Connect with us

FILM

80ರ ದಶಕದಲ್ಲಿ ಬಾಲ ನಟಿಯಾಗಿ ಮಿಂಚಿದ್ದ ಇಂದಿರಾ.. ಈಗ ಹೇಗಿದ್ದಾರೆ ಗೊತ್ತಾ!?

Published

on

ಕನ್ನಡ ಚಿತ್ರರಂಗದಲ್ಲಿ ಎಂಬತ್ತರ ದಶಕದಲ್ಲಿ ಮಿಂಚಿದ್ದವರು  ಈಗ ಕಣ್ಮರೆಯಾಗಿದ್ದಾರೆ. ಹೌದು, ಒಂದು ಕಾಲದಲ್ಲಿ ಬಾಳನಟಿಯರಾಗಿ, ನಟಿಯರಾಗಿ ನಟಿಸಿದ್ದ ನಟಿಯರು ಪತ್ತೆಯೇ ಇಲ್ಲದಂತಾಗಿದೆ. ಆದರೆ ಕೆಲವೊಂದು ಯೂಟ್ಯೂಬರ್ಸ್‌, ಚಾನೆಲ್‌ ಗಳ ಇಂಟರ್ವ್ಯೂವ್ ಮೂಲಕ ಹೊರ ಜಗತ್ತಿಗೆ ಕಾಣ ಸಿಗ್ತಾರೆ. ಕೇಳಿದ್ದು ಸುಳ್ಳಾಗಬಹುದು ನೋಡಿದ್ದು ಸುಳ್ಳಾಗಬಹುದು ಎಂಬ ಸಾಂಗ್ ಹಿಂದಿನ ಕಾಲದಿಂದ ಈಗಿನವರೆಗೂ ಟ್ರೆಂಡ್‌ ನಲ್ಲಿದೆ. ರಾಮ ಲಕ್ಷ್ಮಣ ಸಿನೆಮಾದ ಹಾಡಾಗಿದ್ದು, ಇದರ ನಟಿ ಈಗ ಹೇಗಿದ್ದಾರೆ ಗೊತ್ತಾ?

ಬೇಬಿ ಇಂದಿರಾ.. ಒಂದು ಕಾಲದಲ್ಲಿ ಎಲ್ಲರ ನೆಚ್ಚಿನ ನಟಿ ಬೇಬಿ ಇಂದಿರಾ. ಮುದ್ದು ಮುದ್ದಾಗಿರುವ ಮೊಗದಿಂದ, ಅದ್ಭುತ ನಟನೆಯ ಮೂಲಕ ಜನರಿಗೆ ಪ್ರೀತಿ ಪಾತ್ರರಾಗಿದ್ದರು. ಈಗಲೂ ಕೂಡಾ ಕೆಲವರು ಇವರನ್ನು ನೆನಪಿಸಿಕೊಳ್ತಾರೆ. ಯಾಕಂದ್ರೆ ಹಿಂದಿನ ಕಾಲದ ಸಿನೆಮಾಗಳೇ ಹಾಗೆ ಅಲ್ವಾ. ಒಂದು ಅರ್ಥಬದ್ಧವಾದ  ಮನಸ್ಸಿಗೆ ಮುಟ್ಟುವಂಥ ಕಥೆಗಳು, ಹಾಡುಗಳು. ಬೇಬಿ ಇಂದಿರಾ ಬಾಲನಟಿಯಾಗ್ಗಿ ಸ್ಯಾಂಡಲ್‌ವುಡ್ ಬಾಲಿವುಡ್‌ ಸೇರಿದಂತೆ ಹಲವಾರು ದಿಗ್ಗಜರೊಂದಿಗೆ ನಟನೆಯನ್ನು ಮಾಡಿದ್ದಾರೆ.  ಕನ್ನಡ, ತಮಿಳು, ತೆಲುಗು ಸೇರಿದಂತೆ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಬೇಬಿ ಇಂದಿರಾ ನಾಯಕಿಯಾಗಿ ಕೂಡಾ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದರು.  ಚೆನ್ನೈ ಮೂಲದ ಬೇಬಿ ಇಂದಿರಾ ಕನ್ನಡ ಚಿತ್ರರಂಗಕ್ಕೆ ಬಂದಿದ್ದು ‘ಜನ್ಮ ರಹಸ್ಯ’ ಚಿತ್ರದ ಮೂಲಕ. ಈ ಚಿತ್ರದಲ್ಲಿ ಡಾ. ರಾಜ್‌ಕುಮಾರ್‌ ಹಾಗೂ ಭಾರತಿ ವಿಷ್ಣುವರ್ಧನ್‌ ಜೋಡಿಯಾಗಿ ನಟಿಸಿದ್ದರು. ಆದರೆ ನಂತರ ಅವರು ನಟನೆಯಿಂದ ಸಂಪೂರ್ಣ ದೂರಾದರು.

ಅರ್ಜುನ್‌ ಸರ್ಜಾ ಜೊತೆ ನಾಯಕಿಯಾಗಿ ಮಳೆ ಬಂತು ಮಳೆ ಸಿನಿಮಾದಲ್ಲಿ ನಟಿಸಿದ್ದಾರೆ. ಇದಾದ ಬಳಿಕ ಅಂಜದ ಗಂಡು ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕೂಡಾ ನಟಿಸಿದ್ದರು. ಆದರೆ ಕೆಲವರ್ಷಗಳ ನಂತರ ಇಂದಿರಾ ಕಣ್ಮರೆಯಾಗಿಬಿಟ್ಟರು.

ಸಿನಿಮಾಗಳಿಗೆ ಗುಡ್‌ ಬೈ ಹೇಳಿ ಮದುವೆ ಆದ ನಟಿ

ಸಿನಿಮಾಗಳಿಗೆ ಗುಡ್‌ ಬೈ ಹೇಳಿ ಇಂದಿರಾ ತಮಿಳಿನ ಶ್ರೀಧರ್‌ ಅವನ್ನು ಮದುವೆ ಆದರು. ಶ್ರೀಧರ್‌ ಕೂಡಾ ತಮಿಳಿನಲ್ಲಿ ಬಾಲ ಕಲಾವಿದರಾಗಿ ಹೆಸರು ಮಾಡಿದ್ದವರು. ಕರ್ಣನ್‌, ಚಿತ್ರಮೇಳ, ಸ್ನೇಹಂ, ಕ್ರೋಧಂ ಸೇರಿ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಈ ದಂಪತಿಗೆ ಪ್ರಶಾಂತ್‌ ಹಾಗೂ ರಕ್ಷಿತ್‌ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ದುರದೃಷ್ಟವಷಾತ್‌ ಶ್ರೀಧರ್‌ 11 ಡಿಸೆಂಬರ್‌ 2013 ರಂದು ಹೃದಯಾಘಾತದಿಂದ ನಿಧನರಾದರು.

ಅಯ್ಯರ್ ಫ್ಯಾಮಿಲಿಯಿಂದ ಬಂದ ಇವರು ಮೂಲತಃ ಕೇರಳದ ಪಾಲಕ್ಕಾಡ್ ನವರು. ಬಳಿಕ ತಂದೆ ಸರಕಾರಿ ಕೆಲಸದಲ್ಲಿ ವರ್ಗಾವಣೆ ಯಾಗಿ ಚೆನ್ನೈ ಯಲ್ಲಿ ನೆಲೆಸ್ತಾರೆ. ಸಿನೆಮಾಗೆ ಗುಡ್‌ಬೈ ಹೇಳಿದ ಬಳಿಕ ಶ್ರೀಧರ್ ರವರನ್ನು ಮದುವೆಯಾಗ್ತಾರೆ. ಆದರೆ ದುರದೃಷ್ಟವಷಾತ್‌ ಶ್ರೀಧರ್‌ 11 ಡಿಸೆಂಬರ್‌ 2013 ರಂದು ಹೃದಯಾಘಾತದಿಂದ ವಿಧಿವಶರಾಗ್ತಾರೆ.

ಪತಿ ನಿಧನರಾದ ನಂತರ ಬೇಬಿ ಇಂದಿರಾ ಬಹಳ ಆರ್ಥಿಕ ಸಮಸ್ಯೆ ಎದುರಿಸಿದ್ದಾರೆ. ಬಹಳ ವರ್ಷಗಳಿಂದ ಅವರು ಮಾಧ್ಯಮಗಳ ಕಣ್ಣಿಗೂ ಬಿದ್ದಿಲ್ಲ. ಸೋಷಿಯಲ್‌ ಮೀಡಿಯಾ ಕೂಡಾ ಬಳಸುತ್ತಿಲ್ಲ. ಸದ್ಯಕ್ಕೆ ಇಂದಿರಾ ತಮಿಳುನಾಡಿನ ಚೆನ್ನೈನ ಕೊಟ್ಟಿವಾಕಮ್‌ ಕರ್ಪಗಂಬಲ್‌ ನಗರದಲ್ಲಿ ಮಕ್ಕಳೊಂದಿಗೆ ವಾಸವಿದ್ದಾರೆ.

 

FILM

ಬೆಳ್ಳಿತೆರೆಯಲ್ಲಿ ಮತ್ತೊಮ್ಮೆ ಅಬ್ಬರಿಸಲಿದೆ ‘ಪುನೀತ್’ ಸಿನೆಮಾ..! ಯಾವ ಸಿನೆಮಾ?

Published

on

ಬೆಂಗಳೂರು: ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಫ್ಯಾಮಿಲಿ ಪ್ಯಾಕೇಜ್, ಹಿಟ್ ಮೂವಿಯೊಂದು ರಿ ರಿಲೀಸ್‌ಗೆ ರೆಡಿಯಾಗಿದೆ. ಮಾರ್ಚ್‌ ನಲ್ಲಿ ಅಪ್ಪು ಅಭಿನಯದ ಜಾಕಿ ಚಿತ್ರ ರಿ ರಲೀಸ್‌ ಆಗಿದ್ದು ಹಿಟ್‌ ಲಿಸ್ಟ್‌ಅಲ್ಲಿ ಸೇರಿಕೊಂಡಿದೆ. ಇದೀಗ ಅವರ ಅಭಿನಯದ ಮತ್ತೊಂದು ಸಿನೆಮಾ ‘ಅಂಜನಿಪುತ್ರ’ ರಿ ರಲೀಸ್‌ಗೆ ತಯಾರಾಗಿದೆ.

anjani

ರಿ ರಿಲೀಸ್ ಯಾವಾಗ?

ಪುನೀತ್‌ ರಾಜ್‌ಕುಮಾರ್, ರಶ್ಮಿಕಾ ಮಂದಣ್ಣ, ರಮ್ಯಾ ಕೃಷ್ಣನ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಅಂಜನಿ ಪುತ್ರ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿದೆ. ಹರ್ಷ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ, ಎನ್‌ಎಮ್‌ಕೆ ಮೂವೀಸ್ ಲಾಂಛನದಲ್ಲಿ ಬಿಡುಗಡೆಗೊಂಡಿತ್ತು.  2017ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಈಗ ಆರು ವರ್ಷಗಳ ಬಳಿಕ ಮತ್ತೆ ಚಿತ್ರಮಂದಿರಕ್ಕೆ ಬರುತ್ತಿದೆ.  ರಾಜ್ಯದ  ಹಲವು ಚಿತ್ರಮಂದಿರಗಳಲ್ಲಿ ಮೇ.10ರಂದು ಸಿನೆಮಾ ರಿಲೀಸ್ ಆಗಲಿದೆ ಎಂದು ನಿರ್ಮಾಪಕ ಎಮ್‌ಎನ್ ಕುಮಾರ್ ತಿಳಿಸಿದ್ದಾರೆ.

 

ಮುಂದೆ ಓದಿ..; ನೇ*ಣಿಗೆ ಶರಣಾದ ಯುವ ನಟಿ..! ಸಾ*ವಿಗೂ ಮುನ್ನ ವ್ಯಾಟ್ಸಾಪ್ ಸ್ಟೇಟಸ್‌ನಲ್ಲಿ ಬರೆದಿದ್ದೇನು..!

ರವಿ ಬಸ್ರೂರು ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ಹಿಟ್‌ ಸಾಂಗ್‌ಗಳನ್ನು ಒಳಗೊಂಡಿದೆ. ಅದರಲ್ಲೂ’ಭಾರಿ ಖುಷಿ ಮರ್ರೆ ನನ್ನ ಹೆಂಡ್ತಿ ಕಂಡ್ರೆ’ ಸಾಂಗ್ ಎಲ್ಲರ ತುಟಿಯಂಚಿನಲ್ಲಿ ಈಗಲೂ ಗುಣುಗುಟ್ಟುವಂತಿದೆ. ಮುಂದಿನ ದಿನಗಳಲ್ಲಿ ಪುನೀತ್ ಹಲವು ಸಿನೆಮಾಗಳು ರಿ ರಿಲೀಸ್ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.

Continue Reading

FILM

ನೇ*ಣಿಗೆ ಶರಣಾದ ಯುವ ನಟಿ..! ಸಾ*ವಿಗೂ ಮುನ್ನ ವ್ಯಾಟ್ಸಾಪ್ ಸ್ಟೇಟಸ್‌ನಲ್ಲಿ ಬರೆದಿದ್ದೇನು..!

Published

on

ಬಿಹಾರ್: ಯುವ ನಟಿಯೊಬ್ಬರು ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎ.27ರಂದು ಬಿಹಾರದಲ್ಲಿ ನಡೆದಿದೆ. ಜೋದ್‌ಪುರಿ ನಟಿ ಅಮೃತಾ ಪಾಂಡೆ ಆತ್ಮಹ*ತ್ಯೆಗೆ ಶರಣಾದವರು. ಆತ್ಮಹ*ತ್ಯೆಗೂ ಮೊದಲು ನಿಗೂಢಾರ್ಥದಲ್ಲಿ ವ್ಯಾಟ್ಸಪ್ ಸ್ಟೇಟಸ್ ಬರೆದು ಹಾಕಿದ್ದರು.

amrutha

ಪೊಲೀಸರಿಗೆ ಅದಾಮ್‌ಪುರದ ದಿವ್ಯಾಧರ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮ*ಹತ್ಯೆ ನಡೆದಿದೆ ಎಂದು ಕರೆ ಬರುತ್ತದೆ. ಪೊಲೀಸರು ಬಂದು ಪರಿಶೀಲಿಸಿದಾಗ ಬೆಡ್‌ ಮೇಲೆ ಅಮೃತಾ ಮೃತದೇಹ ಇತ್ತು. ಇದಕ್ಕೆ ಮೊದಲು ಅಮೃತಾಳ ಸಹೋದರಿ ರೂಂ ನ ಒಳಗಡೆ ಹೋಗಿದ್ದಾರೆ. ಅಕ್ಕನನ್ನು ನೋಡಿ ಶಾಕ್ ಆಗಿದ್ದರು. ಆ ಕೂಡಲೇ ಕೆಳಗಿಳಿಸುವ ಪ್ರಯತ್ನ ಮಾಡಿದ್ದಾರೆ. ಆಗಾಗಲೇ ಸಮಯ ಮಿಂಚಿ ಹೋಗಿತ್ತು.

ಮುಂದೆ ಓದಿ..; ಈ ತಿಂಗಳಿನಲ್ಲಿ ಬರುತ್ತೆ ಪಿಎಂ ಕಿಸಾನ್ ಯೋಜನೆಯ 17ನೇಕಂತು..!

ಅದೇನಿತ್ತು ವ್ಯಾಟ್ಸಾಪ್ ಸ್ಟೇಟಸ್‌ನಲ್ಲಿ..!

ಅಮೃತಾ ಸಾಯುವುದಕ್ಕೂ ಮೊದಲು ವ್ಯಾಟ್ಸಾಪ್‌ ನಲ್ಲಿ ಸ್ಟೇಟಸ್ ಹಾಕಿದ್ದರು. “ಅವರ ಜೀವನ ಎರಡು ದೋಣಿಗಳ ಮೇಲಿದೆ. ನಾವು ನಮ್ಮ ದೋಣಿಯನ್ನು ಮುಳುಗಿಸುವ ಮೂಲಕ ಅವರ ಮಾರ್ಗವನ್ನು ಸಡಿಲಗೊಳಿಸಿದ್ದೇವೆ” ಎಂದು ಬರೆದು ಸ್ಟೇಟಸ್ ಹಾಕಿದ್ದಾರೆ. ಇದನ್ನೆಲ್ಲಾ ಗಮನಿಸಿದಾಗ ಪತಿ ಚಂದ್ರಮಣಿ ಇನ್ನೋರ್ವಳನ್ನು ಪ್ರೀತಿಸುತ್ತಿದ್ದರೇ ಎನ್ನುವ ಅನುಮಾನ ಹುಟ್ಟಿಹಾಕಿದೆ. ಇನ್ನು ಅಮೃತಾಳ ಪತಿ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, 2022ರಲ್ಲಿ ಅಮೃತಾ ಚಂದ್ರಮಣಿಯನ್ನು ಮದುವೆ ಆಗಿದ್ದರು.

ಖಿನ್ನತೆಯೇ ಕಾರಣ ಎಂದ ಕುಟುಂಬಸ್ಥರು

ಇನ್ನೂ ಕುಟುಂಬ ಸದಸ್ಯರು ಅಮೃತಾ ಖಿನ್ನತೆಗೆ ಒಳಗಾಗಿದ್ದಳು. ಸಿನೆಮಾದಲ್ಲಿ ಸರಿಯಾದ ಚಾನ್ಸ್‌ ಸಿಗುತ್ತಿಲ್ಲ ಎಂದು ಖಿನ್ನತೆ ಒಳಗಾಗಿದ್ದಳು ಎಂದು ಹೇಳಿದ್ದಾರೆ. ಅವರು ‘ಪ್ರತಿಶೋಧ’ ಹೆಸರಿನ ಸೀರಿಸ್​ನಲ್ಲಿ ನಟಿಸಿದ್ದರು. ಅವರು ‘ದೀವಾನಪನ್’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಅವರ ಸಾವಿಗೆ ನಿಜಕ್ಕೂ ಖಿನ್ನತೆ ಕಾರಣವೇ ಅಥವಾ ಬೇರೆ ಏನಾದರೂ ಬೇರೆ ಕಾರಣವೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Continue Reading

FILM

ದುಬಾರಿ ಕಾರು ಖರೀದಿಸಿದ ಸಂಭ್ರಮದಲ್ಲಿ ಸಿಂಹಪ್ರಿಯಾ; ಬೆಲೆ ಎಷ್ಟು ಗೊತ್ತಾ?

Published

on

ಬೆಂಗಳೂರು : ಸೆಲೆಬ್ರಿಟಿಗಳಿಗೆ ಕಾರಿನ ಕ್ರೇಝ್ ಹೆಚ್ಚಾಗಿರುತ್ತದೆ. ದುಬಾರಿ ಬೆಲೆಯ ಕಾರುಗಳನ್ನು ಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಾರು ಖರೀದಿಸಿದ್ದ ಸುದ್ದಿ ವೈರಲ್ ಆಗಿತ್ತು. ಅವರು ಆಡಿ ಕ್ಯೂ7 ಮಾದರಿಯ ಗ್ರೇ ಬಣ್ಣದ ಕಾರನ್ನು ಖರೀದಿಸಿದ್ದರು. ಅವರ ಐಷಾರಾಮಿ ಕಾರಿನ ಆನ್ ರೋಡ್ ಬೆಲೆಯು ರೂ.1.10 ಕೋಟಿಯಾಗಿದೆ. ಇದೀಗ ಹರಿಪ್ರಿಯಾ – ವಸಿಷ್ಠ ಸಿಂಹ ಹೊಸ ಕಾರೊಂದನ್ನು ಖರೀದಿಸಿದ್ದಾರೆ.

ಬೆಲೆ ಎಷ್ಟು? :


ಕಾರನ್ನು ಕೊಳ್ಳುವ ಮೂಲಕ ವಸಿಷ್ಠ ಸಿಂಹ ತಮ್ಮ ಕನಸೊಂದನ್ನು ನನಸಾಗಿಸಿಕೊಂಡಿದ್ದಾರೆ. ಮರ್ಸಿಡಿಸ್ ಬೆಂಝ್ ನಿರ್ಮಾಣದ ಜಿಎಲ್ಇ 450ಡಿ ಕಾರನ್ನು ಅವರು ಖರೀದಿಸಿದ್ದಾರೆ. ಮರ್ಸಿಡಿಸ್ ಬೆಂಝ್ ಜಿಎಲ್ಇ 450ಡಿ ಆವೃತ್ತಿಯು ಸದ್ಯ ಬೆಂಗಳೂರಿನಲ್ಲಿ ಆನ್ ರೋಡ್ ಪ್ರಕಾರ ರೂ. 1.44 ಕೋಟಿ ಬೆಲೆ ಹೊಂದಿದೆ.

ಇದನ್ನೂ ಓದಿ : ‘ಮಹಾನಟಿ’ ರಿಯಾಲಿಟಿ ಶೋ ವಿರುದ್ಧ ಬಿತ್ತು ಕೇಸ್; ಯಾಕೆ ಗೊತ್ತಾ!?

ಹೊಸ ಕಾರು ಖರೀದಿ ಮಾಡಿದ ವಿಡಿಯೋವನ್ನು ವಸಿಷ್ಠ ಸಿಂಹ ತಮ್ಮ ಇನ್​ಸ್ಟಾಗ್ರಾಮ್ ​ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಸ್ಟಾರ್ ​ದಂಪತಿ ಕಾರು ಶೋ ರೂಮ್​ಗೆ ಎಂಟ್ರಿ ಕೊಡುವುದರೊಂದಿಗೆ ವೀಡಿಯೋ ಆರಂಭಗೊಳ್ಳುತ್ತದೆ.


ಬಳಿಕ ಹೊಸ ದುಬಾರಿ ಕಾರಿನ ವಿತರಣೆಯನ್ನು ಪಡೆದುಕೊಂಡಿದ್ದಾರೆ. ಹೊಸ ಕಾರು ಕೊಂಡ ತಮ್ಮ ನೆಚ್ಚಿನ ನಟ – ನಟಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಸದ್ಯ ಸಿಂಹಪ್ರಿಯಾ ಖರೀದಿಸಿದ ಹೊಸ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Continue Reading

LATEST NEWS

Trending