ಉಳ್ಳಾಲದಲ್ಲಿ ಕೆ ಸಿ ಎಫ್ ರಿಯಾದ್ ಝೊನ್ ಸಮಿತಿಯ ಆಂಬ್ಯುಲೆನ್ಸ್ ಗೆ ಚಾಲನೆ
ಮಂಗಳೂರು : ಅನಿವಾಸಿ ಕನ್ನಡಿಗರ ಸಂಘಟನೆಯಾದ ಕೆಸಿಎಫ್ ರಿಯಾದ್ ಝೊನ್ ಸಮಿತಿ ಕೊಡಮಾಡಿದ ಆಂಬ್ಯುಲೆನ್ಸ್ ವಾಹನದ ಕೀ ಹಸ್ತಾಂತರ ಕಾರ್ಯಕ್ರಮ ಉಳ್ಳಾಲ ಕೆ ಸಿ ರೋಡ್ ನಲ್ಲಿ ನಡೆಯಿತು.
ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಾ.ಶೇಕ್ ಬಾವಾ ಹಾಜಿ ಆಂಬ್ಯುಲೆನ್ಸ್ ಕೀಯನ್ನು ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಸಮಿತಿಗೆ ಹಸ್ತಾಂತರಿಸಿದರು.
ನಂತರ ಡಾ.ಶೇಕ್ ಬಾವಾ ಹಾಜಿ ಮಾತನಾಡಿ ಕೆಸಿಎಫ್ ನ ಮುಂದಿನ ಬ್ರಹತ್ ಯೋಜನೆಯಾದ 35ಸಾವಿರ ಚದರ ವಿಸ್ತೀರ್ಣದ ಮೂರು ಮಹಡಿ ಯ ಅಲ್ ಮರ್ಕಝುಲ್ ಇಸ್ಲಾಮೀಯ ಸಂಸ್ಕರಿಕ ಕಟ್ಟಡ ನಿರ್ಮಾಣಗಳಿವೆ.
ಸುನ್ನಿ ಸಂಘಟನೆಗಳ ಮುಖ್ಯ ಕಚೇರಿಗಳು ಸಭಾ ಭವನ ಸೇರಿದಂತೆ ಎಸ್ಸೆಸ್ಸೆಫ್ ಸಂಸ್ಥೆಗೆ 575 ಚದರ ವಿಸ್ತೀರ್ಣದ ಹೊಂದಿದ ಕೊಠಡಿಯಾನ್ನು ಮೀಸಲಿಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯು.ಟಿ ಖಾದರ್ ಎಸ್ಸೆಸ್ಸೆಫ್ ಸುಮಾರು ವರ್ಷಗಳಿಂದ ಸಮಾಜಕ್ಕೆ ಪೂರಕವಾದ ಕೆಲಸಗಳನ್ನು ಮಾಡುತ್ತ ಬಂದಿದೆ.
ಎಸ್ಸೆಸ್ಸೆಫ್ ಸಮಾಜಕ್ಕೆ ಮಾರಕವಾದ ಚಟುವಟಿಕೆಯಲ್ಲಿ ತೊಡಗಿಸಿದನ್ನು ನಾನು ಕಂಡಿಲ್ಲ. ಬೇರೆಬೇರೆ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಇತರ ಸಂಘಟನೆಗೆ ಮಾದರಿಯಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ದಟ್ಟಣೆ ಇರುದರಿಂದ ಅಪಘಾತ ಸಂಭವಿಸಿದಾಗ ಕೆಸಿಎಫ್ ಆಂಬುಲೆನ್ಸ್ ಸಹಕಾರಿಯಾಗಲಿದೆ ಎಂದು ಹೇಳಿದರು.ಎಸ್ಸೆಸ್ಸೆಫ್ ದ ಕ ಜಿಲ್ಲಾ ಅಧ್ಯಕ್ಷ ಇಬ್ರಾಹಿಮ್ ಸಖಾಫಿ ಸೆರ್ಕಳ ಕಾರ್ಯಕ್ರಮ ಉದ್ಘಾಟಿಸಿದರು.
ಕೆ ಸಿ ಎಫ್ ರಿಯಾದ್ ಝೊನ್
ನಝೀರ್ ಉಸ್ತಾದ್ ದುವಾ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಇರ್ಫಾನ್ ಅಬ್ದುಲ್ಲಾ ನುರಾನಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು.
ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಬಶೀರ್ ತಲಪಾಡಿ ಕೆಸಿಎಫ್ ರಿಯಾದ್ ಝೊನ್ ಸಮಿತಿಯ ಯೋಜನೆ ಬಗ್ಗೆ ವಿವರಿಸಿದರು.
ಈ ಸಂದರ್ಭ ಎಸ್ಸೆಸ್ಸೆಫ್ ದ ಕ ಜಿಲ್ಲಾ ವೆಸ್ಟ್ ಝೊನ್ ಅಧ್ಯಕ್ಷ ಮುನೀರ್ ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ದ ಕ ಜಿಲ್ಲೆ ಕೋಶಾಧಿಕಾರಿ ಮುಹಮ್ಮದ್ ಅಲೀ ತುರ್ಕಳಿಕೆ, ಕೆಸಿಎಫ್ ರಿಯಾದ್ ಝೊನ್ ಪಬ್ಲೀಕೇಶನ್ ಕಾರ್ಯದರ್ಶಿ ಹನೀಫ್ ಕಣ್ಣೂರು,
ಕೆಸಿಎಫ್ ರಿಯಾದ್ ಝೊನ್ ಸದಸ್ಯರಾದ ಅಶ್ರಫ್ ಮದನಿ, ಅಶ್ರಫ್ KMS, ಅಮಾನಿ ಉಸ್ತಾದ್, ಎಸ್ಸೆಸ್ಸೆಫ್ ದ ಕ ಜಿಲ್ಲಾ ಪ್ರ ಕಾರ್ಯದರ್ಶಿ ಶರೀಫ್ ನಂದಾವರ, ಎಸ್ಸೆಸ್ಸೆಫ್ ದ ಕ ಜಿಲ್ಲಾ ಕಾರ್ಯದರ್ಶಿ ರಶೀದ್ ಹಾಜಿ ವಗ್ಗ, ಎಸ್ಸೆಸ್ಸೆಫ್ ದ ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿಶರೀಫ್ ಬೇರ್ಕಲ, ಎಸ್ಸೆಸ್ಸೆಫ್ ದ ಕ ಜಿಲ್ಲಾ ಸದಸ್ಯರಾದ ಸಯ್ಯಿದ್ ಖುಬೈಬ್ ತಂಙಳ್, ಇಕ್ಬಾಲ್ ಮಾಚಾರ್, ಹಕೀಂ ಕಳಂಜಿಬೈಲು, ಉಸ್ಮಾನ್ ಕೆ ಸಿ ರೊಡ್ ಸಲಹಾ ಸಮಿತಿ ಸದಸ್ಯ ಕುಂಞಿ ಮೊನು, ಎಸ್ಸೆಸ್ಸೆಫ್ ದ ಕ ಜಿಲ್ಲಾ ವೆಸ್ಟ್ ಝೊನ್ ಪ್ರ ಕಾರ್ಯದರ್ಶಿ ಹೈದರ್ ಕಾಟಿಪಲ್ಲ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಉಸ್ತುವಾರಿಮನ್ಸೂರ್ ಬಜಾಜ್, ಎಸ್ ವೈ ಎಸ್ ಕೆ ಸಿ ರೊಡ್ ಸೆಂಟರ್ ಅಧ್ಯಕ್ಷ UBM ಹಾಜಿ, ಅಲ್ ಮುಬಾರಕ್ ಜುಮಾ ಮಸ್ಜಿದ್ ಅಧ್ಯಕ್ಷ ಫಾರೂಕ್ ಅಬ್ಬಾಸ್ ಉಳ್ಳಾಲ, ಸಲೀಮ್ ಕನ್ಯಾಡಿ, ಎಸ್ ವೈ ಎಸ್ ಕೆ ಸಿ ರೊಡ್ ಸೆಂಟರ್
ಕಾರ್ಯದರ್ಶಿ ಕೆ ಎಂ ಫಾರೂಕ್ ಬಟ್ಟಪಾಡಿ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಮಾಜಿ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ
ಇನ್ನಿತರ ಧಾರ್ಮಿಕ, ಸಾಮಾಜಿಕ, ಉಲೆಮಾ, ಉಮಾರಾ ನಾಯಕರು ಉಪಸ್ಥಿತರಿದ್ದರು.