FILM
ಮುಂಡಾ ಮುಚ್ತು, ಪುಟಗೋಸಿ ಡೈಲಾಗ್ ಖ್ಯಾತಿಯ ಗುರೂಜಿ ಬಿಗ್ ಬಾಸ್ ಗೆ ಎಂಟ್ರಿ
ಬೆಂಗಳೂರು : ಬಿಗ್ಬಾಸ್ ಕನ್ನಡ 10ನೇ ಸೀಸನ್ಗೆ ಮೊದಲ ಸೀಸನ್ ಸ್ಪರ್ಧಿ ಬ್ರಹ್ಮಾಂಡ ಗುರೂಜಿ ಆಗಮಿಸಿದ್ದಾರೆ. ಆತ್ಮೀಯವಾಗಿಯೇ ಅವರಿಗೆ ಸ್ವಾಗತಿಸಿದ್ದಾರೆ ಮನೆಯ ಸದಸ್ಯರು.ಶನಿವಾರ ಇಶಾನಿ, ಭಾನುವಾರ ಭಾಗ್ಯಶ್ರೀ ಎಲಿಮಿನೇಟ್ ಆಗಿದ್ದರು.
ಹೀಗಿರುವಾಗಲೇ ಇದೇ ಮನೆಗೆ ಬ್ರಹ್ಮಾಂಡ ಗುರೂಜಿಯ ಆಗಮನವಾಗಿದೆ. ಎಂದಿನಂತೆ ತಮ್ಮ ಟಿಪಿಕಲ್ ಮಾತಿನ ಧಾಟಿಯ ಮೂಲಕವೇ ಗಮನ ಸೆಳೆದಿರುವ ಬ್ರಹ್ಮಾಂಡ ಗುರೂಜಿ, ಇದೀಗ 10ನೇ ಸೀಸನ್ಗೆ ಆಗಮಿಸಿ ಸ್ಪರ್ಧಿಗಳ ಜತೆ ಬೆರೆತಿದ್ದಾರೆ.‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋಗೆ ಬ್ರಹ್ಮಾಂಡ ಗುರೂಜಿ ಬಂದಿರುವುದು ಇದೇ ಮೊದಲೇನೂ ಇಲ್ಲ. ಮೊದಲ ಸೀಸನ್ನಲ್ಲಿಯೇ ಅವರು ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದರು. ಮೂರನೇ ರನ್ನರ್ಅಪ್ ಆಗಿ ಅವರು ಹೊರಹೊಮ್ಮಿದ್ದರು.
ಈಗ ಅವರು ಮತ್ತೆ ದೊಡ್ಮನೆಗೆ ಎಂಟ್ರಿ ನೀಡಿರುವುದು ಹೊಸ ಟ್ವಿಸ್ಟ್ ಸಿಕ್ಕಂತೆ ಆಗಿದೆ. ಇದರ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.
ಹಲೋ ಬಂದಿದಿನಿ ಶುರು ಹಚ್ಕೋಳಿ.. ಎಂಬ ಡೈಲಾಗ್ ಮೂಲಕ ಕನ್ಫೆಷನ್ ರೂಮ್ನಲ್ಲೂ ಬ್ರಹ್ಮಾಂಡ ಗುರೂಜಿ ಕಾಣಿಸಿಕೊಂಡಿದ್ದಾರೆ. ಇತ್ತ ಅವ್ರು ಬಯ್ಯೋಕೆ ಶುರು ಮಾಡಿದ್ರೆ ಅದರ ಮಜಾನೇ ಬೇರೆ ಎಂದು ವಿನಯ್ ಗೌಡ ಅವರ ಹಾಸ್ಯದ ಬಗ್ಗೆ ಮಾತನಾಡಿದ್ದಾರೆ. ಮುಂಡಾ ಮುಚ್ತು, ಹಾಳಾಗೋಗ್ಲಿ, ಪುಟಗೋಸಿ, ಪಿಂಡ ಎಂಬೆಲ್ಲ ಮಾತುಗಳು ಗುರೂಜಿ ಬಾಯಿಂದ ಹೊರಬಂದಿವೆ. ಮನೆ ಮಂದಿಯೂ ನಗೆಗಡಲಲ್ಲಿ ತೇಲಿದ್ದಾರೆ.
FILM
ಈ ವೀಡಿಯೋವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ ? ವೀಡಿಯೋವೊಂದನ್ನು ಹಂಚಿಕೊಂಡು ಸವಾಲೆಸೆದ ನಟಿ ಜ್ಯೋತಿ ರೈ
ಜ್ಯೋತಿ ರೈ ಸದ್ಯ ಭಾರೀ ಸದ್ದು ಮಾಡುತ್ತಿರುವ ಹೆಸರು. ಇತ್ತೀಚೆಗೆ ಖ್ಯಾತ ಸೀರಿಯಲ್ ನಟಿ ಜ್ಯೋತಿ ರೈ ಖಾಸಗಿ ವೀಡಿಯೋವೊಂದು ಲೀಕ್ ಆಗಿತ್ತು. ಈ ಬಗ್ಗೆ ಆಕ್ರೋಶವನ್ನೂ ಹೊರ ಹಾಕಿದ್ದರು. ಇದೀಗ ತಾನೇ ವೀಡಿಯೋಗಳನ್ನು ಹಂಚಿಕೊಂಡು,ಈ ವೀಡಿಯೋವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ ? ಎಂದು ಸವಾಲೆಸೆದಿದ್ದಾರೆ.
ವೀಡಿಯೋ ಹಂಚಿಕೊಂಡ ನಟಿ :
ತಮ್ಮ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಂಡು ಪಡ್ಡೆಗಳ ನಿದ್ದೆಗೆಡಿಸುತ್ತಿದ್ದ ನಟಿ ಜ್ಯೋತಿ ರೈ ಅವರದ್ದೆನ್ನಲಾದ ಅಶ್ಲೀಲ ವೀಡಿಯೋ ವೈರಲ್ ಆಗಿತ್ತು. ಈ ವೀಡಿಯೋ ಬಗ್ಗೆ ಸ್ವತಃ ಜ್ಯೋತಿ ರೈ ಸ್ಪಷ್ಟನೆ ನೀಡಿದ್ದಾರೆ. ಆಘಾತಕ್ಕೊಳಗಾಗಿದ್ದೇನೆ ಎಂದಿದ್ದರು.
ನಟಿ ಜ್ಯೋತಿ ರೈ ಅಕ್ಷಯ ತೃತೀಯ ದಿನದಂದು ಕೆಲವೊಂದು ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ. ಅದರೊಂದಿಗೆ ತಮ್ಮ ಅಶ್ಲೀಲ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವ್ಯಕ್ತಿಗಳಿಗೆ ಸವಾಲೆಸೆದಿದ್ದಾರೆ.
‘ಈ ವೀಡಿಯೊವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ? ಇದು ನಿಜವಾದ ವಿಡಿಯೋ’ ಎಂದು ಅವರು ಬರೆದುಕೊಂಡಿದ್ದಾರೆ.
ಕೆಲವು ಹತಾಶ, ಕೆಲಸವಿಲ್ಲದ ಅಶಿಕ್ಷಿತ ಟೈಂಪಾಸ್ ಚಿಲ್ರೆ ವ್ಯಕ್ತಿಗಳಿಗಾಗಿ, “ ಜಗತ್ತು ನೆರಳನ್ನು ಎಸೆದಾಗ, ನಾನು ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯುತ್ತೇನೆ. ಕತ್ತಲೆ ನನ್ನ ಬೆಳಕಿಗೆ ಇಂಧನ ತುಂಬಿಸುತ್ತದೆ. ನಿರಾಶಾವಾದದ ಬೂದಿಯಿಂದ ಸಾಧ್ಯತೆಯ ಫೀನಿಕ್ಸ್ ಏರುತ್ತದೆ. ನಕಾರಾತ್ಮಕ ಶಕ್ತಿಯು ಕೇವಲ ಮೆಟ್ಟಿಲು. ನಾನು ಅದರ ಮೇಲೆ ಸಕಾರಾತ್ಮಕತೆಯ ದಿಗಂತದ ಕಡೆಗೆ ಹಾರುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಪ್ರಜ್ವಲ್ ಪ್ರಕರಣದ ನಡುವೆ ಖಾಸಗಿ ವೀಡಿಯೋ ವೈರಲ್; ಜ್ಯೋತಿ ರೈ ಹೇಳಿದ್ದೇನು?
ಪದ್ಮಶ್ರೀ ಪುರಸ್ಕೃತ ಕಲಾವಿದನಿಗೆ ಸಹಾಯಹಸ್ತ ಚಾಚಿದ ನಟಿ :
ಎರಡು ವರ್ಷಗಳ ಹಿಂದೆಯಷ್ಟೇ ಸಂಗೀತ ಸಾಧಕ ತೆಲಂಗಾಣದ ದರ್ಶನಂ ಮೊಗುಳಯ್ಯ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು. ಆದ್ರೆ, ಈಗ ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಅವರು ಕೆಲಸ ಮಾಡುತ್ತಿರುವ ಫೋಟೋ, ವೀಡಿಯೋ ವೈರಲ್ ಆಗಿದ್ದವು. ಇವರಿಗೆ ಜ್ಯೋತಿ ರೈ ಧನ ಸಹಾಯ ಮಾಡಿದ್ದಾರೆ. ಈ ಕುರಿತಾದ ವಿಡಿಯೋವನ್ನು ಅವರು ಇನ್ಟಾಗ್ರಾಂ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ.
ಅಕ್ಷಯ ತೃತೀಯದ ಶುಭ ದಿನದಂದು, ಖ್ಯಾತಿಯ ಹೊರತಾಗಿಯೂ, ವೈಯಕ್ತಿಕ ಮತ್ತು ವೃತ್ತಿಪರವಾಗಿ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಶ್ರೀ ಪದ್ಮಶ್ರೀ ಕಿನ್ನೇರ ಮೊಗಳಯ್ಯ ಅವರಿಗೆ ₹ 50,000 ಆರ್ಥಿಕ ನೆರವು ನೀಡಿದ್ದೇನೆ.
ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ ಅವರ ಹೋರಾಟದ ಬಗ್ಗೆ ನನ್ನ ಪಿಆರ್ ನನಗೆ ಮಾಹಿತಿ ನೀಡಿದ್ದರು. ನಾನೂ ಕೂಡ ಪ್ರಸ್ತುತ ಸವಾಲಿನ ಅವಧಿಯನ್ನು ಎದುರಿಸುತ್ತಿದ್ದೇನೆಯಾದರೂ, ನನ್ನೊಳಗಿನ ಬೆಳಕು ಅವರನ್ನು ತಕ್ಷಣವೇ ತಲುಪಲು ಪ್ರೇರೇಪಿಸಿತು. ಊಟದ ವ್ಯವಸ್ಥೆ ಮಾಡಿ ದೇಣಿಗೆ ನೀಡಿದ್ದೆ. ಅವರ ಕಲೆಗೆ ಬೆಂಬಲವನ್ನೂ ನೀಡುತ್ತಿದ್ದೇನೆ. ನಾನು ಹೆಚ್ಚಿನ ಕೊಡುಗೆ ನೀಡಲು ಬಯಸುತ್ತೇನೆ. ಆದರೆ, ಈಗ ನನ್ನ ಕೈಲಾದಷ್ಟು ಮಾಡಿದ್ದೇನೆ. ಬೇರೆ ಯಾರಾದರೂ ಅವರನ್ನು ಬೆಂಬಲಿಸಲು ಬಯಸಿದರೆ, ನಾವು ಒಟ್ಟಾಗಿಯೇ ಸಹಾಯ ಮಾಡೋಣ’ ಎಂದು ಬರೆದುಕೊಂಡಿದ್ದಾರೆ.
ಮೊಗುಳಯ್ಯ ಅವರ ಕುಟುಂಬವನ್ನು ಭೇಟಿ ಮಾಡಿ ಅವರಿಗೆ ಹಣ ಸಹಾಯ ಮಾಡಿದ ವಿಡಿಯೋವನ್ನೂ ಕೂಡ ಜ್ಯೋತಿ ರೈ ಹಂಚಿಕೊಂಡಿದ್ದಾರೆ.
FILM
‘ಎ’oತಹ ಖುಷಿ ಸುದ್ದಿ ಕೊಟ್ರು ಗೊತ್ತಾ ರಿಯಲ್ ಸ್ಟಾರ್ ಉಪೇಂದ್ರ?
ಸ್ಯಾಂಡಲ್ ವುಡ್ : ರಿಯಲ್ ಸ್ಟಾರ್ ಉಪೇಂದ್ರ ಅಂದ್ರೆ ಕೇಳ್ಬೇಕಾ? ಅವರ ಸಿನಿಮಾ ನೋಡಲು ಎಲ್ಲರೂ ತುದಿಗಾಲಲ್ಲಿ ಕಾಯುತ್ತಾರೆ. ಅದರಲ್ಲೂ ಅವರ ನಿರ್ದೇಶನ ಅಂದ್ರೆ ಹೇಳೋದೆ ಬೇಡ. ಕುತೂಹಲ ಹೆಚ್ಚಾಗಿರುತ್ತದೆ. ಸದ್ಯ ಉಪ್ಪಿ ‘ಯುಐ’ ಸಿನಿಮಾದಲ್ಲಿ ಬಿಝಿಯಾಗಿರೋದು ಗೊತ್ತಿರುವ ವಿಚಾರ. ಸಿನಿಮಾದ ಅಪ್ಡೇಟ್ಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ರೆ, ಉಪ್ಪಿ ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.
ಯುಐ ಸಿನಿಮಾ ನಡುವೆ ಗುಡ್ ನ್ಯೂಸ್ ಕೊಟ್ರು ಉಪ್ಪಿ:
ಯುಐ ಉಪ್ಪಿದಾದಾ ನಿರ್ದೇಶನದ ಬಹುನಿರೀಕ್ಷಿತ ಚಿತ್ರ. ಈಗಾಗಲೇ ಪೋಸ್ಟರ್, ಟೀಸರ್ ನಿಂದ ಭಾರೀ ಸದ್ದು ಮಾಡಿದೆ. ಅಲ್ಲದೇ, ‘ಟ್ರೋಲಾಗುತ್ತೆ’ ಹಾಡಂತೂ ಭಾರೀ ಸದ್ದು ಮಾಡಿದೆ, ಈಗಾಗಲೂ ಜನರ ನಾಲಗೆಯಲ್ಲಿ ನಲಿದಾಡುತ್ತಿದೆ.
ಮನೋಹರ್ ಹಾಗೂ ಕೆ.ಪಿ.ಶ್ರೀಕಾಂತ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಯುಐ’ಗೆ ಅಜನೀಶ್ ಲೋಕನಾಥ್ ಸಂಗೀತವಿದೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಚಿತ್ರದ ಬಗ್ಗೆ ಹೊಸ ವಿಚಾರ ಸಿಗಬಹುದಾ ಅಂತ ಕಾದವರಿಗೆ ಈಗ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. ಉಪ್ಪಿ ಬ್ಲಾಕ್ ಬಾಸ್ಟರ್ ಹಿಟ್ ಚಿತ್ರ ‘ಎ’ ತೆರೆಗೆ ಬರುತ್ತಿದೆ. ಅದೂ ಹೊಸ ರೂಪದಲ್ಲಿ.
ಮತ್ತೆ ಬರುತ್ತಿದೆ ‘ಎ’ :
ಹಳೆ ಚಿತ್ರಗಳು ಮತ್ತೆ ತೆರೆಗೆ ಬರೋದು ಸಾಮಾನ್ಯ. ಇತ್ತೀಚೆಗಷ್ಟೇ ಪುನೀತ್ ರಾಜ್ ಕುಮಾರ್ ನಟನೆಯ ಪವರ್, ಅಂಜನೀಪುತ್ರ ತೆರೆಗೆ ಬಂದಿದ್ದವು. ಇದೀಗ ಉಪೇಂದ್ರ ಅವರ ‘ಎ’ ಸಿನಿಮಾ ತೆರೆಗೆ ಬರಲಿದೆ. ‘ಎ’ ಸಿನಿಮಾ ಕನ್ನಡ ಸಿನಿ ರಂಗದಲ್ಲಿ ಹೊಸ ಹವಾ ಸೃಷ್ಟಿಸಿದ್ದ ಚಿತ್ರ. ಉಪೇಂದ್ರ ನಿರ್ದೇಶಕನಾಗಿ, ಸಹ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದರು. ‘ಎ’ ಚಿತ್ರದ ಮೂಲಕ ಅವರು ನಿರ್ದೇಶನದ ಜೊತೆ ನಾಯಕ ನಟನಾಗಿಯೂ ಕಾಣಿಸಿಕೊಂಡರು. 1998 ರಲ್ಲಿ ಈ ಸಿನಿಮಾ ಬಿಡುಗಡೆಗೊಂಡಿತ್ತು.
‘ಎ’ ಚಿತ್ರ ಚಂದನವನದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈ ಚಿತ್ರ ಕನ್ನಡ ಸಿನಿರಂಗದಲ್ಲಿ ಹೊಸ ಅಲೆ ಹುಟ್ಟು ಹಾಕಿತ್ತು. ವಿಭಿನ್ನ ಶೈಲಿಯ ಕಥಾ ನಿರೂಪಣೆ ಜನರಿಗೆ ಇಷ್ಟವಾಗಿತ್ತು. ಸಿನಿಮಾ ನೋಡಿದವರು ಮತ್ತೆ ಮತ್ತೆ ನೋಡಲಾರಂಭಿಸಿದ್ದರು. ಉಪ್ಪಿ ಸಿನಿಮಾವೆಂದರೆ ಒಗಟು…ಅರ್ಥೈಯಿಸಿಕೊಂಡರೆ ಅದರಾಳದ ಜೀವಂತ ಬೇರು ಗೋಚರಿಸುವುದು. ಈ ಚಿತ್ರ ನೋಡಿದವರು ಮತ್ತೆ ಉಪ್ಪಿ ಸಿನಿಮಾಗಳಿಗಾಗಿ ಕಾಯಲಾರಂಭಿಸಿದರು. ಅಷ್ಟರ ಮಟ್ಟಿಗೆ ಸೌಂಡ್ ಮಾಡಿತ್ತು ‘ಎ’.
ಗುರುಕಿರಣ್ ಸಂಗೀತವೂ ಮೋಡಿ ಮಾಡಿತ್ತು. ಚಾಂದಿನೀ…ಎಂದು, ಸುಮ್ ಸುಮ್ನೇ ನಗ್ತಾಳೆ ಎನ್ನುತ್ತಾ…ಮಾರಿ ಕಣ್ಣು ಹೋರಿ ಮ್ಯಾಕೆ ಎಂದು ಜನ ನಲಿದರು. ಹೇಳ್ಕೊಳಕ್ಕೊಂದೂರು ತಲೆ ಮ್ಯಾಗೆ ಒಂದ್ಸೂರು ಎಂದವರು ಇದು ಒನ್ ಡೇ ಮ್ಯಾಚು ಕಣೋ…ಡೆರೆಂಡ್ಯಾವ್..ಡ್ಯಾವ್..ಡ್ಯಾವ್ ಎನ್ನುತ್ತಾ ಮ್ಯೂಸಿಕ್ ನ್ನೂ ಬಾಯಲ್ಲಿ ನುಡಿಸುವ ಮಟ್ಟಿಗೆ ಹಾಡುಗಳು ಕ್ಲಿಕ್
ಆಗಿದ್ದವು. ಈಗಲೂ ಆಗುತ್ತಿದೆ. ಇದು ಎವರ್ ಗ್ರೀನ್ ಸಿನಿಮಾ…ನಿತ್ಯಹರಿದ್ವರ್ಣ ಗೀತೆಗಳ ಚಿತ್ರ.
ಇದನ್ನೂ ಓದಿ : ಬದುಕುಳಿವ ಛಾನ್ಸ್ ಇದ್ದಿದ್ದು ಕೇವಲ ಶೇ. 30 ರಷ್ಟು…ನಿತ್ಯ ಜಗಳ…ಗಾಬರಿ; ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್ ಗೆದ್ದ ಕಥೆ ಇಲ್ಲಿದೆ
ಯಾವಾಗ ತೆರೆಗೆ?
ಎ ಚಿತ್ರವನ್ನು 1.2 5 ಕೋಟಿಯಲ್ಲಿ ತಯಾರಿಸಲಾಗಿದ್ದು, 20 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು.(ಗೂಗಲ್ ಮಾಹಿತಿ) ಇದೀಗ ಮತ್ತೆ ಚಿತ್ರ ಬಿಡುಗಡೆಯಾಗುತ್ತಿದೆ. ಮೇ 17 ರಂದು ತೆರೆಗೆ ಬರಲಿದೆ. ಇವತ್ತಿನ ಕಾಲಕ್ಕೆ ತಕ್ಕ ಹಾಗೆ ಚಿತ್ರವನ್ನು ತಯಾರು ಮಾಡಲಾಗಿದೆ. ಡಿಜಿಟಲ್ ರೂಪದಲ್ಲಿ ತೆರೆಗೆ ತರುವ ಪ್ರಯತ್ನ ಮಾಡಲಾಗಿದೆ. ಮತ್ತೆ ಹೇಗೆ ಉಪ್ಪಿ ‘ಎ’ ಸದ್ದು ಮಾಡಲಿದೆ? ಎಷ್ಟು ಕಲೆಕ್ಷನ್ ಮಾಡಲಿದೆ? ಎಂದು ಕಾದು ನೋಡಬೇಕಿದೆ.
FILM
ಮಲತಂದೆಯಿಂದ ಹತ್ಯೆಯಾದ ಜಗ್ಗೇಶ್ ಸಿನೆಮಾ ನಟಿ..! 13 ವರ್ಷದ ಬಳಿಕ ಮಹತ್ವದ ತೀರ್ಪು
ಮಂಗಳೂರು: ಜಗ್ಗೇಶ್ ಸಿನೆಮಾದ ನಾಯಕಿ ಲೈಲಾ ಖಾನ್ ಹತ್ಯೆ ಪ್ರಕರಣ್ಕಕೆ 13 ವರ್ಷಗಳ ಬಳಿಕ ಮಹತ್ವದ ತೀರ್ಪು ಹೊರಬಂದಿದೆ. ಲೈಲಾ ಖಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಸೆಷನ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಲೈಲಾ ಮಲತಂದೆ ಪರ್ವೀನ್ ಪ್ರಕರಣದ ದೋಷಿ ಎಂದು ಕೋರ್ಟ್ ತೀರ್ಪು ಪ್ರಕಟಿಸಿದೆ.
2011ರ ಫೆಬ್ರವರಿಯಲ್ಲಿ ಮುಂಬೈಯ ಇಗ್ತಪುರಿಯಲ್ಲಿರುವ ಬಂಗಲೆಯಲ್ಲಿ ನಟಿ ಲೈಲಾ ಖಾನ್ ಹಾಗೂ ಆಕೆಯ ತಾಯಿ ಸೆಲೀನಾ ಹಾಗೂ ನಾಲ್ವರು ಒಡಹುಟ್ಟಿದವರು ಸೇರಿ ಒಟ್ಟು 6 ಮಂದಿಯನ್ನು ಪರ್ವೀನ್ ತಾಕ್ ಬರ್ಬರವಾಗಿ ಹತ್ಯೆ ಮಾಡಿದ್ದ. ಅಚ್ಚರಿ ಎಂದರೆ ಪರ್ವೀನ್ ತಾಕ್ ಲೈಲಾ ಖಾನ್ ತಾಯಿ ಸೆಲೀನಾ ಅವರ ಮೂರನೇ ಪತಿ. ಲೈಲಾ ತಾಯಿ ಸೆಲೀನಾರವರ ಜಮೀನಿಗೆ ಸಂಬಂಧಪಟ್ಟು ಈ ಕೃತ್ಯ ನಡೆದಿದೆ. ತಾಯಿ, ಲೈಲಾ ಸೇರಿದಂತೆ ನಾಲ್ವರು ಒಡಹುಟ್ಟಿದವರನ್ನು ಪೆರವಿನ್ ಬರ್ಬರ ಹತ್ಯೆಗೈದು ಪರಾರಿಯಾಗಿದ್ದ. 20212ರಲ್ಲಿ ಈತನನ್ನು ಬಂಧಿಸಲಾಗಿತ್ತು. ಇದೀಗ ಕೋರ್ಟ್ ಪೆರ್ವಿನನ್ನು ದೋಷಿ ಎಂದು ತೀರ್ಮಾನಿಸಿದ್ದು, ಮೇ.14ರಂದು ಶಿಕ್ಷೆ ಪ್ರಕಟವಾಗಲಿದೆ.
ಮುಂದೆ ಓದಿ..; ಇಂಡೊನೇಷಿಯಾದಲ್ಲಿ ತುಳು ಮಾತನಾಡಿದ ಡಾ ಬ್ರೋ..! ಸಖತ್ ವೈರಲ್ ಆಯ್ತು ವೀಡಿಯೋ
ಘಟನೆ ವಿವರ:
ಲೈಲಾ ಖಾನ್, ಆಕೆಯ ತಾಯಿ ಸೆಲೀನಾ ಮತ್ತು ಒಡಹುಟ್ಟಿದವರಾದ ಆಮಿನಾ ಅವಳಿಗಳಾದ ಝಾರ, ಇಮ್ರಾನ್, ಕಸಿನ್ ರೇಷ್ಮಾ ನಾಪತ್ತೆಯಾಗಿದ್ದರೆಂದು 2011ರಲ್ಲಿ ಲೈಲಾ ಖಾನ್ ತಂದೆ ನಾದಿರ್ ಪಟೇಲ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ಪೊಲೀಸರು ತನಿಖೆ ಆರಂಭ ಮಾಡ್ತಾರೆ. ನಾಸಿಕ್ ಬಳಿಯ ಇಗ್ತಪುರಿಯಲ್ಲಿರುವ ಕುಟುಂಬದ ತೋಟದ ಮನೆಯನ್ನು ಅಧಿಕಾರಿಗಳು ಪರಿಶೀಲಿಸಿದಾಗ ಆ ಬಂಗಲೆ ಬೆಂಕಿಯಲ್ಲಿ ಭಾಗಶಃ ಆಹುತಿಯಾಗಿತ್ತು. ಅಲ್ಲದೆ ಲೈಲಾ ಖಾನ್ ಅವರ ಮೊಬೈಲ್ ನಾಪತ್ತೆಯಾಗುವ ವೇಳೆ ನಾಸಿಕ್ನಲ್ಲೇ ಇತ್ತು ಎನ್ನುವುದು ಕಂಡು ಬಂದಿತ್ತು. ಇದೇ ವೇಳೆ ಲೈಲಾ ಖಾನ್ಗೆ ಸೇರಿದ ವಾಹನ ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ತೆಯಾಗಿತ್ತು. ಇನ್ನು ಲೈಲಾ ಖಾನ್ ಮಲತಂದೆ ಪರ್ವೀನ್ ತಾಕ್ ಮೂಲತಃ ಕಾಶ್ಮೀರದವನು. ಹೀಗಾಗಿ ಪೊಲೀಸರಿಗೆ ಆತನ ಮೇಲೆ ಸಂಶಯ ಇನ್ನೂ ಬಲವಾಗಿತ್ತು. ಬಳಿಕ ಆತನನ್ನು ಬಂಧಿಸಲಾಯಿತು. ಈ ವೇಳೆ ಆತ ಆಸ್ತಿ ವಿಚಾರದಲ್ಲಿ ಕೊಲೆ ಮಾಡಿರುವ ಸಂಗತಿ ಹೊರ ಬಿದ್ದಿತ್ತು. ಇನ್ನು ಪ್ರಕರಣಕ್ಕೆ ಸಂಬಂಧಿಸಿ ಸೆಲೀನಾ ಅವರ ಇಬ್ಬರು ಮಾಜಿ ಪತಿಯರು ಸೇರಿದಂತೆ ಸುಮಾರು 40 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿತ್ತು.
ಜಗ್ಗೇಶ್ ನಟನೆಯ ಕನ್ನಡ ಸಿನೆಮಾ 2002ರಲ್ಲಿ ಬಿಡುಗಡೆಯಾದ ‘ಮೇಕಪ್’ ಚಿತ್ರದಲ್ಲಿ ಲೈಲಾ ಖಾನ್ ನಾಯಕಿಯಾಗಿ ನಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಇದು ಅವರ ಮೊದಲ ಹಾಗೂ ಕೊನೆಯ ಚಿತ್ರವಾಗಿದೆ. ಲೈಲಾ 2008ರಲ್ಲಿ ರಾಜೇಶ್ ಖನ್ನಾ ನಟನೆಯ ʼವಫಾ: ಎ ಡೆಡ್ಲಿ ಲವ್ ಸ್ಟೋರಿʼ ಹಿಂದಿ ಸಿನಿಮಾದಲ್ಲಿ ನಾಯಕಿಯಾಗಿದ್ದರು. ಲೈಲಾ ಬಾಂಗ್ಲಾ ದೇಶ ಮೂಲದ ಮುನೀರ್ ಖಾನ್ ಎನ್ನುವವರನ್ನು ಮದುವೆಯಾಗಿದ್ದರು ಎನ್ನಲಾಗಿದೆ.
- LATEST NEWS6 days ago
ಐವರು ಮೆಡಿಕಲ್ ವಿದ್ಯಾರ್ಥಿಗಳು ನೀರುಪಾಲು…!
- FILM7 days ago
ರಜನಿಕಾಂತ್-ಐಶ್ವರ್ಯ ರೈ ಸಂಬಂಧಪಟ್ಟ ವೀಡಿಯೋ ಈಗ ವೈರಲ್ ..!! ಅಮಿತಾಬಚನ್, ಅಭಿಷೇಕ್ಗೆ ಏನಾಗಿದೆ? ಎಂದು ಹೇಳಿದ್ಯಾಕೆ?
- DAKSHINA KANNADA5 days ago
ಆಸ್ಪತ್ರೆ ಸೆಲ್ ನಲ್ಲಿ ಕುಣಿಕೆಗೆ ಕೊರೊಳೊಡ್ಡಿದ ಖೈದಿ..!
- LATEST NEWS6 days ago
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ; ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ನಿರ್ಬಂಧ..!