LATEST NEWS
ಮಗುವಿಗಾಗಿ ಹೆತ್ತ ತಾಯಿ-ಸಾಕು ತಾಯಿ ನಡುವೆ ಜಟಾಪಟಿ: ಹೈಕೋರ್ಟ್ ಇತ್ಯರ್ಥಪಡಿಸಿದ್ದು ಹೇಗೆ?
ಬೆಂಗಳೂರು: ಒಂದೂವರೆ ವರ್ಷದ ಮಗುವಿಗಾಗಿ ಹೆತ್ತ ತಾಯಿ ಹಾಗೂ ಸಾಕು ತಾಯಿಯ ನಡುವೆ ಹೈಕೋರ್ಟ್ನಲ್ಲಿ ಜಟಾಪಟಿ ನಡೆದಿದ್ದು,
ಸದ್ಯ ಈ ಪ್ರಕರಣವನ್ನು ಹೈಕೋರ್ಟ್ನ ನ್ಯಾಯಾಧೀಶರು ಇತ್ಯರ್ಥ ಪಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಚಾಮರಾಜಪೇಟೆಯ ಆಸ್ಪತ್ರೆಯೊಂದರಿಂದ ಹುಸ್ನಾ ಬಾನು ಎಂಬಾಕೆಯ ಮಗುವನ್ನು ಕಳುವು ಮಾಡಲಾಗಿತ್ತು.
ನಂತರ ಆ ಮಗು ಹಲವು ಕೈ ಬದಲಿಸಿ ಕೊನೆಗೆ ತಲುಪಿದ್ದು ಅನುಪಮಾ ಎಂಬಾಕೆಯ ಮಡಿಲಿಗೆ ಬಂದಿದೆ. ಅನುಪಮಾ ಆ ಮಗುವಿಗೆ ಅದ್ವಿಕ್ ಎಂಬ ಚೆಂದದ ಹೆಸರಿಟ್ಟು ಲಾಲನೆ ಪಾಲನೆ ಮಾಡುತ್ತಿದ್ದರು.
ಅದೊಂದು ದಿನ ಪೊಲೀಸ್ ನೋಟಿಸ್ ಬಂದಾಗಲೇ ಸತ್ಯ ತಿಳಿದದ್ದು. ತಾನು ಲಾಲನೆ ಪಾಲನೆ ಮಾಡ್ತಿದ್ದ ಮಗು ಹುಸ್ನ್ ಬಾನು ಎಂಬಾಕೆಯ ಮೂರನೇ ಮಗು ಎಂದು.
ಇದನ್ನು ತಿಳಿದ ಅನುಪಮಾ ಕಂಗಾಲಾಗಿ ಹೋದರು.
ಅತ್ತ ಹೆತ್ತ ತಾಯಿ ಹುಸ್ನಾ ಬಾನು ತನ್ನ ಮಗು ತನಗೇ ಸೇರಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದರು. ಇತ್ತ ಸಾಕು ತಾಯಿ ಸಹ ಈ ಮಗುವನ್ನು ಇಷ್ಟು ಸಮಯ ಸಾಕಿದ್ದೇನೆ ಆದ್ದರಿಂದ ಈ ಮಗು ತನಗೇ ಸೇರಬೇಕೆಂದು ಹೈಕೋರ್ಟ್ ಮೊರೆ ಹೋದರು.
ಹೈಕೋರ್ಟ್ನನಲ್ಲಿ ಈ ಎರಡೂ ರಿಟ್ ಅರ್ಜಿಗಳ ವಿಚಾರಣೆ ನಡೆಯಿತು.
ಹೆತ್ತತಾಯಿ ಹೇಳಿದ್ದೇನು?
ನಾನು ಆಸ್ಪತ್ರೆಯಲ್ಲಿ ಇರುವಾಗ ನನ್ನ ಮಗು ಕಳವಾಗಿತ್ತು. ನಂತರ ನಾಪತ್ತೆಯಾಗಿದ್ದ ಮಗುವಿಗಾಗಿ ದೂರು ನೀಡಿದ್ದೆವು. ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದೆವು.
ಈಗ ಆ ಮಗು ಸಾಕುತಾಯಿಯ ಬಳಿ ಸಿಕ್ಕಿದೆ.
ಡಿಎನ್ಎ ಪರೀಕ್ಷೆ ಯಲ್ಲೂ ಮಗು ನಮ್ಮದು ಎಂದು ಸಾಬೀತಾಗಿದೆ. ಹೀಗಾಗಿ ನಾನು ಹೆತ್ತ ಮಗುವನ್ನು ನನ್ನ ಕೈಗೆ ಕೊಡಿಸಿ ಎಂದು ಹೆತ್ತ ತಾಯಿ ಬೇಡಿಕೊಂಡು ವಾದ ಮಾಡಿದ್ದಾಳೆ.
ಮಲತಾಯಿಯ ವಾದವೇನು?
ನಾನು ಈ ಘಟನೆಯಲ್ಲಿ ಅಮಾಯಕಿ. ಮಕ್ಕಳಿಲ್ಲದ ನಮಗೆ ಅನಿರೀಕ್ಷಿತವಾಗಿ ಈ ಮಗು ನಮ್ಮ ಕೈ ಸೇರಿತ್ತು.
ಮಗುವನ್ನು ಹಲವು ತಿಂಗಳ ಕಾಲ ನಾನು ಪ್ರೀತಿಯಿಂದ ಲಾಲನೆ, ಪಾಲನೆ ಮಾಡಿದ್ದೇನೆ. ನನ್ನಿಂದ ದೂರ ಮಾಡಿದರೆ ಮಗುವಿಗೂ ನೋವಾಗುತ್ತದೆ.
ಹೆತ್ತ ತಾಯಿಗೆ ಇನ್ನೂ ಎರಡು ಮಕ್ಕಳಿವೆ.
ನನಗೆ ಮಕ್ಕಳಿಲ್ಲದಿರುವುದರಿಂದ ಮಗುವನ್ನು ನನಗೇ ಉಳಿಸಿ. ನನ್ನ ಸುಪರ್ದಿಗೇ ನೀಡಿ ಎಂದು ಮಗುವಿನ ಸಾಕು ತಾಯಿ ಅನುಪಮಾ ಅಂಗಲಾಚಿದ್ದಾರೆ.
ಹೈಕೋರ್ಟ್ ಅಭಿಪ್ರಾಯವೇನು
ಕೊನೆಗೆ ಹೆತ್ತ ತಾಯಿ ಮತ್ತು ಸಾಕು ತಾಯಿಯ ವಾದ-ವಿವಾದ ಆಲಿಸಿದ ಹೈಕೋರ್ಟ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಇದೊಂದು ಅಪರೂಪದ ಪ್ರಕರಣ. ವೈದ್ಯಕೀಯ ವಿಜ್ಞಾನವೂ ಮಗುವಿಗೆ ತಾಯಿಯ ಹಾಲಿಗಿಂತ ಪೋಷಣೆ ಬೇರೆ ಇಲ್ಲ ಎನ್ನುತ್ತದೆ.
ಎದೆ ಹಾಲುಣಿಸುವಾಗ ತಾಯಿ ಮಗುವಿನ ಸಂವೇದನೆಗಳೂ ವಿನಿಮಯವಾಗುತ್ತದೆ. ಹೀಗಾಗಿ ಸ್ತನ್ಯಪಾನವು ತಾಯಿಯ ಬೇರ್ಪಡಿಸಲಾಗದ ಹಕ್ಕು.
ಎದೆಹಾಲು ಉಣಿಸುವ ಹಕ್ಕು ಹೆತ್ತ ತಾಯಿಗಿದೆ. ಎದೆಹಾಲು ಕುಡಿಯುವ ಹಕ್ಕು ಮಗುವಿಗೂ ಇದೆ. ಸಂವಿಧಾನದ 21ನೇ ವಿಧಿಯಡಿ ಈ ಹಕ್ಕು ಜೀವಿಸುವ ಹಕ್ಕಿನ ವಿಸ್ತೃತ ರೂಪ.
ನಾಗರಿಕ ಸಮಾಜದಲ್ಲಿ ಇಂಥ ಪ್ರಕರಣಗಳು ಘಟಿಸಬಾರದು.
ಇರುವರು ಇಲ್ಲದವರ ನಡುವೆ ಹಂಚಿಕೊಳ್ಳಲು ಮಕ್ಕಳು ಚರಾಸ್ತಿಯಲ್ಲ ಎಂದು ಅಭಿಪ್ರಾಯ ಪಟ್ಟರು. ಆದರೆ ಈ ವೇಳೆ ಹೆತ್ತ ತಾಯಿಗೆ ಮಗು ನೀಡಲು ಸಾಕು ತಾಯಿ ಒಪ್ಪಿಗೆ ನೀಡಿದರು.
ಸಾಕು ತಾಯಿಯಿಂದ ಹೆತ್ತ ತಾಯಿಗೆ ಮಗು ಹಸ್ತಾಂತರವೂ ಆಯಿತು. ಹುಸ್ನಾ ಬಾನುವಿಗೆ ಹಸ್ತಾಂತರಿಸಿದ ಅನುಪಮಾ ರನ್ನು ನ್ಯಾ. ಕೃಷ್ಣ ದೀಕ್ಷಿತ್ ಶ್ಲಾಘಿಸಿದರು.
ಮಗು ನೊಡಬೇಕೆನ್ನಿಸಿದಾಗ ಬರುವಂತೆ ಹೆತ್ತ ತಾಯಿ ಸಾಕು ತಾಯಿಗೆ ಆಹ್ವಾನ ನೀಡಿದರು.
ಎರಡು ಧರ್ಮದ ಮಹಿಳೆಯರ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಪ್ರಕರಣ ಇತ್ಯರ್ಥಪಡಿಸಿದರು.
DAKSHINA KANNADA
ಎರಡು ಲಾರಿಗಳ ಮಧ್ಯೆ ಅಪಘಾತ; ಚಾಲಕ ಗಂಭೀರ
ಮಂಗಳೂರು: ಬೈಕಂಪಾಡಿ ಹೋಟೆಲ್ ಶ್ರೀ ದ್ವಾರದ ಬಳಿ ಲಾರಿಗಳೆರಡರ ನಡುವೆ ಅಪಘಾತ ಸಂಭವಿಸಿ ಲಾರಿ ಚಾಲಕ ಗಂಭಿರ ಗಾಯಗೊಂಡ ಘಟನೆ ನಡೆದಿದೆ. ಒಂದು ಲಾರಿಯೊಂದು ಗ್ರಾನೈಟ್ ಅಂಗಡಿಯೊಳಗೆ ನುಗ್ಗಿದ್ದು, ಅಪಾರ ಮೌಲ್ಯದ ಗ್ರಾನೈಟ್ ಹಾನಿಗೊಂಡಿದೆ.
ಮುಂದೆ ಓದಿ..; ಪುತ್ತೂರು : ಧರೆಗುರುಳಿದ ಬೃಹದಾಕಾರದ ಮರ; ಮಾವಿನಕಾಯಿಗಾಗಿ ಮುಗಿಬಿದ್ದ ಜನ!
ಲಾರಿ ಸಾಗಾಟ ಮಾಡುತ್ತಿದ್ದ ಲಾರಿ ಅಪಘಾತದಿಂದ ನಜ್ಜುಗುಜ್ಜಾಗಿದೆ. ಇನ್ನು ಇದೇ ಭಾಗದಲ್ಲಿ ನಿತ್ಯವೂ ಮಹಿಳೆಯರು ಮೀನ ಮಾರಾಟ ಮಾಡುತ್ತಿದ್ದರು. ಅದೃಷ್ಟವಶಾತ್ ಇದೀಗ ಭಾರೀ ಅನಾಹುತ ತಪ್ಪಿದೆ.
LATEST NEWS
60ನೇ ವಯಸ್ಸಿಗೆ “ಮಿಸ್ ಯುನಿವರ್ಸ್” ಕಿರೀಟ ಮುಡಿಗೇರಿಸಿಕೊಂಡ ಈಕೆ ಯಾರು ಗೊತ್ತಾ? ಈಕೆಯ ಸೌಂದರ್ಯಕ್ಕೆ ಬೆರಗಾದ್ರು ಜನ..!!
ಹೆಚ್ಚಾಗಿ ಮಿಸ್ ವರ್ಲ್ಡ್, ಮಿಸ್ ಯುನಿವರ್ಸ್ ಇನ್ನೂ ಮುಂತಾದ ಸೌಂದರ್ಯ ಸ್ಪರ್ಧೆಯಲ್ಲಿ ಹದಿಹರೆಯದ ಸುಂದರಿಯರೇ ಭಾಗವಹಿಸುತ್ತಾರೆ. ಆದರೆ ಅಲೆಜಾಂಡ್ರಾ ಮಾರಿಸಾ ರೋಡ್ರಿಗಸ್ ಎಂಬ ಮಹಿಳೆ ತನ್ನ 60ನೇ ವಯಸ್ಸಿನಲ್ಲಿ ಮಿಸ್ ಯುನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾಳೆ.
ವೃತ್ತಿಯಲ್ಲಿ ವಕೀಲ ಮತ್ತು ಪತ್ರಕರ್ತೆಯಾಗಿರೋ ಅಲೆಜಾಂಡ್ರಾ ಅವರು 60ನೇ ವಯಸ್ಸಿನಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಮೊದಲ ಮಹಿಳೆ ಎಂಬ ದಾಖಲೆ ಪಡೆದುಕೊಂಡಿದ್ದಾರೆ. ಅರ್ಜೆಂಟೀನಾದ ಬ್ಯೂನಸ್ ಐರಿಸ್ನ ರಾಜಧಾನಿ ಲಾ ಪ್ಲಾಟಾದಲ್ಲಿ ನಡೆದ 2024ರ ಮಿಸ್ ಯೂನಿವರ್ಸ್ ಬ್ಯೂನಸ್ ಐರಿಸ್ ಸ್ಪರ್ಧೆಯಲ್ಲಿ ಗೆದ್ದು ಇಡೀ ಜಗತ್ತೆ ತಿರುಗಿ ನೋಡುವಂತೆ ಮಾಡಿದ್ದಾಳೆ.
ಇನ್ನೂ 60ನೇ ವಯಸ್ಸಿನಲ್ಲಿಯೂ ಈಕೆಯ ಸೌಂದರ್ಯ ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಅನೇಕರು ಆಕೆ ಮಿಸ್ ಯುನಿವರ್ಸ್ ಕಿರೀಟ ಪಡೆದುಕೊಂಡಿರೋದಕ್ಕೆ ಶುಭಾಶಯ ತಿಳಿಸುತ್ತಿದ್ದು ಇನ್ನೂ ಕೆಲವರು ಕಮೆಂಟ್ಸ್ಗಳನ್ನು ಹಾಕುತ್ತಿದ್ದಾರೆ.
LATEST NEWS
ಪುತ್ತೂರು : ಧರೆಗುರುಳಿದ ಬೃಹದಾಕಾರದ ಮರ; ಮಾವಿನಕಾಯಿಗಾಗಿ ಮುಗಿಬಿದ್ದ ಜನ!
ಪುತ್ತೂರು : ಬೊಳ್ವಾರ್ ಬಸ್ ತಂಗುದಾಣದ ಪಕ್ಕದಲ್ಲಿದ್ದ ಬೃಹದಾಕಾರದ ಮರವೊಂದು ಉರುಳಿ ಬಿದ್ದಿದೆ. ಪರಿಣಾಮ ಹಲವು ವಾಹನಗಳು ಜಖಂಗೊಂಡಿವೆ. ವಾಹನ ಮಾಲಕರು ವಾಹನಗಳನ್ನು ಹೊರತೆಗೆಯಲು ಹರಸಾಹಸ ಪಡುವಂತಾಯಿತು.
ಬಿದ್ದ ಮರದಲ್ಲಿದ್ದ ಮಾವಿನಕಾಯಿಗಳನ್ನು ಕೊಯ್ಯಲು ಜನ ಮುಗಿಬಿದ್ದ ಘಟನೆಯೂ ನಡೆಯಿತು. ಬಳಿಕ ಸ್ಥಳೀಯರು ಮರದ ಕೊಂಬೆಗಳನ್ನು ಕಡಿದು ತೆರವುಗೊಳಿಸಿದರು.
ಮರ ಬೀಳುವ ಸಂದರ್ಭ ಯಾರೂ ಇಲ್ಲದ ಪರಿಣಾಮ ಭಾರೀ ದುರಂತವೊಂದು ತಪ್ಪಿದೆ.
ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರು ಪಲ್ಟಿ; ಯುವತಿ ಸಾವು!
- FILM6 days ago
ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ
- FILM6 days ago
‘ಬಘೀರ’ ಸಿನೆಮಾ ಶೂಟಿಂಗ್ ವೇಳೆ ಅವಘಡ.. ರೋರಿಂಗ್ ಸ್ಟಾರ್ ಆಸ್ಪತ್ರೆ ದಾಖಲು
- chikkamagaluru6 days ago
ಎಟಿಎಂ ಮೆಷಿನ್ಗೆ ಬೆಂಕಿ ಅವಘಡ..! ಸುಟ್ಟು ಕರಕಲಾದ ಲಕ್ಷಾಂತರ ರೂಪಾಯಿ..!!
- FILM7 days ago
ಶೈನ್ ಶೆಟ್ಟಿ, ಅಂಕಿತಾ ಜಸ್ಟ್ ಮ್ಯಾರೀಡ್..!! ಅಭಿಮಾನಿಗಳಿಗೆ ಖುಷಿ