Connect with us

FILM

ದುಬಾರಿ ಕಾರು ಖರೀದಿಸಿದ ಸಂಭ್ರಮದಲ್ಲಿ ಸಿಂಹಪ್ರಿಯಾ; ಬೆಲೆ ಎಷ್ಟು ಗೊತ್ತಾ?

Published

on

ಬೆಂಗಳೂರು : ಸೆಲೆಬ್ರಿಟಿಗಳಿಗೆ ಕಾರಿನ ಕ್ರೇಝ್ ಹೆಚ್ಚಾಗಿರುತ್ತದೆ. ದುಬಾರಿ ಬೆಲೆಯ ಕಾರುಗಳನ್ನು ಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಾರು ಖರೀದಿಸಿದ್ದ ಸುದ್ದಿ ವೈರಲ್ ಆಗಿತ್ತು. ಅವರು ಆಡಿ ಕ್ಯೂ7 ಮಾದರಿಯ ಗ್ರೇ ಬಣ್ಣದ ಕಾರನ್ನು ಖರೀದಿಸಿದ್ದರು. ಅವರ ಐಷಾರಾಮಿ ಕಾರಿನ ಆನ್ ರೋಡ್ ಬೆಲೆಯು ರೂ.1.10 ಕೋಟಿಯಾಗಿದೆ. ಇದೀಗ ಹರಿಪ್ರಿಯಾ – ವಸಿಷ್ಠ ಸಿಂಹ ಹೊಸ ಕಾರೊಂದನ್ನು ಖರೀದಿಸಿದ್ದಾರೆ.

ಬೆಲೆ ಎಷ್ಟು? :


ಕಾರನ್ನು ಕೊಳ್ಳುವ ಮೂಲಕ ವಸಿಷ್ಠ ಸಿಂಹ ತಮ್ಮ ಕನಸೊಂದನ್ನು ನನಸಾಗಿಸಿಕೊಂಡಿದ್ದಾರೆ. ಮರ್ಸಿಡಿಸ್ ಬೆಂಝ್ ನಿರ್ಮಾಣದ ಜಿಎಲ್ಇ 450ಡಿ ಕಾರನ್ನು ಅವರು ಖರೀದಿಸಿದ್ದಾರೆ. ಮರ್ಸಿಡಿಸ್ ಬೆಂಝ್ ಜಿಎಲ್ಇ 450ಡಿ ಆವೃತ್ತಿಯು ಸದ್ಯ ಬೆಂಗಳೂರಿನಲ್ಲಿ ಆನ್ ರೋಡ್ ಪ್ರಕಾರ ರೂ. 1.44 ಕೋಟಿ ಬೆಲೆ ಹೊಂದಿದೆ.

ಇದನ್ನೂ ಓದಿ : ‘ಮಹಾನಟಿ’ ರಿಯಾಲಿಟಿ ಶೋ ವಿರುದ್ಧ ಬಿತ್ತು ಕೇಸ್; ಯಾಕೆ ಗೊತ್ತಾ!?

ಹೊಸ ಕಾರು ಖರೀದಿ ಮಾಡಿದ ವಿಡಿಯೋವನ್ನು ವಸಿಷ್ಠ ಸಿಂಹ ತಮ್ಮ ಇನ್​ಸ್ಟಾಗ್ರಾಮ್ ​ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಸ್ಟಾರ್ ​ದಂಪತಿ ಕಾರು ಶೋ ರೂಮ್​ಗೆ ಎಂಟ್ರಿ ಕೊಡುವುದರೊಂದಿಗೆ ವೀಡಿಯೋ ಆರಂಭಗೊಳ್ಳುತ್ತದೆ.


ಬಳಿಕ ಹೊಸ ದುಬಾರಿ ಕಾರಿನ ವಿತರಣೆಯನ್ನು ಪಡೆದುಕೊಂಡಿದ್ದಾರೆ. ಹೊಸ ಕಾರು ಕೊಂಡ ತಮ್ಮ ನೆಚ್ಚಿನ ನಟ – ನಟಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಸದ್ಯ ಸಿಂಹಪ್ರಿಯಾ ಖರೀದಿಸಿದ ಹೊಸ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

FILM

ಮತ್ತೆ ಬರಲಿದೆಯೇ ‘ಮಜಾ ಟಾಕೀಸ್’ ..! ಈ ಬಗ್ಗೆ ಸೃಜನ್ ಹೇಳಿದ್ದೇನು?

Published

on

ಮಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಜಾ ಟಾಕೀಸ್ ಎಲ್ಲರ ಮನೆಮಾತಾಗಿರುವ ಟಾಪ್ ಶೋ. ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿಬರುತ್ತಿದ್ದ ಈ ಶೋ ಗೆ ಹೆಚ್ಚು ಟಿಆರ್ ಪಿ ಕೂಡಾ ಸಿಗ್ತಾ ಇತ್ತು. ಇನ್ನು ಮಾತಿನ ಮಲ್ಲ ಸೃಜನ್ ಕೌಂಟರ್ ಫಿದಾ ಆಗದೋರೇ ಇಲ್ಲ.  ಈ ಶೋಗೆ ಘಟಾನುಘಟಿ ಸೆಲೆಬ್ರೆಟಿಗಳಿಂದ ಹಿಡಿದು ಚಿತ್ರರಂಗದ ತಾರಾಗಣವೇ ಅತಿಥಿಗಳಾಗಿ ಬಂದಿದ್ದರು.

maja takies

ಸಿನೆಮಾ ಪ್ರಮೋಷನ್ ಗೆ ಅತ್ಯುತ್ತಮ ವೇದಿಕೆ ಅಂದ್ರೆ ಅದು ಸೃಜನ್ ಅವರ ‘ಮಜಾ ಟಾಕೀಸ್’. ಹೌದು, ಸಿನೆಮಾವನ್ನು ಜನರಿಗೆ ರೀಚ್ ಮಾಡೋದು ತಂಬಾನೆ ದೊಡ್ಡ ಟಾಸ್ಕ್. ಈ ಸಮಯದಲ್ಲಿ ಮಜಾ ಟಾಕೀಸ್ ಎಂಬ ಶೋ ಮೂಲಕ ಜನರಿಗೆ ಹೊಸ ಸಿನೆಮಾಗಳ ಪರಿಚಯವನ್ನು ನೀಡುವಂತ ಕೆಲಸವನ್ನು ಮಾಡುತ್ತಿತ್ತು.  ಸಿನಿಮಾ ಇಂಡಸ್ಟ್ರಿಗೆ ಪ್ರಚಾರ ಮಾಡಲು ನಮ್ಮ ಶೋ ಸಹಾಯ ಮಾಡುತ್ತಿದೆ ಅಂದ್ರೆ ಖುಷಿ ವಿಚಾರವೇ. 450 ರಿಂದ 600 ಸಿನಿಮಾ ತಂಡಗಳಿಂದ ಒಂದು ರೂಪಾಯಿಯೂ ಪಡೆಯದೆ ಪ್ರಚಾರ ಮಾಡಿದ್ದೀವಿ. ಸಾಮಾನ್ಯವಾಗಿ ಪ್ರಚಾರಕ್ಕೆ ತುಂಬಾ ಹಣ ಖರ್ಚು ಆಗುತ್ತದೆ ಆದರೆ ಮಜಾ ಟಾಕೀಸ್ ಮೂಲಕ ಸಹಾಯ ಆಗಿದೆ ಪ್ರಚಾರ ಸಿಕ್ಕಿದೆ ಅಂದ್ರೆ ಅದಕ್ಕಿಂತ ಹೆಮ್ಮೆ ಏನು ಬೇಕು? ಎಂದು ಸೃಜನ್ ಹೇಳಿದ್ದಾರೆ.

ಸ್ವಿಡ್ಜರ್ ಲ್ಯಾಂಡ್‌ನ ಬೀದಿಯಲ್ಲಿ ಮಸ್ತ್ ಮಜಾ ಮಾಡಿದ ಡಿಂಪಲ್ ಕ್ವೀನ್ ರಚಿತಾ ರಾಮ್‌

ಮತ್ತೆ ಆರಂಭ ಮಜಾಟಾಕೀಸ್:

ಸದ್ಯಕ್ಕೆ ಕಲರ್ಸ್‌ ಕನ್ನಡದಲ್ಲಿ ನಮ್ಮಮ್ಮ ಸೂಪರ್ ಸ್ಟಾರ್-3 ರಿಯಾಲಿಟಿ ಶೋ ನಡೆಯುತ್ತಿದ್ದು ಗ್ರ್ಯಾಂಡ್‌ ಫಿನಾಲೆ ಹಂತಕ್ಕೆ ತಲುಪಿದೆ. ಈ ಶೋ ದಲ್ಲಿ ಸೃಜನ್ ಸೇರಿದಂತೆ ತಾರಾ, ಅನುಪ್ರಭಾಕರ್ ತೀರ್ಪುಗಾರರಾಗಿದ್ದಾರೆ. ಈ ವೇಳೆ ಸೃಜನ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಮಜಾ ಟಾಕೀಸ್ ಇನ್ನು ಆರಂಭಗೊಳ್ಳಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಮಜಾಟಾಕೀಸ್ ಮತ್ತೆ ತೆರೆಗೆ ತರುವ ಪ್ಲ್ಯಾನ್ ಇದೆ. ಆದರೆ ಯಾವಾಗ ಬರುತ್ತೆ ಗೊತ್ತಿಲ್ಲ. ಅದು ವಾಹಿನಿಯವರಿಗೆ ಬಿಟ್ಟ ನಿರ್ಧಾರ. ಎಲೆಕ್ಷನ್ ನಡಿತಿದೆ. ಐಪಿಎಲ್‌ ಇದೆ. ಮುಂದೆ ಟಿ20 ವಿಶ್ವಕಪ್ ಬರಲಿದೆ. ಇವುಗಳ ಮಧ್ಯೆ ಬಿಗ್‌ಬಾಸ್, ಅನುಬಂಧ ಅವಾರ್ಡ್ಸ್‌ ಎಲ್ಲಾ ಇರುವುದರಿಂದ ಚಾನೆಲ್‌ ನಿರ್ಧಾರ ಮಾಡಬೇಕು ಎಂದು ಹೇಳಿದ್ದಾರೆ.

 

Continue Reading

FILM

ಚಾರ್ಲಿ ಕಡೆಯಿಂದ ಸಿಕ್ತು ಗುಡ್ ನ್ಯೂಸ್; ಸಂಭ್ರಮ ಹಂಚಿಕೊಂಡ ರಕ್ಷಿತ್ ಶೆಟ್ಟಿ

Published

on

ಮೈಸೂರು : ಎರಡು ವರ್ಷಗಳ ಹಿಂದೆ ತೆರೆಕಂಡು ಭಾರೀ ಯಶಸ್ಸು ಬಾಚಿಕೊಂಡ ಚಿತ್ರ 777 ಚಾರ್ಲಿ. ಈ ಸಿನಿಮಾ ನೋಡಿದವರು ಚಾರ್ಲಿಯನ್ನು ಮೆಚ್ಚಿಕೊಂಡಿದ್ದಾರೆ. ಇದೀಗ ಚಾರ್ಲಿ ಕಡೆಯಿಂದ ಶುಭಸುದ್ದಿ ಸಿಕ್ಕಿದೆ. ಹೌದು, ಚಾರ್ಲಿ ಪಾತ್ರ ಮಾಡಿದ್ದ ನಾಯಿ, 6 ಮರಿಗಳಿಗೆ ಜನ್ಮ ನೀಡಿದೆ. 5  ಹೆಣ್ಣು ಮರಿಗಳು, ಒಂದು ಗಂಡು ಮರಿಗೆ ಅವಳು ಜನ್ಮ ನೀಡಿದ್ದಾಳೆ.  ಸ್ವತಃ ರಕ್ಷಿತ್ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಲೈವ್‌ಗೆ ಬಂದ ಅವರು, ಮೈಸೂರಿನಲ್ಲಿದ್ದು, ಚಾರ್ಲಿ ಆರು ಮುದ್ದಾದ ಮರಿಗಳಿಗೆ ಜನ್ಮ ನೀಡಿದ್ದಾಳೆ. ಅವನ್ನು ನೋಡಲು ಬಂದಿದ್ದೇನೆ ಎಂದು ಸಂಭ್ರಮ ಹಂಚಿಕೊಂಡಿದ್ದಾರೆ. ಚಾರ್ಲಿಯನ್ನು ನೋಡಲು ರಕ್ಷಿತ್ ಶೆಟ್ಟಿ ಮೈಸೂರಿನ ಪ್ರಮೋದ್ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ : ಒಂದು ರೇಷ್ಮೆ ಸೀರೆ ತಯಾರಿಸಲು ಎಷ್ಟು ರೇಷ್ಮೆ ಹುಳುಗಳು ಬೇಕು ಗೊತ್ತೇ..?

ಅಲ್ಲಿಂದಲೇ ಲೈವ್ ಮಾಡಿ, ಚಾರ್ಲಿ ಮತ್ತು ಮರಿಗಳನ್ನು ತೋರಿಸಿದ್ದಾರೆ. ಚಾರ್ಲಿ ಸಿನಿಮಾಗೆ ಸಾಕಷ್ಟು ಪ್ರೀತಿ ಸಿಕ್ಕಿದೆ, ವಿಶೇಷವಾಗಿ ಮಕ್ಕಳು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಅವರಿಗೆ ಈ ವಿಚಾರ ತಿಳಿಸಬೇಕು ಎನ್ನಿಸಿತು ಅದಕ್ಕಾಗಿ ಲೈವ್‌ಗೆ ಬಂದೆ ಎಂದು ಹೇಳಿದ್ದಾರೆ.


ಸದ್ಯ ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟನಿ ಸಿನಿಮಾದ ತಯಾರಿಯಲ್ಲಿದ್ದಾರೆ. ಹೊಂಬಾಳೆ ಫಿಲಂಸ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ.

Continue Reading

FILM

ಅಯ್ಯೋ! ರಾಖಿ ಸಾವಂತ್ ಗೆ ಏನಾಯ್ತು? ಆಸ್ಪತ್ರೆಗೆ ದಾಖಲಾದ ಬಾಲಿವುಡ್ ಡ್ರಾಮಾ ಕ್ವೀನ್

Published

on

ಮುಂಬೈ : ರಾಖಿ ಸಾವಂತ್ ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ತಮ್ಮ ಸ್ಟೈಲ್ ಹಾಗೂ ವಿವಾದಗಳಿಂದಲೇ ಅವರು ಫೇಮಸ್. ‘ಬಾಲಿವುಡ್ ಡ್ರಾಮಾ ಕ್ವೀನ್’ ಅಂತಾನೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಅವರು ವೈವಾಹಿಕ ಜೀವನದ ವಿಚಾರದಲ್ಲಿ ವಿವಾದದ ಸುಳಿಯಲ್ಲಿ ಸಿಲುಕಿದ್ದರು. ಇದೀಗ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಟಿಯ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಖಿ ಸಾವಂತ್ ಗಂಭೀರ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.

ಆಸ್ಪತ್ರೆಯ ಬೆಡ್ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವರ ಎಡಗೈಯಲ್ಲಿ ಇಂಟ್ರಾವೆನಸ್ ಕ್ಯಾನುಲಾ ಹಾಕಲಾಗಿದೆ. ಆಕ್ಸಿಮೀಟರ್ ಅನ್ನು ಅವರ ಬಲಗೈಯಲ್ಲಿ ಬೆರಳ ತುದಿಗೆ ಅಳವಡಿಸಲಾಗಿದೆ. ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

ರಾಖಿ ಸಾವಂತ್ ಈ ಹಿಂದೆಯೂ ಆಸ್ಪತ್ರೆಗೆ ದಾಖಲಾಗಿದ್ದರು. ತನ್ನ ಹೊಟ್ಟೆಯಲ್ಲಿ ಗಡ್ಡೆ ಇತ್ತು. ಅದಕ್ಕಾಗಿ ಆಪರೇಷನ್ ಮಾಡಲಾಗಿದೆ ಎಂದು ಹೇಳಿದ್ದರು.

 

ವಿವಾದ…ವಿಚ್ಛೇದನೆ.. :

ಪತಿ ಮೈಸೂರಿನ ಆದಿಲ್ ದುರಾನಿ ಜೊತೆಗಿನ ವಿಚ್ಛೇದನದಿಂದ ರಾಖಿ ಸಾವಂತ್ ಭಾರೀ ಸುದ್ದಿಯಾಗಿದ್ದರು. ಪತಿಯ ಮೇಲೆ ಅವರು ಆರೋಪ ಮಾಡಿದ ಹಿನ್ನೆಲೆ ಅದಿಲ್ ನನ್ನು ಬಂಧಿಸಲಾಗಿತ್ತು. ಬಳಿಕ ಅದಿಲ್, ರಾಖಿ ವಿರುದ್ಧ ಕೇಸ್ ದಾಖಲಿಸಿದ್ದರು.
ಮಾಜಿ ಪತಿ ಆದಿಲ್​ ಖಾನ್​ರ ಖಾಸಗಿ ವಿಡಿಯೋಗಳನ್ನು ಲೀಕ್​ ಮಾಡಿದ ಆರೋಪ ಹೊತ್ತಿರುವ ರಾಖಿಗೆ ಬಂಧನದ ಭೀತಿಯಿದೆ. ತಮ್ಮನ್ನು ಬಂಧಿಸದಂತೆ  ನಿರೀಕ್ಷಣಾ ಜಾಮೀನು ಕೋರಿದ್ದರು. ಆದರೆ, ಅರ್ಜಿ ತಿರಸ್ಕರಿಸಿರುವ ಸುಪ್ರೀಂಕೋರ್ಟ್​ ನಾಲ್ಕು ವಾರಗಳಲ್ಲಿ ಸೆರೆಂಡರ್​ ಆಗುವಂತೆ ಆದೇಶಿಸಿತ್ತು.

ಇದನ್ನೂ ಓದಿ : ದರ್ಶನ್ ಸಿನಿಮಾಗೆ ಸಹಿ ಹಾಕಲು ಬಂದಿದ್ದರು ಪವಿತ್ರಾ ಜಯರಾಮ್; ಅಪಘಾ*ತದಲ್ಲಿ ಮೃ*ತಪಟ್ಟಿಲ್ಲ ಅಂದ್ರು ಸಹನಟ

ಇದಾದ ಬಳಿಕ ನಟಿ ತನ್ನ ಮಾಜಿ ಪತಿ ರಿತೇಶ್ ಜೊತೆ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಹಲವು ಬಾರಿ ಮುಂಬೈನಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ರಾಖಿ ಕಾಣಿಸಿಕೊಂಡಿದ್ದರು. ಡೋಜಾ ಕ್ಯಾಟ್‌ ಅವರ ಬಿಳಿ ಟವೆಲ್ ಉಡುಪನ್ನು ಸ್ಪೂರ್ತಿಯಾಗಿ ಪಡೆದು ರಾಖಿ ಡ್ರೆಸ್ ಡಿಸೈನ್ ಮಾಡಿಸಿದ್ದರು.

Continue Reading

LATEST NEWS

Trending