ಜಿಲ್ಲೆಯ ಬಿಜೆಪಿಯ ಹಿರಿಯ ಮುಖಂಡರ ಕುಮ್ಮಕ್ಕು
ಮಂಗಳೂರು : ಮಂಗಳೂರಿನ ನೆಹರೂ ಮೈದಾನದ ಮರು ನಾಮಕರಣಕ್ಕೆ ನನ್ನ ವಿರೋಧವಿದ್ದು ಈಗಾಗಲೇ ಇರುವ ಒಂದು ಹೆಸರನ್ನು ತೆಗೆದು ಇನ್ನೊಂದು ಹೆಸರಿನ ನಾಮಕರಣ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮಂಗಳೂರಿನ ನೆಹರು ಮೈದಾನದಕ್ಕೆ ಕೋಟಿ ಚೆನ್ನಯ್ಯರ ಹೆಸರನ್ನು ಇಡುವುದಕ್ಕೆ ನನ್ನ ವಿರೋಧ ಇದೆ. ಈಗಾಗಲೇ ಇರುವ ಒಂದು ಹೆಸರನ್ನು ತೆಗೆದು ಇನ್ನೊಂದು ಹೆಸರಿನ ನಾಮಕರಣ ಮಾಡುವುದು ಸರಿಯಲ್ಲ.
ಬೇರೆ ಸ್ಥಳಗಳಿಗೆ ಬೇಕಾದರೆ ನಾಮಕರಣ ಮಾಡಲಿ. ಅದಕ್ಕೆ ನಮ್ಮ ವಿರೋಧ ಇಲ್ಲ. ನೆಹರು ಮೈದಾನಕ್ಕೆ ಮರುನಾಮಕರಣಕ್ಕೆ ಬಿಲ್ಲವ ಸಮಾಜ ಕೂಡ ಒಪ್ಪಲ್ಲಾ. ಇಂತಹ ಬ್ಯಾನರ್ ಹಾಕಿಸಿರುವುದು ಕೂಡಾ ಜಿಲ್ಲೆಯ ಬಿಜೆಪಿಯ ಹಿರಿಯ ಮುಖಂಡರ ಕುಮ್ಮಕ್ಕು ನಿಂದ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.
ರಾಜ್ಯಸರಕಾರ ಮೆಸ್ಕಾಂನ್ನು ಕೂಡಾ ಖಾಸಗೀಕರಣ ಮಾಡಲು ಹೊರಟಿದೆ. ವಿದ್ಯುತ್ ಬಿಲ್ ಕುರಿತು ಸರಕಾರ ಇನ್ನೂ ಗೊಂದಲದಲ್ಲಿದೆ. ಇದನ್ನು ಸರಿಪಡಿಸುವ ಕೆಲಸವನ್ನು ಇನ್ನೂ ಮಾಡಿಲ್ಲ. ಒಟ್ಟಾಗಿ ಬಿಲ್ ನೀಡುವ ಬದಲು ಬಿಲ್ ಪ್ರತ್ಯೇಕವಾಗಿ ವಿಂಗಡಿಸಿ ಜನರಿಗೆ ನೀಡಬೇಕಿತ್ತು. ಎರಡು ತಿಂಗಳ ಬಿಲ್ ಒಂದೇ ಬಿಲ್ ಗೆ ಸೇರಿಸಿರುವ ಕಾರಣ ಬಿಲ್ ಹೆಚ್ಚುವರಿಯಾಗಿದೆ.
ಮುಖ್ಯಮಂತ್ರಿ ಮಾತು ಮೆಸ್ಕಾಂನವರು ಕೇಳುತ್ತಿಲ್ಲ. ಈ ಬಿಲ್ ಕೊರೊನಾ ಸಮಯದಲ್ಲಿ ಜನರಿಗೆ ನೋವಿನ ಮೇಲೆ ಬರೆ ಎಳೆದಂತಾಗಿದೆ. ವಿದ್ಯುತ್ ಬಿಲ್ ಸಮಸ್ಯೆ ಸರಿಪಡಿಸವಲ್ಲಿ ಸರಕಾರ ತನ್ನ ಮೊಂಡುತನ ತೋರಿಸುತ್ತಿದೆ. ಇದರ ವಿರುದ್ಧ ಹೋರಾಟ ಪ್ರತಿಪಕ್ಷ ನಾಯಕರಿಗೆ ಅನಿವಾರ್ಯವಾಗಿದೆ ಎಂದರು.