Connect with us

DAKSHINA KANNADA

ಕುಚ್ಚಲಕ್ಕಿ ಕೊಡೋಕೆ ಆಗಿಲ್ಲ-ಕೋಮುವಾದ ಮಾತ್ರ ಇವರ ಚುನಾವಣಾ ಅಜೆಂಡಾ: ಯು.ಟಿ ಖಾದರ್

Published

on

ಮಂಗಳೂರು: ದೊಡ್ಡ ರೀತಿಯಲ್ಲಿ ಬೇಡ. ಕನಿಷ್ಟ ಪಕ್ಷ ಕುಚ್ಚಲಕ್ಕಿ ಭಾಗ್ಯ ಕೂಡಾ ದ.ಕ ಜಿಲ್ಲೆಗೆ ತರಲು ಇವರಿಗೆ ಸಾಧ್ಯವಾಗಲಿಲ್ಲ. ಇವರು ಬೆಂಗಳೂರಿಗೆ ಹೋಗೋದು ಸಿಎಂ ಜೊತೆ ಚರ್ಚಿಸೋದು. ಮಾಧ್ಯಮಗಳಲ್ಲಿ ಹಾಕಿಸೋದು. ಅಲ್ಲಿಗೆ ಜನರು ಕುಚ್ಚಲಕ್ಕಿ ತಿಂದು ಖುಷಿ ಪಡ್ತಿದ್ದಾರೆ ಅಲ್ವಾ ಎಂದು ವಿಪಕ್ಷ ಉಪನಾಯಕ ಯು.ಟಿ ಖಾದರ್ ವ್ಯಂಗ್ಯವಾಡಿದರು.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ‘ಇವರಿಗೆ ಹೇಳಿದನ್ನು ಮಾಡುವ ಸಾಮರ್ಥ್ಯವಿಲ್ಲ. ಕೋಮುವಾದ ಮಾತ್ರ ಇವರ ಚುನಾವಣಾ ಅಜೆಂಡಾ’ ಎಂದು ಹೇಳಿದರು.

ರಾಜ್ಯ ಸರಕಾರ ಆರ್ಥಿಕವಾಗಿ ದಾರಿದ್ರ್ಯದ ಪರಿಸ್ಥಿತಿಗೆ ಬಂದು ನಿಂತಿದೆ. ಈ ಸಲದ ಅಬ್ಬಕ್ಕ ಉತ್ಸವಕ್ಕೆ ಸರಕಾರದಿಂದ ಬರೀ 10 ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಇದು ನಮ್ಮ ಉತ್ಸವಕ್ಕೆ, ವೀರರಾಣಿ ಅಬ್ಬಕ್ಕಳಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ಇವರು ದೂರಿದ್ದಾರೆ.


ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಅಬ್ಬಕ್ಕ ಉತ್ಸವಕ್ಕೆ 2008ರಿಂದ ಪ್ರತೀ ವರ್ಷ 5 ಲಕ್ಷ ರೂಪಾಯಿಯಂತೆ ಜಾಸ್ತಿ ಮಾಡಿ, ಸಿದ್ಧರಾಮಯ್ಯ ಸರಕಾರ ಇರುವಾಗ 50 ಲಕ್ಷ ರೂಪಾಯಿ ಅನುದಾನ ನೀಡಲಾಗಿತ್ತು.

ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯವರೇ ಕನ್ನಡ ಮತ್ತು ಸಂಸ್ಕೃತಿ ಸಚಿವರು. ಇದು ಅದ್ದೂರಿಯಾಗಿ ನಡೆಯಬೇಕಾಗಿತ್ತು. ಅನುದಾನ ಬರಬೇಕಾಗಿತ್ತು. ಪ್ರತಿಯೊಂದು ವಿಚಾರದಲ್ಲೂ ಆಡಳಿತ ವೈಫಲ್ಯತೆ ಕಂಡಿದೆ.

ಇನ್ನೂ ಕೂಡಾ ಸರಕಾರ ಬಿಪಿಎಲ್‌ ಕೊಡುವ ಪರಿಸ್ಥಿತಿಯಲ್ಲಿ ಇಲ್ಲ. ಏನಾದರೂ ದುರಂತ ನಡೆದರೆ ತುರ್ತು ವಾಹನ 108 ಮಾಡಿ 800 ಅಂಬುಲೆನ್ಸ್ ಮಾಡಿದರೆ ಅದರ ನಿರ್ವಹಣೆ ಇಲ್ಲ, ಹೊಸ ಆಂಬುಲೆನ್ಸ್ ಖರೀದಿ ಮಾಡಿಲ್ಲ, ಡ್ರೈವರ್ ನೇಮಕಾತಿಯೂ ಮಾಡಿಲ್ಲ.

ಕಾಂಗ್ರೆಸ್ ಸರಕಾರ ಇದ್ದಾಗ ಇಂತಹ ಯಾವುದೇ ಸಮಸ್ಯೆ ಇರಲಿಲ್ಲ. 2o ನಿಮಿಷ ಬಿಟ್ಟು 25 ನಿಮಿಷ ಆಗುವಾಗ ನಮ್ಮ ಎಂಕ್ವೈರಿ ಆಗುತ್ತಿತ್ತು. ಪ್ರಶ್ನೆ ಮಾಡ್ಲಿಕ್ಕೆ ಕೂಡಾ ಕಾಲ್ ಮಾಡುತ್ತಿದ್ದರು. ಮೂರು ಕೋವಿಡ್ ಬಂತು. ಮೂರರಲ್ಲಿ ಒಂದು ಕೋವಿಡ್‌ನಲ್ಲಾದರೂ ಇವರು ಆ್ಯಂಬುಲೆನ್ಸ್ ಖರೀದಿ ಮಾಡಿದ್ದಾರಾ? ಎಂದರು.

ಹೊಸ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಿ ಸಿಬ್ಬಂದಿಗೆ ವೇತನ ಕೊಡಲು ನಿಮ್ಮಲ್ಲಿ ದುಡ್ಡಿಲ್ಲದಿದ್ದರೆ ಅನಾವಶ್ಯಕ ದುಡ್ಡು ಯಾಕೆ ಖರ್ಚು ಮಾಡುತ್ತೀರಿ ಎಂದು ಪ್ರಶ್ನಿಸಿದರು.

ವಿದ್ಯಾರ್ಥಿಗಳಿಗೆ ಒಂದೇ ಒಂದು ಕಾಲೇಜು ಓಪನ್ ಮಾಡಿಲ್ಲ. ಗ್ಯಾಸ್ ರೇಟ್ ಹೆಚ್ಚಾಗ್ತಾ ಇದೆ. ಅದನ್ನು ಕೇಳುವವರು ಕೂಡಾ ಯಾರೂ ಇಲ್ಲ. ಜನವಿರೋಧಿ, ಮಾನವೀಯತೆ ಇಲ್ಲದ ಸರ್ಕಾರದ ಬಗ್ಗೆ ದೊಡ್ಡ ಮಟ್ಟದ ಜನಜಾಗೃತಿ ಮಾಡುವ ನಿಟ್ಟಿನಲ್ಲಿ ನಾಳೆ ಸಿದ್ಧರಾಮಯ್ಯ ಅವರು ಮಂಗಳೂರಿಗೆ ಆಗಮಿಸಿದ್ದಾರೆ. ಇಂದು ಯುವಕರು ನಿರುದ್ಯೋಗಿಗಳಾಗಿದ್ದಾರೆ.

ಅವರ ಡಬಲ್ ಇಂಜಿನ್ ಇದೆ ಅಲ್ವಾ ಅದು ಕಮ್ಯನಲ್ ಫ್ಯೂಲ್. ಅವರ ಸ್ಯಾಲೆನ್ಸರ್‌ನಿಂದ ಬರುವ ಹೊಗೆ ಅದು ವಿಷ. ವಿಷ ಯಾರನ್ನೂ ಬದುಕಿಸುವುದಿಲ್ಲ. ಅದು ಸಾಯಿಸುತ್ತದೆ. ಅವರ ಇಂಜಿನ್ ಮತ್ತು ಅವರ ಬಾಡಿ ಇದೆಯಲ್ವಾ ಅದು ಕಟ್ಟಿದೆ ಜನರ ಕಣ್ಣೀರು ಮತ್ತು ರಕ್ತದಲ್ಲಿ. ಅದಕ್ಕೆ ಇನ್ನು ಜನರು ಇವರ ಇಂಜಿನ್‌ನ್ನು ಸ್ಕ್ರ್ಯಾಚ್ ಮಾಡಿ ಬಿಸಾಡ್ತಾರೆ. ಅದಕ್ಕೆ ಕಾಲ ಬಂದಿದೆ.

ಜಾನುವಾರುಗಳ ಚರ್ಮಗಂಟು ರೋಗ ತಡೆಗೆ ಏನು ಕ್ರಮ ಕೈಗೊಂಡಿದ್ದೀರಿ..? ಮಾಧ್ಯಮಗಳಲ್ಲಿ ನಾನೇ ನೋಡುತ್ತಿದ್ದಂತೆ 21000 ಜಾನುವಾರುಗಳು ಇವತ್ತು ಚರ್ಮಗಂಟು ರೋಗದಲ್ಲಿ ಸಾವನ್ನಪ್ಪಿದೆ. ಅದಕ್ಕೆ ಯಾವುದೇ ಲಸಿಕೆ ಔಷಧಿಗಳನ್ನು ಇವರು ಇನ್ನೂ ಪತ್ತೆಹಚ್ಚಿಲ್ಲ. ಈಗ ನಂದಿನಿಯನ್ನು ಅಮುಲ್ ಜೊತೆ ಸೇರಿಸುವ ಮುನ್ಸೂಚನೆ ನೀಡಿದ್ದೀರಿ ಎಂದರು.

ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ನೀವು ರಾಜಕೀಯ ಮಾಡುತ್ತಿದ್ದೀರಿ. ಇಂಜಿನಿಯರ್ ಕಲಿತು ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರುವಂತಾಗಿದೆ.

ಯುವಕರಿಗೆ ಉದ್ಯೋಗವಿಲ್ಲ ಎಂದು ಖೇದ ವ್ಯಕ್ತಪಡಿಸಿದರು. ಹರೇಕಳ ಕಡವಿನ ಬಳಿ ಮಾಜಿ ಮುಖ್ಯಮಂತ್ರಿ ನಾಳೆ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಲಿದ್ದು, ಹಿರಿಯ ನಾಯಕರು ಭಾಗವಹಿಸಲಿದ್ದಾರೆ ಎಂದರು.

Click to comment

Leave a Reply

Your email address will not be published. Required fields are marked *

BANTWAL

ಮತ ಚಲಾಯಿಸಿದ ನವ ದಂಪತಿ…! ಶುಭ ಹಾರೈಸಿದ ಸ್ನೇಹಿತರು..!

Published

on

ಮಂಗಳೂರು : ಇಂದು ಹೊಸ ಬಾಳಿಗೆ ಕಾಲಿಡುತ್ತಿದ್ದ ಆ ಜೋಡಿಗಳು ಹೊಸ ಬಾಳಿನ ಚಿಂತನೆಯ ಜೊತೆಗೆ ದೇಶದ ಚಿಂತನೆಯನ್ನೂ ಮಾಡಿದ್ದಾರೆ. ಮದುವೆಯ ಸಮಾರಂಭದಲ್ಲಿ ಹಸಮಣೆ ಏರಿ ಪತಿ ಪತ್ನಿಯರಾಗಿ ಒಂದಾದ ಜೋಡಿ ಎಲ್ಲಾ ಸಂಪ್ರದಾಯಗಳು ಪೂರ್ಣಗೊಂಡ ತಕ್ಷಣ ಮದುವೆ ಮನೆಯಿಂದ ಹೊರ ನಡೆದಿದ್ದಾರೆ. ಮದುವೆ ಮನೆಯಿಂದ ಬಂದವರೇ ನೇರವಾಗಿ ಮತಗಟ್ಟೆಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಹೌದು ಇದು ನಡೆದಿರುವುದು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಬೂತ್ ಸಂಖ್ಯೆ 16 ರಲ್ಲಿ . ಇವರ ಮದುವೆ ನಿಗದಿಯಾದ ದಿನಂದಂತೆ ಪ್ರಜಾಪ್ರಭುತ್ವದ ಹಬ್ಬವಾಗಿರೋ ಚುನಾವಣೆ ದಿನಾಂಕ ಕೂಡಾ ಘೋಷಣೆ ಆಗಿದೆ. ಒಂದು ಕಡೆ ಹಸೆಮಣೆ ಏರಿ ತಮ್ಮ ಸ್ವಂತ ಭವಿಷ್ಯ ಕಟ್ಟಿಕೊಳ್ಳುವ ಜೊತೆಗೆ ದೇಶದ ಭವಿಷ್ಯವನ್ನೂ ಕಟ್ಟಲು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಮಾದರಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಮಲ್ಲೆರ್ಮಳಕೋಡಿ ಜಯರಾಮ ಕುಲಾಲ್ ಎಂಬ ವರ ವದುವಿವೊಂದಿಗೆ ಬಂದು ತನ್ನ ಮತ ಚಲಾಯಿಸಿದ್ದಾರೆ. ಇವರಿಬ್ಬರ ಈ ಕಾಳಜಿಗೆ ಜನರು ಹಾಗೂ ಮತಗಟ್ಟೆ ಅಧಿಕಾರಿಗಳು ಶುಭ ಹಾರೈಸಿದ್ದಾರೆ. ಇದೇ ವೇಳೆ ಜಯರಾಮ್ ಕುಲಾಲ್ ಅವರ ಸ್ನೇಹಿತರು ಹಿತೈಷಿಗಳು ಕೂಡಾ ಶುಭ ಹಾರೈಸಿದ್ದಾರೆ.

Continue Reading

DAKSHINA KANNADA

ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಎಫ್ ಐ ಆರ್ ದಾಖಲಿಸಿದ ಚುನಾವಣಾ ಆಯೋಗ

Published

on

ಪುತ್ತೂರು : ಮತಗಟ್ಟೆಯೊಳಗೆ ಮೊಬೈಲ್ ಗೆ ನಿರ್ಬಂಧ ವಿಧಿಸಿದರೂ ಕಾನೂನು ಉಲ್ಲಂಘನೆಯಾಗಿರುವ ಘಟನೆ ಪುತ್ತೂರಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಗ್ರೂಪ್ ಗೆ ಶೇರ್ ಮಾಡಿದ ಯುವಕನ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.

ಪುತ್ತೂರಿನ ಕೋಟಿ-ಚೆನ್ನಯ ಕಂಬಳ ಗ್ರೂಪ್ ಗೆ ಮತದಾನ ಮಾಡುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ಶೇರ್ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಇದನ್ನೂ ಓದಿ : ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾ*ವು

ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ತೆಗೆದಿದ್ದಾನೆ.  ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಎಫ್ ಐ ಆರ್ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ / ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

Continue Reading

DAKSHINA KANNADA

ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು

Published

on

ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್‌ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.


ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್‌ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.

Continue Reading

LATEST NEWS

Trending