ಸರ್ಕಾರ ಏನೇ ಮಾಡ್ಲಿ ಹೊರಗಿನಿಂದ ಬಂದವರನ್ನು ಕ್ವಾರೆಂಟೈನ್ ಮಾಡಿಯೇ ನಾವು ಮನೆಗೆ ಕಳುಹಿಸೋದು..! ಯುಟಿ. ಖಾದರ್
ಮಂಗಳೂರು : ಸಂಸದ ನಳಿನ್ ಕುಮಾರ್ ಕಟೀಲು ಅಂದು ಮಹಾರಾಷ್ಟ್ರದವರು ಊರಿಗೆ ಮರಳಿ ಬರುವುದು ಬೇಡ ಎಂದು ಹೇಳಿದ್ದರು ಇಂದು ಬಂದವರನ್ನೂ ಕ್ವಾರಂಟೈನ್ಗೆ ಒಳಪಡಿಸದೇ ಮನೆಗೆ ಕಳುಹಿಸುತ್ತಿದ್ದಾರೆ.
ಇದು ಯಾವ ರೀತಿಯ ವ್ಯವಸ್ಥೆ ಎಂದು ಮಂಗಳೂರು ಕ್ಷೇತ್ರ ಶಾಸಕ ಯು ಟಿ ಖಾದರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾರು ಏನೇ ಹೇಳಿದರೂ ನಮ್ಮ ಕ್ಷೇತ್ರಕ್ಕೆ ಬರುವವರನ್ನು ಬೆಳ್ಮದ ನಾಡ ಕಚೇರಿಯಲ್ಲಿ ನಾವು 7 ದಿನ ಕಡ್ಡಾಯ ಕ್ವಾರಂಟೈನ್ಗೆ ಒಳಪಡಿಸುತ್ತೇವೆ.
ಮಹಾರಾಷ್ಟ್ರ, ತಮಿಳುನಾಡು ಎಲ್ಲಿಂದ ಬಂದರೂ ಕ್ವಾರೆಂಟೈನ್ ಮಾಡಿಯೇ ನಾವು ಮನೆಗೆ ಕಳುಹಿಸೋದು. ವಿದೇಶದಿಂದ ಬರುವವರನ್ನು ಎಲ್ಲೆಂದರಲ್ಲಿ ಅಡ್ಡಾಡಲು ಬಿಟ್ಟರೆ ಗ್ರಾಮದಲ್ಲಿ ಸಮಸ್ಯೆ ಆರಂಭವಾಗಿ, ವೈಮನಸ್ಸು ಉಂಟಾಗಿ ಗಲಾಟೆಗೆ ಕಾರಣವಾಗುತ್ತೆ. ಹೊರ ರಾಜ್ಯದಿಂದ ಬಂದವರು ಮನೆಗೆ ಹೋದ್ರೆ ಗ್ರಾಮಸ್ಥರು ಬಿಡ್ತಾರಾ? ರಾಜ್ಯ ಸರಕಾರ ಸಂಘಸಂಸ್ಥೆಗಳ ಸಹಕಾರ ಪಡೆದುಕೊಂಡು ಕನಿಷ್ಠ ಅವರನ್ನು ಕ್ವಾರಂಟೈನ್ ಮಾಡುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಬೇಕು.
ಅವರಿಗೆ ಊರವರೂ ಸಹಕಾರ ನೀಡುತ್ತಾರೆ. ಇಲ್ಲದಿದ್ದರೆ ಎಲ್ಲರಿಗೂ ಸಮಸ್ಯೆ ಉಂಟಾಗುತ್ತದೆ ಎಂದು ಸರ್ಕಅರ , ಜನಪ್ರತಿನಿಧಿಗಳ ವಿರುದ್ದ ಹರಿಹಾಯ್ದಿದ್ದಾರೆ. ಬಿಜೆಪಿಗರು ನಾವು ೧೦ ಲಕ್ಷ ರಾಪಿಡ್ ಕಿಟ್ ತಂದಿದ್ದೇವೆ ಅಂತ ಹೇಳಿದ್ದರು, ಮತ್ತೆ ಇದೀಗ ಕಿಟ್ ಎಲ್ಲಾ ಏನಾಯಿತು ಎಂದು ಪ್ರಶ್ನಿಸಿದರು.
ಕಿಟ್ ಸರಿಯಾಗಿ ಇಲ್ಲ ಅಂದ್ರೆ ಕಿಟ್ ತಂದ ಕಂಪೆನಿ ವಿರುದ್ಧ ಯಾಕೆ ಕೇಸ್ ಮಾಡಿಲ್ಲ, ಇದು ದೇಶದ ಜನಕ್ಕೆ ಗೊತ್ತಾಗಬೇಕು. ಕೊರೊನಾ ದಿನದಿಂದ ದಿನಕ್ಕೆ ಮತ್ತೆ ಮತ್ತೆ ಹೆಚ್ಚಾದರೆ ಇದಕ್ಕೆ ಪರಿಹಾರ ಏನು…? ಎಂದು ಖಾದರ್ ತೀವ್ರವಾಗಿ ಪ್ರಶ್ನಿಸಿದ್ದಾರೆ.