HomeLATEST NEWSಏಟಾಗಿ ಬಿದ್ದ 'ಗೆಂದಗಿಡಿ'ಗೆ ಜೀವದಾನ : ಆರೈಕೆ ಮಾಡಿ ಬಿಡುಗಡೆ ಮಾಡಿದ ವಿಶುಶೆಟ್ಟಿ..!

ಏಟಾಗಿ ಬಿದ್ದ ‘ಗೆಂದಗಿಡಿ’ಗೆ ಜೀವದಾನ : ಆರೈಕೆ ಮಾಡಿ ಬಿಡುಗಡೆ ಮಾಡಿದ ವಿಶುಶೆಟ್ಟಿ..!

ಉಡುಪಿ ನಿಟ್ಟೂರು ಬಳಿ ರೆಕ್ಕೆಗೆ ಏಟಾಗಿ ಹಾರಲಾಗದ ಸ್ಥಿತಿಯಲ್ಲಿದ್ದ ಬ್ರಾಹ್ಮಣಿ ಕೈಟ್ ಗರುಡ ಪಕ್ಷಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ, ಚಿಕಿತ್ಸೆ ನೀಡಿ ಮತ್ತೆ ಪರಿಸರಕ್ಕೆ ಬಿಟ್ಟಿದ್ದಾರೆ.

ಉಡುಪಿ : ಉಡುಪಿ ನಿಟ್ಟೂರು ಬಳಿ ರೆಕ್ಕೆಗೆ ಏಟಾಗಿ ಹಾರಲಾಗದ ಸ್ಥಿತಿಯಲ್ಲಿದ್ದ ಬ್ರಾಹ್ಮಣಿ ಕೈಟ್ ಗರುಡ ಪಕ್ಷಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ, ಚಿಕಿತ್ಸೆ ನೀಡಿ ಮತ್ತೆ ಪರಿಸರಕ್ಕೆ ಬಿಟ್ಟಿದ್ದಾರೆ.

ವೈದ್ಯರ ಸಲಹೆ ಪಡೆದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಸುಮಾರು 22 ದಿನಗಳವರೆಗೆ ತನ್ನ ಸುಪರ್ದಿಯಲ್ಲಿರಿಸಿ ಆರೈಕೆ ಮಾಡಿದ್ದ ವಿಶು ಶೆಟ್ಟಿ ಪಕ್ಷಿ ಪೂರ್ಣವಾಗಿ ಚೇತರಿಸಿಕೊಂಡು ಹಾರಲು ಶಕ್ತವಾದ ಬಳಿಕ ಗುರುವಾರ ಅದನ್ನು ಬಿಡುಗಡೆಗೊಳಿಸಿದ್ದಾರೆ.

ನಿರ್ಗತಿಕರಿಗೆ, ರೋಗಿಗಳಿಗೆ, ಸಂತ್ರಸ್ತರಿಗೆ ಸದಾ ಮಾನವೀಯ ನೆರವು ನೀಡಿ ಪ್ರಸಿದ್ಧರಾಗಿರುವ ವಿಶು ಶೆಟ್ಟಿ ಅವರು ಹಲವಾರು ಗಾಯಗೊಂಡ ಪಕ್ಷಿಗಳಿಗೂ ಆರೈಕೆ ಮಾಡಿ ಅವುಗಳನ್ನು ಸಂರಕ್ಷಿಸುವ ಕಾರ್ಯ ನಡೆಸಿದ್ದಾರೆ.

ಗರುಡ ಪಕ್ಷಿಗೆ ಆರೈಕೆ ಮಾಡಿ ಹಾರಲು ಬಿಟ್ಟಿರುವುದು ಇದು ಎರಡನೆಯ ಪ್ರಕರಣವಾಗಿದೆ.

ಬೆನ್ನು, ರೆಕ್ಕೆ, ಬಾಲ ಎಲ್ಲಾ ಕೆಂಪು ಅಥವಾ ಕೆಮ್ಮಣ್ಣಿನ ಬಣ್ಣ, ತಲೆ, ಎದೆ ಬಿಳಿ ಬಣ್ಣ ಹೊಂದಿರುವ ಹದ್ದಿನ ಗಾತ್ರದ ಗರುಡನನ್ನು ಕಾಣದ ಕರಾವಳಿಗರಿಲ್ಲ.

ತುಳು ಭಾಷೆಯಲ್ಲಿ ` ಗೆಂದಗಿಡಿ ‘ ಎಂದೇ ಗುರುತಿಸಿಕೊಂಡಿರುವ ಈ ಪಕ್ಷಿಯನ್ನು ಇಂಗ್ಲೀಷ್‌ನಲ್ಲಿ `ಬ್ರಾಹ್ಮಿಣಿ ಕೈಟ್ ‘ ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಹಾಲೋಸ್ಟರ್‌ ಇಂಡುಸ್ ಎಂದಾಗಿದೆ.

ಕೋಳಿ ಮರಿಗಳನ್ನು ಕಣ್ಣು ಮಿಟುಕಿಸುವುದರೊಳಗೆ ಎತ್ತಿಕೊಂಡು ಹಾರಿ ಹೋಗುವ ಈ ಗರುಡ, ಆಸ್ತಿಕರ ಪಾಲಿಗೆ ವಿಷ್ಣು ದೇವರ ವಾಹನವಾಗಿದ್ದಾನೆ.

ಹೀಗಾಗಿ ಯಾರೂ ಗರುಡನನ್ನು ಬೇಟೆಯಾಡುವುದಿಲ್ಲ.

ಸಾಮಾನ್ಯವಾಗಿ ಒಂಟಿಯಾಗಿ ನದಿ, ಸಮುದ್ರ ತೀರ, ಗದ್ದೆಗಳುಳ್ಳ ಗ್ರಾಮೀಣ ಭಾಗ, ನಗರ ಪ್ರದೇಶ, ಮೀನು ಮಾರುಕಟ್ಟೆ, ಬಂದರು, ಹೀಗೆ ಎಲ್ಲೆಡೆಗಳಲ್ಲಿ ಗರುಡ ಪಕ್ಷಿ ಕಂಡು ಬರುತ್ತದೆ.

ಎತ್ತರದ ತೆಂಗಿನ ಮರ, ಬೋಗಿ ಮರಗಳಲ್ಲಿ ಕೋಲು, ಕಡ್ಡಿಗಳನ್ನು ಸಂಗ್ರಹಿಸಿ ಅಸ್ತವ್ಯಸ್ತವಾಗಿ ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡುತ್ತದೆ.

Latest articles

ಕಾಸರಗೋಡು: ಎಮರ್ಜೆನ್ಸಿಲೈಟ್‌ನಲ್ಲಿ ಅಕ್ರಮ ಚಿನ್ನ ಸಾಗಾಟ- ಓರ್ವನ ಬಂಧನ..!

ಅಕ್ರಮ ಚಿನ್ನ ಸಾಗಾಟಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಕಾಸರಗೋಡು ಡಿ ವೈ ಎಸ್ಪಿ ಪಿ. ಬಾಲಕೃಷ್ಣನ್ ನೇತೃತ್ವದ ಪೊಲೀಸರು...

ಯಾದಗಿರಿ: ನಿಂತಿದ್ದ ಲಾರಿಗೆ ಕ್ರೂಷರ್ ಡಿಕ್ಕಿ- ಐದು ಮಂದಿ ಸ್ಥಳದಲ್ಲೇ ಸಾವು…!

ನಿಂತಿದ್ದ ಲಾರಿಗೆ ಕ್ರೂಷರ್ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 13 ಮಂದಿಗೆ ಗಾಯಗಳಾಗಿರುವ ಘಟನೆ...

ಬಂಟ್ವಾಳ ವಿಟ್ಲದಲ್ಲಿ ರಸ್ತೆಗೆ ಅಡ್ಡ ಬಂದ ದನ : ಆಟೋ ರಿಕ್ಷಾ ಪಲ್ಟಿ-50 ಲೀಟರ್ ಹಾಲು ನಷ್ಟ..!

ಸಾರಡ್ಕ - ಪುಣಚ ರಸ್ತೆಯ ತೋರಣಕಟ್ಟೆಯ ಸೊಸೈಟಿಯ ಸಮೀಪ ಮಂಗಳವಾರ ದನ ರಸ್ತೆಯಲ್ಲಿ ಅಡ್ಡ ಬಂದ ಹಿನ್ನಲೆಯಲ್ಲಿ ಹಾಲು...

ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಎಫೆಕ್ಟ್- ಮುಂಗಾರು ಮತ್ತಷ್ಟು ವಿಳಂಬ ಸಾಧ್ಯತೆ..!

ಜೂನ್ ಎರಡನೇ ವಾರಕ್ಕೆ ಕಾಲಿಟ್ಟರೂ ಮುಂಗಾರು ಮಳೆಯ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹವಾಮಾನ ಇಲಾಖೆಯ ಪ್ರಕಾರ ಈ ಬಾರಿ...