ತುರ್ತು ಪರಿಸ್ಥಿತಿಯಲ್ಲಿ ನೆರವಾಗಬೇಕಾಗಿರುವ ಪೊಲೀಸ್ ಅಧಿಕಾರಿಗಳ ಜೀಪ್ ಗತಿ ಕೇಳೋರಿಲ್ಲ…
ಬಳ್ಳಾರಿ: ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪೊಲೀಸ್ ಠಾಣೆಯ, ಪಿ.ಎಸ್.ಐ. ಅವರ ಜೀಪ್ ತಳ್ಳು ಗಾಡಿ ಐಸ್ಸಾ… ಎನ್ನುವ ದುಸ್ಥಿತಿಯಲ್ಲಿದೆ.
ತುರ್ತು ಪರಿಸ್ಥಿತಿಯಲ್ಲಿ ನೆರವಾಗಬೇಕಾಗಿರುವ ಪೊಲೀಸ್ ಅಧಿಕಾರಿಗಳ ಜೀಪ್ ಗಳ ಗತಿ ಹೀಗಾದರೆ ಹೇಗೆ..!? ಎಂದು ನಾಗರೀಕ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಠಾಣೆಗೆ ತೆರಳಿರುವ ನಾಗರೀಕರು, ಸಾರ್ವಜನಿಕರು, ಗಣ್ಯರು, ಪೊಲೀಸ್ ಸಿಬ್ಬಂದಿಯವರು ವಾಹನದ ಹಿಂದಿನಿಂದ ತಳ್ಳಬೇಕಿದೆ.
ಠಾಣೆಗೆ ಬಂದಿರುವವರೇ ಇವರ ಜೀಪ್ ಅನ್ನು ತಳ್ಳೋ ಮೂಲಕ ಜೀಪ್ ಆರಂಭಗೊಳ್ಳಲು ಸಹಕರಿಸಬೇಕಿದೆ.
ಪ್ರತಿ ಬಾರಿಯೂ ಜೀಪ್ ಆರಂಭಿಸಲು ಚಾಲಕ ಶ್ರೀಶೈಲಂ,ಆ ಶ್ರೀಶೈಲ ಮಲ್ಲಿಕಾರ್ಜುನನ್ನೇ ನೆನೆಯಬೇಕಿದೆ.
ಪಿ.ಎಸ್.ಐ, ಸಿಪಿಐ ಅವರ ಜೀಪ್ ಗಳು ಹೇಳಿಕೊಳ್ಳುವಷ್ಟು ಪ್ರಭಲವಾಗಿಲ್ಲ, ತೀರಾ ಹಳೆ ತರದ್ದಾಗಿವೆ ಎಂಬ ಅಭಿಪ್ರಾಯ ಅನುಭವಿ ವಾಹನ ಮೆಕಾನಿಕ್ಸ್ ಗಳದಾಗಿದೆ.
ಕೂಡ್ಲಿಗಿ ಪಿ.ಎಸ್.ಐ ಮತ್ತು ಸಿಪಿಐ ಅವರ ಕರ್ತವ್ಯ ವ್ಯಾಪ್ತಿಯಲ್ಲಿ ಅಸಂಖ್ಯಾತ ಗ್ರಾಮಗಳನ್ನು ಹೊಂದಿದ್ದು, ಕೂಡ್ಲಿಗಿ ಪೊಲೀಸರು ತಾಲೂಕು ಪ್ರಮುಖ ಕೇಂದ್ರದ ಠಾಣೆಯಾಗಿದೆ, ಅತೀ ಹೆಚ್ಚು ವಿಸ್ತೀರ್ಣದ ಬಹು ಗ್ರಾಮಗಳ ಗಸ್ತು ಕಾರ್ಯ ವ್ಯಾಪ್ತಿಯನ್ನು ಹೊಂದಿದ್ದಾರೆ.
ಠಾಣಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 50 ಹಾದು ಹೋಗಿದೆ. ಕಾರಣ ಕೂಡ್ಲಿಗಿ ಪೊಲೀಸ್ ಠಾಣೆಯ ಪಿಎಸ್ಐ ಮತ್ತು ಸಿಪಿಐರವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳು ಶೀಘ್ರವೇ ನೂತನವಾದ, ಅತ್ಯಂತ ಪ್ರಭಲವಾದ ವಾಹನಗಳನ್ನು ನೀಡಬೇಕಿದೆ.
ಈ ಮೂಲಕ ಪೊಲೀಸ್ ಜೀಪ್ ಗಳ ಚಾಲಕರು, ಸಂಬಂಧಿಸಿದ ಅಧಿಕಾರಿಗಳು ಮುಜುಗರಕ್ಕೊಳಗಾಗದಂತೆ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.
ಈ ನಿಟ್ಟಿನಲ್ಲಿ ಶೀಘ್ರವಾಗಿ ವಾಹನಗಳ ವ್ಯವಸ್ಥೆಯನ್ನು ಮಾಡಬೇಕೆಂದು ನಾಗರೀಕರ ಹಿತಾಸಕ್ತಿಯ ಮೇರೆಗೆ, ಪಟ್ಟಣದ ಹಿರಿಯ ನಾಗರೀಕರು,
ವಿವಿದ ಸಂಘಟನೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಈ ಮೂಲಕ ಮನವಿ ಮಾಡಿದ್ದಾರೆ.