ದೂರದೂರಿನಿಂದ ಬಂದು ಮಂಗಳೂರಿನಲ್ಲಿ ನೆಲೆಸಿದ್ದ ಕಾರ್ಮಿಕ ಕುಟುಂಬಕ್ಕೆ ಬೆನ್ನುಲುಬಾಗಿ ನಿಂತ ಟೀಮ್ ಮಿಥುನ್ ರೈ..
ಮಂಗಳೂರು: ಕೈಯಲ್ಲಿ ಕಿಲುಬು ಕಾಸಿಲ್ಲದೆ, ಊಟಕ್ಕೂ ಪರದಾಡುತ್ತಿದ್ದ ವಲಸೆ ಕಾರ್ಮಿಕರ ಕುಟುಂಬವೊಂದಕ್ಕೆ ಮಿಥುನ್ ರೈ ಟೀಮ್ ಬೆನ್ನುಲುಬಾಗಿ ನಿಂತಿದೆ.
ಹೌದು.. ಆ ಕುಟುಂಬದ ಆದಾಯಕ್ಕಾಗಿ ಕೈಗಾಡಿಯ ವ್ಯವಸ್ಥೆ ಮಾಡಿ ವ್ಯಾಪಾರಕ್ಕಾಗಿ ತರಕಾರಿ ಅಥವಾ ಹಣ್ಣುಗಳನ್ನು ಸ್ವತಃ ಅವರೇ ಮಾಡಿಕೊಟ್ಟಿದ್ದಾರೆ.
ಪ್ರತೀ ದಿನ ಆ ಮನೆಗೆ ಭೇಟಿ ನೀಡಿ ಅವರೊಂದಿಗೆ ವಿಚಾರ ಮಾಡಿ, ಮಗುವಿನ ಆರೋಗ್ಯವನ್ನು ವಿಚಾರಿಸುತ್ತಿದೆ ಟೀಂ ಮಿಥುನ್ ರೈ.
ಎಸ್… ಮಂಗಳೂರಿನ ನಗರದ ಕಾರ್ ಸ್ಟ್ರೀಟ್ ನ ಬಹುದೊಡ್ಡ ಕಾಂಪ್ಲೆಕ್ಸ್ ಗಳ ಮಧ್ಯೆ ಅದೊಂದು ಕತ್ತಲ ಕೋಣೆಯಂತಿರುವ ಪುಟ್ಟ ಮನೆ, ಗಂಡ ಹೆಂಡತಿ ಎರಡು ಮಕ್ಕಳಿರುವ ಚಂದದ ಸಂಸಾರ,
ದೂರದೂರಿನಿಂದ ಬಂದು ಮಂಗಳೂರು ಮಹಾನಗರದಲ್ಲಿ ಕಟ್ಟಡ ಕೆಲಸಗಳನ್ನು ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದರು.
ಆದರೆ ಕೊರೊನಾ ಮಹಾಮಾರಿಯಿಂದಾಗಿ ಕೆಲಸ ಕಳೆದುಕೊಂಡವರಲ್ಲಿ ಇವರೂ ಒಬ್ಬರು.
ಕೆಲಸವಿಲ್ಲ, ದುಡ್ಡಿಲ್ಲದಿದ್ದರೂ ತಮ್ಮ ಊರಿಗೆ ಸಾಗಲು ಇವರಿಗೆ ಆಸಾಧ್ಯ, ಏಕೆಂದರೆ ಅವರ ಸಣ್ಣ ಮಗುವೊಂದು ಆನಾರೋಗ್ಯದಿಂದ ಬಳಲುತ್ತಿದೆ.
ಆ ಮಗುವಿನ ಆರೋಗ್ಯದ ಆರೈಕೆಗಾಗಿ ಅವರು ಈ ಮಹಾನಗರದಲ್ಲಿ ಕೆಲಸವಿಲ್ಲದೇ ಉಣ್ಣಲು ಅನ್ನವಿಲದೇ ಇದ್ದಾಗ ಅವರ ಪಾಲಿಗೆ ದೇವರು ಬಂದಂತೆ ಬಂದವರು ಪ್ರೀಮಸ್ & ಅಲ್ಫಾಝ್ ನೇತೃತ್ವದ ಟೀಂ ಮಿಥುನ್ ರೈ.
ಇವರ ಮೂಲಕ ವಲಸೆ ಕಾರ್ಮಿಕರಿಗೆ ಊಟ ನೀಡುವ ವೇಳೆ ಈ ಕುಟುಂಬಕ್ಕೂ ಊಟ ನೀಡುತಿದ್ದರು.
ಆದರೆ ಈಗ ಊಟ ಮಾತ್ರವಲ್ಲ ಇಡೀ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದೆ ಪ್ರೀಮಸ್ ಮತ್ತು ಅಲ್ಫಾಝ್ ನೇತೃತ್ವದ ಟೀಂ ಮಿಥುನ್ ರೈ.