Connect with us

    ಕುವೈಟ್ ನಿಂದ ಮಂಗಳೂರಿಗೆ ಕನ್ನಡಿಗರ ಮೊದಲ ಚಾರ್ಟರ್ ವಿಮಾನ ಹಾರಾಟ ಯಶಸ್ವಿ…..

    Published

    on

    ಕುವೈಟ್ ನಿಂದ ಮಂಗಳೂರಿಗೆ ಕನ್ನಡಿಗರ ಮೊದಲ ಚಾರ್ಟರ್ ವಿಮಾನ ಹಾರಾಟ ಯಶಸ್ವಿ….

    ಮಂಗಳೂರು: ಕುವೈಟ್ ನ ಕರ್ನಾಟಕ ಸಂಘಗಳು ಒಂದುಗೂಡಿ ಅಕ್ಬರ್ ಟ್ರಾವೆಲ್ಸ್ ನ ಸಹಯೋಗದೊಂದಿಗೆ ಕೋವಿಡ್-19 ಮಹಾಮಾರಿಗೆ ಸಿಲುಕಿ ಸಂಕಷ್ಟಕ್ಕೆ ಒಳಗೊಂಡ,

    ಕುವೈಟ್ ಕನ್ನಡಿಗರನ್ನು ತಮ್ಮ ಮಾತೃಭೂಮಿಗೆ ತಲುಪಿಸುವ ಸಲುವಾಗಿ ಜೂನ್ 17, ಬುಧವಾರದಂದು ಜಜೀರಾ ಖಾಸಗಿ ವಿಮಾನವು ಯಶಸ್ವಿಯಾಗಿ ಹಾರಾಟ ನಡೆಸಿತು.

    ಎಲ್ಲಾ ಸಂಘದ ಮುಖಂಡರು ಮತ್ತು ಅಕ್ಬರ್ ಟ್ರಾವೆಲ್ಸ್ ತಂಡ ಎಲ್ಲಾ ಪ್ರಯಾಣಿಕರಿಗೆ ಶುಭ ಹಾರೈಸಿದರು.

    ಹಿರಿಯ ನಾಗರಿಕರು, ಗರ್ಭಿಣಿ ಸ್ತ್ರೀಯರು, ಅವಧಿ ಮುಗಿದ ಭೇಟಿ ವೀಸಾ ಹೊಂದಿದವರು, ಕೆಲಸ ಕಳೆದುಕೊಂಡವರು ಹೀಗೆ ತಾಯಿನಾಡಿಗೆ ಬರಲಾಗದೆ ಕೋವಿಡ್ 19 ನಿಂದ ಸಮಸ್ಯೆ ಅನುಭವಿಸುತ್ತಿದ್ದ,

    ಒಟ್ಟಾರೆ 165 ಪ್ರಯಾಣಿಕರನ್ನು ಒಳಗೊಂಡ ಖಾಸಗಿ ವಿಮಾನವು ಸುರಕ್ಷಿತವಾಗಿ ಮಂಗಳೂರು ವಿಮಾನ ನಿಲ್ದಾಣವನ್ನು ತಲುಪಿತು.

    ಈ ಯಶಸ್ವಿ ಕಾರ್ಯವನ್ನು ಕಾರ್ಯಗತಗೊಳಿಸುವಲ್ಲಿ ಭಾರತ ಸರ್ಕಾರ, ಕರ್ನಾಟಕ ರಾಜ್ಯ ಸರ್ಕಾರ, ಕುವೈಟ್ ಸರ್ಕಾರ ,ಭಾರತೀಯ ರಾಯಭಾರಿ ಕಚೇರಿ ಕುವೈಟ್,

    ಜಿಲ್ಲಾಧಿಕಾರಿಗಳ ಕಚೇರಿ ಮಂಗಳೂರು ಮತ್ತು ಜಜೀರಾ ಏರ್ವೇಸ್ ನ ಇಡೀ ತಂಡದ ಬೆಂಬಲ ಮತ್ತು ಸಹಕಾರ ಶ್ಲಾಘನೀಯ.

    ಮತ್ತು ಈ ಕಾರ್ಯಕ್ಕೆ ಶ್ರಮಿಸಿದ ಎಲ್ಲ ಕುವೈಟ್ ಕರ್ನಾಟಕ ಸಂಘಗಳ ಶ್ರಮ ಪ್ರಶಂಸನೀಯ.

    ಭಾರತ ಸರ್ಕಾರವು ವಂದೇ ಭಾರತ್ ಮಿಷನ್ ಘೋಷಿಸಿದ ಸಮಯದಿಂದ ಎಲ್ಲ ಕುವೈಟ್ ಕರ್ನಾಟಕ ಸಂಘಗಳು ‘ಯುನೈಟೆಡ್ ಕರ್ನಾಟಕ ಅಸೋಸಿಯೇಷನ್ಸ್ ಆಫ್ ಕುವೈಟ್’ ಬ್ಯಾನರ್ ಅಡಿಯಲ್ಲಿ,

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಸಾಧ್ಯವಿರುವ ಎಲ್ಲ ಸಂಪರ್ಕಗಳನ್ನು ಸಂಪರ್ಕಸಿದ್ದು, ತೊಂದರೆಗೀಡಾದ ಕುವೈಟ್ ಕನ್ನಡಿಗರನ್ನು ಹಿಂತಿರುಗಿಸಲು ವಿನಂತಿಸಿದ್ದರು.

    ಅವರಲ್ಲಿ ಹಲವರ ವೈದ್ಯಕೀಯ ಸ್ಥಿತಿ ಗಂಭೀರವಾಗಿದ್ದು, ಕೆಲವರು ಉದ್ಯೋಗ ಕಳೆದುಕೊಂಡಿದ್ದರು.

    ಮತ್ತು ಕಳೆದ 3-4 ತಿಂಗಳುಗಳಿಂದ ವೇತನ ಯಾವುದೇ ಇಲ್ಲದೆ ಸಮಸ್ಯೆಯಲ್ಲಿದ್ದವರು ಮತ್ತು ಕೆಲವು ಗರ್ಭಿಣಿಯರು ಇದ್ದರು.

    ತಾಯಿನಾಡಿಗೆ ಹಿಂತಿರುಗುವ ಕಾಯುವಿಕೆಯಲ್ಲಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಕೆಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಕಷ್ಟ ಎದುರಿಸುತ್ತಿದ್ದ ನಮ್ಮ ಕನ್ನಡಿಗರನ್ನು ತಾಯ್ನಾಡಿಗೆ ಹಿಂತಿರುಗಿಸುವ  ಭರವಸೆಯೊಂದಿಗೆ ನಾವು ದಣಿವರಿಯಿಲ್ಲದೆ ಕೆಲಸ ಮಾಡಿದ್ದೇವೆ ಮತ್ತು ಸುರಕ್ಷಿತವಾಗಿ ಮನೆಗೆ ಹಿಂತಿರುಗಿಸಿದ್ದೇವೆ.

    ಕನ್ನಡಿಗರ ಕಷ್ಟಗಳನ್ನು ಸರಾಗಗೊಳಿಸುವ ಪ್ರಯತ್ನಗಳನ್ನು ನಾವು ಮುಂದುವರಿಸುತ್ತೇವೆ.

    ತಮ್ಮ ಪೂರ್ಣ ಪ್ರಮಾಣದ ಸಹಕಾರ ನೀಡಿದ ಅಕ್ಬರ್ ಟ್ರಾವೆಲ್ಸ್ ನ ಪ್ರಾದೇಶಿಕ ವ್ಯವಸ್ಥಾಪಕರಾದ ಶೇಖ್ ಅಬ್ದುಲ್ಲಾ ಅವರಿಗೆ ನಮ್ಮ ಪ್ರಾಮಾಣಿಕ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಅಕ್ಬರ್ ಟ್ರಾವೆಲ್ಸ್ ತಂಡ ಸಂತಸ ವ್ಯಕ್ತಪಡಿಸಿದೆ.

    ಹಾಗೂ ಪ್ರಮುಖವಾಗಿ ಈ ಯಶಸ್ವಿ ಕಾರ್ಯದ ನಾಯಕತ್ವ ಹೊತ್ತ ತುಳು ಕೂಟ ಕುವೈಟ್ ನ ಗೌರವಾನ್ವಿತ ಅಧ್ಯಕ್ಷರಾದ ರಮೇಶ್ ಎಸ್ ಭಂಡಾರಿಯವರ ಶ್ರಮ ಶ್ಲಾಘನೀಯ.

    ಸ್ಟೀವನ್ ರೆಗೊ (KCWA),  ರಾಜೇಶ್ ವಿಟ್ಟಲ್(ಕನ್ನಡ ಕೂಟ), ಗುರುಪ್ರಸಾದ್ ಹೆಗ್ಡೆ (BSK ) ಮತ್ತು ಜಜೀರಾ ಏರ್ವೇಸ್ ನ ಮುಖ್ಯಸ್ಥರು ಹಾಗು ಶ್ರೀಮತಿ ಸಿಂಧು ರೂಪೇಶ್ – ಡಿಸಿ ಮಂಗಳೂರು,

    ಡಿಸಿ ಕಚೇರಿಯಿಂದ ಡಾ.ಯತೀಶ್ ಉಲ್ಲಾಳ್ ಮತ್ತು ಮಂಗಳೂರಿನ ಕ್ಯಾರೆಂಟೈನ್ ವಿಭಾಗದ  ಮನೀಶ್, ಎಸ್. ಎಂ.ಅಜರ್ (KKMA ), ಕೃಷ್ಣ ಪೂಜಾರಿ (ಬಿಲ್ಲವ್ ಸಂಗ),

    ಅಬ್ದುಲ್ ನಾಸರ್ ಖಾನ್ (KMWA ),  ಜಾಫರ್ ಸಾದಿಕ್ (IMA ),  ರಾಜ್ ಭಂಡರಿ (BPP ), ರಾಜೇಶ್ ಮೆಂಡನ್ (MAK ), ಡಾ.ಸುರೇಂದ್ರ ನಾಯಕ್ (GSB) ಅವರ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲ ನೀಡಿದ್ದರು.

    Click to comment

    Leave a Reply

    Your email address will not be published. Required fields are marked *

    LATEST NEWS

    ಫರಂಗಿಪೇಟೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ, ಮೂವರಿಗೆ ಗಾಯ

    Published

    on

    ವಿಟ್ಲದಿಂದ ಮಂಗಳೂರು ವಿಮಾನ ನಿಲ್ದಾಣದ ಕಡೆಗೆ ಸಾಗುತ್ತಿದ್ದ ಕಾರೊಂದು ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಮೂವರು ಗಾಯಗೊಂಡ ಘಟನೆ ಇಂದು ಬೆಳಗ್ಗೆ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ಸಂಭವಿಸಿದೆ.

    ಬೆಳಗ್ಗೆ 6.15 ರ ವೇಳೆಗೆ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಈ ಮೂವರು ಪ್ರಯಾಣಿರಿಗೆ ತುರ್ತಾಗಿ ವಿಮಾನ ನಿಲ್ದಾಣಕ್ಕೆ ಹೋಗಬೇಕಾಗಿದ್ದರಿಂದ ಅವರನ್ನು ಆಟೋ ರಿಕ್ಷಾದಲ್ಲಿ ವಿಮಾನ ನಿಲ್ದಾಣಕ್ಕೆ ಕಳುಹಿಸಿ ಕೊಡಲಾಯಿತು.

    ವೇಗವಾಗಿ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದು ಬಳಿಕ ಮನೆಯೊಂದರ ಅಂಗಳದಲ್ಲಿ ಮಗುಚಿ ಬಿದ್ದಿದೆ. ಬೆಳಗ್ಗಿನ ವೇಳೆ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಚಾಲಕನ ನಿಯಂತ್ರಣ ಕಳೆದುಕೊಂಡಿರ ಬೇಕೆಂದು ಶಂಕಿಸಲಾಗಿದೆ.

    Continue Reading

    LATEST NEWS

    ಮೆಟ್ರೋ ನಿಲ್ದಾಣದಲ್ಲಿಅನಾಹುತ; ಹಳಿಗೆ ಹಾರಿ ವ್ಯಕ್ತಿ ಆತ್ಮಹ*ತ್ಯೆ

    Published

    on

    ದೆಹಲಿ/ಮಂಗಳೂರು: ದೆಹಲಿಯ ಲೋಕ ಕಲ್ಯಾಣ್ ಮಾರ್ಗದ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಳಿಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡ ಘಟನೆ ನಡೆದಿದೆ. 28 ವರ್ಷದ ದೇವೇಂದ್ರಕುಮಾರ್ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.

    ರಾಜಸ್ಥಾನ್‌ ಅಲ್ವಾರ್ ನಿವಾಸಿಯಾಗಿರುವ ದೇವೆಂದ್ರ ಕುಮಾರ್ ಲೋಕಕಲ್ಯಾಣ್ ಮಾರ್ಗ ಮೆಟ್ರೋ ನಿಲ್ದಾಣದ ಪ್ಲಾಟ್‌ ಫಾರ್ಮ್‌ ಸಂಖ್ಯೆ 2ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಶವವನ್ನು ಆರ್‌ಎಂಎಲ್‌ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

    Continue Reading

    LATEST NEWS

    ಶಿರೂರು ಗುಡ್ಡ ಕುಸಿತ; ಮೂಳೆ ಸಿಕ್ಕಿದ್ದು ದನದ್ದು, ಮನುಷ್ಯನದಲ್ಲ

    Published

    on

    ಅಂಕೋಲಾ: ತಾಲೂಕಿನ ಶಿರೂರು ಗುಡ್ಡ ಕುಸಿತದ ಶೋಧ ಕಾರ್ಯಾಚರಣೆ ವೇಳೆ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದ್ದ ಮೂಳೆ ದನದ ಮೂಳೆ ಎಂದು ವೈಜ್ಞಾನಿಕ ಪರೀಕ್ಷೆಯಿಂದ ದೃಢಪಟ್ಟಿದೆ.

    ಭಾನುವಾರ ಸಂಜೆ ಕಾರ್ಯಾಚರಣೆಯಲ್ಲಿ ಮೂಳೆ ಪತ್ತೆಯಾಗಿದ್ದರಿಂದ ಇದು ಶಿರೂರು ದುರಂತದಲ್ಲಿ ಗಂಗಾವಳಿ ನದಿಯಲ್ಲಿ ಕಣ್ಮರೆಯಾಗಿರುವ ಮೂವರಲ್ಲಿ ಯಾರದಾದರೂ ಮೂಳೆ ಇರಬಹುದು ಎಂಬ ಜಿಜ್ಞಾಸೆಗೆ ಕಾರಣವಾಗಿತ್ತು.

    ಆದರೆ ಇದೀಗ ಮೂಳೆ ಪರೀಕ್ಷೆ ನಡೆಸಿ ವರದಿ ನೀಡಲಾಗಿದ್ದು ದನದ ಮೂಳೆ ಎಂಬುದು ದೃಢಪಟ್ಟಿದೆ.

    Continue Reading

    LATEST NEWS

    Trending