Friday, June 2, 2023

ವಿಟ್ಲ: ಕೇಪು ಗ್ರಾಮದಲ್ಲಿ ನಡೆದ ಹಲ್ಲೆ ಪ್ರಕರಣ-ಮತ್ತೆ ಇಬ್ಬರು ಆರೋಪಿಗಳು ಅರೆಸ್ಟ್

ವಿಟ್ಲ: ಮೇ 14ರಂದು ಕೇಪು ಗ್ರಾಮದ ಕರವೀರ ಬಸ್‌ ನಿಲ್ದಾಣದ ಬಳಿ ಅಡ್ಯನಡ್ಕ ನಿವಾಸಿ ಗಿರೀಶ್‌ ಮತ್ತು ಮೈರ ನಿವಾಸಿ ರಕ್ಷಿತ್‌ ಕುಮಾರ್‌ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣದ ಹಿನ್ನೆಲೆ ಇಬ್ಬರು ಆರೋಪಿಗಳನ್ನು ಮೇ 24 ಮಂಗಳವಾರದಂದು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಉಕ್ಕುಡ ದರ್ಬೆ ನಿವಾಸಿ ಅಬ್ದುಲ್‌ ಸಲಾಂ (23) ಮತ್ತು ಉಕ್ಕುಡ ದರ್ಬೆ ನಿವಾಸಿ ಅಯೂಬ್‌ (24) ಬಂಧಿತ ಆರೋಪಿಗಳು.


ಆರೋಪಿಗಳಾದ ಕೆ. ಮಹಮ್ಮದ್‌ ಶರೀಫ್‌ ಮತ್ತು ಸಾದಿಕ್‌ನನ್ನು ಈ ಹಿಂದೆಯೇ ಪೊಲೀಸರು ಬಂಧಿಸಿದ್ದರು.

ಇದೀಗ ಮತ್ತೆ ಬಂಧಿಸಿದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇದರಿಂದ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ ಆರೋಪಿಗಳ ಸಂಖ್ಯೆ 4ಕ್ಕೇರಿದೆ.

LEAVE A REPLY

Please enter your comment!
Please enter your name here

Hot Topics