Connect with us

LATEST NEWS

ಏರ್ ಇಂಡಿಯಾದ ನೂತನ ಲೋಗೋ ಬಿಡುಗಡೆ ಮಾಡಿದ ಟಾಟಾ ಸಂಸ್ಥೆ

Published

on

ನವದೆಹಲಿ: ಟಾಟಾ ಸಮೂಹದ ಒಡೆತನದಲ್ಲಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ನೂತನ ಲೋಗೊವನ್ನು ಗುರುವಾರ ಅನಾವರಣಗೊಳಿಸಲಾಯಿತು.

ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಟಾಟಾ ಸನ್ಸ್ ಸ್ವಾಧೀನಪಡಿಸಿಕೊಂಡ ಒಂದೂವರೆ ವರ್ಷಗಳ ಬಳಿಕ ಸಂಸ್ಥೆಗೆ ಹೊಸ ಬ್ರ್ಯಾಂಡ್ ಅನ್ನು ಪರಿಚಯಿಸಲಾಗಿದೆ.

ಹೊಸ ಲೋಗೋ ಮತ್ತು ಲಿವರಿ ಬಣ್ಣಗಳನ್ನು ಗುರುವಾರ ಬಹಿರಂಗಪಡಿಸಲಾಗಿದ್ದು, ಲೋಗೋದ ಭಾಗವಾಗಿ, ಏರ್ ಇಂಡಿಯಾ ನೇರಳೆ ಬಣ್ಣದ ಡ್ಯಾಶ್‌ನೊಂದಿಗೆ ಕೆಂಪು ಮತ್ತು ಬಿಳಿ ಬಣ್ಣವನ್ನು ಉಳಿಸಿಕೊಂಡಿದೆ. ಹೊಸ ಲೋಗೋವನ್ನು ‘ದಿ ವಿಸ್ಟಾ’ ಎಂದು ಕರೆಯಲಾಗುವುದು ಎಂದು ಸಂಸ್ಥೆ ಹೇಳಿಕೊಂಡಿದೆ.

ಕಾರ್ಯಕ್ರಮದ ಭಾಗವಾಗಿ ಏರ್‌ಲೈನ್ ತನ್ನ ಹೊಸ ಟೈಲ್ ವಿನ್ಯಾಸ ಮತ್ತು ಥೀಮ್ ಸಾಂಗ್ ಅನ್ನು ಕೂಡ ಬಿಡುಗಡೆ ಮಾಡಿದೆ. ಲಾಂಛನವು ಮಿತಿಯಿಲ್ಲದ ಸಾಧ್ಯತೆಗಳು ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಚಂದ್ರಶೇಖರನ್ ಹೇಳಿದ್ದಾರೆ.

ಜನವರಿ 27, 2022 ರಂದು, ಟಾಟಾ ಸನ್ಸ್ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಏರ್ ಇಂಡಿಯಾದಲ್ಲಿ ಸಂಪೂರ್ಣ ಮಾಲೀಕತ್ವದ ಪಾಲನ್ನು ಪಡೆದುಕೊಂಡಿತು.

ಈ ಸ್ವಾಧೀನದ ನಂತರ, ಟಾಟಾ ಸನ್ಸ್ ಏರ್ ಇಂ ಮತ್ತು ವಿಸ್ತಾರಾವನ್ನು ಒಂಡಿಯಾದೇ ಏಕೀಕೃತ ಘಟಕವಾಗಿ ವಿಲೀನಗೊಳಿಸುವ ಉದ್ದೇಶವನ್ನು ಬಹಿರಂಗಪಡಿಸಿತು.

ಈ ವಿಲೀನ ಪ್ರಕ್ರಿಯೆಯು ಮಾರ್ಚ್ 2024 ರೊಳಗೆ ಅಂತಿಮಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ವಿಲೀನದ ಭಾಗವಾಗಿ, ಸಿಂಗಾಪುರ್ ಏರ್‌ಲೈನ್ಸ್ ಹೊಸದಾಗಿ ರೂಪುಗೊಂಡ ಕಂಪನಿಯಲ್ಲಿ ಶೇ. 25 ಪ್ರತಿಶತ ಮಾಲೀಕತ್ವದ ಪಾಲನ್ನು ಹೊಂದಲು ಸಜ್ಜಾಗಿದೆ.

LATEST NEWS

ಮದುವೆಯಾದ ಕೆಲವೇ ಗಂಟೆಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

Published

on

ಮದುವೆ ದಿನ ಎಂದರೆ ಪ್ರತಿಯೊಬ್ಬರಿಗೂ ತುಂಬಾ ವಿಶೇಷವಾದ ದಿನ. ಎರಡು ಜೀವಗಳು ಬೆಸೆಯುವ ಕ್ಷಣಗಳು. ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ವಿಶೇಷ ದಿನದಂದು ಉತ್ಸಾಹ, ಖುಷಿ, ಕುತೂಹಲ ಸೇರಿದಂತೆ ಹಲವು ಭಾವನೆಗಳು ಒಟ್ಟೊಟ್ಟಿಗೆ ಸಂಭವಿಸುತ್ತಿರುತ್ತದೆ. ಜೀವವಿರುವವರೆಗೂ ಈ ದಿನ ದಂಪತಿಗಳಿಗೆ ತುಂಬಾ ವಿಶೇಷ ದಿನವಾಗಿರುತ್ತದೆ. ಇಂತಹ ಮದುವೆ ದಿನವೇ ಪ್ಲೊರಿಡಾದ ಮಹಿಳೆಯೊಬ್ಬರಿಗೆ ಡಬಲ್ ಖುಷಿ ಸಿಕ್ಕಿದೆ.

ಫ್ಲೋರಿಡಾದ ಬ್ರಿಯಾನಾ ಲುಕ್ಕಾ-ಸೆರೆಜೊ:

ಫ್ಲೊರಿಡಾದ ಮಹಿಳೆಯೊಬ್ಬರು ತಮ್ಮ ನೆಚ್ಚಿನ ವರನ ಜೊತೆ ಮದುವೆಯನ್ನು ಸಿಟಿ ಹಾಲ್ ನಲ್ಲಿ ತುಂಬಾ ವಿಶೇಷವಾಗಿ ಮಾಡಿಕೊಳ್ಳಲು ಪ್ಲ್ಯಾನ್ ಮಾಡಿದ್ದರು. ಫ್ಲೋರಿಡಾದ ಬ್ರಿಯಾನಾ ಲುಕ್ಕಾ-ಸೆರೆಜೊ ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಮದುವೆ ದಿನದ ಮುಂಚಿನ ದಿನ ಈಕೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ವೈದ್ಯರು ಉಸಿರಾಟಕ್ಕೆ ಸಂಬಂಧಿಸಿದ ರೆಸ್ಪಿರೇಟರಿ ಸಿಂಕಿಟಿಯಲ್ ವೈರಸ್ ಸೋಂಕಿನಿಂದ ಅನಾರೋಗ್ಯಕ್ಕೀಡಾಗಿರುವುದಾಗಿ ತಿಳಿಸಿದ್ದಾರೆ. ಗರ್ಭಿಣಿ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದ ಕಾರಣ ವೈದ್ಯರು ಚಿಕಿತ್ಸೆ ನೀಡಲು ಮುಂದಾಗಿದ್ದರು.

ಹೆರಿಗೆ ಟೈಂನಲ್ಲೂ ಬ್ರಿಯನ್ನಾ ಜೊತೆ ನಿಶ್ಚಿತ ವರ ಜೊತೆಯಲ್ಲೇ ಇದ್ದು ಲೇಬರ್ ವಾರ್ಡ್ ಗೆ ಕರೆದುಕೊಂಡು ಹೋಗಿದ್ದಾರೆ. ಈಗ ನರ್ಸ್ ಗಳು ಸಾಮಾನ್ಯವಾಗಿ ಕೇಳುವಂತೆ ಮದುವೆಯಾಗಿದ್ಯಾ ಎಂಬ ಪ್ರಶ್ನೆಗಳು ಕೇಳಿದ್ದಾರೆ. ಆಗ ನಾಳೆಯೇ ಮದುವೆ ದಿನ ಎಂದು ಆಸ್ಪತ್ರೆ ಸಿಬ್ಬಂದಿ ಬಳಿ ಬ್ರಿಯಾನ್ನಾ ಹೇಳಿಕೊಂಡಿದ್ದಾರೆ.

ಆಸ್ಪತ್ರೆಯಲ್ಲಿ ವಿವಾಹವಾದ ವಧು-ವರರು:

ವಿಷಯ ತಿಳಿದ ಕೂಡಲೇ ಆಸ್ಪತ್ರೆ ಸಿಬ್ಬಂದಿಯು ಈ ಜೋಡಿಗೆ ಸಹಾಯ ಮಾಡಿದ್ದಾರೆ. ಈ ಜೋಡಿಗೆ ಮದುವೆ ಮಾಡಿಸಲು ಆಸ್ಪತ್ರೆಯಲ್ಲಿ ತರಾತುರಿಯಾಗಿ ಆಸ್ಪತ್ರೆ ಸಿಬ್ಬಂದಿಯೇ ತಯಾರಿ ಮಾಡಿದ್ದಾರೆ. ಬ್ರಿಯಾನ್ನ ಅವರು ಆರೋಗ್ಯದ ಬಗ್ಗೆ ಗಮನಹರಿಸುವುದರ ಜೊತೆಗೆ ಆಸ್ಪತ್ರೆ ಸಿಬ್ಬಂದಿ ವಿವಾಹ ಸಮಾರಂಭವನ್ನು ಆಯೋಜಿಸುವುದಕ್ಕೆ ನಿರ್ಧರಿಸಿದ್ದಾರೆ.
ನರ್ಸ್ ಒಬ್ಬರು ವಧುವಿಗೆ ಬೇಕಾದಂತ ಮದುವೆ ಗೌನ್ ಅನ್ನು ಬರೀ ಪೇಪರ್ ಗಳನ್ನು ಬಳಸಿ ಕೇವಲ 30 ನಿಮಿಷಗಳಲ್ಲಿ ಅದ್ಭುತವಾಗಿ ವಿನ್ಯಾಸಗೊಳಿಸಿದ್ದಾರೆ. ಅದೃಷ್ಠವಶಾತ್ ಬ್ರಿಯಾನ್ನಾ ತಮ್ಮ ಮದುವೆಗೆ ಬೇಕಾಗಿದ್ದ ಪರವಾನಗಿ ಹಾಗೂ ವೆಡ್ಡಿಂಗ್ ರಿಂಗ್ ಸಹ ಆಸ್ಪತ್ರೆಗೆ ತಂದಿದ್ದ ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದರು.

ಬ್ರಿಯಾನ್ನ ಆಸೆಯಂತೆ, ಮೊದಲೇ ನಿಶ್ಚಿಯಿಸಿದ ದಿನಾಂಕದಲ್ಲೇ ಮದುವೆ ನೆರವೇರಿದೆ. ಇಬ್ಬರು ಪ್ರಮಾಣ ಮಾಡಿ, ಒಬ್ಬರಿಗೊಬ್ಬರು ರಿಂಗ್ ಬದಲಿಸಿಕೊಂಡಿದ್ದಾರೆ. ನಂತರ ಮದುವೆ ಸಂಭ್ರಮದಲ್ಲಿ ಕೇಕ್ ಕತ್ತರಿಸಿ ಒಬ್ಬರಿಗೊಬ್ಬರು ತಿನ್ನಿಸಿಕೊಂಡು ಖುಷಿಪಟ್ಟಿದ್ದಾರೆ.

ಗಂಡು ಮಗುವಿಗೆ ಜನನ:

ಸಂಭ್ರಮದ ಕೆಲ ಗಂಟೆಗಳ ನಂತರ ಬ್ರಿಯಾನ್ನ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಒಂದೇ ದಿನ ಡಬಲ್ ಸಂತೋಷ ಎಲ್ಲರಲ್ಲೂ ಮತ್ತಷ್ಟು ಖುಷಿ ತಂದಿತು. ಮಗುವಿಗೆ ಲ್ಯಾಂಡನ್ ಇರ್ವಿನ್ ಎಂದು ನಾಮಕರಣ ಮಾಡಿದ್ದಾರೆ.

Continue Reading

LATEST NEWS

ವಿದ್ಯಾರ್ಥಿನಿ ರುಂಡ ಕತ್ತರಿಸಿ ಕೊಲೆ ಪ್ರಕರಣ: ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು

Published

on

ಕೊಡಗು: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ನಡೆದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

prakash accuse

ಎಸ್​ಎಸ್​ಎಲ್​ಸಿ ಫಲಿತಾಂಶ ಹೊರ ಬಿದ್ದ ಮೇ.09ರಂದು ಆರೋಪಿ ಬಾಲಕಿಯ ರುಂಡ ಕತ್ತರಿಸಿ ಎಸ್ಕೇಪ್ ಆಗಿದ್ದ. ಪೊಲೀಸರು ಹಲವು ತಂಡಗಳನ್ನು ಮಾಡಿ ಶೋಧ ಕಾರ್ಯ ನಡೆಸುತ್ತಿದ್ದರು. ಸದ್ಯ ಆರೋಪಿಯನ್ನು ಆತನ ಸ್ವ ಗ್ರಾಮವಾಗಿರುವ ಸೋಮವಾರಪೇಟೆ ತಾಲೂಕಿನ ಹಮ್ಮಿಯಾಳ ಎಂಬ ಗ್ರಾಮದಲ್ಲಿ ಬಂಧಿಸಿದ್ದಾರೆ.

ಮುಂದೆ ಓದಿ..; ಶಾಲೆಗೆ 100% ಫಲಿತಾಂಶ ತಂದುಕೊಟ್ಟ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯ ಭೀಕರ ಹ*ತ್ಯೆ

ತನ್ನ ಗ್ರಾಮದಲ್ಲೇ ಅಡಗಿದ್ದ ಆರೋಪಿ ಪ್ರಕಾಶ್​ನನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಯ ಬಂಧನವಾಗಿದ್ದರೂ ಆರೋಪಿ ಕತ್ತರಿಸಿ ತೆಗೆದುಕೊಂಡು ಹೋಗಿದ್ದ ರುಂಡ ಇನ್ನೂ ಕೂಡಾ ಪತ್ತಯಾಗಿಲ್ಲ. ಆರೋಪಿ ಪ್ರಕಾಶ್ ಕಳೆದ ಆರು ತಿಂಗಳಿನಿಂದ ಹತ್ಯೆಯಾದ ಬಾಲಕಿ ಮೀನಾ ಮನೆಯಲ್ಲಿ ವಾಸವಾಗಿದ್ದ. ತನ್ನ ಸ್ವಂತ ಮನೆಗೆ ಬರುತ್ತಿರಲಿಲ್ಲ ಎಂದು ಸ್ವತಹ ಪ್ರಕಾಶ್ ತಾಯಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಮೀನಾಳನ್ನು ಮದುವೆ ಆಗುವ ವಿಚಾರ ನನಗೆ ಗೊತ್ತಿಲ್ಲ , ಆದ್ರೆ ಆಕೆಯನ್ನ ಶಾಲೆಗೆ ಕರೆದುಕೊಂಡು ಹೋಗುವುದು ಬರುವುದು ಮಾಡುತ್ತಿದ್ದ ಎಂದು ಆತನ ತಾಯಿ ಹೇಳಿದ್ದಾರೆ.

Continue Reading

LATEST NEWS

ವರ್ತೂರು ಸಂತೋಷ್​​ ತೋಟದಲ್ಲಿ ಮತ್ತೆ ಸೇರಿದ ಬಿಗ್​​ಬಾಸ್​ ಸ್ಪರ್ಧಿಗಳು

Published

on

ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ದೊಡ್ಮನೆಯಿಂದ ಹೊರ ಬಂದ ಕೂಡಲೇ ಸಖತ್​ ಬ್ಯುಸಿಯಾಗಿದ್ದಾರೆ. ಜೊತೆಗೆ ಆ ಬ್ಯುಸಿಯ ನಡುವೆಯೂ ಆಗಾಗ ಒಬ್ಬರಿಗೊಬ್ಬರು ಭೇಟಿಯಾಗುತ್ತಲೇ ಇರುತ್ತಾರೆ.

ಅಲ್ಲದೇ ಪಾರ್ಟಿ, ಫ್ಯಾಮಿಲಿ ಫಂಕ್ಷನ್‌ ಅಂತ ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಸೇರುತ್ತಾರೆ. ಇದೀಗ ಹಳ್ಳಿಕಾರ್​ ಒಡೆಯ ವರ್ತೂರು ಸಂತೋಷ್, ಸಿರಿ, ಅವಿನಾಶ್ ಶೆಟ್ಟಿ ಹಾಗೂ ತನಿಷಾ ಕುಪ್ಪಂಡ ಬಹುದಿನಗಳ ನಂತರ ಭೇಟಿಯಾಗಿದ್ದಾರೆ. ವರ್ತೂರಿನಲ್ಲಿ ಒನ್ ಡೇ ಔಟಿಂಗ್ ಹೋಗಿದ್ದಾರೆ ಈ ನಾಲ್ಕು ಸ್ಪರ್ಧಿಗಳು. ಸದ್ಯ ಮೀಟ್ ಆಗಿರುವ ಫೋಟೋಗಳನ್ನು ನಟಿ ಸಿರಿ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇನ್ನು, ಒನ್ ಡೇ ಔಟಿಂಗ್​ನಲ್ಲಿ ವರ್ತೂರು ಸಂತೋಷ್​ ಅವರ ತೋಟಕ್ಕೆ ಭೇಟಿ ನೀಡಿದ ಬಿಗ್​ಬಾಸ್​ ಸ್ಪರ್ಧಿಗಳು ಪ್ರಾಣಿ-ಪಕ್ಷಿಗಳ ಜೊತೆ ಸಮಯ ಕಳೆದಿದ್ದಾರೆ. ತೋಟದಲ್ಲಿದ್ದ ಹಣ್ಣುಗಳನ್ನು ಸವಿದು ಖುಷಿಪಟ್ಟಿದ್ದಾರೆ. ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

Continue Reading

LATEST NEWS

Trending