LATEST NEWS
ಎಮ್ಮೆಕೆರೆಯ ಕೋಳಿ ಕಲದ ಕಾದಾಟದಲ್ಲಿ ಕಕ್ಕೆ ರಾಹುಲ್ ಅಂತ್ಯ..!
ಮಂಗಳೂರು: ಅವ್ನಿಗೆ ಕೋಳಿ ಕಟ್ಟ ಅಂದ್ರೆ ಹುಚ್ಚು. ಎಮ್ಮೆಕೆರೆಯಲ್ಲಿ ನಡೆಯುವ ಕೋಳಿ ಕಟ್ಟಕ್ಕೆ ಆತ ಬಂದೇ ಬರ್ತಾನೆ ಎಂದು ಮುಹೂರ್ತ ಇಟ್ಟು
ಕಾಯ್ತಾ ಇದ್ದಾಗಲೇ ಸ್ಕೂಟಿಯಲ್ಲಿ ಬಂದಿಳಿದ ರಾಹುಲ್ನನ್ನು ಮಹೇಂದ್ರ ಆ್ಯಂಡ್ ಗ್ಯಾಂಗ್ ಅಟ್ಟಾಡಿಸಿ ನಿನ್ನೆ ಎತ್ತೇಬಿಟ್ಟಿತು.
ಕೊಲೆಯಾದ ರಾಹುಲ್ ತಿಂಗಳಾಯ ಅಲಿಯಾಸ್ ಕಕ್ಕೆ ರಾಹುಲ್ (29) ಪೊಲೀಸ್ ಇಲಾಖೆಗೆ ಅವನೊಬ್ಬ ರೌಡಿಶೀಟರ್.
ಹೊಯ್ಗೆ ಬಜಾರ್ನ ಪರಿಸರದಲ್ಲಿ ಓಡಾಡಿ ಬೆಳೆದ ಕಕ್ಕೆ ಹಿಂದೂ ಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಮತ್ತು ಸಕ್ರೀಯನಾಗಿದ್ದ.
ಹಲವು ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈತನ ಮೇಲೆ ಕೊಲೆಯತ್ನ, ಹಲ್ಲೆ ಸೇರಿ 12ಕ್ಕೂ ಹೆಚ್ಚು ಕೇಸ್ಗಳಲ್ಲಿ ಈತ ಆರೋಪಿಯಾಗಿದ್ದ. ಆದ್ರೆ ಮಹೇಂದ್ರ ಹಾಗಲ್ಲ ತಾನಾಯಿತು.
ತನ್ನ ಫ್ರೆಂಡ್ಸ್ ಆಯಿತು ಅಂತಿದ್ದವ. ಕೊಲೆಯಾದ ರಾಹುಲ್ ಮತ್ತು ಕೊಲೆಗೈದ ಮಹೇಂದ್ರ ಇಬ್ಬರೂ ಸಣ್ಣ ವಯಸ್ಸಿಂದಲೇ ಚಿರಪರಿಚಿತರು.
ಆದರೆ 2019ರಲ್ಲಿ ಬೋಳಾರದಲ್ಲಿ ನಡೆಯುತ್ತಿದ್ದ ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಮಾತಿಗೆ
ಮಾತು ಬೆಳೆದು ವಿಕೋಪಕ್ಕೆ ಹೋಗಿ ರಾಹುಲ್ ಮಹೇಂದ್ರನ ಮೇಲೆ ಬಾಟಲಿ, ಚೂರಿಯಿಂದ ಹಲ್ಲೆ ನಡೆಸಿದ್ದ. ಈ ದ್ವೇಷ ಮಹೇಂದ್ರನ ಮನಸಿನಲ್ಲಿ ಕುದಿಯುತ್ತಿತ್ತು.
ಆತ ತನ್ನ ಮೇಲೆ ಹಲ್ಲೆ ನಡೆಸಿ ರಿವೇಂಜ್ ತೆಗೆಯಲು ಮಹೇಂದ್ರ ಕಾಯ್ತಾ ಇದ್ದ. ಕಕ್ಕೆಗೆ ಕೋಳಿ ಅಂಕ ಅಂದ್ರೆ ಹುಚ್ಚು. ಕೋಳಿ ಕಟ್ಟ ಎಲ್ಲಿ ನಡಿತಿದೆಯೋ ಅಲ್ಲಿ ಕಕ್ಕೆ ಹಾಜರಿರುತ್ತಿದ್ದ.
ಈ ವಿಷಯ ಎದುರಾಳಿ ಮಹೇಂದ್ರನಿಗೆ ಪಕ್ಕಾ ಗೊತ್ತಿತ್ತು . ಅದರಂತೆ ನಿನ್ನೆ ನಗರದ ಎಮ್ಮೆಕೆರೆಯಲ್ಲಿ ಕೋಳಿ ಕಟ್ಟ ನಡೆಯುತ್ತಿತ್ತು.
ಅಲ್ಲಿಗೆ ಕಕ್ಕೆ ಬಂದೇ ಬರ್ತಾನೆ ಎಂಬುವುದು ಮಹೇಂದ್ರನಿಗೆ ಖಾತರಿ ಇತ್ತು.
ಅದಕ್ಕಾಗಿ ಮೊದಲೇ ಎರಡು ಬೈಕಿನಲ್ಲಿ ತಲವಾರು ಮತ್ತು ಕತ್ತಿಯೊಂದಿಗೆ ಬಂದಿದ್ದ ಮಹೇಂದ್ರ, ಅಕ್ಷಯ್, ಸುಶಿತ್ ಹಾಗೂ ಮತ್ತೋರ್ವ ಆರೋಪಿ ಕಕ್ಕೆಗಾಗಿ ಹೊಂಚು ಹಾಕ್ತಾ ಇದ್ರು.
ಮಹೇಂದ್ರನ ಯೋಜನೆಯಂತೆ ಸಂಜೆ 5 ಗಂಟೆ ಸುಮಾರಿಗೆ ಕಕ್ಕೆ ತನ್ನ ಸ್ನೇಹಿತನೊಂದಿಗೆ ಸ್ಕೂಟಿಯಲ್ಲಿ ಕೋಳಿ ಅಂಕದ ಬಳಿ ಬಂದು ಅದೇನೋ ಸ್ಕೂಟಿ ಸ್ಟ್ಯಾಂಡ್ ಹಾಕ್ತಿದ್ದಂತೆ ಆತನ ಮೇಲೆ ಮಹೇಂದ್ರ ಆ್ಯಂಡ್ ಗ್ಯಾಂಗ್ ಮಿಂಚಿನಂತೆ ಎರಗಿದೆ.
ತಕ್ಷಣ ಸ್ಕೂಟಿ ಅಲ್ಲೇ ಬಿಟ್ಟು ಗ್ರೌಂಡ್ ಉದ್ದಕೂ ಕಕ್ಕೆ ಜೀವ ಉಳಿಸಲು ಓಡಲು ಪ್ರಾರಂಭಿಸಿದ್ದಾನೆ. ಮಹೇಂದ್ರ ಮತ್ತು ಟೀಂ ತಕ್ಷಣ ಕಳ್ವೆ ಕಳ್ವೆ(ಕಳ್ಳ ಕಳ್ಳ) ಎಂದು ಬೊಬ್ಬೆ ಹಾಕಿ ಬೆನ್ನಟ್ಟಿದ್ದಾನೆ.
ಇತ್ತ ಕೋಳಿ ಕಟ್ಟದ ಕಲದಲ್ಲಿ ಹುಂಜಗಳು ಬಾಲ್ (ಚೂಪಾದ ಕತ್ತಿ) ಕಟ್ಟಿ ಓಡಾಡುತ್ತಿದ್ದರೆ. ಹೊರಗೆ ಕಕ್ಕೆಯನ್ನು ನಾಲ್ವರು ತಲವಾರುಗಳೊಂದಿಗೆ ಬೆನ್ನಟ್ಟುತ್ತಿದ್ದರು.
ಓಡಿ ಓಡಿ ಸುಸ್ತಾದ ರಾಹುಲ್ ಸ್ವಲ್ಪ ದೂರ ಓಡಿ ಹತ್ತಿರದಲ್ಲೇ ಇದ್ದ ದೈವಸ್ಥಾನದ ಆವರಣಗೋಡೆ ಹಾರಲು ಯತ್ನಿಸಿದ್ದಾನೆ.
ಆದ್ರೆ ಒಂದು ಕಡೆ ಎತ್ತರದ ಗೋಡೆ ಮತ್ತೊಂದೆಡೆ ಓಡಿ ಓಡಿ ಸುಸ್ತಾದ ಕಾರಣ ಕಕ್ಕೆ ಮುಗ್ಗರಿಸಿ ಕೆಳಕ್ಕೆ ಬಿದ್ದಿದ್ದಾನೆ.
ಅದೇ ವೇಳೆ ಅಲ್ಲಿಗೆ ತಲುಪಿದ್ದ ಮಹೇಂದ್ರ ಅಂಡ್ ಟೀ ಬಿದ್ದ ರಾಹುಲ್ ಮೇಲೆ ಮುಗಿಬಿದ್ದು ತಲವಾರುಗಳಿಂದ ದಾಳಿ ಮಾಡಿದ್ದಾರೆ.
ತಲವಾರುಗಳ ಹೊಡೆತ ತಾಳಲಾರದೆ ರಾಹುಲ್ ಅಲ್ಲೇ ಕುಸಿದು ಬಿದ್ದಿದ್ದಾನೆ.
ಕಲದಲ್ಲಿ ಹುಂಜವೊಂದು ಎದುರಾಳಿಯನ್ನು ಕಾಲಿನಲ್ಲಿದ್ದ ಬಾಲ್ನಿಂದ ಹೊಟ್ಟೆಗೆ ತಿವಿದಾಕ್ಷಣ ಎದುರಾಳಿ ಹುಂಜ ರಕ್ತ ಚೆಲ್ಲಿ ಪ್ರಾಣ ಬಿಡುತ್ತಿದ್ದರೆ.
ಕಲದ ಹೊರಗೆ ಮಹೇಂದ್ರ ಆ್ಯಂಡ್ ಗ್ಯಾಂಗ್ ತಲವಾರು ದಾಳಿಯಿಂದ ಎದೆ, ಕೈ, ತಲೆ ಎಲ್ಲಾ ಕಡೆ ತಿವಿಯುತ್ತಿದ್ದಂತೆ ರಾಹುಲ್ ಉಸಿರು ಚೆಲ್ಲಿದ್ದಾನೆ.
ಕಕ್ಕೆ ರಾಹುಲ್ ಜೀವ ಹೋಗಿದ್ದನ್ನು ಕನ್ಫರ್ಮ್ ಮಾಡಿಕೊಂಡ ಮಹೇಂದ್ರ ಆ್ಯಂಡ್ ಟೀಮ್ ಸ್ಥಳದಿಂದ ಪರಾರಿಯಾಗಿದೆ.
ಇನಿ ಓಡೆಗ್ಲಾ ಪೋವೊಡ್ಚಿಂಬೆ ಎಂದಿದ್ದ ತಾಯಿ
ಮಾತೃ ಹೃದಯ ಹಾಗೇನೆ. ಅದೇಕೋ ಏನೋ ಹೆತ್ತ ಕರುಳಿಗೆ ಮಗನ ಮೇಲೆ ಇಂದು ಏನೋ ಕೆಟ್ಟದಾಗಿರುವುದು ನಡೆಯಲಿದೆ
ಎಂಬ ಮುನ್ಸೂಚನೆ ದೊರೆತ್ತಿದ್ದರಿಂದ ನಿನ್ನೆ ರಾಹುಲ್ ತಾಯಿ ಮಗನನ್ನು ಉದ್ದೇಶಿಸಿ ” ಮಗನೇ ಇವತ್ತು ಎಲ್ಲೂ ಹೋಗ್ಬೇಡ, ಮನೆಯಲ್ಲೇ ಇರು ಎಂದಿದ್ರಂತೆ.
ಹೆತ್ತ ಕರುಳಿಗೆ ಗೌರವ ಕೊಟ್ಟು ಮಧ್ಯಾಹ್ನದ ವರೆಗೂ ಮನೆಯಲ್ಲಿದ್ದ ರಾಹುಲ್ ಸಂಜೆ ವೇಳೆಗೆ ಇಲ್ಲೇ ಹೊರಗೆ ಹೋಗಿ ಬರುತ್ತೇನೆ ಎಂದು ಮನೆಬಿಟ್ಟಿದ್ದ.. ಆದರೆ ಮನೆ ಸೇರಿದ್ದು ಮಾತ್ರ ಹೆಣವಾಗಿ….
ಸ್ಟೇಷನ್ಗೆ ಹೋಗಿದ್ರೆ ಜೀವ ಉಳಿಯುತ್ತಿತ್ತು
ರಾಹುಲ್ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಜೊತೆಗೆ ಆತನ ಮೇಲೆ ಪೊಲೀಸರು ರೌಡಿ ಶಿಟ್ ತೆರೆದಿದ್ರು.
ವಿಚಾರಣೆಗೆ ಅಂತ ಪೊಲೀಸರು ಕರೆ ಮಾಡಿದ್ರೆ ತಕ್ಷಣ ಹಾಜರಾಗುತ್ತಿದ್ದ ರಾಹುಲ್ಗೆ ನಿನ್ನೆಯೂ ಪ್ರಕರಣವೊಂದರ ವಿಚಾರಣೆ ಹಿನ್ನೆಲೆ ಪಾಂಡೇಶ್ವರ ಪೊಲೀಸರು ಕರೆ ಮಾಡಿ ಸ್ಟೇಷನ್ಗೆ ಬರ ಹೇಳಿದ್ದರು.
ಆದರೆ ಆತ ನಿನ್ನೆ ಮಧ್ಯಾಹ್ನದ ವರೆಗೂ ಬಂದಿರಲಿಲ್ಲ. ಒಂದು ವೇಳೆ ಪೊಲೀಸ್ ಠಾಣೆಗೆ ಬಂದಿದ್ದರೆ ರಾಹುಲ್ ನ ಜೀವನ ಉಳಿಯುತಿತ್ತೋ ಏನೋ ಎನ್ನುತ್ತಾರೆ ಪೊಲೀಸರು..
ಹುಲಿವೇಷದಲ್ಲಿ ಬ್ಲ್ಯಾಕ್ ಟೈಗರ್ ಎಂದೇ ಫೇಮಸ್..
ರಾಹುಲ್ಗೆ ಹುಲಿವೇಷ ಅಂದ್ರೆ ಪಂಚಪ್ರಾಣ ಪ್ರತೀ ವರ್ಷ ಆತ ನವರಾತ್ರಿ ಸಂದರ್ಭ ಹುಲಿವೇಷ ಹಾಕುತ್ತಿದ್ದ, ಅದರಲ್ಲೂ ಆತ ಹಾಕುತ್ತಿದ್ದುದು ಬ್ಲ್ಯಾಕ್ ಟೈಗರ್.
ಅಂದ್ರೆ 20 ಫೀಟ್ಗಿಂತಲೂ ಎತ್ತರದ ಕಟ್ಟಡದಿಂದ ಹಾರುವುದು, ಅಕ್ಕಿ ಮುಡಿಯನ್ನು ಹಲ್ಲಲ್ಲಿ ಕಚ್ಚಿ ಬಿಸಾಡುವುದು ಸೇರಿ ಅತ್ಯಂತ ಅಪಾಯಕಾರಿ ಸ್ಟಂಟ್ ಮಾಡ್ತಿದ್ದ ರಾಹುಲ್
ಹಿಂದೂ ಪರ ಸಂಘಟನೆಯಲ್ಲಿ ಸಕ್ರೀಯನಾಗಿ ಅಕ್ರಮ ಗೋ ಚಟುವಟಿಕೆಗಳ ವಿರುದ್ದ ಸಮರ ಸಾರಿದ್ದ.. ಆದ್ರೆ ಇದೀಗ ವಿರೋಧ ಕಟ್ಟಿಕೊಂಡು ಜೀವ ಕಳಕೊಂಡ..
BANTWAL
ಮತ ಚಲಾಯಿಸಿದ ನವ ದಂಪತಿ…! ಶುಭ ಹಾರೈಸಿದ ಸ್ನೇಹಿತರು..!
ಮಂಗಳೂರು : ಇಂದು ಹೊಸ ಬಾಳಿಗೆ ಕಾಲಿಡುತ್ತಿದ್ದ ಆ ಜೋಡಿಗಳು ಹೊಸ ಬಾಳಿನ ಚಿಂತನೆಯ ಜೊತೆಗೆ ದೇಶದ ಚಿಂತನೆಯನ್ನೂ ಮಾಡಿದ್ದಾರೆ. ಮದುವೆಯ ಸಮಾರಂಭದಲ್ಲಿ ಹಸಮಣೆ ಏರಿ ಪತಿ ಪತ್ನಿಯರಾಗಿ ಒಂದಾದ ಜೋಡಿ ಎಲ್ಲಾ ಸಂಪ್ರದಾಯಗಳು ಪೂರ್ಣಗೊಂಡ ತಕ್ಷಣ ಮದುವೆ ಮನೆಯಿಂದ ಹೊರ ನಡೆದಿದ್ದಾರೆ. ಮದುವೆ ಮನೆಯಿಂದ ಬಂದವರೇ ನೇರವಾಗಿ ಮತಗಟ್ಟೆಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಹೌದು ಇದು ನಡೆದಿರುವುದು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಬೂತ್ ಸಂಖ್ಯೆ 16 ರಲ್ಲಿ . ಇವರ ಮದುವೆ ನಿಗದಿಯಾದ ದಿನಂದಂತೆ ಪ್ರಜಾಪ್ರಭುತ್ವದ ಹಬ್ಬವಾಗಿರೋ ಚುನಾವಣೆ ದಿನಾಂಕ ಕೂಡಾ ಘೋಷಣೆ ಆಗಿದೆ. ಒಂದು ಕಡೆ ಹಸೆಮಣೆ ಏರಿ ತಮ್ಮ ಸ್ವಂತ ಭವಿಷ್ಯ ಕಟ್ಟಿಕೊಳ್ಳುವ ಜೊತೆಗೆ ದೇಶದ ಭವಿಷ್ಯವನ್ನೂ ಕಟ್ಟಲು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಮಾದರಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಮಲ್ಲೆರ್ಮಳಕೋಡಿ ಜಯರಾಮ ಕುಲಾಲ್ ಎಂಬ ವರ ವದುವಿವೊಂದಿಗೆ ಬಂದು ತನ್ನ ಮತ ಚಲಾಯಿಸಿದ್ದಾರೆ. ಇವರಿಬ್ಬರ ಈ ಕಾಳಜಿಗೆ ಜನರು ಹಾಗೂ ಮತಗಟ್ಟೆ ಅಧಿಕಾರಿಗಳು ಶುಭ ಹಾರೈಸಿದ್ದಾರೆ. ಇದೇ ವೇಳೆ ಜಯರಾಮ್ ಕುಲಾಲ್ ಅವರ ಸ್ನೇಹಿತರು ಹಿತೈಷಿಗಳು ಕೂಡಾ ಶುಭ ಹಾರೈಸಿದ್ದಾರೆ.
LATEST NEWS
ವಧು ಕೇಳಿದ ಆ ಒಂದು ಪ್ರಶ್ನೆ; ತಬ್ಬಿಬ್ಬಾದ ವರ..ಮದುವೆ ಕ್ಯಾನ್ಸಲ್!
ಮಂಗಳೂರು : ಇತ್ತೀಚಿನ ದಿನಗಳಲ್ಲಿ ಮದುವೆ ಎಂಬುದರ ಸಂಭ್ರಮ ಹೇಳತೀರದು. ಅದ್ದೂರಿತನವೇ ಮೇಲುಗೈ ಸಾಧಿಸುತ್ತೆ. ಈ ನಡುವೆ ಮದುವೆ ಮುರಿದು ಬೀಳುವ ಘಟನೆಯೂ ಹೆಚ್ಚುತ್ತಲಿದೆ. ಕ್ಷುಲ್ಲಕ ಕಾರಣ ಇರಬಹುದು ಅಥವಾ ಇನ್ಯಾವುದೇ ಕಾರಣ ಇರಬಹುದು ಮದುವೆ ಮುರಿದು ಬೀಳುತ್ತಿದೆ.
ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅನ್ನೋ ಗಾದೆ ಮಾತಿದೆ. ಅಂತೆಯೇ ಇಲ್ಲಿ ವರ ಸುಳ್ಳು ಹೇಳಿದ್ದಾನೆ. ಹಾಗಂತ ಮದುವೆ ಆಗಿಲ್ಲ. ಬದಲಿಗೆ ಸಿಕ್ಕಿ ಬಿದ್ದಿದ್ದಾನೆ. ವಧು ಕೇಳಿದ ಆ ಒಂದು ಪ್ರಶ್ನೆಯಿಂದ ಮದುವೆ ಮುರಿದು ಬಿದ್ದಿದೆ.
ಸುಳ್ಳು ಹೇಳಿ ತಗ್ಲಾಕ್ಕೊಂಡ!
ಸುಳ್ಳು ಹೇಳಿ ಮದುವೆಯಾಗಲು ಹೊರಟಿದ್ದ ವರನ ಅಸಲಿ ವಿಚಾರ ಗೊತ್ತಾಗಿದೆ. ಹೀಗಾಗಿ ಯುವತಿ ಮದುವೆ ನಿರಾಕರಿಸಿದ್ದಾಳೆ. ಅಂದಹಾಗೆ ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಪನ್ವಾರಿನಲ್ಲಿ. ಓದು, ಬರಹ ಏನೊಂದು ಬರದ ಅನಕ್ಷರಸ್ಥನೊಬ್ಬ ತಾನು ದೊಡ್ಡ ಸರ್ಕಾರಿ ಅಧಿಕಾರಿ ಎಂದು ಮದುವೆಯಾಗಲು ಹೊರಟಿದ್ದ.
ಆದರೆ, ಈ ಸತ್ಯ ಮದುವೆ ಮನೆಯಲ್ಲೇ ಬಯಲಾಗಿದೆ. ಸಂಶಯಗೊಂಡ ವಧು ವರನ ಬಳಿ, ಎರಡರ ಮಗ್ಗಿ ಹೇಳಲು ತಿಳಿಸಿದ್ದಾಳೆ. ಆಗ ಆತ ತಡವರಿಸಿದ್ದಾರೆ. ಹಾಗಾಗಿ, ಯುವತಿಗೆ ಸತ್ಯಾಂಶ ಗೊತ್ತಾಗಿದೆ. ಎರಡರ ಮಗ್ಗಿ ಬೇಸಿಕ್ ಗಣಿತವೂ ಗೊತ್ತಿಲ್ಲ, ನೀನು ಅಧಿಕಾರಿಯಾಗಲು ಹೇಗೆ ಸಾಧ್ಯ? ಎಂದು ಮದುವೆ ಮುರಿದುಕೊಂಡಿದ್ದಾಳೆ.
ಇದನ್ನೂ ಓದಿ : ಮತ್ತೆ ಬಾಯ್ ಫ್ರೆಂಡ್ ಬದಲಾಯಿಸಿದ ಶೃತಿ ಹಾಸನ್..!
ಇಷ್ಟಾದರೂ ಬಿಡದ ಕುಟುಂಬದವರು ವಧುವಿನ ಮನವೊಲಿಸುವ ಯತ್ನ ಮಾಡಿದ್ದಾರೆ. ಆದರೆ, ವಧು ಮಾತ್ರ ಇದಕ್ಕೆ ಒಪ್ಪಿಲ್ಲ. ಹೀಗಾಗಿ ವರದಕ್ಷಿಣೆಯನ್ನು ಹಿಂದಿರುಗಿಸಿದ್ದಾರೆ. ಪರಸ್ಪರ ನೀಡಿದ ಉಡುಗೊರೆ, ಆಭರಣಗಳನ್ನು ಹಿಂದಿರುಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
LATEST NEWS
ಮತಗಟ್ಟೆಯನ್ನೇ ಧ್ವಂಸ ಮಾಡಿದ ಗ್ರಾಮಸ್ಥರು!
ಚಾಮರಾಜನಗರ : ಲೋಕಸಭಾ ಚುನಾವಣೆಗೆ ನಡೆಯುತ್ತಿರುವ ಮತದಾನ ರಾಜ್ಯದೆಲ್ಲಡೆ ಸುಸೂತ್ರವಾಗಿಯೇ ನಡೆದಿದೆ. ಆದರೆ ಚಾಮರಾಜನಗರದಲ್ಲಿ ಮಾತ್ರ ಜನರು ಮತಗಟ್ಟೆಯನ್ನೇ ಪುಡಿ ಮಾಡಿ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದಾರೆ. ಚಾಮರಾಜನಗರದ ಲೋಕಸಭಾ ಕ್ಷೇತ್ರದ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿತ್ತು. ಈ ವೇಳೆ ಇಂಡಿಗನತ್ತ ಎಂಬ ಗ್ರಾಮದಲ್ಲಿ ಮತಗಟ್ಟೆಯನ್ನು ಗ್ರಾಮಸ್ಥರು ಧ್ವಂಸ ಮಾಡಿದ್ದಾರೆ.
ಚುನಾವಣೆ ಬಹಿಷ್ಕಾರಿಸಿದ್ದ 5 ಗ್ರಾಮ :
ಮೂಲ ಸೌಕರ್ಯದಿಂದ ವಂಚಿತರಾಗಿದ್ದ ಈ ಗ್ರಾಮದ ಜನರು ತಮ್ಮ ಹಕ್ಕಿಗಾಗಿ ಹಲವು ಹೋರಾಟ ನಡೆಸಿದ್ದರು. ಆದರೆ, ಚುನಾವಣೆಯಲ್ಲಿ ಆಶ್ವಾಸನೆ ನೀಡಿ ಹೋಗುವ ಜನ ಪ್ರತಿನಿಧಿಗಳು ಬಳಿಕ ಇತ್ತ ಸುಳಿಯುತ್ತಿರಲಿಲ್ಲ. ಹೀಗಾಗಿ ಐದು ಗ್ರಾಮಗಳ ಜನರು ಈ ಬಾರಿ ಮತ ಕೇಳಲು ಬರಬೇಡಿ, ನಾವು ಮತದಾನ ಮಾಡೋದಿಲ್ಲ ಎಂದಿದ್ದರು.
ಚುನಾವಣೆ ಬಹಿಷ್ಕಾರ ಮಾಡಿದ್ದರೂ ಕಾನೂನು ರೀತಿಯಲ್ಲಿ ಗ್ರಾಮದಲ್ಲಿ ಮತಗಟ್ಟೆಯನ್ನು ತೆರೆಯಲಾಗಿತ್ತು. ಇಂಡಿಗನತ್ತ, ತೇಕಣೆ, ಮೆಂದಾರೆ ಈ ಗ್ರಾಮದಲ್ಲಿ ಯಾವೊಬ್ಬ ಗ್ರಾಮಸ್ಥರೂ ಮತದಾನ ಮಾಡಿಲ್ಲ. ಇನ್ನು ಪಡಸಲನತ್ತ ಗ್ರಾಮದಲ್ಲಿ 85 ಮತದಾರು ಇದ್ದು ಇಬ್ಬರು ಮತದಾನ ಮಾಡಿದ್ದಾಗಿ ಮಾಹಿತಿ ಲಭ್ಯವಾಗಿದೆ.
ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ತೆರೆಯುವುದಕ್ಕೆ ಗ್ರಾಮಸ್ಥರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ, ಚುನಾವಣಾ ಆಯೋಗ ಇಲ್ಲಿ ಮತಗಟ್ಟೆ ತೆರೆದು ‘ಮತದಾನ ಮಾಡಲು ಬನ್ನಿ’ ಎಂದು ಜನರನ್ನು ಕರೆದಿದ್ದರು. ಆದ್ರೆ ರೊಚ್ಚಿಗೆದ್ದ ಜನರು ಮತದಾನ ಕೇಂದ್ರದ ಒಳಗೆ ನುಗ್ಗಿ ಇವಿಎಂ ಮೆಷಿನ್ ಸಹಿತ ಮೇಜು ಕುರ್ಚಿ ಎಲ್ಲವನ್ನೂ ಧ್ವಂಸ ಮಾಡಿದ್ದಾರೆ.
ಕನಿಷ್ಠ ಮೂಲಭೂತ ಸೌಕರ್ಯವಾದ ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ ಯಾವುದೂ ಇಲ್ಲದ ನಮ್ಮ ಗ್ರಾಮದ ಮತ ಯಾಕೆ ಬೇಕು? ಎಂದು ಜನ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ : ಸುಡುಬಿಸಿಲಿನಲ್ಲೂ ಮತದಾನ; ಇಹಲೋಕ ತ್ಯಜಿಸಿದ 6 ಮಂದಿ
ಪೊಲೀಸ್ ಲಾಠಿ ಚಾರ್ಜ್…ಕೆರಳಿದ ಗ್ರಾಮಸ್ಥರು!
ಜನರು ಮತಗಟ್ಟೆ ಧ್ವಂಸಕ್ಕೆ ಮುಂದಾಗುತ್ತಿದ್ದಂತೆ ಭದ್ರತೆಯಲ್ಲಿದ್ದ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಹಲ್ಲೆ ಮಾಡಿದ ಜನರು ಬಳಿಕ ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಹಾಗೂ ಅಧಿಕಾರಿಗಳಿಗೆ ಗಾಯಗಳಾಗಿದೆ.
ಪೊಲೀಸರು ಮಹಿಳೆಯರು ಪುರುಷರು ಎಂದು ನೋಡದೆ ಎಲ್ಲರ ಮೇಲೂ ಲಾಠಿ ಚಾರ್ಚ್ ಮಾಡಿರುವುದು ಗ್ರಾಮಸ್ಥರನ್ನು ಕೆರಳಿಸಿದೆ. ಸದ್ಯಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಮತದಾನ ಕೇಂದ್ರವನ್ನು ಬಂದ್ ಮಾಡಲಾಗಿದೆ.
- FILM5 days ago
ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ
- FILM5 days ago
‘ಬಘೀರ’ ಸಿನೆಮಾ ಶೂಟಿಂಗ್ ವೇಳೆ ಅವಘಡ.. ರೋರಿಂಗ್ ಸ್ಟಾರ್ ಆಸ್ಪತ್ರೆ ದಾಖಲು
- FILM6 days ago
ವಿಚ್ಛೇದನದ ಸುದ್ದಿಗೆ ಉತ್ತರ ಕೊಟ್ಟ ಐಶ್ – ಅಭಿ ಆ್ಯನಿವರ್ಸರಿ ಫೋಟೋ!
- chikkamagaluru5 days ago
ಎಟಿಎಂ ಮೆಷಿನ್ಗೆ ಬೆಂಕಿ ಅವಘಡ..! ಸುಟ್ಟು ಕರಕಲಾದ ಲಕ್ಷಾಂತರ ರೂಪಾಯಿ..!!
Smitha
03/05/2022 at 3:36 PM
Mahendra, Akshay, sushith and another one.Who is other murderer, any details on this ?