Connect with us

DAKSHINA KANNADA

ಸಂತ್ರಸ್ತೆ ಖತೀಜ ಜಾಸ್ಮಿನ್ ಗೆ ವೈದ್ಯರುಗಳಿಂದ ಅನ್ಯಾಯದ ಆರೋಪ : ಹೋರಾಟ ಮುಂದುವರಿಯಲಿದೆಯೆಂದ ಮುಸ್ಲಿಮ್ ಒಕ್ಕೂಟ

Published

on

ಮಂಗಳೂರು : ಸಂತ್ರಸ್ತೆ ಖತೀಜ ಜಾಸ್ಮಿನ್ ಗೆ ವೈದ್ಯರುಗಳಿಂದ ಆದ ಅನ್ಯಾಯದ ವಿರುದ್ದ ಹೋರಾಟ ಮುಂದುವರಿಯಲಿದೆ ಎಂದು ದಕ್ಷಿಣ ಕನ್ನಡ  ಮುಸ್ಲಿಮ್ ಒಕ್ಕೂಟ  ಹೇಳಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಒಕ್ಕೂಟದ ಅಧ್ಯಕ್ಷರಾದ ಕೆ ಅಶ್ರಫ್.  ಈ ಕ್ಲಿಷ್ಟಕರ ಸಂದರ್ಭದಲ್ಲಿ ವೈದ್ಯಕೀಯ ಕನಿಷ್ಟ ನಿಷ್ಟೆಯನ್ನು ಪಾಲಿಸಲು ವಿಫಲವಾದ ವೈದ್ಯಕೀಯ ಸಮುದಾಯ ಸಂತ್ರಸ್ತೆ ಗರ್ಭಿಣಿ ಖತೀಜ ಜಾಸ್ಮಿನ್ ಳನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ತಿರುಗಾಡಿಸಿದ ರೀತಿ ಅಮಾನವೀಯ ಕ್ರತ್ಯವಾಗಿದೆ.

ಮಂಗಳೂರಿನ ಕೆಲವು ಆಸ್ಪತೆಗಳು ಮತ್ತು ವೈದ್ಯರು ಮೆಡಿಕಲ್ ಮಾಫಿಯಾ ಸ್ರಷ್ಟಿ ಮಾಡಿರುವುದು ದ.ಕ. ಜಿಲ್ಲೆಗೆ ಅವಮಾನ.

ವೈದ್ಯಕೀಯ ನಗರ ಎಂದೇ ಕರೆಯಲ್ಪಡುವ ಮಂಗಳೂರು ಮುಂದಿನ ದಿನಗಳಲ್ಲಿ ವೈದ್ಯೋ – ಡಕಾಯಿತಿ ನಗರ ಆಗದಿರಲಿ. ಕೆಲವು ಕುಖ್ಯಾತಿ ವೈದ್ಯರ ನಿರ್ಲಕ್ಷ್ಯ ದಿಂದಾಗಿ ಹಲವು ನಿಷ್ಟ್ಟಾವಂತ ವೈದ್ಯರ ಸೇವೆಗಳಿಗೆ ಕೂಡ ಕೆಟ್ಟ ಹೆಸರು ಬರುವುವಂತಾಗಿರುವುದೂ ಖೇದಕರ.

ಖತೀಜ ಜಾಸ್ಮಿನ್ ಎಂಬ ತುಂಬು ಗರ್ಭಿಣಿಯನ್ನು ಅವಳು ಕೋರೋಣ ಪಾಸಿಟಿವ್ ಎಂಬ ಕಾರಣವೊಡ್ಡಿ ಡಾಕ್ಟರ್ ಪ್ರಿಯ ಬಲ್ಲಾಳ್ ರಿಂದ ಹಿಡಿದು ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರು ನಿರ್ಲಕ್ಷಿಸಿ ರುವುದು ಖಂಡನೀಯ, ಮುಂದುವರಿದು ಡಾ.ಪ್ರಿಯ ಬಲ್ಲಾಳ್ ರ ಸಹ ವೈದ್ಯರುಗಳು ಕೂಡ ರೋಗಿಯಲ್ಲಿ ಮರಣ ಭಯ ಹುಟ್ಟಿಸಿ, ರೋಗಿ ಮತ್ತು ಅವಳ ಕುಟುಂಬದವರಿಗೆ ಪ್ರಾಣ ಭಯ ಹುಟ್ಟಿಸಿ, ಬೆದರಿಸಿರುತ್ತಾರೆ, ರೋಗಿ ಸಂಪರ್ಕಿಸಿದ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ನಿರಾಕರಿಸಿ ಅಲ್ಲಿ ಇಲ್ಲಿ ಅಲೆದಾಡಿಸಿದ್ದಾರೆ.

ಸಂತ್ರಸ್ತೆಯ ಕುಟುಂಬ ವೈದ್ಯರಾದ ಡಾ. ಪ್ರಿಯಾ ಬಲ್ಲಾಳ್ ಈ ಸಂತ್ರಸ್ತೆ ಯನ್ನು ಆ ಪರಿ ನಿರ್ಲಕ್ಷಿಸಲು ಪ್ರಯತ್ನಿಸಿದ ಕಾರಣವೇನು?, ಈ ಬಗ್ಗೆ ಜಿಲ್ಲಾಡಳಿತ ಮತ್ತು ಸರಕಾರ ತನಿಖೆ ನಡೆಸಬೇಕು. ವೈದ್ಯರು ನಡೆಸಿದ ಈ ಗಂಭೀರ ಅಪರಾಧ ಕೃತ್ಯದ ವಿರುದ್ಧ ಮುಸ್ಲಿಮ್ ಒಕ್ಕೂಟ ಸಂತ್ರಸ್ತರ ಪರವಾಗಿ ಹೋರಾಟ ಮುಂದುವರಿಸಲಿದೆ.

ಈಗಾಗಲೇ ಸಂತ್ರಸ್ತೆ ಮತ್ತು ಸಂಘಟನೆಗಳು ಆರಂಭಿಸಿದ ಕಾನೂನಾತ್ಮಕ ಹೋರಾಟಕ್ಕೆ ಬೆಂಬಲ ನೀಡಲಿದೆ. ಸರಕಾರ, ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸು ಇಲಾಖೆ ಈ ಅನ್ಯಾಯದ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲಿ ಆಸ್ಪತ್ರೆ ಮತ್ತು ವೈದ್ಯರ ಮನೆ, ಕ್ಲಿನಿಕ್ ಗಳ ಮುಂದೆ ಉಗ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದು ಅಶ್ರಫ್ ಅವರು ಹೇಳಿಕೆ ನೀಡಿದ್ದಾರೆ.

ಏನು ಈ ವಿಷಯ..?

ಮೇ 20 ರಂದು ಹೆರಿಗೆಗಾಗಿ ಸಂತ್ರಸ್ತೆ ಖತೀಜ ಜಾಸ್ಮಿನ್ ಮಂಗಳೂರಿನ ಅನೇಕ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ.ಈ ಕುರಿತು ಸಂತ್ರಸ್ತೆ ಖತೀಜ ಜಾಸ್ಮಿನ್ ಮಂಗಳೂರು ನಗರದ ಎಸ್‌ಡಿಪಿಐ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ವೈದ್ಯೆ ಡಾ.ಪ್ರಿಯಾ ಬಲ್ಲಾಳ್, ಡಾ.ಮುರಳೀಧರ್, ಡಾ.ಜಯಪ್ರಕಾಶ್ ವಿರುದ್ಧ ಆರೋಪ ಮಾಡಿದ್ದರು.

ಡಾ.ಪ್ರಿಯಾ ಬಲ್ಲಾಳ್ ಎಂಬುವವರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿರುವ ಸಂತ್ರಸ್ತೆ, ಸುಮಾರು ಒಂಭತ್ತು ಆಸ್ಪತ್ರೆಗಳಿಗೆ ಅಲೆದಾಡಿದ್ದೇನೆ. ಮೇ 20ರ ಮಧ್ಯಾಹ್ನದಿಂದ ರಾತ್ರಿಯವರೆಗೂ ಅಲೆದಾಡಿದ್ದು, ಮೇ 21ರ ಬೆಳಗಿನ ಜಾವ ಸಿಸೇರಿಯನ್ ಮೂಲಕ ಲೇಡಿಗೋಶನ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.

ಹೀಗಾಗಿ ವೈದ್ಯರ ವಿರುದ್ಧ ಕಾನೂನು ಹೋರಾಟಕ್ಕೆ ಸಂತ್ರಸ್ತೆ ಕುಟುಂಬ ನಿರ್ಧಾರ ಮಾಡಿದ್ದು, ಕೇಂದ್ರ, ರಾಜ್ಯ ಆರೋಗ್ಯ ಸಚಿವರಿಗೂ ಈ‌ ಕುರಿತು ಪತ್ರ ಬರೆದಿದ್ದು ಈ ಪ್ರಕರಣ ಇದೀಗ ತೀವ್ರ ಸ್ವರೂಪ ಪಡಯುತ್ತಿದೆ.

ವೈದ್ಯರು ಏನು ಹೇಳ್ತಾರೆ..?

ಘಟನೆಯ ಕುರಿತು ಇದೀಗ ಅಸೋಸಿಯೇಶನ್‌ ಆಫ್‌ ಮೆಡಿಕಲ್‌ ಕನ್ಸಲ್ಟೆಂಟ್‌ ನ ಸದಸ್ಯರು ಸುದ್ದಿಗೋಷ್ಠಿ ನಡೆಸಿ ದೂರುದಾರೆ ಮುಳಿಹಿತ್ಲು ನಿವಾಸಿ ಖತೀಜಾ ಜಾಸ್ಮಿನ್‌ ಮಾಡಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ತಮ್ಮಿಂದ ಯಾವುದೇ ಲೋಪಗಳಾಗಿಲ್ಲ ಎಂದಿದ್ದಾರೆ. ಸುದ್ದಿಗಾರರಿಗೆ ಮಾಹಿತಿ ನೀಡಿದ ಅಧ್ಯಕ್ಷ ಡಾ. ಕೆ. ಆರ್‌ ಕಾಮತ್‌, ಕೆಲವು ದಿನಗಳಿಂದ ಮಂಗಳೂರಿನ ವಿವಿಧ ಆಸ್ಪತ್ರೆಗಳ ಬಗ್ಗೆ ಮಾಡಲಾಗುತ್ತಿರುವ ಆರೋಪಗಳೆಲ್ಲರೂ ಸತ್ಯಕ್ಕೆ ದೂರವಾದ ವಿಚಾರಗಳಾಗಿವೆ.

ಪ್ರಸ್ತುತ ಕೊರೊನಾದ ಕಾಲ ಘಟ್ಟದಲ್ಲಿ ವೈದ್ಯರು ತಮ್ಮ ಕುಟುಂಬಿಕರಿಂದ ದೂರವಿದ್ದು, ತಮ್ಮ ರೋಗಿಗಳನ್ನು ಉಪಚರಿಸುವಲ್ಲಿ ನಿರತರಾಗಿದ್ದರೆ, ಕೆಲವರು ವೈದ್ಯರ ವಿರುದ್ಧವೇ ಆರೋಪಗಳನ್ನು ಮಾಡುತ್ತಿರುವುದು ಮನಸ್ಸಿಗೆ ನೋವು ತಂದಿದೆ ಎಂದರು.

ಮುಖ್ಯವಾಗಿ ಆಸ್ಪತ್ರೆ ಬೆಡ್‌ಗಳು, ಆಮ್ಲಜನಕದ ಪೂರೈಕೆ, ವೆಂಟಿಲೇಟರ್‌, ಐಸಿಯು, ಬೆಡ್‌ ಅಥವಾ ಮತ್ತಿತರ ಅಗತ್ಯ ಔಷಧಿಗಳು ಲಭ್ಯವಿಲ್ಲದೇ ಇದ್ದರೆ ವೈದ್ಯರನ್ನು ಗುರಿ ಮಾಡುವುದು ನ್ಯಾಯವೇ ಎಂದು ಪ್ರಶ್ನಿಸಿದರು.

ಇನ್ನು ಜಾಸ್ಮಿನ್‌ ಅವರು ಆರೋಪ ಎಸಗಿರುವ ಡಾ ಪ್ರಿಯಾ ಬಲ್ಲಾಳ್‌, ಡಾ ಜಯಪ್ರಕಾಶ್  ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದು, ಮಹಿಳೆ ಹೇಳಿಕೆಗೆ ಸ್ಪಷ್ಟನೆ ನೀಡಿದರು.

ತಾನು ಹಣ ಮಾಡಲು ವೈದ್ಯಕೀಯ ವೃತ್ತಿಗೆ ಬಂದಿಲ್ಲ. ಸಮಾಜ ಸೇವೆ ಮಾಡಲು ಬಂದ ತನ್ನನ್ನು ಕಾಲರ್ ಪಟ್ಟಿ ಹಿಡಿದು ಗೂಂಡಾಗಿರಿ ಮಾಡುವ ಸಮಾಜವನ್ನು ಕಂಡು ನೊಂದಿದ್ದೇನೆ.

ಕೆಲಸವೇ ಬಿಟ್ಟು ಹೋಗಿ ಮತ್ತೆ ಕೃಷಿ ಕೆಲಸದಲ್ಲಿ ನಾನು ತೊಡಗಿಸಿಕೊಳ್ಳುತ್ತೇನೆ ಎಂದು ಜಯಪ್ರಕಾಶ್‌ ನೊಂದು ನುಡಿದರು. ಸುದ್ದಿಗೋಷ್ಠಿಯಲ್ಲಿ ಡಾ ಸತೀಶ್ ಭಟ್, ಡಾ ಲಕ್ಷ್ಮಣ್‌ ಪ್ರಭು ಜಿ ಜಿ, ಕೆ ಆರ್ ಕಾಮತ್‌, ಡಾ ಯೂಸುಫ್‌ ಕುಂಬ್ಳೆ, ಡಾ ಮುರಳೀಧರ್‌ ಮೊದಲಾದವರಿದ್ದರು.

Click to comment

Leave a Reply

Your email address will not be published. Required fields are marked *

DAKSHINA KANNADA

ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಎಫ್ ಐ ಆರ್ ದಾಖಲಿಸಿದ ಚುನಾವಣಾ ಆಯೋಗ

Published

on

ಪುತ್ತೂರು : ಮತಗಟ್ಟೆಯೊಳಗೆ ಮೊಬೈಲ್ ಗೆ ನಿರ್ಬಂಧ ವಿಧಿಸಿದರೂ ಕಾನೂನು ಉಲ್ಲಂಘನೆಯಾಗಿರುವ ಘಟನೆ ಪುತ್ತೂರಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಗ್ರೂಪ್ ಗೆ ಶೇರ್ ಮಾಡಿದ ಯುವಕನ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.

ಪುತ್ತೂರಿನ ಕೋಟಿ-ಚೆನ್ನಯ ಕಂಬಳ ಗ್ರೂಪ್ ಗೆ ಮತದಾನ ಮಾಡುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ಶೇರ್ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಇದನ್ನೂ ಓದಿ : ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾ*ವು

ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ತೆಗೆದಿದ್ದಾನೆ.  ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಎಫ್ ಐ ಆರ್ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ / ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

Continue Reading

DAKSHINA KANNADA

ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು

Published

on

ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್‌ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.


ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್‌ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.

Continue Reading

DAKSHINA KANNADA

ಮಂಗಳೂರು: 30.98% ಮತದಾರರಿಂದ ಮತ ಚಲಾವಣೆ

Published

on

ಮಂಗಳೂರು: 17-ದ.ಕ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ 30.98 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ.

ಸುಳ್ಯದಲ್ಲಿ ಅತಿ ಹೆಚ್ಚು ಮತ ಚಲಾವಣೆಯಾಗಿದ್ದು, 16.46 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ. ಮೂಡುಬಿದಿರೆ ಕ್ಷೇತ್ರದಲ್ಲಿ ಅತಿ ಕನಿಷ್ಠ ಮತ ಚಲಾವಣೆಯಾಗಿದ್ದು, 12.2 ಪ್ರತಿಶತ ಮತದಾರರು ಮತ ಚಲಾಯಿಸಿದ್ದಾರೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ಬೇಗೆಗೆ ಕಾರ್ ಸ್ಟ್ರೀಟ್ ಸರ್ಕಾರಿ ಬಾಲಕಿಯರ ಎಪಿಯು ಕಾಲೇಜಿನಲ್ಲಿ ಮತದಾರರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಛತ್ರಿ ಹಿಡಿದು ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡುಬಂತು.

Continue Reading

LATEST NEWS

Trending