ಕುವೈಟ್: ಭಾರತೀಯ ಪ್ರವಾಸಿ ಪರಿಷತ್ ಕುವೈಟ್ ಕರ್ನಾಟಕ ಘಟಕದ ವತಿಯಿಂದ ಗಣೇಶ ಹಬ್ಬದ ಸಲುವಾಗಿ ಸಾಂಸ್ಕೃತಿಕ ಕಾರ್ಯಕ್ರಮ 2022 ಆಯೋಜಿಸಲಾಯಿತು.
ಖ್ಯಾತ ಚೆಂಡೆವಾದಕರು ಹವ್ಯಾಸಿ ಭಾಗವತರು ಹಾಗೂ ಯಕ್ಷಮಿತ್ರರು ಕುವೈಟ್ ಇದರ ಸಂಚಾಲಕರಾದ ರಫೀಕ್ ಉದ್ದಿನ್ ಮಡಂತ್ಯಾರ್ ಇವರ ಅಮೋಘವಾದ ಚೆಂಡೆ ವಾದನ ಮೂಲಕ ಕಾರ್ಯಕ್ರಮ ಮೊದಲ್ಗೊಂಡಿತು.
ಖ್ಯಾತ ಉದ್ಯಮಿ ಸತೀಶ್ ಚಂದ್ರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಡಾ. ದಿವಾಕರ್, ರಾಜೇಶ್ ಮೆಂಡನ್, ಹಾಗೂ ಮನೋಜ್ ಷಾಹ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಗೀತ ರಸಮಂಜರಿ ಹಾಗೂ ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನೃತ್ಯ ಜೊತೆಗೆ ಕುವೈಟ್ನಲ್ಲಿ ನೆಲೆಸಿರುವ ಕರ್ನಾಟಕದ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಭಾರತೀಯ ಪ್ರವಾಸಿ ಪರಿಷತ್ ಕರ್ನಾಟಕ ಘಟಕದ ಅಧ್ಯಕ್ಷರಾದ ರಾಜ್ ಭಂಡಾರಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು.