DAKSHINA KANNADA
ಯೋಗಿ ಬುಲ್ಡೋಝರ್ ಮಂಗಳೂರು ಅವೈಜ್ಞಾನಿಕ ಕಾಮಗಾರಿಯ ನೆರೆ ಪರಿಹಾರಕ್ಕೆ ಬಳಕೆಯಾಗಲಿ: ಕೆ. ಅಶ್ರಫ್ ವ್ಯಂಗ್ಯ
ಮಂಗಳೂರು: ಇತ್ತೀಚೆಗೆ ಮಂಗಳೂರಿನ ಬಜ್ಪೆಯ ಶೋಭಾ ಯಾತ್ರೆಯಲ್ಲಿ ಪ್ರದರ್ಶಿತಗೊಂಡ,’ ಯೋಗಿ ‘ ಬಿಂಬಿತ ಬುಲ್ಡೋಝರ್ ಪ್ರದರ್ಶನ ಸೂಕ್ತ ಸಮಯದಲ್ಲಿಯೇ ಆಗಿದೆ. ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಡೆದ ಬಹು ಆರೋಪಿತ ಅವ್ಯವಹಾರ ಮತ್ತು ಅಷ್ಟೇ ಮಟ್ಟದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕಳೆದ ಮಳೆಗಾಲ ಆರಂಭದಲ್ಲಿ, ಮಂಗಳೂರು ನಗರದ ಹಲವು ಬೀದಿಗಳು ಮತ್ತು ರಸ್ತೆಗಳು ಜಲಾವೃತವಾಗಿ,ನಗರ,ಗ್ರಾಮೀಣ ಮತ್ತು ಅಂತರ್ ಜಿಲ್ಲಾ ಸಾರಿಗೆ ಬಸ್ಸುಗಳ ಒಳಗೆ ಪ್ರಯಾಣಿಕರಿಗೆ ನೆರೆ ಬಾಗ್ಯ ಲಭ್ಯವಾಯಿತು’ ಎಂದು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಬಿಜೆಪಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.
ಮಂಗಳೂರಿನ ಬಜ್ಪೆಯಲ್ಲಿ ದಸರಾದ ಶೋಭಾಯಾತ್ರೆಯಲ್ಲಿ ಯೋಗಿ ಬುಲ್ಡೋಜರ್ ಪರಿಕ್ಲ್ಪನೆಯ ಟ್ಯಾಬ್ಲೋ ಆಯೋಜಿಸಿದ ಕುರಿತು ಮಾತನಾಡಿದ ಅವರು ‘ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಅವರು ಮಾತನಾಡಿ ‘ಬೀದಿಗಳಲ್ಲಿ ಜನರಿಗೆ ಮತ್ಸ್ಯ ದರ್ಶನವಾಗಿ ಹಲವರಿಗೆ ಮತ್ಸ್ಯ ಬೋಜನ ಭಾಗ್ಯವು ದೊರೆತದ್ದನ್ನು ‘ ಯೋಗಿ ಬುಲ್ಡೋಝರ್ ‘ ಆಯೋಜಕರು ಮರೆತಿರಬೇಕು.
ಮಂಗಳೂರಿನ ಬಹು ಅಂತಸ್ತು ಕಟ್ಟಡ ಗಳ ವಾಹನ ನಿಲುಗಡೆ ಸ್ಥಳವನ್ನು ಅಧಿಕಾರಿಗಳ ಬೃಷ್ಟತೆಯ ಬೆಂಬಲದಲ್ಲಿ ನಿಯಮ ಉಲ್ಲಂಘಿಸಿ, ವಾಣಿಜ್ಯ ಅಂಗಡಿ ಘಟಕ ಗಳಾಗಿ ಉಪಯೋಗಿಸಿ,ವಾಹನಗಳು ರಸ್ತೆ ಬದಿಯಲ್ಲಿ ನಿಲುಗಡೆ ಗೊಂಡು,ಮಂಗಳೂರು ನಗರದಲ್ಲಿ ಪೊಲೀಸು ಇಲಾಖೆ ನಿರಂತರ ಸಂಚಾರ ನಿಬಿಡತೆಯ ಸಮಸ್ಯೆ ಎದುರಿಸಿ ಜನರಿಂದ ಬೈಸಿಕೊಳ್ಳುವ ಸ್ಥಿತಿ ನಿರ್ಮಾಣ ಆದುದನ್ನು ಬಹುಶ: ಯೋಗಿ ಬುಲ್ಡೋಝರ್ ಆಯೋಜಕರು ಮರೆತಂತಿದೆ.
ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಮಳೆ ಸುರಿದ ಪರಿಣಾಮವಾಗಿ ಅವೈಜ್ಞಾನಿಕ ಕಮಿಷನ್ ಕಾಮಗಾರಿಯಿಂದಾಗಿ ಬೆಂಗಳೂರು ನಗರ ಸಂಪೂರ್ಣ ಮುಳುಗಡೆಯಾಗಿ ಹಾಲಿ ‘ಯೋಗಿ ಮಾದರಿ ‘ ಸರಕಾರವನ್ನು ಜನರು ಮನಸ್ಸೋ ಇಚ್ಛಾ ಉಗಿದು, ಬೈದದನ್ನು ‘ ಯೋಗಿ ಬುಲ್ಡೋಝರ್’ ಆಯೋಜಕರು ಮರೆತಿರಬೇಕು.
ಹೀಗಿರುವಲ್ಲಿ ಮಂಗಳೂರಿನ ‘ ಯೋಗಿ ಬುಲ್ಡೋಝರ್ ‘ ಆಯೋಜಕರು ಜನರಿಗೆ ತನ್ನ ಶೋಭ ಯಾತ್ರೆಯಲ್ಲಿ ನೀಡುವ ಸಂದೇಶ ಏನು ಎಂದು ಜನರಿಗೆ ತಿಳಿಸಬೇಕಿದೆ. ಹಾಲಿ ರಾಜ್ಯದಲ್ಲಿ ಆಡಳಿತ ನಡೆಸುವ ಬೊಮ್ಮಾಯಿ ಸರಕಾರ ಈಗಾಗಲೇ ಯೋಗಿ ಬುಲ್ಡೋಝರ್ ಅನ್ನು ಬಳಕೆ ಮಾಡದೆಯೇ ಕರ್ನಾಟಕವನ್ನು ಯುಪಿ ಮಾದರಿಗೊಳಿಸಿ ಆಗಿದೆ.
ಇನ್ನು ‘ ಯೋಗಿ ಬುಲ್ಡೋಝರ್ ‘ ನಲ್ಲಿ ಮಾಡಲಿಕ್ಕೆ ಬಾಕಿ ಇರುವುದು, ಮಾಡಿಟ್ಟ ಅವಶೇಷಗಳನ್ನು ಅಗೆದು ಮಣ್ಣು ಮಾಡುವುದು ಮಾತ್ರ.’ ಯೋಗಿ ಬುಲ್ಡೋಝರ್’ ಶೋಭಯಾತ್ರೆಯ ಪ್ರದರ್ಶನದಲ್ಲಿ ದೃಶ್ಯವು, ನೆಲದ ಮಣ್ಣನ್ನು ಆರು ಅಡಿ ಅಗೆತಗೊಳಿಸುವ ದೃಷ್ಯರಹಿತವಾದದ್ದು ಖೇದಕರ.
ವಿಧ್ಯಾ ಮಹತ್ವತೆ ಹೊಂದಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಇಂತಹ ಪ್ರಚೋದಿತ ಟ್ಯಾಬ್ಲೋ ಬಳಕೆಯ ವಿರುದ್ಧ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
BANTWAL
ಮತ ಚಲಾಯಿಸಿದ ನವ ದಂಪತಿ…! ಶುಭ ಹಾರೈಸಿದ ಸ್ನೇಹಿತರು..!
ಮಂಗಳೂರು : ಇಂದು ಹೊಸ ಬಾಳಿಗೆ ಕಾಲಿಡುತ್ತಿದ್ದ ಆ ಜೋಡಿಗಳು ಹೊಸ ಬಾಳಿನ ಚಿಂತನೆಯ ಜೊತೆಗೆ ದೇಶದ ಚಿಂತನೆಯನ್ನೂ ಮಾಡಿದ್ದಾರೆ. ಮದುವೆಯ ಸಮಾರಂಭದಲ್ಲಿ ಹಸಮಣೆ ಏರಿ ಪತಿ ಪತ್ನಿಯರಾಗಿ ಒಂದಾದ ಜೋಡಿ ಎಲ್ಲಾ ಸಂಪ್ರದಾಯಗಳು ಪೂರ್ಣಗೊಂಡ ತಕ್ಷಣ ಮದುವೆ ಮನೆಯಿಂದ ಹೊರ ನಡೆದಿದ್ದಾರೆ. ಮದುವೆ ಮನೆಯಿಂದ ಬಂದವರೇ ನೇರವಾಗಿ ಮತಗಟ್ಟೆಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಹೌದು ಇದು ನಡೆದಿರುವುದು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಬೂತ್ ಸಂಖ್ಯೆ 16 ರಲ್ಲಿ . ಇವರ ಮದುವೆ ನಿಗದಿಯಾದ ದಿನಂದಂತೆ ಪ್ರಜಾಪ್ರಭುತ್ವದ ಹಬ್ಬವಾಗಿರೋ ಚುನಾವಣೆ ದಿನಾಂಕ ಕೂಡಾ ಘೋಷಣೆ ಆಗಿದೆ. ಒಂದು ಕಡೆ ಹಸೆಮಣೆ ಏರಿ ತಮ್ಮ ಸ್ವಂತ ಭವಿಷ್ಯ ಕಟ್ಟಿಕೊಳ್ಳುವ ಜೊತೆಗೆ ದೇಶದ ಭವಿಷ್ಯವನ್ನೂ ಕಟ್ಟಲು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಮಾದರಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಮಲ್ಲೆರ್ಮಳಕೋಡಿ ಜಯರಾಮ ಕುಲಾಲ್ ಎಂಬ ವರ ವದುವಿವೊಂದಿಗೆ ಬಂದು ತನ್ನ ಮತ ಚಲಾಯಿಸಿದ್ದಾರೆ. ಇವರಿಬ್ಬರ ಈ ಕಾಳಜಿಗೆ ಜನರು ಹಾಗೂ ಮತಗಟ್ಟೆ ಅಧಿಕಾರಿಗಳು ಶುಭ ಹಾರೈಸಿದ್ದಾರೆ. ಇದೇ ವೇಳೆ ಜಯರಾಮ್ ಕುಲಾಲ್ ಅವರ ಸ್ನೇಹಿತರು ಹಿತೈಷಿಗಳು ಕೂಡಾ ಶುಭ ಹಾರೈಸಿದ್ದಾರೆ.
DAKSHINA KANNADA
ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಎಫ್ ಐ ಆರ್ ದಾಖಲಿಸಿದ ಚುನಾವಣಾ ಆಯೋಗ
ಪುತ್ತೂರು : ಮತಗಟ್ಟೆಯೊಳಗೆ ಮೊಬೈಲ್ ಗೆ ನಿರ್ಬಂಧ ವಿಧಿಸಿದರೂ ಕಾನೂನು ಉಲ್ಲಂಘನೆಯಾಗಿರುವ ಘಟನೆ ಪುತ್ತೂರಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಗ್ರೂಪ್ ಗೆ ಶೇರ್ ಮಾಡಿದ ಯುವಕನ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.
ಪುತ್ತೂರಿನ ಕೋಟಿ-ಚೆನ್ನಯ ಕಂಬಳ ಗ್ರೂಪ್ ಗೆ ಮತದಾನ ಮಾಡುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ಶೇರ್ ಮಾಡಿರುವ ಬಗ್ಗೆ ತಿಳಿದು ಬಂದಿದೆ.
ಇದನ್ನೂ ಓದಿ : ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾ*ವು
ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ತೆಗೆದಿದ್ದಾನೆ. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಎಫ್ ಐ ಆರ್ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ / ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.
DAKSHINA KANNADA
ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು
ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.
- FILM5 days ago
ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ
- FILM5 days ago
‘ಬಘೀರ’ ಸಿನೆಮಾ ಶೂಟಿಂಗ್ ವೇಳೆ ಅವಘಡ.. ರೋರಿಂಗ್ ಸ್ಟಾರ್ ಆಸ್ಪತ್ರೆ ದಾಖಲು
- FILM6 days ago
ವಿಚ್ಛೇದನದ ಸುದ್ದಿಗೆ ಉತ್ತರ ಕೊಟ್ಟ ಐಶ್ – ಅಭಿ ಆ್ಯನಿವರ್ಸರಿ ಫೋಟೋ!
- chikkamagaluru5 days ago
ಎಟಿಎಂ ಮೆಷಿನ್ಗೆ ಬೆಂಕಿ ಅವಘಡ..! ಸುಟ್ಟು ಕರಕಲಾದ ಲಕ್ಷಾಂತರ ರೂಪಾಯಿ..!!