ಗೂಡಂಗಡಿ ಕೆಡವಿ ಯುವತಿಗೆ ದೌರ್ಜನ್ಯ; ಬೆಂಬಲಕ್ಕೆ ನಿಂತಿರುವ ಸಾರ್ವಜನಿಕರು..!
ಉಡುಪಿ: ಮೆಸ್ಕಾಂ ಕಛೇರಿ ಮುಂಭಾಗ ನಗರಸಭೆಯ ಸ್ಥಳದಲ್ಲಿ ಚಿಪ್ಪು ಸುಣ್ಣದ ಗೂಡಂಗಡಿ ಇಟ್ಟುಕೊಂಡು ಹಲವು ವರ್ಷಗಳಿಂದ ಬದುಕು ಸಾಗಿಸುತ್ತಿದ್ದರು.
ಉದ್ಯಾವರದ ವನಿತಾ ಸ್ವಾಭಿಮಾನದ ಯುವತಿ. ಆದರೆ ಖಾಸಗಿಯವರು ಆಕೆಗೆ ಮೂನ್ಸೂಚನೆ ನೀಡದೆ, ಕೌಂಪೌಂಡ್ ಗೋಡೆ ಕಟ್ಟುವ ನೆಪದಲ್ಲಿ ಅಮಾನವೀಯವಾಗಿ ಆಕೆಯ ಅಂಗಡಿಯನ್ನು ತೆರವುಗೊಳಿಸಿದ್ದಾರೆ.
ವನಿತಾ ಅವರಿಗೆ ಈ ವಿಚಾರ ತಡರಾತ್ರಿ ಗೊತ್ತಾಗಿದೆ. ತಕ್ಷಣ ಆಕೆ ಮನೆಯಿಂದ ಸ್ಥಳಕ್ಕೆ ಆಗಮಿಸಿದಾಗ ಪರಿಸ್ಥಿತಿ ಕಂಡು ದಿಗ್ಬ್ರಮೆಗೆ ಒಳಗಾಗಿದ್ದಾಳೆ.
ಖಾಸಗಿಯವರ ದೌರ್ಜನ್ಯ ಕಂಡು ಸಾರ್ವಜನಿಕರು ಕೂಡಾ ಆಕೆಗೆ ಬೆಂಬಲವಾಗಿ ನಿಂತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೊಂದ ಯುವತಿಗೆ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ ಅಂಗಡಿಯನ್ನು ತೆರವುಗೊಳಿಸಿದ್ದನ್ನು ಪ್ರತಿಭಟಿಸಿ ಅಡಿಪಾಯ ಹಾಕಲು ತೋಡಿರುವ ಗುಂಡಿಯಲ್ಲಿ ಮಲಗಿ ಪ್ರತಿಭಟನೆಯನ್ನೂ ನಡೆಸಿದ್ದಾಳೆ. ಕೊನೆಗೆ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.