ಉಡುಪಿ: ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಕಾಲಿಗೆ ಬಲೆ ಸಿಲುಕಿದ ಪರಿಣಾಮ ಮೀನುಗಾರನೋರ್ವ ಸಮುದ್ರದ ನೀರಿಗೆ ಬಿದ್ದು ಮೃತಪಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ.
ಶಿರೂರು ಅಳ್ವೆಗದ್ದೆ ನಿವಾಸಿ ನಾಗರಾಜ ಮೊಗೇರ್ (25) ಮೃತ ಮೀನುಗಾರ ಎಂದು ಗುರುತಿಸಲಾಗಿದೆ. ಕ್ರಿಯಾಶೀಲ ಯುವಕನಾಗಿದ್ದ ಈತ ಎರಡು ದಿನದ ಹಿಂದಷ್ಟೆ ಬೋಟಿಗೆ ತೆರಳಿದ್ದ ಎನ್ನಲಾಗಿದೆ.
ಮೃತದೇಹವನ್ನು ಬೋಟ್ ಮೂಲಕ ಬಂದರಿಗೆ ತಂದು ಬಳಿಕ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಿಸುದಾರರಿಗೆ ನೀಡಲಾಗಿದೆ.