ಮಂಗಳೂರು: ಬಿಜೆಪಿಗರಿಗೆ ಇಡೀ ಪ್ರಪಂಚದಲ್ಲಿ ಏಕೈಕ ಗುರು ವಿಶ್ವಗುರು ಎನ್ನುವ ನರೇಂದ್ರ ಮೋದಿ ಬಿಟ್ಟು ಬೇರೆ ಯಾವ ಗುರುಗಳಿಗೂ ಗೌರವ ಕೊಡದಿದ್ದುದನ್ನು ನೋಡಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಮೋದಿಯನ್ನು ವಿಶ್ವಗುರು ಮಾಡುವ ರಭಸದಲ್ಲಿ ರಾಷ್ಟ್ರಕ್ಕೆ ತ್ಯಾಗ-ಬಲಿದಾನ ಕೊಟ್ಟ ದಾರ್ಶನಿಕ, ಸಾಹಿತಿ, ಸ್ವತಂತ್ರ ಹೋರಾಟಗಾರರಿಗೆ ಅಪಮಾನ ಮಾಡುತ್ತಿದ್ದುದು ನೋಡುತ್ತಿದ್ದೇವೆ.
ಕೇರಳದಲ್ಲಿ ಬಿಜೆಪಿ ನಾರಾಯಣ ಗುರು ಹೆಸರಲ್ಲಿ ಪ್ರಾರಂಭಿಸಿದ ಎಸ್ಎನ್ಡಿಪಿ ಸಂಘಟನೆಯನ್ನು ಇಬ್ಭಾಗ ಮಾಡಿ ಅದರಿಂದ ಒಬ್ಬರನ್ನು ಸೃಷ್ಟಿ ಮಾಡಿ ಹೋದ ಚುನಾವಣೆಯಲ್ಲಿ ಶತ ಪ್ರಯತ್ನ ಮಾಡಿ ಇದ್ದ ಒಂದು ಸೀಟ್ ಕಳೆದುಕೊಂಡರು.
ನಾರಾಯಣ ಗುರು ಸ್ತಬ್ದಚಿತ್ರ ಪ್ರಸ್ತಾವನೆ ತಿರಸ್ಕಾರದ ಬಗ್ಗೆ ಸಿಎಂ ಸಹ ಒಂದೇ ಒಂದು ಮಾತು ಆಡಿಲ್ಲ. ಜೊತೆಗೆ ಸಚಿವ ಸುನೀಲ್ ಕುಮಾರ್ಗೆ ನಾರಾಯಣ ಗುರು ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ
ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಸ್ತಬ್ದಚಿತ್ರವನ್ನು ಯಾಕೋಸ್ಕರ ತಿರಸ್ಕಾರ ಮಾಡಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಹಾಗೂ ಸಿಎಂ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ನಾಯಕರು ಕೇವಲ ಗುರುನಾರಾಯಣ ಗುರುಗಳಿಗೆ ಮಾತ್ರ ಅವಹೇಳನ ಮಾಡಿರುವುದು ಅಲ್ಲ. ಇಡೀ ಗುರುಗಳ ಅನುಯಾಯಿಗಳಿಗೇ ಅವಮಾನ ಮಾಡಿದ್ದಾರೆ.
ಅಲ್ಲದೆ ಅವರು ನಾರಾಯಣ ಗುರುಗಳ ಶಿಷ್ಯರಿಗೆ, ಅನುಯಾಯಿಗಳ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ ಎಂದು ದೂರಿದರು.