Connect with us

LATEST NEWS

ಮಂಗಳೂರು: ಡಾಬರ್‌ಮೆನ್‌ ನಾಯಿಗೆ ವಿಷವಿಟ್ಟು ಮರ್ಡರ್‌- ಉರ್ವಾ ಠಾಣೆಯಲ್ಲಿ FIR

Published

on

ಪೂರ್ವದ್ವೇಷದ ಹಿನ್ನೆಲೆ ನೆರೆಮನೆಯ ವ್ಯಕ್ತಿಯೊಬ್ಬ ಡಾಬರ್ ಮನ್  ಸಾಕು  ನಾಯಿಗೆ ವಿಷ ಹಾಕಿ ಕೊಂದ ಬಗ್ಗೆ ನಗರದ ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಪೂರ್ವದ್ವೇಷದ ಹಿನ್ನೆಲೆ ನೆರೆಮನೆಯ ವ್ಯಕ್ತಿಯೊಬ್ಬ ಡಾಬರ್ ಮನ್  ಸಾಕು  ನಾಯಿಗೆ ವಿಷ ಹಾಕಿ ಕೊಂದ ಬಗ್ಗೆ ನಗರದ ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಾತಿನಿಧಿಕ ಚಿತ್ರ

 

ನಗರದ ಕಾಪಿಕಾಡ್  4  ನೇ  ಕ್ರಾಸ್‌ನಲ್ಲಿದ್ದ ವ್ಯಕ್ತಿಯೊಬ್ಬರ  4 1/2 ವರ್ಷದ ಡಾಬರ್ ಮನ್  ನಾಯಿ ಸಾಕುತ್ತಿದ್ದರು. ಜು.24 ರಂದು ನೆರೆಮನೆಯ ಭೀಮಯ್ಯ ಎಂಬುವವರು  ಪೂರ್ವ ದ್ವೇಷದ ಹಿನ್ನೆಲೆಯಲ್ಲಿ  ನಾಯಿಗೆ  ವಿಷ  ಪದಾರ್ಥವನ್ನು  ಹಾಕಿದ್ದಾರೆ.

ಪರಿಣಾಮ ಜು.25 ರಂದು ನಾಯಿ ರಕ್ತ  ವಾಂತಿ  ಮಾಡಿಕೊಂಡು  ಮೃತಪಟ್ಟಿದೆ.

ಈ ಹಿನ್ನೆಲೆ ನಾಯಿ ಸಾವಿಗೆ  ಕಾರಣನಾದ  ಬೀಮಯ್ಯ  ಎಂಬುವವರ  ವಿರುದ್ದ  ಸೂಕ್ತ  ಕಾನೂನು  ಕ್ರಮ ಕೈಗೊಳ್ಳಬೇಕಾಗಿ  ಸಾಕು ನಾಯಿಯ ಯಜಮಾನ ಉರ್ವಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

BANTWAL

ಕಡಬ : ಸಿಡಿಲು ಬಡಿದು ಓರ್ವ ಸಾವು; ಇಬ್ಬರಿಗೆ ಗಾಯ

Published

on

ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ವರುಣ ಕೃಪೆ ತೋರಿದ್ದಾನೆ. ಇನ್ನೊಂದೆಡೆ ಸಿಡಿಲಾರ್ಭಟಕ್ಕೆ ವ್ಯಕ್ತಿ ಬಲಿಯಾಗಿದ್ದಾರೆ.. ಕಡಬ ತಾಲೂಕಿನಲ್ಲಿ ಸಿಡಿಲು ಬಡಿದು ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿವೆ. ಉತ್ತರ ಪ್ರದೇಶ,ಚೈನ್‌ಪುರ್ ಮೂಲದ ಶ್ರೀಕಿಶುನ್ ಮೃತ ವ್ಯಕ್ತಿ.

ಇದನ್ನು ಓದಿ:ಪುತ್ತೂರಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವಕ! 

ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನದಿ ಬದಿಯ ಶೆಡ್ ನಲ್ಲಿದ್ದ ವೇಳೆ ಶೆಡ್ ಗೇ ಸಿಡಿಲು ಬಡಿದಿದೆ. ಪರಿಣಾಮ ಮರಳು ತೆಗೆಯುವ ಉತ್ತರ ಪ್ರದೇಶ ಮೂಲದ ಕಾರ್ಮಿಕ ಸಾವನ್ನಪ್ಪಿದ್ದಾನೆ.
ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.

Continue Reading

LATEST NEWS

Watch : ಇಬ್ಬರು ಪುರುಷರೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪತ್ನಿ; ಹಿಗ್ಗಾಮುಗ್ಗ ಥಳಿಸಿದ ಪತಿ

Published

on

ಮಂಗಳೂರು/ಉತ್ತರ ಪ್ರದೇಶ :  ವೈದ್ಯನೊಬ್ಬ ತನ್ನ ವೈದ್ಯ ಪತ್ನಿಯನ್ನು ಇಬ್ಬರು ಪುರುಷರ ಜೊತೆ ಹೊಟೇಲ್ ರೂಮಿನಲ್ಲಿ ಆಕ್ಷೇಪಾರ್ಹ ಸ್ಥಿತಿಯಲ್ಲಿ ರೆಡ್‌ ಹ್ಯಾಂಡ್ ಹಾಕಿ ಹಿಡಿದಿದ್ದಾನೆ. ಈ ವೇಳೆ ಪತ್ನಿ ಹಾಗೂ ಆ ಇಬ್ಬರು ಪುರಷರಿಗೆ ಹಿಗ್ಗಾಮುಗ್ಗ ಥಳಿಸಿದ್ದು, ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಈ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ನಡೆದಿದ್ದು, ವೈದ್ಯ ದಂಪತಿ ಜೊತೆಯಾಗಿ ವಾಸಿಸುತ್ತಿಲ್ಲ ಎಂದು ಗೊತ್ತಾಗಿದೆ. ಪತ್ನಿಯ ನಡವಳಿಕೆಯ ಬಗ್ಗೆ ಅನುಮಾನ ಮುಂದುವರೆಸಿದ್ದ ವೈದ್ಯ ತನ್ನ ಕುಟುಂಬ ಸದಸ್ಯರ ಜೊತೆ ಆಕೆಯನ್ನು ಹಿಂಬಾಲಿಸಿದ್ದಾನೆ. ಈ ವೇಳೆ ಹೊಟೇಲ್ ರೂಮಿಗೆ ದಾಳಿ ಮಾಡಿದಾಗ, ಆಕೆ ಇಬ್ಬರು ಪುರುಷರ ಜೊತೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಈ ವೇಳೆ ಆಕ್ರೋಶದಲ್ಲಿ ಪತ್ನಿ ಹಾಗೂ ಆಕೆಯ ಜೊತೆಗೆ ಇದ್ದವರ ಮೇಲೂ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ : ಈ ವೀಡಿಯೋವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ ? ವೀಡಿಯೋವೊಂದನ್ನು ಹಂಚಿಕೊಂಡು ಸವಾಲೆಸೆದ ನಟಿ ಜ್ಯೋತಿ ರೈ

ಕಳೆದ ಒಂದು ವರ್ಷದಿಂದ ಇವರಿಬ್ಬರೂ ಬೇರೆ ಬೇರೆಯಾಗಿ ವಾಸ ಮಾಡಿಕೊಂಡಿದ್ದಾರೆ. ಪತ್ನಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಳೆ. ಹಲ್ಲೆ ನಡೆಸಿದ ಪತಿ ಕೂಡಾ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯನಾಗಿ ಕೆಲಸ ಮಾಡ್ತಾ ಇದ್ದಾನೆ.
ಸದ್ಯ ವೈದ್ಯ ಪತ್ನಿಯ ವಿರುದ್ಧ ನೀಡಿದ ದುರ್ನಡತೆ ಆರೋಪದಲ್ಲಿ ಪತ್ನಿ ಹಾಗೂ ಆಕೆಯ ಜೊತೆಗಿದ್ದ ಗಾಜೀಯಾಬಾದ್‌ ಹಾಗೂ ಬುಲಂದ್‌ಶಹರ್‌ನ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

Continue Reading

FILM

ಈ ವೀಡಿಯೋವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ ? ವೀಡಿಯೋವೊಂದನ್ನು ಹಂಚಿಕೊಂಡು ಸವಾಲೆಸೆದ ನಟಿ ಜ್ಯೋತಿ ರೈ

Published

on

ಜ್ಯೋತಿ ರೈ ಸದ್ಯ ಭಾರೀ ಸದ್ದು ಮಾಡುತ್ತಿರುವ ಹೆಸರು. ಇತ್ತೀಚೆಗೆ ಖ್ಯಾತ ಸೀರಿಯಲ್ ನಟಿ ಜ್ಯೋತಿ ರೈ ಖಾಸಗಿ ವೀಡಿಯೋವೊಂದು ಲೀಕ್ ಆಗಿತ್ತು. ಈ ಬಗ್ಗೆ ಆಕ್ರೋಶವನ್ನೂ ಹೊರ ಹಾಕಿದ್ದರು. ಇದೀಗ ತಾನೇ ವೀಡಿಯೋಗಳನ್ನು ಹಂಚಿಕೊಂಡು,ಈ ವೀಡಿಯೋವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ ? ಎಂದು ಸವಾಲೆಸೆದಿದ್ದಾರೆ.

ವೀಡಿಯೋ ಹಂಚಿಕೊಂಡ ನಟಿ :

ತಮ್ಮ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಂಡು ಪಡ್ಡೆಗಳ ನಿದ್ದೆಗೆಡಿಸುತ್ತಿದ್ದ ನಟಿ ಜ್ಯೋತಿ ರೈ ಅವರದ್ದೆನ್ನಲಾದ ಅಶ್ಲೀಲ ವೀಡಿಯೋ ವೈರಲ್ ಆಗಿತ್ತು. ಈ ವೀಡಿಯೋ ಬಗ್ಗೆ ಸ್ವತಃ ಜ್ಯೋತಿ ರೈ ಸ್ಪಷ್ಟನೆ ನೀಡಿದ್ದಾರೆ. ಆಘಾತಕ್ಕೊಳಗಾಗಿದ್ದೇನೆ ಎಂದಿದ್ದರು.
ನಟಿ ಜ್ಯೋತಿ ರೈ ಅಕ್ಷಯ ತೃತೀಯ ದಿನದಂದು ಕೆಲವೊಂದು ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ. ಅದರೊಂದಿಗೆ ತಮ್ಮ ಅಶ್ಲೀಲ ವಿಡಿಯೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ವ್ಯಕ್ತಿಗಳಿಗೆ ಸವಾಲೆಸೆದಿದ್ದಾರೆ.

‘ಈ ವೀಡಿಯೊವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ? ಇದು ನಿಜವಾದ ವಿಡಿಯೋ’ ಎಂದು ಅವರು ಬರೆದುಕೊಂಡಿದ್ದಾರೆ.
ಕೆಲವು ಹತಾಶ, ಕೆಲಸವಿಲ್ಲದ ಅಶಿಕ್ಷಿತ ಟೈಂಪಾಸ್ ಚಿಲ್ರೆ ವ್ಯಕ್ತಿಗಳಿಗಾಗಿ, “ ಜಗತ್ತು ನೆರಳನ್ನು ಎಸೆದಾಗ, ನಾನು ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯುತ್ತೇನೆ. ಕತ್ತಲೆ ನನ್ನ ಬೆಳಕಿಗೆ ಇಂಧನ ತುಂಬಿಸುತ್ತದೆ. ನಿರಾಶಾವಾದದ ಬೂದಿಯಿಂದ ಸಾಧ್ಯತೆಯ ಫೀನಿಕ್ಸ್ ಏರುತ್ತದೆ. ನಕಾರಾತ್ಮಕ ಶಕ್ತಿಯು ಕೇವಲ ಮೆಟ್ಟಿಲು. ನಾನು ಅದರ ಮೇಲೆ ಸಕಾರಾತ್ಮಕತೆಯ ದಿಗಂತದ ಕಡೆಗೆ ಹಾರುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಪ್ರಜ್ವಲ್ ಪ್ರಕರಣದ ನಡುವೆ ಖಾಸಗಿ ವೀಡಿಯೋ ವೈರಲ್; ಜ್ಯೋತಿ ರೈ ಹೇಳಿದ್ದೇನು?

ಪದ್ಮಶ್ರೀ ಪುರಸ್ಕೃತ ಕಲಾವಿದನಿಗೆ ಸಹಾಯಹಸ್ತ ಚಾಚಿದ ನಟಿ :


ಎರಡು ವರ್ಷಗಳ ಹಿಂದೆಯಷ್ಟೇ ಸಂಗೀತ ಸಾಧಕ ತೆಲಂಗಾಣದ ದರ್ಶನಂ ಮೊಗುಳಯ್ಯ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು. ಆದ್ರೆ, ಈಗ ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಅವರು ಕೆಲಸ ಮಾಡುತ್ತಿರುವ ಫೋಟೋ, ವೀಡಿಯೋ ವೈರಲ್ ಆಗಿದ್ದವು. ಇವರಿಗೆ ಜ್ಯೋತಿ ರೈ ಧನ ಸಹಾಯ ಮಾಡಿದ್ದಾರೆ. ಈ ಕುರಿತಾದ ವಿಡಿಯೋವನ್ನು ಅವರು ಇನ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.
ಅಕ್ಷಯ ತೃತೀಯದ ಶುಭ ದಿನದಂದು, ಖ್ಯಾತಿಯ ಹೊರತಾಗಿಯೂ, ವೈಯಕ್ತಿಕ ಮತ್ತು ವೃತ್ತಿಪರವಾಗಿ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಶ್ರೀ ಪದ್ಮಶ್ರೀ ಕಿನ್ನೇರ ಮೊಗಳಯ್ಯ ಅವರಿಗೆ ₹ 50,000 ಆರ್ಥಿಕ ನೆರವು ನೀಡಿದ್ದೇನೆ.

ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ ಅವರ ಹೋರಾಟದ ಬಗ್ಗೆ ನನ್ನ ಪಿಆರ್ ನನಗೆ ಮಾಹಿತಿ ನೀಡಿದ್ದರು. ನಾನೂ ಕೂಡ ಪ್ರಸ್ತುತ ಸವಾಲಿನ ಅವಧಿಯನ್ನು ಎದುರಿಸುತ್ತಿದ್ದೇನೆಯಾದರೂ, ನನ್ನೊಳಗಿನ ಬೆಳಕು ಅವರನ್ನು ತಕ್ಷಣವೇ ತಲುಪಲು ಪ್ರೇರೇಪಿಸಿತು. ಊಟದ ವ್ಯವಸ್ಥೆ ಮಾಡಿ ದೇಣಿಗೆ ನೀಡಿದ್ದೆ. ಅವರ ಕಲೆಗೆ ಬೆಂಬಲವನ್ನೂ ನೀಡುತ್ತಿದ್ದೇನೆ. ನಾನು ಹೆಚ್ಚಿನ ಕೊಡುಗೆ ನೀಡಲು ಬಯಸುತ್ತೇನೆ. ಆದರೆ, ಈಗ ನನ್ನ ಕೈಲಾದಷ್ಟು ಮಾಡಿದ್ದೇನೆ. ಬೇರೆ ಯಾರಾದರೂ ಅವರನ್ನು ಬೆಂಬಲಿಸಲು ಬಯಸಿದರೆ, ನಾವು ಒಟ್ಟಾಗಿಯೇ ಸಹಾಯ ಮಾಡೋಣ’ ಎಂದು ಬರೆದುಕೊಂಡಿದ್ದಾರೆ.

ಮೊಗುಳಯ್ಯ ಅವರ ಕುಟುಂಬವನ್ನು ಭೇಟಿ ಮಾಡಿ ಅವರಿಗೆ ಹಣ ಸಹಾಯ ಮಾಡಿದ ವಿಡಿಯೋವನ್ನೂ ಕೂಡ ಜ್ಯೋತಿ ರೈ ಹಂಚಿಕೊಂಡಿದ್ದಾರೆ.

Continue Reading

LATEST NEWS

Trending