Connect with us

FILM

“ಮದುವೆ ಗೌನ್‌”ಗೆ ಮತ್ತೊಂದು ಟಚ್ ಕೊಟ್ಟ ‘ಸಮಂತಾ’..!! ಶಾಕ್‌ನಲ್ಲಿಅಭಿಮಾನಿಗಳು!

Published

on

ತೆಲುಗಿನ ಸ್ಟಾರ್ ಸಮಂತಾ ರುತ್ ಪ್ರಭು ಸದಾ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ನಟಿ. 2017ರಂದು ಸಮಂತಾ-ನಾಗಚೈತನ್ಯ  ಇವರಿಬ್ಬರ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಜೋಡಿಹಕ್ಕಿಗಳಂತಿದ್ದ ಈ ಸ್ಟಾರ್ ನಟ-ನಟ ಎಲ್ಲರಿಗೂ ಫೇವರೆಟ್ ಕಪಲ್ ಆಗಿದ್ರು. ಆದರೆ ಕೆಲವೇ ವರ್ಷಗಳಲ್ಲಿ ಇವರಿಬ್ಬರ ಜೀವನದಲ್ಲಿ ಬಿರುಕು ಮೂಡಿ ವಿಚ್ಛೇದನದ ಮೊರೆ ಹೋಗ್ತಾರೆ. ಇಬ್ಬರ ವಿಚ್ಚೇದನದ ಬಳಿಕ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿತ್ತು. ನೆಟ್ಟಿಗರು ಇವರಿಬ್ಬರ ವಿಚ್ಚೇದನಕ್ಕೆ ತೀವ್ರ ಬೇಸರ ಹೊರ ಹಾಕಿದ್ದರು.

samantha

ಸಮಂತಾ ವಿಚ್ಛೇದನದ ಬಳಿಕ ವಿಚಿತ್ರ ಕಾಯಿಲೆ ಮಯೋಸಿಟಿಸ್ ಗೆ ತುತ್ತಾಗುತ್ತಾರೆ. ಬಳಿಕ ಸಾಕಷ್ಟು ಏಳು ಬೀಳುಗಳನ್ನು ಕಂಡ ಸಮಂತಾ ಚಿತ್ರರಂಗದಲ್ಲಿ ಮತ್ತೆ ಬಣ್ಣ ಹಚ್ಚಿ ತಮ್ಮ ಸ್ಟಾರ್ ಗಿರಿಯನ್ನು ಉಳಿಸಿಕೊಂಡಿದ್ದಾರೆ. ಕಲವು ದಿನಗಳ ಹಿಂದೆ ಸಮಂತಾ-ನಾಗಚೈತನ್ಯ ಮತ್ತೆ ಒಂದಾಗುತ್ತಾರೆ ಎಂಬ ರೂಮರ್ಸ್ ಹರಿದಾಡಿತ್ತು. ಅಭಿಮಾನಿಗಳೂ ಕೂಡಾ ಖುಷಿಯಲ್ಲಿದ್ದರು. ಆದರೆ  ಇವರಿಬ್ಬರು ಅದಕ್ಕೆಲ್ಲ ನೀರೆರೆಚಿದ್ದಾರೆ. ಈ ಮಧ್ಯೆ ನಾಗಚೈತನ್ಯ, ಶೋಭಿತಾ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿ ಕೂಡಾ ಚಿತ್ರರಂಗದಲ್ಲಿ ಪಿಸುಗುಡ್ತಾ ಇದೆ.

ಮುಂದೆ ಓದಿ..; ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೆಮ್ಮೆಯ ಗರಿ; ಜಪಾನ್ ನತ್ತ 777 ಚಾರ್ಲಿ!

ಮದುವೆ ಗೌನ್‌ಗೆ ಮತ್ತೊಂದು ರೂಪ ಕೊಟ್ಟ ಸ್ಯಾಮ್.:

ಇದೀಗ ಸಮಂತಾ ಇನ್ನೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಸಮತಂತಾ ತನ್ನ ವೆಡ್ಡಿಂಗ್‌ ನಲ್ಲಿ ವೈಟ್‌ ಗೌನ್‌ ಧರಿಸಿ ಎಲ್ಲರ ಕಣ್ಮನ ಸೆಳೆಯುವಂತೆ ಮಿಂಚಿದ್ದರು. ಇದೀಗ ಗೌನ್‌ ಗೆ ಮತ್ತೊಂದು ರೂಪವನ್ನು ಕೊಟ್ಟಿದ್ದಾರೆ. ಹೌದು, ಸಮಂತಾ ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ನಾಗಚೈತನ್ಯ ಜೊತೆ ಮದುವೆ ಸಂದರ್ಭದಲ್ಲಿ ಧರಿಸಿಕೊಂಡಿದ್ದ ಶ್ವೇತ ವರ್ಣದ ಗೌನ್‌ಅನ್ನು ಧರಿಸಿದ್ದು, ಇದೀಗ ಆ ಗೌನ್‌ ಅನ್ನು ಹರಿದು ಹಾಕಿ ಅದಕ್ಕೆ ಮತ್ತೊಂದು ರೂಪವನ್ನು ನೀಡಿದ್ದಾರೆ. ಬಿಳಿ ಬಣ್ಣದ ವಸ್ತ್ರವನ್ನು ಕಪ್ಪು ಬಣ್ಣಕ್ಕೆ ಬದಲಾಯಿಸಿ ಧರಿಸಿರುವ ಫೊಟೋವನ್ನು ಸ್ಯಾಮ್ ಶೇರ್ ಮಾಡಿದ್ದಾರೆ.

sam

ಹೌದು, ಏಪ್ರಿಲ್ 25 ರಂದು ನಡೆದ ಗ್ಲಾಮರಸ್ ಫ್ಯಾಶನ್ ಪ್ರೋಗ್ರಾಮ್‌ನಲ್ಲಿ ಕಪ್ಪು ಬಣ್ಣದ ಗೌನ್ ಧರಿಸಿ ಎಲ್ಲರ ಕಣ್ಣು ಕುಕ್ಕುವಂತೆ ಕಾಣಿಸಿಕೊಂಡಿದ್ದರು. ಬಳಿಕ ಸಮಂತಾ ಧರಿಸಿದ್ದ ಕಪ್ಪು ಬಣ್ಣದ ಗೌನ್‌ ಕುರಿತಾಗಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಕುರಿತು ಅಭಿಮಾನಿಗಳು ಶಾಕ್ ಆಗಿದ್ದಾರೆ.  ವೆಡ್ಡಿಂಗ್‌ ಗೌನ್‌ ಅನ್ನು ಹರಿದು ಕಪ್ಪು ಬಣ್ಣಕ್ಕೆ ರೂಪಾಂತರಿಸಿ ಸುಂದರವಾದ ಡಿಸೈನ್ ಮಾಡಿಸಿದ್ದು ಇದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೀಗ ಈ ವೀಡಿಯೋ ಸಖತ್ ವೈರಲ್ ಆಗಿದೆ.

3 Comments

FILM

ಅಯ್ಯೋ! ರಾಖಿ ಸಾವಂತ್ ಗೆ ಏನಾಯ್ತು? ಆಸ್ಪತ್ರೆಗೆ ದಾಖಲಾದ ಬಾಲಿವುಡ್ ಡ್ರಾಮಾ ಕ್ವೀನ್

Published

on

ಮುಂಬೈ : ರಾಖಿ ಸಾವಂತ್ ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ತಮ್ಮ ಸ್ಟೈಲ್ ಹಾಗೂ ವಿವಾದಗಳಿಂದಲೇ ಅವರು ಫೇಮಸ್. ‘ಬಾಲಿವುಡ್ ಡ್ರಾಮಾ ಕ್ವೀನ್’ ಅಂತಾನೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಅವರು ವೈವಾಹಿಕ ಜೀವನದ ವಿಚಾರದಲ್ಲಿ ವಿವಾದದ ಸುಳಿಯಲ್ಲಿ ಸಿಲುಕಿದ್ದರು. ಇದೀಗ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಟಿಯ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಖಿ ಸಾವಂತ್ ಗಂಭೀರ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.

ಆಸ್ಪತ್ರೆಯ ಬೆಡ್ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವರ ಎಡಗೈಯಲ್ಲಿ ಇಂಟ್ರಾವೆನಸ್ ಕ್ಯಾನುಲಾ ಹಾಕಲಾಗಿದೆ. ಆಕ್ಸಿಮೀಟರ್ ಅನ್ನು ಅವರ ಬಲಗೈಯಲ್ಲಿ ಬೆರಳ ತುದಿಗೆ ಅಳವಡಿಸಲಾಗಿದೆ. ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

ರಾಖಿ ಸಾವಂತ್ ಈ ಹಿಂದೆಯೂ ಆಸ್ಪತ್ರೆಗೆ ದಾಖಲಾಗಿದ್ದರು. ತನ್ನ ಹೊಟ್ಟೆಯಲ್ಲಿ ಗಡ್ಡೆ ಇತ್ತು. ಅದಕ್ಕಾಗಿ ಆಪರೇಷನ್ ಮಾಡಲಾಗಿದೆ ಎಂದು ಹೇಳಿದ್ದರು.

 

ವಿವಾದ…ವಿಚ್ಛೇದನೆ.. :

ಪತಿ ಮೈಸೂರಿನ ಆದಿಲ್ ದುರಾನಿ ಜೊತೆಗಿನ ವಿಚ್ಛೇದನದಿಂದ ರಾಖಿ ಸಾವಂತ್ ಭಾರೀ ಸುದ್ದಿಯಾಗಿದ್ದರು. ಪತಿಯ ಮೇಲೆ ಅವರು ಆರೋಪ ಮಾಡಿದ ಹಿನ್ನೆಲೆ ಅದಿಲ್ ನನ್ನು ಬಂಧಿಸಲಾಗಿತ್ತು. ಬಳಿಕ ಅದಿಲ್, ರಾಖಿ ವಿರುದ್ಧ ಕೇಸ್ ದಾಖಲಿಸಿದ್ದರು.
ಮಾಜಿ ಪತಿ ಆದಿಲ್​ ಖಾನ್​ರ ಖಾಸಗಿ ವಿಡಿಯೋಗಳನ್ನು ಲೀಕ್​ ಮಾಡಿದ ಆರೋಪ ಹೊತ್ತಿರುವ ರಾಖಿಗೆ ಬಂಧನದ ಭೀತಿಯಿದೆ. ತಮ್ಮನ್ನು ಬಂಧಿಸದಂತೆ  ನಿರೀಕ್ಷಣಾ ಜಾಮೀನು ಕೋರಿದ್ದರು. ಆದರೆ, ಅರ್ಜಿ ತಿರಸ್ಕರಿಸಿರುವ ಸುಪ್ರೀಂಕೋರ್ಟ್​ ನಾಲ್ಕು ವಾರಗಳಲ್ಲಿ ಸೆರೆಂಡರ್​ ಆಗುವಂತೆ ಆದೇಶಿಸಿತ್ತು.

ಇದನ್ನೂ ಓದಿ : ದರ್ಶನ್ ಸಿನಿಮಾಗೆ ಸಹಿ ಹಾಕಲು ಬಂದಿದ್ದರು ಪವಿತ್ರಾ ಜಯರಾಮ್; ಅಪಘಾ*ತದಲ್ಲಿ ಮೃ*ತಪಟ್ಟಿಲ್ಲ ಅಂದ್ರು ಸಹನಟ

ಇದಾದ ಬಳಿಕ ನಟಿ ತನ್ನ ಮಾಜಿ ಪತಿ ರಿತೇಶ್ ಜೊತೆ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಹಲವು ಬಾರಿ ಮುಂಬೈನಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ರಾಖಿ ಕಾಣಿಸಿಕೊಂಡಿದ್ದರು. ಡೋಜಾ ಕ್ಯಾಟ್‌ ಅವರ ಬಿಳಿ ಟವೆಲ್ ಉಡುಪನ್ನು ಸ್ಪೂರ್ತಿಯಾಗಿ ಪಡೆದು ರಾಖಿ ಡ್ರೆಸ್ ಡಿಸೈನ್ ಮಾಡಿಸಿದ್ದರು.

Continue Reading

FILM

ದರ್ಶನ್ ಸಿನಿಮಾಗೆ ಸಹಿ ಹಾಕಲು ಬಂದಿದ್ದರು ಪವಿತ್ರಾ ಜಯರಾಮ್; ಅಪಘಾ*ತದಲ್ಲಿ ಮೃ*ತಪಟ್ಟಿಲ್ಲ ಅಂದ್ರು ಸಹನಟ

Published

on

‘ತ್ರಿನಯನಿ’ ಖ್ಯಾತಿಯ ಖ್ಯಾತ ನಟಿ ಪವಿತ್ರಾ ಜಯರಾಮ್ ಅಪ*ಘಾತದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನಿಂದ ಹೈದರಾಬಾದ್ ಗೆ ಹೊರಟಿದ್ದರು. ಈ ವೇಳೆ ಆಂಧ್ರ ಪ್ರದೇಶದ ಮೆಹಬೂಬ ನಗರದ ಬಳಿ ಭೀ*ಕರ ರಸ್ತೆ ಅಪ*ಘಾತದಲ್ಲಿ ಸ್ಥಳದಲ್ಲಿಯೇ ಮೃ*ತಪಟ್ಟಿದ್ದಾರೆ. ಪವಿತ್ರಾ ಮೂಲತಃ ಕರ್ನಾಟಕದವರು. ಮಂಡ್ಯ ತಾಲೂಕಿನ ಹನಕೆರೆಯವರು.


ಕಾರಿನಲ್ಲಿ ಪ್ರಯಾಣ ಮಾಡುವಾಗ ಅವರ ಜೊತೆ ಸಹನಟ ಚಂದ್ರಕಾಂತ್ ಕೂಡ ಇದ್ದರು. ಅವರು ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ.

ದರ್ಶನ್ ಸಿನಿಮಾಕ್ಕೆ ಸಹಿ :

ಕಾರಿನಲ್ಲಿ ಬಂದಿದ್ದ ನಟಿ ಪವಿತ್ರಾ, ಅವರ ಜೊತೆಗೆ ಸಹನಟ ಚಂದ್ರಕಾಂತ್ ಕೂಡ ಇದ್ದರು.  ಸೋದರ ಸಂಬಂಧಿಯೂ ಇದ್ದರು. ಅವರು ಬೆಂಗಳೂರಿಗೆ ಆಗಮಿಸಿ ವಾಪಾಸಾಗುತ್ತಿದ್ದರು. ಬೆಂಗಳೂರಿಗೆ ಬಂದ ಕಾರಣ ಬಿಚ್ಚಿಟ್ಟ ಚಂದ್ರಕಾಂತ್, ‘ದರ್ಶನ್ ಸರ್ ಸಿನಿಮಾಗೆ ಆಫರ್ ಬಂದಿತ್ತು. ಅದಕ್ಕೆ ಸಹಿ ಹಾಕೋಕೆ ಬೆಂಗಳೂರಿಗೆ ಬಂದಿದ್ದೆವು. ಅಗ್ರಿಮೆಂಟ್​ಗೆ ಸಹಿ ಹಾಕಬೇಕಿತ್ತು. ಹೀಗಾಗಿ ಬೆಂಗಳೂರಿಗೆ ಬಂದಿದ್ದೆವು. ಪವಿತ್ರಾ ಅವರಿಗೆ ಜೆಮಿನಿ ಟಿವಿಯಿಂದ ಆಫರ್ ಬಂತು. ಹೀಗಾಗಿ, ಬೆಂಗಳೂರಿನಿಂದ ಹೈದರಾಬಾದ್​ಗೆ ಹೊರಟಿದ್ದೆವು’ ಎಂದಿದ್ದಾರೆ.

ಅಪಘಾ*ತ ಹೇಗಾಯ್ತು?

ಪವಿತ್ರಾ ಕಾರು ಅಪ*ಘಾತದಿಂದ ಮೃ*ತಪಟ್ಟಿಲ್ಲ ಎಂದು ಚಂದ್ರಕಾಂತ್ ಹೇಳಿದ್ದಾರೆ. ಘಟನೆ ಬಗ್ಗೆ ವಿವರಿಸಿದ ಚಂದ್ರಕಾಂತ್, ಕಾರಿನಲ್ಲಿ ಡ್ರೈವರ್ ಸೇರಿ ನಾವು 4 ಮಂದಿ ಇದ್ದೆವು. ನಾವು ಬೆಂಗಳೂರಿನಿಂದ ಹೈದರಾಬಾದ್ ಗೆ ಟ್ರಾವೆಲ್ ಮಾಡುತ್ತಿದ್ದೆವು. ಮಧ್ಯಾಹ್ನ 2:30ಕ್ಕೆ ಬೆಂಗಳೂರಿನಿಂದ ಹೊರಟೆವು. ಸಂಜೆ 6:30ಕ್ಕೆ ಮಳೆ ಶುರುವಾಯ್ತು. ಈ ವೇಳೆ ಟ್ರಾಫಿಕ್ ಜಾಮ್ ಆಯಿತು. ಮೂರು ಗಂಟೆ ಜಾಮ್ ಆಗಿತ್ತು. 80 ಫೀಟ್ ರೋಡ್ ನಲ್ಲಿ ಸಾಗುತ್ತಿದ್ದಂತೆ ಕೆಎಸ್ಆರ್ ಟಿಸಿ ಬಸ್ ಒಂದು ಓವರ್ ಟೇಕ್ ಮಾಡುವಾಗ ಕಾರಿಗೆ ಟಚ್ ಮಾಡಿದೆ.

ಡ್ರೈವರ್ ಈ ವೇಳೆ ಗಾಬರಿಗೊಂಡು ಸ್ಟೇರಿಂಗ್ ನ ಉಲ್ಟಾ ತಿರುಗಿಸಿದ್ದಾನೆ. ಇದ್ರಿಂದ ಕಾರು ಪಕ್ಕದ ರಸ್ತೆಗೆ ಹೋಗಿದೆ. ಎದುರಿನಿಂದ ಬಸ್ ಬರುತ್ತಿತ್ತು. ಆ ಬಸ್ ಕೂಡ ಡಿ*ಕ್ಕಿ ಹೊಡೆದಿದೆ. ಪರಿಣಾಮ ಬ್ಲಾಸ್ಟ್ ಆಯ್ತು ಎಂದು ನಟ ಚಂದ್ರಕಾಂತ್ ವಿವರಿಸಿದ್ದಾರೆ.

ಇದನ್ನೂ ಓದಿ : PHOTOS : ಆಸ್ಟ್ರೇಲಿಯಾದಲ್ಲಿ ರಶ್ಮಿಕಾ ಮಂದಣ್ಣ; ಹಾಟ್ ಫೋಟೋಗಳು ವೈರಲ್

ಪೆಟ್ಟಾಗಿ ಸ*ತ್ತಿಲ್ಲ:

ಡ್ರೈವರ್ ಹಾಗೂ ಪವಿತ್ರಾ ಅಕ್ಕನ ಮಗಳು ಮುಂದೆ ಇದ್ದರು. ಅವರಿಗೆ ಏನು ಆಗಿಲ್ಲ. ನನ್ನ ಕೈಗೆ, ತಲೆಗೆ ಪೆಟ್ಟಾಗಿತ್ತು. ಇದನ್ನು ನೋಡಿ ಪವಿತ್ರಾ ಶಾಕ್ ಆದರು. ಜೋರಾಗಿ ಉಸಿರು ಎಳೆದ್ರು. ಇದು ಸಡನ್ ಸ್ಟ್ರೋಕ್ ಎಂದು ವೈದ್ಯರು ಹೇಳಿದ್ದಾರೆ. ಆಸ್ಪತ್ರೆಗೆ ಸೇರಿಸಲು ಸರಿಯಾದ ಸಮಯಕ್ಕೆ ಆ್ಯಂ*ಬುಲೆನ್ಸ್ ಕೂಡ ಸಿಗಲಿಲ್ಲ. 1 ಗಂಟೆಗೆ ಆಸ್ಪತ್ರೆಗೆ ಕರೆದುಕೊಂಡು ಹೊದರು. 3 ಗಂಟೆಗೆ ಎಚ್ಚರವಾಯಿತು ಎಂದು ಚಂದ್ರಕಾಂತ್ ವಿವರಿಸಿದ್ದಾರೆ.

ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾ ರಮಣ ಕನ್ನಡದ ಧಾರಾವಾಹಿಗಳಲ್ಲಿ ಪಾತ್ರವಾಗಿದ್ದ ನಟಿ ಪವಿತ್ರಾ ಜಯರಾಮ್‌, ತೆಲುಗು ‘ತ್ರಿನಯನಿ’ ಸೀರಿಯಲ್‌ನ ತಿಲೋತ್ತಮ ಪಾತ್ರದ ಮೂಲಕ ಜನಮನ ಗೆದ್ದಿದ್ದರು.

Continue Reading

FILM

PHOTOS : ಆಸ್ಟ್ರೇಲಿಯಾದಲ್ಲಿ ರಶ್ಮಿಕಾ ಮಂದಣ್ಣ; ಹಾಟ್ ಫೋಟೋಗಳು ವೈರಲ್

Published

on

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುವ ನಟಿ. ಸಾಮಾಜಿಕ ಜಾಲತಾಣಗಳಲ್ಲೂ ಸದಾ ಆ್ಯಕ್ಟೀವ್ ಇರುತ್ತಾರೆ ರಶ್ಮಿಕಾ. ದಿನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಪ್ರವಾಸ ಪ್ರಿಯೆಯಾಗಿರುವ ಈ ನಟಿ ಆಗಾಗ ಪ್ರವಾಸಿ ತಾಣಗಳಿಗೆ ಭೇಟಿ ಕೊಡುತ್ತಿರುತ್ತಾರೆ. ಈ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ.

ರಶ್ಮಿಕಾ ದಕ್ಷಿಣ ಆಸ್ಟ್ರೇಲಿಯಾದಲ್ಲಿ ಅಮೆರಿಕಾ ಮೂಲಕ ಐಶಾರಾಮಿ ‘ಟ್ರಾವೆಲ್ ಲೀಜರ್ ಮ್ಯಾಗಜೀನ್’ ಭಾರತೀಯ ಆವೃತ್ತಿಯ ಕವರ್ ಗಾಗಿ ಫೋಸ್ ಕೊಟ್ಟಿದ್ದಾರೆ.

ಪ್ರಯಾಣ+ವಿರಾಮ ಭಾರತ ಮತ್ತು ದಕ್ಷಿಣ ಏಷ್ಯಾ (Travel + Leisure India & South Asia) ಎಂಬ ಅಮೇರಿಕನ್ ಐಷಾರಾಮಿ ‘ಪ್ರಯಾಣ ಮತ್ತು ಜೀವನಶೈಲಿಯ ನಿಯತಕಾಲಿಕೆಯ ಭಾರತೀಯ ಆವೃತ್ತಿಗೆ ರಶ್ಮಿಕಾ ಮಂದಣ್ಣ ಅವರ ಭಾವಚಿತ್ರವನ್ನು ಕವರ್ ಫೋಟೋವಾಗಿ ಬಳಕೆ ಮಾಡಲಾಗುತ್ತಿದೆ. ಹೀಗಾಗಿಯೇ ಅವರು ಫೋಟೋಗೆ ಪೋಸ್ ಕೊಟ್ಟಿದ್ದಾರೆ.


ನಟಿ ರಶ್ಮಿಕಾ ಮಂದಣ್ಣ ಅವರ ಹೊಸ ಫೋಟೋಗಳನ್ನು ಅಮೆರಿಕಾ ಮೂಲದ ನಿಯತಕಾಲಿಕೆ ಸಂಸ್ಥೆಯು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ನಿಮ್ಮ ಮುಂದಿನ ರಜಾ ದಿನಗಳನ್ನು ಈ ಭೂಸದೃಶ್ಯಗಳನ್ನು ಅನ್ವೇಷಿಸಿ ಎಂದು ಬರೆದುಕೊಂಡಿದೆ.


ಜೊತೆಗೆ ಈ ಸಂಸ್ಥೆಯು ವೀಡಿಯೋಗಳನ್ನೂ ಹಂಚಿಕೊಂಡಿದೆ. ನಮ್ಮ ಹ್ಯಾಪಿನೆಸ್ ಸಂಚಿಕೆಯ ಕವರ್ ಶೂಟ್‌ಗಾಗಿ ಭಾರತೀಯ ನಟಿ ರಶ್ಮಿಕಾ ಮಂದಣ್ಣ ಅವರನ್ನು ಪಶ್ಚಿಮ ಆಸ್ಟ್ರೇಲಿಯಾದ ಬಿಸಿಲಿನ ರೊಟ್ನೆಸ್ಟ್ ದ್ವೀಪಕ್ಕೆ ಕರೆದೊಯ್ದಿದ್ದೇವೆ. ಇಲ್ಲಿ ಅವರಿಗೆ ಸಂತೋಷ ನೀಡುವ ಸಣ್ಣ ಸಣ್ಣ ವಿಷಯಗಳನ್ನು ಸೆರೆ ಹಿಡಿದಿದ್ದೇವೆ ಎಂದು ಸಂಸ್ಥೆ ಮಾಹಿತಿ ನೀಡಿದೆ.


ರಶ್ಮಿಕಾ ಮಂದಣ್ಣ ಅವರ ಈ ಹಾಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ವಿವಿಧ ಉಡುಪುಗಳಲ್ಲಿ ಅವರು ಸಕತ್ ಮಿಂಚಿದ್ದಾರೆ. ಸೈಕಲ್ಲಿಂಗ್ ಮಾಡುವುದು, ಬೇಕರಿ ಮುಂದೆ ಆಹಾರ ಸವಿಯುವುದು, ಸಮುದ್ರದಡದಲ್ಲಿ ಫೋಸ್ ಕೊಟ್ಟಿರುವ ಫೋಟೋಗಳು ವೈರಲ್ ಆಗಿವೆ.

ಇದನ್ನೂ ಓದಿ : ರಾಷ್ಟ್ರಪ್ರಶಸ್ತಿ ವಿಜೇತ, ಖ್ಯಾತ ಸಂಗೀತ ನಿರ್ದೇಶಕನ ದಾಂಪತ್ಯ ಜೀವನದಲ್ಲಿ ಬಿರುಕು!


ರಶ್ಮಿಕಾ ಮಂದಣ್ಣ ಅವರ ಮುದ್ದಾದ ಫೋಟೋಗಳನ್ನು ನೋಡಿ ಅಭಿಮಾನಿಗಳಿಂದ ಮೆಚ್ಚುಗೆ ಕೇಳಿ ಬಂದಿದೆ. ಲಕ್ಷಗಟ್ಟಲೆ ಲೈಕ್ಸ್ ಬಂದಿವೆ.
ಸದ್ಯ ರಶ್ಮಿಕಾ ಮಂದಣ್ಣ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಟ ಸಲ್ಮಾನ್ ಖಾನ್ ಗೆ ನಾಯಕಿಯಾಗಿ ‘ಸಿಕಂದರ್’ ಚಿತ್ರಕ್ಕೆ ಆಯ್ಕೆ ಆಗಿದ್ದು, ಈ ಬಗ್ಗೆ ಇತ್ತೀಚೆಗೆ ಸಂಭ್ರಮ ಹಂಚಿಕೊಂಡಿದ್ದರು.

Continue Reading

LATEST NEWS

Trending