DAKSHINA KANNADA
ಹಿರಿಯ ಕಲಾವಿದ ಕೇಶವ ಶಕ್ತಿನಗರ ಅವರಿಗೆ ‘ಶ್ರೀ ವಾಗೀಶ್ವರೀ ಶತಮಾನೋತ್ಸವ ಪ್ರಶಸ್ತಿ’
ಮಂಗಳೂರು: ‘ಚಾರಿತ್ರಿಕ ಕಾರ್ಯಕ್ರಮದಲ್ಲಿ ಎಂಟನೆಯ ಸಂಮಾನ ಎಂಟರ ನಂಟಿನ ಕೇಶವನಿಗೆ ಆದದ್ದು ಯೋಗಯೋಗ” ಎಂದು ಮಂಗಳೂರಿನ ಮಹಾಮಾಯಾ ದೇವಸ್ಥಾನದ ಶ್ರೀ ವಾಗೀಶ್ವರೀ ಶತಮಾನೋತ್ಸವ ಸಂಮಾನ- 8 ನ್ನು ಸ್ವೀಕರಿಸಿದ ಹಿರಿಯ ಕಲಾವಿದ ಕೇಶವ ಶಕ್ತಿನಗರ ಕೃತಜ್ಞತೆಯ ಮಾತುಗಳನ್ನಾಡಿದರು.
ವೇಷಧಾರಿಯಾಗಿ, ಯಕ್ಷಗಾನ ಪ್ರಸಾಧನಾ ಕಲಾವಿದನಾಗಿ, ಯಕ್ಷಗಾನ ಕಿರೀಟ ತಯಾರಕನಾಗಿ, ಸಂಘಟಕನಾಗಿ ನಾಲ್ಕೂವರೆ ದಶಕಗಳಿಂದ ಮಂಗಳೂರು ಪರಿಸರದಲ್ಲಿ ಕಲಾಸಾಧಕನಾಗಿ ಗುರುತಿಸಲ್ಪಟ್ಟ ಕೇಶವ ಶಕ್ತಿನಗರ ಅವರನ್ನು ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಅಭಿನಂದಿಸಿದರು.
ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಹಿರಿಯ ಅರ್ಥಧಾರಿಗಳಾಗಿ ಪರಿಸರದ ಹಲವು ಸಂಘಗಳಲ್ಲಿ ಸುಮಾರು ಏಳು ದಶಕಗಳ ಕಾಲ ಅರ್ಥಧಾರಿಯಾಗಿ ,ವೇಷಧಾರಿಯಾಗಿ ” ಪುರಾಣ ಆಚಾರ್ಯ” ಎಂಬ ಖ್ಯಾತಿ ಪಡೆದಿದ್ದ ಸಿ.ಬಿ.ಯನ್.ದಾಮೋದರ ಆಚಾರ್ಯ ಅವರ ಸಂಸ್ಮರಣೆಯನ್ನು ಯಕ್ಷಗಾನ ಅಕಾಡಮಿ ಸದಸ್ಯ ಕದ್ರಿ ನವನೀತ ಶೆಟ್ಟಿಯವರು ಮಾಡಿ ಆಚಾರ್ಯರ ಅದ್ಭುತ ಪುರಾಣ ಜ್ಞಾನಸಂಪತ್ತು ಹಾಗೂ ಪ್ರಸಂಗ ಸಾಹಿತ್ಯ ಕಂಠಪಾಠ ದ ಅಪೂರ್ವ ಜ್ಞಾಪಕ ಶಕ್ತಿಯನ್ನು ನೆನಪಿಸಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಭಾಗಿತ್ವದಲ್ಲಿ 50 ಭಾನುವಾರ ನಿರಂತರ “ಸಂಮಾನ ,ಸಂಸ್ಮರಣೆ, ತಾಳಮದ್ದಳೆಯು ಮಹಾಮಾಯಾ ದೇವಸ್ಥಾನದ ಅಂಗಣದಲ್ಲಿ ನಡೆಯುತ್ತಿದೆ.
ಉದ್ಯಮಿ ಶ್ರೀ ರಾಜೇಶ್ ಪೈ ಕೈಕಂಬ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಲಾವಿದ ,ಸಂಘಟಕ ಸುರತ್ಕಲ್ ವಾಸುದೇವ ರಾವ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಬಿ.ಟಿ.ಕುಲಾಲ್ ಅಭಿನಂದನಾ ಪತ್ರ ವಾಚಿಸಿದರು.
ಶತಮಾನೋತ್ಸವ ಸಮಿತಿಯ ನಾಗೇಶ ಪ್ರಭು, ಶಿವಪ್ರಸಾದ್ ಪ್ರಭು , ಅಶೋಕ್ ಬೋಳೂರು ,ಪ್ರಪುಲ್ಲಾ ನಾಯಕ್ ಉಪಸ್ಥಿತರಿದ್ದರು.ಶ್ರೀ ದುರ್ಗಾಂಭಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲ್ ಅವರಿಂದ ಶ್ರೀರಾಮ ಚರಿತಾಮೃತ ಸರಣಿ ಯ ” ಪಂಚವಟಿ ” ತಾಳಮದ್ದಳೆ ನಡೆಯಿತು.
ಸಂಘದ ಉಪಾಧ್ಯಕ್ಷೆ ಶೋಭಾ ಐತಾಳ್ ಕಾರ್ಯಕ್ರಮ ನಿರೂಪಿಸಿದರು.
ಸಿ.ಬಿ.ಎನ್.ದಾಮೋದರ ಆಚಾರ್ಯ ಸಂಸ್ಮರಣೆ
DAKSHINA KANNADA
ಈ ಕನಸುಗಳು ಕೇವಲ ಅದೃಷ್ಟವಂತರಿಗೆ ಮಾತ್ರ ಬೀಳುತ್ತೆ.!
ಮಂಗಳೂರು: ಕನಸನ್ನು ಕಾಣುವುದು ಎಂದರೆ ಅದೊಂದು ಸಾಮಾನ್ಯ ವಿಷಯ. ಪ್ರತಿಯೊಬ್ಬ ವ್ಯಕ್ತಿಯು ಮಲಗುವ ಸಮಯದಲ್ಲಿ ಕನಸನ್ನು ಕಾಣುತ್ತಾನೆ. ಅದೆಷ್ಟೋ ಬಾರಿ ನಾವು ಎದ್ದಾಕ್ಷಣ ರಾತ್ರಿ ಕನಸಿನಲ್ಲಿ ಕಂಡ ವಿಷಯಗಳನ್ನು ಮರೆತುಬಿಡುತ್ತೇವೆ. ಇನ್ನು ಕೆಲವೊಮ್ಮೆ ಅದು ಅಚ್ಚಳಿಯದಂತೆ ನಮ್ಮ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ. ಕೆಲವು ಕನಸುಗಳು ನಮಗೆ ಸಾಕಷ್ಟು ಸಂತೋಷವನ್ನು, ನೆಮ್ಮದಿಯನ್ನು ನೀಡಿದರೆ, ಕೆಲವು ಕನಸುಗಳು ನಮ್ಮ ತಲೆಯನ್ನು ಕೆಡಿಸುತ್ತದೆ.
ಕನಸುಗಳನ್ನು ನಾವು ಶುಭ ಕನಸುಗಳು ಮತ್ತು ಅಶುಭ ಕನಸುಗಳೆಂದು ವಿಭಜಿಸುತ್ತೇವೆ. ಆದರೆ, ಒಂದಿಷ್ಟು ಕನಸುಗಳಿವೆ ಅವುಗಳು ಕೇವಲ ಅದೃಷ್ಟವಂತರಿಗೆ ಮಾತ್ರ ಬೀಳುತ್ತದೆ. ನೀವು ಅದೃಷ್ಟವಂತರಾದರೆ ಈ ಕನಸುಗಳು ನಿಮಗೂ ಬಿದ್ದಿರುತ್ತೆ.
1. ಬಿಳಿ ಆನೆಯ ಕನಸು:
ನಾವು ಕನಸಿನಲ್ಲಿ ಬಿಳಿ ಬಣ್ಣದ ಆನೆಯನ್ನು ನೋಡಿದರೆ ಅದನ್ನು ಅತ್ಯಂತ ಮಂಗಳಕರವಾದ ಕನಸೆಂದು ಪರಿಗಣಿಸಲಾಗುತ್ತದೆ. ಬಿಳಿ ಬಣ್ಣದ ಆನೆ ಕಾಣಿಸಿಕೊಳ್ಳುವುದು ಎಂದರೆ ನೀವು ಇಂದ್ರ ದೇವನ ಆಶೀರ್ವಾದವನ್ನು ಪಡೆದುಕೊಂಡಿದ್ದೀರಿ ಎಂಬುದಾಗಿದೆ. ಯಾಕೆಂದರೆ ಬಿಳಿ ಬಣ್ಣದ ಆನೆಯು ದೇವರಾಜ ಇಂದ್ರ ದೇವನ ವಾಹನವಾಗಿದೆ. ಮತ್ತು ಯಾವ ವ್ಯಕ್ತಿ ತನ್ನ ಕನಸಿನಲ್ಲಿ ಬಿಳಿ ಬಣ್ಣದ ಆನೆಯನ್ನು ನೋಡುತ್ತಾನೋ ಅವನಿಗೆ ಸದ್ಯದಲ್ಲೇ ರಾಜಯೋಗವು ಪ್ರಾರಂಭವಾಗಲಿದೆ ಎಂಬುದಾಗಿದೆ.
2. ಬಿಳಿ ಬಣ್ಣದ ನವಿಲು:
ಯಾವುದೇ ಓರ್ವ ವ್ಯಕ್ತಿಯು ತನ್ನ ಕನಸಿನಲ್ಲಿ ಬಿಳಿ ಬಣ್ಣದ ನವಿಲನ್ನು ನೋಡಿದರೆ ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂತಹ ಕನಸುಗಳು ಅದೃಷ್ಟದ ಸಂಕೇತವಾಗಿರುತ್ತದೆ. ಇಂತಹ ಕನಸುಗಳು ಬಿದ್ದರೆ ನಿಮ್ಮ ಜೀವನದಲ್ಲಿ ಉತ್ತಮವಾದ ದೊಡ್ಡ ಬದಲಾವಣೆಯೊಂದು ನಡೆಯಲಿದೆ. ಮತ್ತು ನೀವು ಏನಾದರೂ ದೊಡ್ಡ ಸಾಧನೆಯನ್ನು ಮಾಡುತ್ತೀರಿ ಎಂಬುದಾಗಿದೆ. ನಿಮ್ಮ ಕನಸಿನಲ್ಲಿ ಬಿಳಿ ನವಿಲು ಕಾಣುವುದು ಎಂದರೆ ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಶೀಘ್ರದಲ್ಲೇ ಪಡೆಯುತ್ತೀರಿ.
3. ಬಿಳಿ ಸಿಂಹದ ಕನಸು:
ಈಗಾಗಲೇ ಹಳದಿ ಬಣ್ಣದ ಸಿಂಹವನ್ನು ನೋಡಿರಬಹುದು. ಆದರೆ, ಬಿಳಿ ಬಣ್ಣದ ಸಿಂಹವೂ ಇದೆ ಎಂದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಇದನ್ನು ಎಲ್ಲರೂ ನೋಡಿರಲು ಸಾಧ್ಯವಿಲ್ಲ. ಕೆಲವೊಮ್ಮೆ ಇವುಗಳು ನಮ್ಮ ಕನಸಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಅವುಗಳ ಅಸ್ತಿತ್ವವು ಇದೆ ಎಂಬುದನ್ನು ನಮಗೆ ನೆನಪಿಸುತ್ತದೆ. ಬಿಳಿ ಬಣ್ಣದ ಸಿಂಹವನ್ನು ನಾವು ನಮ್ಮ ಕನಸಿನಲ್ಲಿ ನೋಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಬಿಳಿ ಸಿಂಹದ ಕನಸು ಬಿದ್ದರೆ ನೀವು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯನ್ನು ಹೊಂದಲಿದ್ದೀರಿ ಎಂದರ್ಥ.
4. ಬಿಳಿ ಹಾವಿನ ಕನಸು:
ನೀವು ನಿಮ್ಮ ಕನಸಿನಲ್ಲಿ ಬಿಳಿ ಬಣ್ಣದ ಹಾವುಗಳನ್ನು ನೋಡಿದರೆ ಅದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇಂತಹ ಕನಸುಗಳು ಬಿದ್ದರೆ ನಿಮ್ಮ ಅದೃಷ್ಟ ಶೀಘ್ರದಲ್ಲೇ ಬದಲಾಗಲಿದೆ ಎಂಬುದನ್ನು ಸಂಕೇತಿಸುತ್ತದೆ. ಶಿವನ ವಿಶೇಷ ಆಶೀರ್ವಾದವನ್ನು ಹೊಂದಿರುವವರು ಮಾತ್ರ ತಮ್ಮ ಕನಸಿನಲ್ಲಿ ಬಿಳಿ ಬಣ್ಣದ ಹಾವುಗಳನ್ನು ನೋಡುತ್ತಾರೆ
ಹಾಗಾಗಿ, ನೀವು ನಿಮ್ಮ ಕನಸಿನಲ್ಲಿ ಈ ಮೇಲಿನ ನಾಲ್ಕು ಬಿಳಿ ಜೀವಿಗಳನ್ನು ನೀಡಿದರೆ ನೀವು ಅದೃಷ್ಟವಂತರು ಎಂದರ್ಥ. ಈ ಕನಸುಗಳು ಬಿದ್ದಾಗ ನೀವು ಚಿಂತಿತರಾಗುವ ಬದಲು ಸಂತೋಷವನ್ನು ಅನುಭವಿಸಿ.
DAKSHINA KANNADA
ಅತಿಯಾದ ಇಂಟರ್ನೆಟ್ ಬಳಕೆಯಿಂದ ಮಕ್ಕಳ ಮೇಲೆ ಆಗುವ ಪರಿಣಾಮಗಳು
ಮಂಗಳೂರು: ಇಂದು ಮೊಬೈಲ್ ಇಲ್ಲದೇ ದಿನವಿಲ್ಲ. ಮೊಬೈಲ್ ಇದ್ದರೂ ಅದರಲ್ಲಿ ಇಂಟರ್ನೆಟ್ ಇಲ್ಲದೇ ಇದ್ದರೆ ಚಡಪಡಿಕೆ. ಅದರಲ್ಲೂ ಮಕ್ಕಳು ಅತಿಯಾದ ಇಂಟರ್ನೆಟ್ ಬಳಕೆಯ ಪರಿಣಾಮಗಳ ಬಗ್ಗೆ ಎಲ್ಲೆಡೆಯೂ ಮಾತುಗಳಾಗುತ್ತಿದೆ. ಕೊರೋನಾ ನಂತರ ಮೊಬೈಲ್ ಬಳಕೆ ಅನಿವಾರ್ಯವಾಯಿತು. ಈಗ ಸಾಮಾನ್ಯ ಜನರೂ ಸ್ಮಾರ್ಟ್ ಫೋನ್ ಬೇಕು ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ತಲುಪಿಸಿತು.
ಮೊಬೈಲ್ ಸಿಕ್ಕ ತಕ್ಷಣ ಇಂಟರ್ನೆಟ್ ಅಥವಾ ಡಾಟಾಗಳೂ ಅಗತ್ಯವಾಗಿದೆ. ಈಗ ಆ ಡಾಟಾ ಬಳಕೆಯೇ ಮಕ್ಕಳ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಮೊಬೈಲ್ ಇದ್ದರೆ ಮಕ್ಕಳು ಎಲ್ಲವನ್ನೂ ವೀಕ್ಷಣೆ ಮಾಡುತ್ತಾರೆ. ಇದರ ಪರಿಣಾಮ ಮಕ್ಕಳು ತಮ್ಮ ಪ್ರಾಯಕ್ಕಿಂತ ಹೆಚ್ಚಿನ ತಿಳುವಳಿಕೆಯನ್ನು ಪಡೆಯುತ್ತಾರೆ. ಇದು ಶಿಕ್ಷಣದ ಮೇಲಿನ ನಿರಾಸಕ್ತಿಗೆ ಕಾರಣವಾಗಬಹುದು.
ಮಿತಿಮೀರಿದ ಇಂಟರ್ನೆಟ್ ಬಳಕೆಯ ಪರಿಣಾಮ:
ಮಾನಸಿಕ ಆತಂಕ ಹೆಚ್ಚಾಗುತ್ತಿದೆ:
ಈಗಿನ ಬಹುತೇಕ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಸ್ನೇಹಿತರ ಗುಂಪನ್ನು ಕಟ್ಟಿಕೊಂಡು ಅದರಲ್ಲಿ ಬ್ಯುಸಿಯಾಗಿರುತ್ತಾರೆ. ತಾವು ಪೋಸ್ಟ್ ಮಾಡುವಾಗ ಅತ್ಯುತ್ತಮ ಗುಣಮಟ್ಟದ ಪಿಚ್ಚರ್ ಅಪ್ಲೋಡ್ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಹಲವರು ಒಳ್ಳೆಯ ಕಾಮೆಂಟ್ ಗಳನ್ನು ಹಾಕಿದರೆ ಇನ್ನು ಕೆಲವರು ಕಾಲೆಳೆಯುವ ಮೆಸೇಜ್ ಕಳುಹಿಸುತ್ತಾರೆ. ಈ ಸಮಯದಲ್ಲಿ ಸಹಜವಾಗಿ ಮಾನಸಿಕ ಖಿನ್ನತೆ ಎದುರಾಗುವುದು ಖಂಡಿತ.
ನಿದ್ರಾಹೀನತೆ ಸಮಸ್ಯೆ:
ಇಂದು ಸಾಮಾಜಿಕ ಜಾಲತಾಣಗಳು ಯುವಕರ-ಯುವತಿಯರ ಮೇಲೆ ಪ್ರಭಾವ ಬೀರಿವೆ. ಅರ್ಧ ರಾತ್ರಿಯಲ್ಲಿ ನಿದ್ರೆಯಿಂದ ಎದ್ದು ಫೋನ್ ನೋಡುತ್ತಾರೆ. ತಾವು ಹಾಕಿದ ಪೋಸ್ಟ್ನ ಕಾಮೆಂಟ್ಸ್, ಲೈಕ್ಸ್ ಗಳನ್ನು ನೋಡಿ ಅವುಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ. ಇದರಿಂದ ಅವರ ರಾತ್ರಿಯ ನಿದ್ರೆ ಹಾಳಾಗುತ್ತದೆ. ಹೀಗೆ ನಿದ್ರೆಯ ಗುಣಮಟ್ಟ ಕಡಿಮೆ ಆಗುವುದರ ಜೊತೆಗೆ ಮಾನಸಿಕವಾಗಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತದೆ.
ಸಂವಹನ ಸಂಪೂರ್ಣ ಕಡಿಮೆಯಾಗುತ್ತದೆ:
ಸ್ಮಾರ್ಟ್ ಫೋನ್ ಯುಗ ಆರಂಭವಾದ ನಂತರ ಮಕ್ಕಳು ಒಬ್ಬರನ್ನೊಬ್ಬರು ನೇರವಾಗಿ ನೋಡದೆ ಇದ್ದರೂ ಕೇವಲ ಫೋನ್ ಸಂಭಾಷಣೆಯ ಮೂಲಕ ಗಂಟೆಗಟ್ಟಲೆ ಕಾಲ ಕಳೆಯುತ್ತಾರೆ. ಇದರಿಂದ ತಮ್ಮ ಮನೆಯಲ್ಲಿರುವ ಪೋಷಕರ ಜೊತೆ, ಅಕ್ಕ – ಪಕ್ಕದಲ್ಲಿರುವ ಗೆಳೆಯರ ಜೊತೆ, ಮನೆಗೆ ಬಂದು ಹೋಗುವ ಬಂಧು ಮಿತ್ರರ ಜೊತೆ ಹೆಚ್ಚು ಬೆರೆಯಲು ಕಷ್ಟ ಆಗುತ್ತದೆ. ಹೀಗಾಗಿ ನಿಜ ಜೀವನವನ್ನು ಇಂದಿನ ಯುವ ಜನತೆ ಸಂಪೂರ್ಣವಾಗಿ ಬೆರೆತುಕೊಳ್ಳುವುದನ್ನು ಮರೆಯುತ್ತಿದ್ದಾರೆ.
ಆರೋಗ್ಯ ಸಮಸ್ಯೆಗಳು:
ಹೆಚ್ಚಿನ ಸ್ಮಾರ್ಟ್ಫೋನ್ ಬಳಕೆಯು ವಿದ್ಯಾರ್ಥಿಗಳಲ್ಲಿ ಕಣ್ಣಿನ ಆಯಾಸ, ಕುತ್ತಿಗೆ ಮತ್ತು ಬೆನ್ನು ನೋವುಗಳನ್ನು ನಿರ್ಮಾಣ ಮಾಡುತ್ತದೆ. ಇಷ್ಟು ಮಾತ್ರವಲ್ಲದೆ ಇದರೊಂದಿಗೆ ವಿವಿಧ ಆರೋಗ್ಯ ಸಮಸ್ಯೆ ಸಹ ಕಾಣಿಸಿಕೊಳ್ಳುತ್ತವೆ. ಅದೆಲ್ಲಕ್ಕೂ ಪ್ರಮುಖವಾಗಿ ಜಡ ಜೀವನಶೈಲಿಗೆ ಇದು ಕಾರಣವಾಗಬಹುದು. ದೈಹಿಕ ಚಟುವಟಿಕೆಯ ಮಟ್ಟವನ್ನು ಕಡಿಮೆ ಮಾಡುತ್ತದೆ.
ಹಾಗಾಗಿ ಶಿಕ್ಷಣತಜ್ಞರು ಮತ್ತು ಪೋಷಕರು ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್ಗಳನ್ನು ಜವಾಬ್ದಾರಿಯುತವಾಗಿ ಬಳಸಲು ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕಿದೆ. ಶೈಕ್ಷಣಿಕ ಉದ್ದೇಶಗಳಿಗಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸುವುದರ ಜೊತೆಗೆ ಆಫ್ಲೈನ್ ಚಟುವಟಿಕೆಗಳು ಮತ್ತು ಮುಖಾಮುಖಿ ಸಂವಹನಗಳನ್ನು ನಡೆಸುವುದು ಅತ್ಯಗತ್ಯವಾದ ಕೆಲಸವಾಗಿದೆ.
BELTHANGADY
ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಬಂಧನ..! ಶಾಸಕ ಪೂಂಜಾ ಪ್ರತಿಭಟನೆ
ಬೆಳ್ತಂಗಡಿ : ಅಕ್ರಮ ಕಲ್ಲಿನ ಗಣಿಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರನ್ನು ರಾತೋರಾತ್ರಿ ಬಂಧಿಸಿದ್ದಾರೆ. ಆದ್ರೆ, ಈ ಬಂಧನವನ್ನು ವಿರೋಧಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಇಡೀ ರಾತ್ರಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಬೆಳ್ತಂಗಡಿಯ ಮೆಲಂತಬೆಟ್ಟು ಗ್ರಾಮದ ಮೂಡಲ ನಿವಾಸಿ ಸೂರಪ್ಪ ಪೂಜಾರಿ ಎಂಬವರ ಜಾಗಕ್ಕೆ ಮೇ 18 ರ ಸಂಜೆ ತಹಶೀಲ್ದಾರ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಅಕ್ರಮ ಗಣಿಗಾರಿಕೆಯ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರ ಜೊತೆಯಲ್ಲಿ ದಾಳಿಯನ್ನು ನಡೆಸಲಾಗಿತ್ತು. ಈ ವೇಳೆ ಸ್ಥಳದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ವಿಚಾರ ಪತ್ತೆಯಾಗಿದ್ದು, ಸ್ಥಳದಿಂದ ಒಂದು ಹಿಟಾಚಿ, ಕಂಪ್ರೆಸರ್, ಕಾರು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. ವಿಚಾರಣೆಯ ವೇಳೆ ಈ ಅಕ್ರಮ ಗಣಿಗಾರಿಕೆ ಬಿಜೆಪಿ ಮುಖಂಡ ಪ್ರಮೋದ್ ದಿಡುಪೆ ಹಾಗೂ ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರದ್ದು ಎಂದು ಗೊತ್ತಾಗಿತ್ತು.
ಅಕ್ರಮ ಗಣಿಗಾರಿಕೆ ಸಾಬೀತಾದ ಹಿನ್ನೆಲೆಯಲ್ಲಿ ರಾತೋ ರಾತ್ರಿ ಶಶಿರಾಜ್ ಶೆಟ್ಟಿ ಅವರ ಮನೆಗೆ ನುಗ್ಗಿ ಅವರನ್ನು ಬಂಧಿಸಿದ್ದರು. ಈ ವಿಚಾರ ತಿಳಿದು ಠಾಣೆಗೆ ಆಗಮಿಸಿದ ಶಾಸಕ ಹರೀಶ್ ಪೂಂಜಾ, ಶಶಿರಾಜ್ ಶೆಟ್ಟಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ರು. ಆದ್ರೆ, ಶಾಸಕರ ಮಾತಿಗೆ ಒಪ್ಪದ ಪೊಲೀಸರು ಆರೋಪಿಯ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ಇದರಿಂದ ಆಕ್ರೋಶಿತರಾದ ಶಾಸಕ ಪೂಂಜಾ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ : KARKALA: ಕಲ್ಲು ಸಾಗಾಟದ ಲಾರಿ ಪಲ್ಟಿ; ಇಬ್ಬರು ಕಾರ್ಮಿಕರು ಸಾ*ವು
ಪೊಲೀಸರ ಮೇಲೆ ಕಾಂಗ್ರೆಸ್ ಏಜೆಂಟರ ಆರೋಪ :
ರಾತೋರಾತ್ರಿ ಮನೆಗೆ ನುಗ್ಗಿದ ಪೊಲೀಸರು ಅಕ್ರಮದಲ್ಲಿ ಭಾಗಿಯಾಗದ ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿದ್ದಾರೆ ಅಂತ ಶಾಸಕ ಪೂಂಜಾ ಆರೋಪಿಸಿದ್ದಾರೆ. ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮ ಸರ್ಕಾರ ಬಂದಾಗ ನೋಡಿಕೊಳ್ಳುವುದಾಗಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮಗಳ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿ ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ.
- DAKSHINA KANNADA6 days ago
ಮುಲ್ಕಿ: ಚಿಪ್ಪು ಹೆಕ್ಕಲು ಹೋಗಿ ನೀರಲ್ಲಿ ಕಣ್ಮರೆಯಾದ ಯುವಕ.! ಪತ್ತೆಗೆ ಶೋಧ
- FILM5 days ago
ರಾಷ್ಟ್ರಪ್ರಶಸ್ತಿ ವಿಜೇತ, ಖ್ಯಾತ ಸಂಗೀತ ನಿರ್ದೇಶಕನ ದಾಂಪತ್ಯ ಜೀವನದಲ್ಲಿ ಬಿರುಕು!
- LATEST NEWS7 days ago
ಇಲ್ಲಿ ಹೆಂಡತಿ ಬಾಡಿಗೆಗೆ ಸಿಗ್ತಾಳೆ..! ಹೀಗೊಂದು ಪದ್ಧತಿ ಇರೋದು ಎಲ್ಲಿ ಗೊತ್ತಾ?
- FILM6 days ago
ಬಿಗ್ಬಾಸ್ ಸಂಗೀತಾ ಶೃಂಗೇರಿಗೆ ಬಿಗ್ ಸರ್ಪ್ರೈಸ್ ಕೊಟ್ಟ ಕುಟುಂಬಸ್ಥರು; ಫೋಟೋ ವೈರಲ್!