LATEST NEWS
Viral Video; ಸ್ಮೋಕ್ ಬಿಸ್ಕೆಟ್ ತಿನ್ನುತ್ತಿದ್ದಂತೆಯೇ ಬಾಲಕ ಅಸ್ವಸ್ಥ
ಸ್ಮೋಕ್ ಬಿಸ್ಕೆಟ್ ತಿಂದು ಬಾಲಕ ಅಸ್ವಸ್ಥಗೊಂಡ ಘಟನೆ ದಾವಣಗೆರೆ ನಗರದ ಪಿಬಿ ರಸ್ತೆ ಬಳಿ ನಡೆದಿದೆ. ಬರ್ಡ್ಸ್ ಎಕ್ಸಿಬಿಷನ್ನಲ್ಲಿ ಬಾಲಕ ಸ್ಮೋಕ್ ಬಿಸ್ಕೆಟ್ ತಿಂದಿದ್ದಾನೆ.
ತಿನ್ನುತ್ತಿದ್ದಂತೆಯೇ ಬಾಲಕ ಪ್ರಜ್ಞೆ ತಪ್ಪಿದ್ದಾನೆ. ಕೂಡಲೇ ಬಾಲಕನನ್ನು ಪೋಷಕರು ಆಸ್ಪತ್ರೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ನಂತರ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಮೋಕ್ ಬಿಸ್ಕೆಟ್ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ದೂರಿನ ಬಳಿಕ ಅಧಿಕಾರಿಗಳು ಸ್ಮೋಕ್ ಬಿಸ್ಕೆಟ್ ಮಾರಾಟ ಬಂದ್ ಮಾಡಿ ಅವುಗಳನ್ನು ವಶಕ್ಕೆ ಪಡೆದಿದ್ದಾರೆ.
ಸ್ಮೋಕ್ ಬಿಸ್ಕೆಟ್ ತಿಂದು ಬಾಲಕ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅದನ್ನು ತಿನ್ನದಂತೆ ತಂದೆ-ತಾಯಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಬಾಲಕ ಅಸ್ವಸ್ಥ ಆಗೋ ದೃಶ್ಯ ತಾಯಿಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
LATEST NEWS
ಬೆಳಗ್ಗೆ ಏಳುವಾಗ ಬಲಗಡೆಯಿಂದ ಯಾಕೆ ಏಳಬೇಕು ಗೊತ್ತೇ..?
ಮಂಗಳೂರು: ರಾತ್ರಿ ಮಲಗೋದು ಎಷ್ಟು ಮುಖ್ಯವೋ ಬೆಳಗ್ಗಿನ ಜಾವ ಏಳೋದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಸನಾತನ ಹಿಂದೂ ಧರ್ಮದಲ್ಲಿ ಒಂದು ವಿಶೇಷ ಸಂಪ್ರದಾಯ ಇದೆ. ಬೆಳಿಗ್ಗೆ ಬಲಗಡೆಯಿಂದ ಎದ್ದು ಅಂಗೈ ಉಜ್ಜಿ ಕಣ್ಣು ಮುಚ್ಚಿ ಕರಾಗ್ರೆ ವಸತೆ ಲಕ್ಷ್ಮಿ ಎನ್ನುವ ಶ್ಲೋಕ ಹೇಳುವುದು. ಬಾಲ್ಯದಲ್ಲಿ ನಮ್ಮ ಹಿರಿಯರು ಹಾಗೂ ನಮ್ಮ ಅಮ್ಮಂದಿರು ಬಲಗಡೆಗೆ ಏಳು ಅಂತ ಹೇಳಿರುವುದನ್ನು ಕೇಳಿರುತ್ತೇವೆ. ಅಥವಾ ನಾವು ಎಡ ಬದಿಯಿಂದ ಎಳುವುದ್ದನ್ನು ನೋಡಿದಾಗ ನಮ್ಮನ್ನು ಬಲಗಡೆಯಿಂದ ಎಬ್ಬಿಸಲು ಟ್ರೈ ಮಾಡಿರಬಹುದು.
ಬಲ ಭಾಗದಿಂದ ಎದ್ದರೆ ಅದೃಷ್ಟ
ಬಲ ಭಾಗದಿಂದ ಎದ್ದರೆ ಒಳ್ಳೆಯದು ಅನ್ನೋದು ಹೇಳಿದ್ದನ್ನ ನಾವು ಕೇಳಿರಬಹುದು. ಬಲ ಭಾಗದಿಂದ ಎಚ್ಚರಗೊಂಡರೆ ದಿನವಿಡೀ ಅದೃಷ್ಟ ಇತ್ಯಾದಿ ಕಲ್ಪನೆಗಳು ನಮ್ಮಲ್ಲಿ ಇರುತ್ತದೆ. ಇನ್ನೊಂದು ವಿಚಾರ ಏನು ಅಂದ್ರೆ ನಮ್ಮ ದೇಹ ನಿದ್ದೆಗೆ ಜಾರಿದಾಗ ನಮ್ಮ ದೇಹದಲ್ಲಿ ಸ್ನಾಯುಗಳು ರೆಸ್ಟ್ ಅಲ್ಲಿ ಇರುತ್ತವೆ.
ವೈಜ್ಞಾನಿಕ ಕಾರಣ
ವೈಜ್ಞಾನಿಕವಾಗಿ ಹೇಳುವುದಾದರೆ ನಮ್ಮ ಹೃದಯ ದೇಹದ ಎಡ ಭಾಗದಲ್ಲಿ ಇದೆ. ಅದರ ಸುತ್ತಲೂ ಹಲವಾರು ಸ್ನಾಯುಗಳು ಇವೆ. ನಾವು ಎಡ ಭಾಗದಿಂದ ಧಿಡೀರ್ ಅಂತ ಇದ್ರೆ ನಮ್ಮ ಇಡೀ ದೇಹದ ಒತ್ತಡ ಆ ಸ್ನಾಯುಗಳ ಮೇಲೆ ಬೀಳುತ್ತೆ. ಆ ಸ್ನಾಯುಗಳಿಗೆ ಸ್ವಲ್ಪ ಪೆಟ್ಟು ಬಿದ್ರೆ ಕೂಡ ಅದು ನಮ್ಮ ಹೃದಯಕ್ಕೆ ತುಂಬಾ ಅಪಾಯಕಾರಿ. ಆದ್ದರಿಂದ ನಮ್ಮ ಹಿರಿಯರು ಬಲ ಭಾಗದಿಂದ ಏಳಬೇಕು ಅಂತ ಹೇಳುತ್ತಿದ್ದರು.
ಇನ್ನು ಎಡಭಾಗದಿಂದ ಎದ್ದರೆ ದಿನ ಒಳ್ಳೆಯದಿರುವುದಿಲ್ಲ, ಏನಾದರೂ ಕೆಟ್ಟದ್ದು ಆಗುವ ಸಾಧ್ಯತೆಗಳು ಇರುತ್ತದೆ ಎಂಬುದು ಜನರ ನಂಬಿಕೆಯಾಗಿರುತ್ತದೆ. ಹಾಗಾಗಿ ಈಗಲೂ ಹೆಚ್ಚಿನ ಜನರು ಬೆಳ್ಳಗ್ಗಿನ ಜಾವ ಎಡಭಾಗದಿಂದ ಏಳದೇ ಬಲಭಾಗದಿಂದ ಏಳುತ್ತಾರೆ. ಬೆಳಗ್ಗೆ ಬಲ ಬದಿಯಿಂದ ಏಳುವುದರಿಂದ ನಿಮ್ಮ ಅಂದಿನ ದಿನ ಶಾಂತಿಯುತವಾಗಿಯೂ ಹಾಗೂ ಒತ್ತಡವಿಲ್ಲದೇ ಕಳೆಯಬಹುದು.
LATEST NEWS
ಅತ್ತ ಜಾತ್ರೆ…ಇತ್ತ ರಕ್ತದೋಕುಳಿ; ಓದಬೇಕಾದವಳು ಪ್ರೀತಿ ಹಿಂದೆ ಬಿದ್ಲು..ಮಚ್ಚಿನೇಟಿಗೆ ಬ*ಲಿಯಾದ್ಲು!
ಚಿಕ್ಕಮಗಳೂರು : ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಸಾಮಾನ್ಯವಾಗಿ ಹೋಗಿದೆ. ಚಿಕ್ಕ ವಯಸ್ಸಿನಲ್ಲಿ ಪ್ರೀತಿಗಾಗಿ ಮನೆ ತೊರೆಯುವವರು, ಪ್ರಾಣ ತ್ಯಾಗ ಮಾಡುವವರು ಅನೇಕ ಮಂದಿ ಇದ್ದಾರೆ. ಬಾಳಿ ಬದುಕಿ ಸಾಧಿಸಬೇಕಾಗಿರುವ ಬದುಕು ಪ್ರೇಮದ ಬಲೆಗೆ ಸಿಲುಕಿ ಒದ್ದಾಡುವುದಿದೆ. ಇಲ್ಲಿ ನಡೆದಿದ್ದು ಅದೇ…! ಆ ಹುಡುಗಿಗೆ ಹದಿನೆಂಟೂ ಆಗಿರಲಿಲ್ಲ. ಪ್ರೀತಿಯ ನಂಟಿಗೆ ಬಿದ್ದು, ಬದುಕು ಕಗ್ಗಂಟಾಗಿ ಕೊನೆಗೆ ಪತಿಯ ಮಚ್ಚಿನೇಟಿಗೆ ಬ*ಲಿಯಾಗಿದ್ದಾಳೆ.
ಪ್ರೀತಿ – ಪ್ರೇಮಕ್ಕೆ ಬ*ಲಿಯಾಯ್ತು ಜೀವ :
ಆಕೆ ಹೆಸರು ಮೇಘಾ. ಇನ್ನೂ ಹದಿನೆಂಟು ವರ್ಷ ತುಂಬಿರಲಿಲ್ಲ. ಅಷ್ಟರಲ್ಲಿ ಆಕೆ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ. ಊರಿನ ಯುವಕನೊಬ್ಬನ ಪ್ರೇಮ ಪಾಶಕ್ಕೆ ಬಿದ್ದು, ಆತನನ್ನೇ ಮದುವೆಯಾಗುವುದಾಗಿ ಹಠಕ್ಕೆ ಬಿದ್ದಿದ್ದಾಳೆ. ತಾಯಿಯಾದರೂ ಏನು ಮಾಡಿಯಾಳು? ಮಗಳ ಹಠಕ್ಕೆ ಮಣಿದು ಮದುವೆ ಮಾಡಿದಳು.
ಆದರೆ, ಆರೇ ತಿಂಗಳಲ್ಲಿ ಗಂಡನ ಮನೆ ತೊರೆದ ಮಗಳು ಆತನಿಂದಲೇ ಇಹಲೋಕ ತ್ಯಜಿಸಿದ್ದಾಳೆ. ಈ ದುರಂ*ತ ಸಂಭವಿಸಿರುವುದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚ್ಚಿ ಎಂಬ ಗ್ರಾಮದಲ್ಲಿ.
6 ತಿಂಗಳಿಗೇ ತವರು ಸೇರಿದ ಮೇಘಾ :
ಮೇಘಾ 10 ನೇ ತರಗತಿ ಓದುತ್ತಿದ್ದಳು. ಇದೇ ಗ್ರಾಮದ ಚರಣ್ ಎಂಬಾತನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಳು. ಆದ್ರೆ ಅಪ್ರಾಪ್ತೆಯಾಗಿದ್ದ ಕಾರಣ ಮೇಘಾಳ ತಾಯಿ ಕೋಮಲ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಚರಣ್ ವಿರುದ್ಧ ಅಪಹರಣ ಮತ್ತು ಅತ್ಯಾಚಾರದ ಕೇಸ್ ದಾಖಲಿಸಿದ್ದರು. ಚರಣ್ನನ್ನು ಜೈಲು ಸೇರಿದ. ಮಗಳು ಬಿಟ್ಟಾಳ್ಯೇ? ಮೇಘಾ ಮಾತ್ರ ಯಾವುದಕ್ಕೂ ತಲೆಬಾಗದೆ ಚರಣ್ ಗಾಗಿ ಹಠ ಹಿಡಿದಿದ್ದಳು. ಹೀಗಾಗಿ ಮಗಳ ಹಠಕ್ಕೆ ತಾಯಿ ಕೋಮಲ ತಲೆಬಾಗಲೇ ಬೇಕಿತ್ತು.
ಮಗಳಿಗೆ 18 ತುಂಬುತ್ತಿದ್ದಂತೆ ಅದೇ ಚರಣ್ ಜೊತೆ ಮದುವೆ ಮಾಡಿಸಿದ್ದರು. ಆದ್ರೆ ಮದುವೆ ಆದ ಮೇಲೆ ಚರಣ್ ಏನು ಅನ್ನೋದು ಮೇಘಾಳಿಗೆ ಅರ್ಥ ಆಗಿತ್ತು. ಗಾಂಜಾ ಚಟದೊಂದಿಗೆ ಊರಿನಲ್ಲಿ ಕಳ್ಳತನ ಮಾಡುತ್ತಿದ್ದ ಚರಣ್ ಜೊತೆ ಸಂಸಾರ ಮಾಡೋದು ಮೇಘಾಳಿಗೆ ಕಷ್ಟವಾಗಿತ್ತು. ಹೀಗಾಗಿ ಆರೇ ತಿಂಗಳಲ್ಲಿ ತಾಯಿ ಮನೆ ಸೇರಿದ್ದಳು.
ಆತ್ತ ಊರ ಜಾತ್ರೆ ಸಂಭ್ರಮ…ಇತ್ತ ನೆತ್ತರೋಕುಳಿ
ಮೇಘಾ ಏನೋ ಚರಣ್ ಸಹವಾಸವೇ ಬೇಡವೆಂದು ತವರು ಸೇರಿದ್ದಳು. ಆದರೆ, ಚರಣ್ ಬಿಡಲಿಲ್ಲ. ಮನೆಗೆ ಬಂದು ತೊಂದರೆ ಕೊಡಲು ಆರಂಭಿಸಿದ್ದ. ಹೀಗಾಗಿ ತಾಯಿ – ಮಗಳು ಊರೇ ಬಿಟ್ಟರು. ಎಪ್ರಿಲ್ 30 ರಂದು ಊರ ಜಾತ್ರೆಗೆ ಕರಕುಚ್ಚಿ ಗ್ರಾಮಕ್ಕೆ ಬಂದಿದ್ದರು.
ಊರಿಗೆ ಬಂದಿದ್ದ ಮೇಘಾ ಭದ್ರಾ ನದಿಗೆ ಬಟ್ಟೆ ತೊಳೆಯಲು ಹೋಗಿದ್ದಾಳೆ. ಅಲ್ಲಿಗೆ ಬಂದಿದ್ದ ಚರಣ್ ಒಬ್ಬಂಟಿಯಾಗಿದ್ದ ಮೇಘಾಳನ್ನ ಮಚ್ಚಿನಿಂದ ಕೊಚ್ಚಿ ಕೊ*ಲೆ ಮಾಡಿದ್ದಾನೆ. ಆತ್ತ ಊರ ಜಾತ್ರೆ ಸಂಭ್ರಮ…ಇತ್ತ ನೆತ್ತರೋಕುಳಿ ಹರಿಯಿತು.
ಬೆಚ್ಚಿ ಬಿದ್ದ ಜನ :
ಮೇಘಾ ಹ*ತ್ಯೆಯಿಂದ ಊರ ಜಾತ್ರೆಯ ಸಂಭ್ರಮದಲ್ಲಿದ್ದ ಜನರು ಬೆಚ್ಚಿಬಿದ್ದಿದ್ದಾರೆ. ಇದು ಚರಣ್ ಕೃತ್ಯ ಅನ್ನೋದು ಗೊತ್ತಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೇಘಾಳ ಹ*ತ್ಯೆ ನಡೆಸಿ ಬೆಂಗಳೂರಿಗೆ ಪರಾರಿಯಾಗುವ ಸಿದ್ಧತೆಯಲ್ಲಿದ್ದ ಚರಣ್ ಕಂಬಿ ಎಣಿಸುತ್ತಿದ್ದಾನೆ.
ಇದನ್ನೂ ಓದಿ : ಅತ್ತೆ – ಅಳಿಯ ಲವ್; ಹೆಂಡತಿಯನ್ನೇ ತ್ಯಾಗ ಮಾಡಿದ ಪತಿ! ಏನಿದು ಕಥೆ?
ಮನೆಗೆ ವಾಪಾಸು ಬರುವಂತೆ ಎಷ್ಟೇ ಹೇಳಿದ್ರೂ ಬರಲಿಲ್ಲ ಅನ್ನೋ ಕಾರಣಕ್ಕೆ ಮೇಘಾಳ ಹ*ತ್ಯೆ ಮಾಡಿರುವುದಾಗಿ ಆರೋಪಿ ಚರಣ್ ಹೇಳಿದ್ದಾನೆ. ಮೇಘಾಳ ಹತ್ಯೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಆರೋಪಿಯನ್ನು ಸ್ಥಳಕ್ಕೆ ಕರೆತರುವಂತೆ ಪಟ್ಟು ಹಿಡಿದಿದ್ದರು. ಆದರೆ ಪೊಲೀಸ್ ಅಧಿಕಾರಿಗಳು ಗ್ರಾಮಸ್ಥರ ಮನ ಒಲಿಸಿ ಮೃ*ತದೇಹವನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.
ಇನ್ನೂ ಓದಿ, ವಿದ್ಯಾವಂತಳಾಗಬೇಕಾಗಿದ್ದ ಹುಡುಗಿ ಪ್ರೀತಿ ಎಂಬ ಹುಚ್ಚು ಕುದುರೆಯ ಹಿಂದೆ ಓಡಿ ಜೀವವನ್ನೇ ಕಳೆದುಕೊಂಡಿರುವುದನ್ನು ಕಂಡು ಗ್ರಾಮವೇ ಮರುಗಿದೆ. ಇನ್ನು ಮುಂದೆ ತಪ್ಪು ದಾರಿ ಹಿಡಿಯುವವರಿಗೆ ಇದು ಪಾಠವೇ ಸರಿ.
LATEST NEWS
ಮೇ 3 ರಂದು Incture ಸಂಸ್ಥೆ ಮಂಗಳೂರಿನಲ್ಲಿ ಶುಭಾರಂಭ
ಡಿಜಿಟಲ್ ಹಾಗೂ ಎಐ ಸೊಲ್ಯೂಷನ್ ಮತ್ತು ಉತ್ಪನ್ನಗಳ ಪ್ರಮುಖ ಪೂರೈಕೆದಾರ ಸಂಸ್ಥೆಯಾಗಿರುವ ಇಂಕ್ಚರ್ ಮಂಗಳೂರಿಗೆ ಪಾದಾರ್ಪಣೆ ಮಾಡಿದೆ. ಮೇ 3 ರಂದು ಮಂಗಳೂರಿನ ದೇರೆಬೈಲಿನ ಬ್ಲೂಬೆರಿ ಹಿಲ್ನಲ್ಲಿರುವ ಎಸ್ಟಿಪಿಐ ಇನ್ಕ್ಯುಬೇಷನ್ ಸೆಂಟರ್ ನಲ್ಲಿ ನೂತನ ಸೆಂಟರ್ ಆರಂಭವಾಗಲಿದೆ ಎಂದು ಇಂಕ್ಚರ್ ಸಂಸ್ಥೆಯ ರವಿಕಿರಣ್ ಮಾಹಿತಿ ನೀಡಿದ್ದಾರೆ.
ಇಂಕ್ಚರ್ ಸಂಸ್ಥೆ ದೇಶ ವಿದೇಶದ ಹಲವು ಕಡೆಗಳಲ್ಲಿ ತಮ್ಮ ಬ್ರಾಂಚ್ ಹೊಂದಿದ್ದು, ಮಂಗಳೂರಿಗೂ ವಿಸ್ತರಣೆ ಮಾಡಿದೆ. ಮಂಗಳೂರಿನಲ್ಲಿ ಉದ್ಯೋಗಾವಕಾಶವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಲಾಗಿದ್ದು, ಈಗಾಗಲೆ 25 ಜನರಿಗೆ ಉದ್ಯೋಗ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕ ಯುವತಿಯರಿಗೆ ಉದ್ಯೋಗ ದೊರೆಯಲಿದೆ ಎಂದು ಹೇಳಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಂತ್ರಜ್ಞಾನದ ಬಳಕೆ ಕೂಡಾ ಸಾಕಷ್ಟು ಹೆಚ್ಚಿದೆ. ಹೀಗಾಗಿ ಇಂಕ್ಚರ್ ಸಂಸ್ಥೆಯಿಂದ ಡಿಜಿಟಲ್ ಕ್ಷೇತ್ರದಲ್ಲಿ ಉತ್ತಮವಾದ ಅಪ್ಲಿಕೇಷನ್ಗಳು ಮತ್ತು SAP ಗ್ರಾಹಕರಿಗೆ ಉತ್ತಮ ಉತ್ಪನ್ನಗಳ ಪ್ಯಾಕೇಜ್ಗಳನ್ನು ಸಂಸ್ಥೆ ನೀಡಲಿದೆ ಎಂದು ಅವರು ಹೇಳಿದ್ದಾರೆ.
ಮೇ 3 ರಂದು ಸಂಜೆ 4 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಯಿಲನ್ ಅವರು ಸಂಸ್ಥೆಯ ಉದ್ಘಾಟನೆ ನೆರವೇರಿಸಲಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿನ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವುದರ ಜೊತೆಗೆ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಇಂಕ್ಚರ್ ಸಂಸ್ಥೆ ಸದಾ ಮಂಗಳೂರು ಜನರ ಜೊತೆಗೆ ಇರಲಿದೆ ಎಂದು ಅವರು ಜನರ ಸಹಾಕಾರ ಕೋರಿದ್ದಾರೆ.
- FILM6 days ago
“ನಿತ್ಯಾಮೆನನ್” ಚಿತ್ರರಂಗದಿಂದ ‘ಬ್ಯಾನ್’ ಆಗಲು ಕಾರಣವೇನು ಗೊತ್ತಾ? ಈ ಬಗ್ಗೆ ನಿತ್ಯಾ ಹೇಳಿದ್ದೇನು?
- DAKSHINA KANNADA6 days ago
ನಮ್ಮ ಮಾತುಗಳಿಗೆ ಅಸ್ತು ಅನ್ನುವ ಅಶ್ವಿನಿ ದೇವತೆಗಳು – ಯಾರಿವರು?
- LATEST NEWS6 days ago
ಕಾಲಿನ ಮೂಲಕವೇ ಕಾರು ಚಲಾಯಿಸಿ, ಡ್ರೈವಿಂಗ್ ಲೈಸೆನ್ಸ್ ಪಡೆದ ಏಷ್ಯಾದ ಮೊದಲ ಮಹಿಳೆ!
- DAKSHINA KANNADA5 days ago
ಪತ್ನಿ ಮಗಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಪದ್ಮರಾಜ್ ಪೂಜಾರಿ
Pingback: ಶ್ವಾನ ಪ್ರಿಯರೇ ಎಚ್ಚರ..ಎಚ್ಚರ..! ಮಾಲಕಿಯ ತಲೆ ಸೀಳಿದೆ ಸಾಕು ನಾಯಿ..! - NAMMAKUDLA NEWS - ನಮ್ಮಕುಡ್ಲ ನ್ಯೂಸ್
Pingback: ఈ వీడియోలో కనిపిస్తున్న బాలుడు స్మోక్ బిస్కెట్లు తిన్న తర్వాత అస్వస్థతకు గురయ్యాడు, ఇప్పుడు చ
Pingback: Fact Check: This boy DID NOT die after consuming dry ice! Here’s what happened - BigCityEvents