LATEST NEWS
ಕಾರ್ಕಳದ ಪರ್ಪಲೆ ಶಕ್ತಿ ಪೀಠದಲ್ಲಿ ನಡೆದ ಸಿದ್ದಿ ಸಾಧಕರ ಪವಾಡ; ದಂಗಾದ ಜನತೆ.!
ಕಾರ್ಕಳದ ಪರ್ಪಲೆ ಶಕ್ತಿ ಪೀಠದಲ್ಲಿ ನಡೆದ ಸಿದ್ದಿ ಸಾಧಕರ ಪವಾಡಕ್ಕೆ ದಂಗಾದ ಜನತೆ.!
ಕಾರ್ಕಳ: ಕಾರ್ಕಳ ತಾಲೂಕಿನ ಅತ್ತೂರು ಪರ್ಪಲೆ ಗಿರಿ ಕಲ್ಕುಡ ಕ್ಷೇತ್ರ ಅದ ಪುನರುತ್ಥಾನ ನಿಮಿತ್ತ ನಡೆಯುತ್ತಿರುವ ಅಷ್ಟ ಮಂಗಲ ಪ್ರಶ್ನಾ ಚಿಂತನೆಯ ಎರಡನೇ ಹಂತದ ಕೊನೆಯ ದಿನವಾದ ಇಂದು ಶ್ರೀ ಕ್ಷೇತ್ರಕ್ಕೆ ಬೈರಾಗಿಯೋರ್ವರು ಭೇಟಿ ನೀಡಿದ್ದಾರೆ.
ಅಯೋಧ್ಯೆ, ಹರಿದ್ವಾರ,ರಾಜಸ್ಥಾನ, ಕೇದರನಾಥ, ಹಿಮಾಲಯಗಳೆಲ್ಲೆಡೆ ಅಖಾಡ ಹೊಂದಿರುವ ವೈಷ್ಣವ ಪಂಥದ ಅವಧೂತ ಬೈರಾಗಿ ಶ್ರೀ ಕೇಶವದಾಸ ತ್ಯಾಗಿ ಮಹರಾಜ್ ರವರು ಅನಿರೀಕ್ಷಿತವಾಗಿ ಪರ್ಪಲೆ ಗಿರಿಯಲ್ಲಿ ನಡೆಯುತ್ತಿರುವ ಪ್ರಶ್ನಾ ಚಿಂತನೆ ಸ್ಥಳಕ್ಕೆ ಭೇಟಿ ನೀಡಿ ಭಗವದ್ಭಕ್ತರಿಗೆ ಆಶೀರ್ವಚನ ನೀಡಿದರು.
ಅಲ್ಲಿಂದ ಶ್ರೀ ಕ್ಷೇತ್ರದ ಶಕ್ತಿ ಪೀಠವಾಗಿರುವ ಪರ್ಪಲೆ ಗುಹೆಗೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದರು..
ಯಾವುದೇ ಪೂರ್ವತಯಾರಿ ಇಲ್ಲದೆ ಆ ಮಹಾತ್ಮರನ್ನು ಗುರುಪೀಠ ಮತ್ತು ಗುರು ಪಾದುಕೆಯ ಸನ್ನಿಧಾನ ಇರುವ ಪರ್ಪಲೆ ಗುಹೆಗೆ ಕರೆದುಕೊಂಡು ಹೋಗಲಾಯಿತು.ಅಲ್ಲಿ ಅವರೊಂದಿಗೆ ಹೋದ ಹಿಂದೂ ಕಾರ್ಯಕರ್ತರು ಅವಧೂತ ಬೈರಾಗಿಯವರು ಪಾದುಕೆಗೆ ಪೂಜೆ ಸಲ್ಲಿಸಲು ಅಪೇಕ್ಷಿಸಿದ್ದರು.
ಆದರೇ ಆ ಗುಹೆಯಲ್ಲಿ ಎಣ್ಣೆಯಾಗಲೀ, ಬತ್ತಿಯಾಗಲೀ, ಇರಲಿಲ್ಲ…ಅಲ್ಲಿದ್ದ ಯಾವುದೇ ವ್ಯಕ್ತಿಯಲ್ಲೂ ಕೂಡ ಆ ಪೂಜೆಗೆ ಬೇಕಾದ ಸರಂಜಾಮುಗಳು ಇರಲಿಲ್ಲ ಎಣ್ಣೆ,ಬತ್ತಿ ತರಲು ಕಾಡಿನಿಂದ ನಾಡಿಗೆ ಹೋಗಬೇಕು…ಛೇ, ಕರ್ಪೂರವಾದರೂ ಇದ್ದಿದ್ದರೆ ಎಂದು ಕಾರ್ಯಕರ್ತರು ತಮ್ಮಲ್ಲೇ ಗೊಣಗುತ್ತಿದ್ದರು..
ಆಗ ಆ ಹಿಮಾಲಯದ ಸಿದ್ದಿ ಸಾಧಕರು ಒಮ್ಮೆಲೇ ಕ್ಯಾ ಹುವಾ ಪೂಜಾ ಕರ್ನೇ ಕೇಲಿಯೇ ಕಪೂರ್ ನಹೀ ಹೈ ಕ್ಯಾ ??
ಮಾಚೀಸ್ ತೋ ಹೈ ?ಎಂದು ಪ್ರಶ್ನಿಸಿದರು..ಆಗ ಕಾರ್ಯಕರ್ತರು ಮಾಚೀಸ್ ಹೈ ಲೇಕೀನ್ ಕಪೂರ್ ನಹೀ ಹೈ ಎಂದು ಉತ್ತರಿಸಿದರು..
ಆಗ ಆ ಬೈರಾಗಿ ಸಿದ್ದಿ ಸಾಧಕರು ಪವಾಡದ ಒಂದು ಝಲಕ್ ಅನ್ನು ಅನಾವರಣಗೊಳಿಸಿದರು..
ಬೆತ್ತಲೆ ದೇಹದ, ಬರಿ ಕೈಯ ಆ ಅವಧೂತರು ಗುರುಪೀಠದಲ್ಲಿರುವ ಮಣ್ಣನ್ನು ಚಿಟಿಕೆಯಲ್ಲಿ ತೆಗೆದುಕೊಂಡರು..
ನೆರೆದ ಕಾರ್ಯಕರ್ತರು ಅವಧೂತರು ಆ ಮಣ್ಣನ್ನು ಆ ಪಾದುಕೆಗೆ ಲೇಪಿಸುತ್ತಾರೆ ಅಥವಾ ಅದನ್ನು ನಮಗೆ ಪ್ರಸಾದ ರೂಪದಲ್ಲಿ ಕೊಡುತ್ತಾರೆ ಎಂಬ ಜಿಜ್ಞಾಸೆಯಲ್ಲಿರುವಾಗಲೇ..
ಆ ಚಿಟಿಕೆ ಮಣ್ಣನ್ನು ನೆಲದಲ್ಲಿಟ್ಟು ಬೆಂಕಿ ಕೊಟ್ಟು ಬಿಟ್ಟರು, ನೆರೆದವರಿಗೆ ಒಂದು ಕ್ಷಣ ಏನಾಯ್ತು, ಎಂಬುದೇ ಗೊತ್ತಾಗಲಿಲ್ಲ.
ಅಷ್ಟೊತ್ತಿಗೆ ಆ ಒಂದು ಚಿಟಿಕೆ ಮಣ್ಣು “ಕರ್ಪೂರ” ಆಗಿ ಉರಿಯುತ್ತಿತ್ತು 🙏🙏.ಆ ಚಿಟಿಕೆ ಮಣ್ಣು ಕರ್ಪೂರ ಆದದ್ದು ಹೇಗೆ ಎಂಬುದು ಈಗಲೂ ಅಲ್ಲಿ ಉಪಸ್ಥಿತರಿದ್ದವರಲ್ಲಿ ಕೊರೆಯುತ್ತಿರುವ ಪ್ರಶ್ನೆ…
ಈ ಪ್ರಶ್ನೆಗೆ ಉತ್ತರವನ್ನು ಬೈರಾಗಿಯವರನ್ನೇ ಕೇಳಲು ಅವರ ಎದುರಿಗೆ ಕೂತವನು ಆ ಪ್ರಶ್ನೆಯೊಂದನ್ನು ಬಿಟ್ಟು ಬೇರೆಲ್ಲಾ ವಿಚಾರವನ್ನು ಪ್ರಸ್ತಾಪಿಸಿದ್ದರು.
ಆ ನಂತರ ಅವಧೂತರು ಬೆಳಕು ಇರುವ ಗುಹೆಯ ಬಾಗಿಲ ಬಳಿ ಧ್ಯಾನ ಭಂಗಿಯಲ್ಲಿ ಕೂತುಕೊಂಡರು…
ಅವರ ಜೊತೆಗೆ ಬಂದಿದ್ದ ಕಾರ್ಯಕರ್ತರು ಗುಹೆಯನ್ನು ಸಂದರ್ಶಿಸುತ್ತಾ ಕತ್ತಲೆ ಗುಹೆಯ ಒಳಗಡೆಯ ಮೇಲ್ಬಾಗ ತಲುಪಿದ್ದರು..
ಮೇಲ್ಬಾಗ ತಲುಪಿ ಕೆಳಮುಖ ನೋಡುವಾಗ ಅವದೂತರು ಕೆಳಗಡೆ ಗುಹೆಯ ಬಾಗಿಲಲ್ಲೇ ಕುಳಿತುಕೊಂಡಿದ್ದರು…
ಆದರೇ ಅವರನ್ನು ನೋಡಿ ಮುಖ ತಿರುಗಿಸಿದ ಅರೆಕ್ಷಣವೇ ಅವರು ಗುಹೆಯ ಮೇಲ್ಬಾಗದಲ್ಲಿ ಕಾರ್ಯಕರ್ತರ ಪಕ್ಕದಲ್ಲಿ ಬಂದು ನಿಂತಿದ್ದರು..
ಅವರು ಆ ಕತ್ತಲ ಗುಹೆಯಲ್ಲಿ ಬೆಳಕಿನ ಕಿರು ಕಿರಣವೂ ಇರದೆ ಇದ್ದಾಗಲೂ ಅಷ್ಟು ವೇಗದಲ್ಲಿ ಹೇಗೆ ಮೇಲ್ಬಾಗಕ್ಕೆ ತಲುಪಿದರು ಎಂಬುದು ಮಾತ್ರ ನಿಗೂಢಾತಿನಿಗೂಢ.
ಹಿಮಾಲಯದ ನಾಗಾಸಾಧುಗಳ ಪವಾಡ,ಸಿದ್ದಿಕಲೆಗಳ ಬಗ್ಗೆ ಕೇಳಿ ತಿಳಿದಿದ್ದವರಿಗಂತೂ ಕಣ್ಣಾರೆ ಅವರ ಪವಾಡಗಳನ್ನು ಕಾಣುವ ಭಾಗ್ಯ ಒದಗಿ ಬಂದಿತ್ತು ..
BANTWAL
ಮತ ಚಲಾಯಿಸಿದ ನವ ದಂಪತಿ…! ಶುಭ ಹಾರೈಸಿದ ಸ್ನೇಹಿತರು..!
ಮಂಗಳೂರು : ಇಂದು ಹೊಸ ಬಾಳಿಗೆ ಕಾಲಿಡುತ್ತಿದ್ದ ಆ ಜೋಡಿಗಳು ಹೊಸ ಬಾಳಿನ ಚಿಂತನೆಯ ಜೊತೆಗೆ ದೇಶದ ಚಿಂತನೆಯನ್ನೂ ಮಾಡಿದ್ದಾರೆ. ಮದುವೆಯ ಸಮಾರಂಭದಲ್ಲಿ ಹಸಮಣೆ ಏರಿ ಪತಿ ಪತ್ನಿಯರಾಗಿ ಒಂದಾದ ಜೋಡಿ ಎಲ್ಲಾ ಸಂಪ್ರದಾಯಗಳು ಪೂರ್ಣಗೊಂಡ ತಕ್ಷಣ ಮದುವೆ ಮನೆಯಿಂದ ಹೊರ ನಡೆದಿದ್ದಾರೆ. ಮದುವೆ ಮನೆಯಿಂದ ಬಂದವರೇ ನೇರವಾಗಿ ಮತಗಟ್ಟೆಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಹೌದು ಇದು ನಡೆದಿರುವುದು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಬೂತ್ ಸಂಖ್ಯೆ 16 ರಲ್ಲಿ . ಇವರ ಮದುವೆ ನಿಗದಿಯಾದ ದಿನಂದಂತೆ ಪ್ರಜಾಪ್ರಭುತ್ವದ ಹಬ್ಬವಾಗಿರೋ ಚುನಾವಣೆ ದಿನಾಂಕ ಕೂಡಾ ಘೋಷಣೆ ಆಗಿದೆ. ಒಂದು ಕಡೆ ಹಸೆಮಣೆ ಏರಿ ತಮ್ಮ ಸ್ವಂತ ಭವಿಷ್ಯ ಕಟ್ಟಿಕೊಳ್ಳುವ ಜೊತೆಗೆ ದೇಶದ ಭವಿಷ್ಯವನ್ನೂ ಕಟ್ಟಲು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಮಾದರಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಮಲ್ಲೆರ್ಮಳಕೋಡಿ ಜಯರಾಮ ಕುಲಾಲ್ ಎಂಬ ವರ ವದುವಿವೊಂದಿಗೆ ಬಂದು ತನ್ನ ಮತ ಚಲಾಯಿಸಿದ್ದಾರೆ. ಇವರಿಬ್ಬರ ಈ ಕಾಳಜಿಗೆ ಜನರು ಹಾಗೂ ಮತಗಟ್ಟೆ ಅಧಿಕಾರಿಗಳು ಶುಭ ಹಾರೈಸಿದ್ದಾರೆ. ಇದೇ ವೇಳೆ ಜಯರಾಮ್ ಕುಲಾಲ್ ಅವರ ಸ್ನೇಹಿತರು ಹಿತೈಷಿಗಳು ಕೂಡಾ ಶುಭ ಹಾರೈಸಿದ್ದಾರೆ.
LATEST NEWS
ವಧು ಕೇಳಿದ ಆ ಒಂದು ಪ್ರಶ್ನೆ; ತಬ್ಬಿಬ್ಬಾದ ವರ..ಮದುವೆ ಕ್ಯಾನ್ಸಲ್!
ಮಂಗಳೂರು : ಇತ್ತೀಚಿನ ದಿನಗಳಲ್ಲಿ ಮದುವೆ ಎಂಬುದರ ಸಂಭ್ರಮ ಹೇಳತೀರದು. ಅದ್ದೂರಿತನವೇ ಮೇಲುಗೈ ಸಾಧಿಸುತ್ತೆ. ಈ ನಡುವೆ ಮದುವೆ ಮುರಿದು ಬೀಳುವ ಘಟನೆಯೂ ಹೆಚ್ಚುತ್ತಲಿದೆ. ಕ್ಷುಲ್ಲಕ ಕಾರಣ ಇರಬಹುದು ಅಥವಾ ಇನ್ಯಾವುದೇ ಕಾರಣ ಇರಬಹುದು ಮದುವೆ ಮುರಿದು ಬೀಳುತ್ತಿದೆ.
ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅನ್ನೋ ಗಾದೆ ಮಾತಿದೆ. ಅಂತೆಯೇ ಇಲ್ಲಿ ವರ ಸುಳ್ಳು ಹೇಳಿದ್ದಾನೆ. ಹಾಗಂತ ಮದುವೆ ಆಗಿಲ್ಲ. ಬದಲಿಗೆ ಸಿಕ್ಕಿ ಬಿದ್ದಿದ್ದಾನೆ. ವಧು ಕೇಳಿದ ಆ ಒಂದು ಪ್ರಶ್ನೆಯಿಂದ ಮದುವೆ ಮುರಿದು ಬಿದ್ದಿದೆ.
ಸುಳ್ಳು ಹೇಳಿ ತಗ್ಲಾಕ್ಕೊಂಡ!
ಸುಳ್ಳು ಹೇಳಿ ಮದುವೆಯಾಗಲು ಹೊರಟಿದ್ದ ವರನ ಅಸಲಿ ವಿಚಾರ ಗೊತ್ತಾಗಿದೆ. ಹೀಗಾಗಿ ಯುವತಿ ಮದುವೆ ನಿರಾಕರಿಸಿದ್ದಾಳೆ. ಅಂದಹಾಗೆ ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಪನ್ವಾರಿನಲ್ಲಿ. ಓದು, ಬರಹ ಏನೊಂದು ಬರದ ಅನಕ್ಷರಸ್ಥನೊಬ್ಬ ತಾನು ದೊಡ್ಡ ಸರ್ಕಾರಿ ಅಧಿಕಾರಿ ಎಂದು ಮದುವೆಯಾಗಲು ಹೊರಟಿದ್ದ.
ಆದರೆ, ಈ ಸತ್ಯ ಮದುವೆ ಮನೆಯಲ್ಲೇ ಬಯಲಾಗಿದೆ. ಸಂಶಯಗೊಂಡ ವಧು ವರನ ಬಳಿ, ಎರಡರ ಮಗ್ಗಿ ಹೇಳಲು ತಿಳಿಸಿದ್ದಾಳೆ. ಆಗ ಆತ ತಡವರಿಸಿದ್ದಾರೆ. ಹಾಗಾಗಿ, ಯುವತಿಗೆ ಸತ್ಯಾಂಶ ಗೊತ್ತಾಗಿದೆ. ಎರಡರ ಮಗ್ಗಿ ಬೇಸಿಕ್ ಗಣಿತವೂ ಗೊತ್ತಿಲ್ಲ, ನೀನು ಅಧಿಕಾರಿಯಾಗಲು ಹೇಗೆ ಸಾಧ್ಯ? ಎಂದು ಮದುವೆ ಮುರಿದುಕೊಂಡಿದ್ದಾಳೆ.
ಇದನ್ನೂ ಓದಿ : ಮತ್ತೆ ಬಾಯ್ ಫ್ರೆಂಡ್ ಬದಲಾಯಿಸಿದ ಶೃತಿ ಹಾಸನ್..!
ಇಷ್ಟಾದರೂ ಬಿಡದ ಕುಟುಂಬದವರು ವಧುವಿನ ಮನವೊಲಿಸುವ ಯತ್ನ ಮಾಡಿದ್ದಾರೆ. ಆದರೆ, ವಧು ಮಾತ್ರ ಇದಕ್ಕೆ ಒಪ್ಪಿಲ್ಲ. ಹೀಗಾಗಿ ವರದಕ್ಷಿಣೆಯನ್ನು ಹಿಂದಿರುಗಿಸಿದ್ದಾರೆ. ಪರಸ್ಪರ ನೀಡಿದ ಉಡುಗೊರೆ, ಆಭರಣಗಳನ್ನು ಹಿಂದಿರುಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
LATEST NEWS
ಮತಗಟ್ಟೆಯನ್ನೇ ಧ್ವಂಸ ಮಾಡಿದ ಗ್ರಾಮಸ್ಥರು!
ಚಾಮರಾಜನಗರ : ಲೋಕಸಭಾ ಚುನಾವಣೆಗೆ ನಡೆಯುತ್ತಿರುವ ಮತದಾನ ರಾಜ್ಯದೆಲ್ಲಡೆ ಸುಸೂತ್ರವಾಗಿಯೇ ನಡೆದಿದೆ. ಆದರೆ ಚಾಮರಾಜನಗರದಲ್ಲಿ ಮಾತ್ರ ಜನರು ಮತಗಟ್ಟೆಯನ್ನೇ ಪುಡಿ ಮಾಡಿ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದಾರೆ. ಚಾಮರಾಜನಗರದ ಲೋಕಸಭಾ ಕ್ಷೇತ್ರದ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿತ್ತು. ಈ ವೇಳೆ ಇಂಡಿಗನತ್ತ ಎಂಬ ಗ್ರಾಮದಲ್ಲಿ ಮತಗಟ್ಟೆಯನ್ನು ಗ್ರಾಮಸ್ಥರು ಧ್ವಂಸ ಮಾಡಿದ್ದಾರೆ.
ಚುನಾವಣೆ ಬಹಿಷ್ಕಾರಿಸಿದ್ದ 5 ಗ್ರಾಮ :
ಮೂಲ ಸೌಕರ್ಯದಿಂದ ವಂಚಿತರಾಗಿದ್ದ ಈ ಗ್ರಾಮದ ಜನರು ತಮ್ಮ ಹಕ್ಕಿಗಾಗಿ ಹಲವು ಹೋರಾಟ ನಡೆಸಿದ್ದರು. ಆದರೆ, ಚುನಾವಣೆಯಲ್ಲಿ ಆಶ್ವಾಸನೆ ನೀಡಿ ಹೋಗುವ ಜನ ಪ್ರತಿನಿಧಿಗಳು ಬಳಿಕ ಇತ್ತ ಸುಳಿಯುತ್ತಿರಲಿಲ್ಲ. ಹೀಗಾಗಿ ಐದು ಗ್ರಾಮಗಳ ಜನರು ಈ ಬಾರಿ ಮತ ಕೇಳಲು ಬರಬೇಡಿ, ನಾವು ಮತದಾನ ಮಾಡೋದಿಲ್ಲ ಎಂದಿದ್ದರು.
ಚುನಾವಣೆ ಬಹಿಷ್ಕಾರ ಮಾಡಿದ್ದರೂ ಕಾನೂನು ರೀತಿಯಲ್ಲಿ ಗ್ರಾಮದಲ್ಲಿ ಮತಗಟ್ಟೆಯನ್ನು ತೆರೆಯಲಾಗಿತ್ತು. ಇಂಡಿಗನತ್ತ, ತೇಕಣೆ, ಮೆಂದಾರೆ ಈ ಗ್ರಾಮದಲ್ಲಿ ಯಾವೊಬ್ಬ ಗ್ರಾಮಸ್ಥರೂ ಮತದಾನ ಮಾಡಿಲ್ಲ. ಇನ್ನು ಪಡಸಲನತ್ತ ಗ್ರಾಮದಲ್ಲಿ 85 ಮತದಾರು ಇದ್ದು ಇಬ್ಬರು ಮತದಾನ ಮಾಡಿದ್ದಾಗಿ ಮಾಹಿತಿ ಲಭ್ಯವಾಗಿದೆ.
ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ತೆರೆಯುವುದಕ್ಕೆ ಗ್ರಾಮಸ್ಥರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ, ಚುನಾವಣಾ ಆಯೋಗ ಇಲ್ಲಿ ಮತಗಟ್ಟೆ ತೆರೆದು ‘ಮತದಾನ ಮಾಡಲು ಬನ್ನಿ’ ಎಂದು ಜನರನ್ನು ಕರೆದಿದ್ದರು. ಆದ್ರೆ ರೊಚ್ಚಿಗೆದ್ದ ಜನರು ಮತದಾನ ಕೇಂದ್ರದ ಒಳಗೆ ನುಗ್ಗಿ ಇವಿಎಂ ಮೆಷಿನ್ ಸಹಿತ ಮೇಜು ಕುರ್ಚಿ ಎಲ್ಲವನ್ನೂ ಧ್ವಂಸ ಮಾಡಿದ್ದಾರೆ.
ಕನಿಷ್ಠ ಮೂಲಭೂತ ಸೌಕರ್ಯವಾದ ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ ಯಾವುದೂ ಇಲ್ಲದ ನಮ್ಮ ಗ್ರಾಮದ ಮತ ಯಾಕೆ ಬೇಕು? ಎಂದು ಜನ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ : ಸುಡುಬಿಸಿಲಿನಲ್ಲೂ ಮತದಾನ; ಇಹಲೋಕ ತ್ಯಜಿಸಿದ 6 ಮಂದಿ
ಪೊಲೀಸ್ ಲಾಠಿ ಚಾರ್ಜ್…ಕೆರಳಿದ ಗ್ರಾಮಸ್ಥರು!
ಜನರು ಮತಗಟ್ಟೆ ಧ್ವಂಸಕ್ಕೆ ಮುಂದಾಗುತ್ತಿದ್ದಂತೆ ಭದ್ರತೆಯಲ್ಲಿದ್ದ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಹಲ್ಲೆ ಮಾಡಿದ ಜನರು ಬಳಿಕ ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಹಾಗೂ ಅಧಿಕಾರಿಗಳಿಗೆ ಗಾಯಗಳಾಗಿದೆ.
ಪೊಲೀಸರು ಮಹಿಳೆಯರು ಪುರುಷರು ಎಂದು ನೋಡದೆ ಎಲ್ಲರ ಮೇಲೂ ಲಾಠಿ ಚಾರ್ಚ್ ಮಾಡಿರುವುದು ಗ್ರಾಮಸ್ಥರನ್ನು ಕೆರಳಿಸಿದೆ. ಸದ್ಯಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಮತದಾನ ಕೇಂದ್ರವನ್ನು ಬಂದ್ ಮಾಡಲಾಗಿದೆ.
- FILM5 days ago
ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ
- FILM5 days ago
‘ಬಘೀರ’ ಸಿನೆಮಾ ಶೂಟಿಂಗ್ ವೇಳೆ ಅವಘಡ.. ರೋರಿಂಗ್ ಸ್ಟಾರ್ ಆಸ್ಪತ್ರೆ ದಾಖಲು
- FILM6 days ago
ವಿಚ್ಛೇದನದ ಸುದ್ದಿಗೆ ಉತ್ತರ ಕೊಟ್ಟ ಐಶ್ – ಅಭಿ ಆ್ಯನಿವರ್ಸರಿ ಫೋಟೋ!
- chikkamagaluru5 days ago
ಎಟಿಎಂ ಮೆಷಿನ್ಗೆ ಬೆಂಕಿ ಅವಘಡ..! ಸುಟ್ಟು ಕರಕಲಾದ ಲಕ್ಷಾಂತರ ರೂಪಾಯಿ..!!