ಬಹುತೇಕ ಜೂ.13 ರ ನಂತರ ಚರ್ಚ್ ಓಪನ್.. ಮಸೀದಿಯಲ್ಲಿ ನಮಾಜ್ ಸದ್ಯಕ್ಕಿಲ್ಲ….!
ಉಡುಪಿ: ಉಡುಪಿ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋರೋನಾ ಆತಂಕದ ಕಾರಣ ಜಿಲ್ಲೆಯಲ್ಲಿನ ಧಾರ್ಮಿಕ ಕ್ಷೇತ್ರಗಳ ಬಾಗಿಲು ಸಾಧ್ಯಕ್ಕೆ ಭಕ್ತರಿಗಾಗಿ ತೆರೆಯದಿರಲು ಜಿಲ್ಲೆಯ ಧಾರ್ಮಿಕ ಮುಖಂಡರುಗಳು ತೀರ್ಮಾನಿಸಿದ್ದಾರೆ.
ಇಂದು ಕೂಡ ಉಡುಪಿ ಧರ್ಮಪ್ರಾಂತ್ಯದ ಚರ್ಚ್ ಗಳು ತೆರೆಯಲಿಲ್ಲ. ಧರ್ಮಗುರುಗಳ ಸಭೆ ನಡೆಸಿ ನಂತರ ಪ್ರಾರ್ಥನೆಗೆ ಅವಕಾಶ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.
ಜೂನ್ 8ರ, ಸೋಮವಾರ ಧರ್ಮಗುರುಗಳ ಸಭೆ ನಡೆಯಲಿದ್ದು, ಬಹುತೇಕ ಜೂ.13 ರ ನಂತರ ಅಥವಾ ಮಾಸಾಂತ್ಯದಲ್ಲಿ ಚರ್ಚ್ ತೆರೆಯುವ ಸಾಧ್ಯತೆ ಇದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ಪ್ರಾದೇಶಿಕ ಕೇಂದ್ರದಿಂದ ಜೂ. 13ರಿಂದ ಪ್ರಾರ್ಥನೆಗಳನ್ನು ನಡೆಸಬಹುದು ಎಂಬ ಸೂಚನೆ ಬಂದರೂ,
ಉಡುಪಿ ಜಿಲ್ಲೆಯಲ್ಲಿ ಪರಿಸ್ಥಿತಿ ಭಿನ್ನವಾಗಿರುವುದರಿಂದ ಜೂ. 8ರಂದು ಬಿಷಪ್ ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಅಂತಿಮ ನಿರ್ಧಾರವನ್ನು ತಳೆಯಲಾಗುವುದು ಎಂದು ಮೂಲಗಳು ತಿಳಿಸಿವೆ.
ಇನ್ನು ಜಿಲ್ಲೆಯಲ್ಲಿನ ಮಸೀದಿ ತೆರೆಯುವ ಬಗ್ಗೆ ಇನ್ನು ಅನಿಶ್ಚಿತತೆ ಇದೆ. ಶನಿವಾರ ಮುಖಂಡರ ಸಭೆ ನಡೆದಿತ್ತಾದರೂ, ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ.
ಆದ್ರಿಂದ ಎರಡು ದಿನದ ನಂತರ ಮತ್ತೊಮ್ಮೆ ಮುಸ್ಲೀಂ ಮುಖಂಡರ ಸಭೆ ನಡೆಯಲಿದೆ.
ಮಸೀದಿಗಳನ್ನು ಜೂ.8ರಿಂದ ತೆರೆಯಲು ಸರಕಾರ ಅವಕಾಶ ಮಾಡಿಕೊಟ್ಟರೂ ಮುಂದೆ ಮಸೀದಿಗೆ ಸಂಬಂಧಿಸಿದ ನಿರ್ದಿಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿದ ಬಳಿಕವೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.