್ಲಿ ಪ್ರಜ್ವಲ್ ರೇವಣ್ಣ ಅವರ ಹಿನ್ನೆಲೆ ತಿಳಿಸುವ Wikipedia Profile ನಲ್ಲೂ ‘ಸೆ*ಕ್ಸ್ ಸ್ಕ್ಯಾಂ*ಡಲ್’ ಹೆಸರಿನಲ್ಲಿ ಮಾಹಿತಿ ಅಪ್ಲೋಡ್ ಆಗಿದೆ.
ಸದ್ಯ ಪೆನ್ಡ್ರೈವ್ ವಿವಾದದಲ್ಲಿರುವ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಜರ್ಮನಿ ಸೇರಿದ್ದಾರೆ. ಅವರ ಬಾಲ್ಯ, ಶಿಕ್ಷಣ, ರಾಜಕೀಯ ಪ್ರವೇಶ, ಕ್ಷೇತ್ರ, ರಾಜಕೀಯ ಪಕ್ಷ ಸೇರಿದಂತೆ ಇಡೀ ಅವರ ಇತಿಹಾಸ ತಿಳಿಸುವ ಗೂಗಲ್ ವಿಕಿಪೀಡಿಯಾದಲ್ಲಿ ಅವರ ಅಶ್ಲೀಲ ವಿಡಿಯೋ ವಿಚಾರವೂ ಸೇರಿಕೊಂಡಿದೆ.
ವಿಕಿಪೀಡಿಯಾದಲ್ಲಿ ಏನಿದೆ ?
ಸಾಮಾನ್ಯವಾಗಿ ಒಬ್ಬರ ರಾಜಕಾರಣಿಯಾಗಲಿ, ಸೆಲೆಬ್ರೆಟಿಗಳಾಗಲಿ ಅಥವಾ ಇನ್ನಿತರ ಸಾರ್ವಜನಿಕ ಜೀವನದಲ್ಲಿರುವ ಪ್ರಮುಖ ವ್ಯಕ್ತಿಗಳ ಜೀವನ, ಇತಿಹಾಸ ಎಲ್ಲವು ವಿಕಿಪೀಡಿಯಾದಲ್ಲಿ ದಾಖಲಾಗಿರುತ್ತದೆ. ಅದೇ ರೀತಿ ಪ್ರಜ್ವಲ್ ರೇವಣ್ಣ ಅವರ ಮಾಹಿತಿಯೂ ಲಭ್ಯವಿತ್ತು. ಆದರೆ, ಪೆನ್ಡ್ರೈವ್ ಅಶ್ಲೀಲ ವಿಡಿಯೋ ಪ್ರಕರಣ ಹೊರ ಬರುತ್ತಿದ್ದಂತೆ, ಅವರ ಗೂಗಲ್ ಪ್ರೊಫೈಲ್ ನಲ್ಲಿ ‘ಸೆ*ಕ್ಸ್ ಸ್ಕ್ಯಾಂ*ಡಲ್-ತನಿಖೆ’ ಉಪ ಶಿರ್ಷಿಕೆಯಡಿ ಪ್ರಕರಣದ ಮಾಹಿತಿ ಅಪ್ಲೋಡ್ ಆಗಿವೆ.
ಸಂಚಲನ ಮೂಡಿಸಿದ ವೀಡಿಯೋ :
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಹಾಸನದಲ್ಲಿ ಏಪ್ರಿಲ್ 26 ರಂದು ನಡೆದಿದೆ. ಜೆಡಿಎಸ್ – ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದಾರೆ. ಚುನಾವಣೆಗೆ ಎರಡು ದಿನಗಳು ಬಾಕಿ ಉಳಿದಿರುವಾಗ ಈ ವೀಡಿಯೋ ದೃಶ್ಯಾವಳಿಗಳ ತುಣುಕುಗಳ ಪೆನ್ಡ್ರೈವ್ಗಳು ಹಾಸನದಾದ್ಯಂತ ವೈರಲ್ ಆಗಿತ್ತು. ಯುವತಿಯರೊಂದಿಗೆ ಪ್ರಜ್ವಲ್ ಆಕ್ಷೇಪಾರ್ಹ ಸ್ಥಿತಿಯಲ್ಲಿರುವ ವೀಡಿಯೋ ಮತ್ತು ಚಿತ್ರಗಳ ಪೆನ್ಡ್ರೈವ್ಗಳು ಸಂಚಲನ ಮೂಡಿಸಿದ್ದವು.
FILM
ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೆಮ್ಮೆಯ ಗರಿ; ಜಪಾನ್ ನತ್ತ 777 ಚಾರ್ಲಿ!
777 ಚಾರ್ಲಿ ಭಾರೀ ಸದ್ದು ಮಾಡಿದ್ದ ಸಿನಿಮಾ. ಈ ಚಿತ್ರ ನೆಚ್ಚಿಕೊಳ್ಳದವರೇ ಇಲ್ಲ. ನಾಯಿ ಹಾಗೂ ಮನುಷ್ಯನ ನಡುವಿನ ಬಂಧವನ್ನು ಸಾರಿದ ಈ ಚಿತ್ರ ಭಾರೀ ಯಶಸನ್ನು ಬಾಚಿಕೊಂಡಿತ್ತು. ಇದೀಗ ಈ ಚಿತ್ರ ಜಪಾನ್ ನತ್ತ ಪಯಣ ಬೆಳೆಸಿದೆ.
ಜಪಾನ್ ನಲ್ಲಿ 777 ಚಾರ್ಲಿ :
ಪರಂವಃ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬಂದ 777 ಚಾರ್ಲಿ ಈಗಾಗಲೇ 5 ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಇದೀಗ ಜಪಾನ್ ಸರದಿ. ಜಪಾನೀಸ್ ಭಾಷೆಗೆ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಜೂ.28 ರಂದು ಜಪಾನ್ ನಗರಗಳಲ್ಲಿ 777 ಚಾರ್ಲಿ ಬಿಡುಗಡೆ ಆಗಲಿದೆ. ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾಗಳು ಈಗಾಗಲೇ ಜಪಾನ್ ನಲ್ಲಿ ಸದ್ದು ಮಾಡಿವೆ. ಇದೀಗ ಚಾರ್ಲಿ ಸರದಿ. ಚಂದನವನದ(Sandalwood) ಪಾಲಿಗಿದು ಹೆಮ್ಮೆಯ ವಿಚಾರವೇ ಸರಿ.
ಜಪಾನ್ ಚಿತ್ರರಂಗದ ದೊಡ್ಡ ಸಂಸ್ಥೆ ‘ಶೋಚಿಕೋ ಮೂವೀ’ ‘777 ಚಾರ್ಲಿ’ ಚಿತ್ರವನ್ನು ಜಪಾನಿನಲ್ಲಿ ವಿತರಣೆ ಮಾಡಲು ಮುಂದಾಗಿದೆ. ಈ ಹಿಂದೆ ಇದೇ ಸಂಸ್ಥೆ ‘Hachi: A Dog’s Tale’ ಸಿನಿಮಾವನ್ನು ಜಪಾನಿನಲ್ಲಿ ವಿತರಣೆ ಮಾಡಿ ಯಶಸ್ಸು ಕಂಡಿತ್ತು.
2023ರಲ್ಲಿ ‘777 ಚಾರ್ಲಿ’ ಸಿನಿಮಾ ಥೈಲ್ಯಾಂಡ್ನಲ್ಲಿ ಡಬ್ ಆಗಿ ಬಿಡುಗಡೆಗೊಂಡಿತ್ತು. ಈ ಸಿನಿಮಾ ಮುಂದಿನ ದಿನಗಳಲ್ಲಿ ರಷ್ಯಾ, ಲ್ಯಾಟಿನ್ ಅಮೆರಿಕ, ಜರ್ಮನಿ, ತೈವಾನ್ ಮುಂತಾದ ದೇಶಗಳಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಇದನ್ನೂ ಓದಿ : PHOTOS : ಗೀತಾ ‘ವಿಜಯ್’ ಅದ್ದೂರಿ ಮದುವೆ; ಮೆಚ್ಚುಗೆ ಪಡೆದ ಧನುಷ್ ಮಾಡಿದ ಆ ಒಂದು ಕಾರ್ಯ!
ಕಿರಣ್ ರಾಜ್ ನಿರ್ದೇಶನದ 2022ರ ಜೂನ್ 10ರಂದು ಭಾರತದ 5 ಭಾಷೆಗಳಲ್ಲಿ ಬಿಡುಗಡೆಯಾಗಿ ಜನಮನಸೂರೆಗೊಂಡಿತ್ತು. ಚಾರ್ಲಿಯಾಗಿ ನಾಯಿಯ ಅಭಿನಯ ಅದ್ಭುತ ಎನಿಸಿತ್ತು. ರಕ್ಷಿತ್ ಶೆಟ್ಟಿ ಮನೋಜ್ಞವಾಗಿ ನಟಿಸಿದ್ದರು. ಚಿತ್ರದಲ್ಲಿ ಸಂಗೀತಾ ಶೃಂಗೇರಿ ಗಮನ ಸೆಳೆದಿದ್ದರು.
LATEST NEWS
ಮೂರು ವರ್ಷದ ಮಗುವಿನ ಎದೆಗೆ ಕಾಲಿಟ್ಟು ಕೊಂ*ದ ಪಾಪಿ..! ಬೆಳಗಾವಿಯಲ್ಲೊಂದು ಅಮಾನುಷ ಘಟನೆ
ಬೆಳಗಾವಿ: ಮೂರು ವರ್ಷದ ಮಗುವಿನ ಎದೆ ಮೇಲೆ ಕಾಲಿಟ್ಟು, ತುಳಿದು ಹ*ತ್ಯೆ ಮಾಡಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿಯಲ್ಲಿ ನಡೆದಿದೆ.
ಬುರ್ಲಟ್ಟಿ ಗ್ರಾಮದ ಶ್ರೀನಿಧಿ ಕಾಡಪ್ಪ ಕಾಳಾಪಾಟೀಲ್ ಮೂರು ವರ್ಷದ ಮೃತಪಟ್ಟಿರುವ ಮಗು. ಜೋತಿಭಾ ತುಕಾರಾಮ ಬಾಬಾಬರ ಎಂಬವನು ಮಗುವನ್ನು ಕೊಂ*ದವರು ಎಂದು ತಿಳಿದು ಬಂದಿದೆ. ಮಗುವಿನ ತಂದೆ ಕಾಡಪ್ಪ ಕಾಳಪಾಟೀಲಗೆ ಕಳೆದ ವರ್ಷ ಜೋತಿಭಾ ಬಾಬಾಬರ ಐವತ್ತು ಸಾವಿರ ಸಾಲ ನೀಡಿದ್ದ ಎನ್ನಲಾಗಿದೆ. ಈ ಹಣವನ್ನು ವಾಪಸ್ ನೀಡುವಂತೆ ಕಾಳಪ್ಪನಿಗೆ ಕೇಳಿದಾಗ ಶನಿವಾರ ಬೆಳಗ್ಗೆ ಜೋತಿಭಾ ಕಾಳಪ್ಪನ ಮನೆ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದಾಗಿ ಇಬ್ಬರ ನಡುವೆ ಜಗಳ ತಾರಕಕ್ಕೇರಿ ಜೋತಿಭಾ ತುಕಾರಾಮ ಬಾಬಾಬರ ಮಗುವಿನ ಎದೆ ಮೇಲೆ ಕಾಲಿಟ್ಟು ಕೊಂದಿದ್ದಾನೆ ಎಂದು ಮೃತಪಟ್ಟ ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.
ಮುಂದೆ ಓದಿ..: ಸಾ*ವಿನಲ್ಲಿ ಒಂದಾದ ತಂದೆ ಮಗ.. ತಂದೆಯ ಅಗಲಿಕೆ ನೋವಲ್ಲೇ ಅಸುನೀಗಿದ ಮಗ..!
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- FILM6 days ago
ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ
- FILM7 days ago
‘ಬಘೀರ’ ಸಿನೆಮಾ ಶೂಟಿಂಗ್ ವೇಳೆ ಅವಘಡ.. ರೋರಿಂಗ್ ಸ್ಟಾರ್ ಆಸ್ಪತ್ರೆ ದಾಖಲು
- chikkamagaluru6 days ago
ಎಟಿಎಂ ಮೆಷಿನ್ಗೆ ಬೆಂಕಿ ಅವಘಡ..! ಸುಟ್ಟು ಕರಕಲಾದ ಲಕ್ಷಾಂತರ ರೂಪಾಯಿ..!!
- FILM5 days ago
ಶೋಬಿತಾ ಜೊತೆ ಕಾಡಿನಲ್ಲಿ ಕಾಣಿಸಿಕೊಂಡ್ರ ನಾಗಚೈತನ್ಯ..! ಫ್ಯಾನ್ಸ್ ಏನಂದ್ರು..?