NATIONAL
ಮದುವೆಯ ಫಸ್ಟ್ ನೈಟ್ ದಿನವೇ ಮದುಮಗಳು ಗರ್ಭಿಣಿ..!
ಲಕ್ನೋ: ಹೊಸ ಜೀವನವನ್ನು ಆರಂಭಿಸಲು ಸಜ್ಜಾಗಿದ್ದ ಗಂಡನಿಗೆ ತನ್ನ ಮೊದಲ ರಾತ್ರಿಯಂದೇ ಪತ್ನಿ ಶಾಕ್ ನೀಡಿದ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ಮದುಮಗಳು 5 ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.
ಮದುವೆಯಾದ ಮೊದಲ ರಾತ್ರಿಯೇ ವಧುವಿಗೆ ಜೋರಾಗಿ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಸ್ಕ್ಯಾನಿಂಗ್ ಮಾಡಿದ ವೈದ್ಯರು ಆಕೆ 5 ತಿಂಗಳ ಗರ್ಭಿಣಿ ಎಂಬ ವಿಷಯವನ್ನು ತಿಳಿಸಿದ್ದರು. ಇದನ್ನು ತಿಳಿದ ಮದುಮಗ ಅಘಾತಕ್ಕೊಳಗಾಗಿದ್ದ.
ಬಳಿಕ ಈ ವಿಷಯವನ್ನು ಆ ವಧುವಿನ ಮನೆಯವರಿಗೆ ಹೇಳಿದಾಗ ಅವರು ತಮ್ಮ ಮಗಳು ಗರ್ಭಿಣಿಯಾಗಲು ಸಾಧ್ಯವೇ ಇಲ್ಲ, ನೀವೇ ಬೇಕೆಂದೇ ಸುಳ್ಳು ಹೇಳುತ್ತಿದ್ದೀರಿ ಎಂದು ವಾದಿಸಿದರು. ಅಷ್ಟೇ ಅಲ್ಲದೆ, ಸುಳ್ಳು ಕೇಸ್ ಹಾಕಿ ಜೈಲಿಗಟ್ಟುವ ಬೆದರಿಕೆಯೊಡ್ಡಿದರು.
ಈ ಹಿನ್ನೆಲೆಯಲ್ಲಿ ತನ್ನ ಹೆಂಡತಿ ಬೇರೆಯವರ ಮಗುವಿಗೆ ತಾಯಿಯಾಗುತ್ತಿದ್ದಾಳೆ ಎಂದು ತಿಳಿದ ನಂತರವೂ ಮದುಮಗ ಸುಮ್ಮನಾಗಿದ್ದ.
ನಂತರ ಹುಡುಗಿಯ ಮನೆಯವರೇ ಆತನಿಗೆ ಬ್ಲಾಕ್ಮೇಲ್ ಮಾಡಲು ಶುರುಮಾಡಿದ್ದು, 10 ಲಕ್ಷ ರೂ. ಕೊಡದಿದ್ದರೆ ಪೊಲೀಸ್ ಠಾಣೆಯಲ್ಲಿ ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಬೇರೆ ದಾರಿ ಕಾಣದೆ ಆ ವ್ಯಕ್ತಿ ತನ್ನ ಹೆಂಡತಿಯ ಮನೆಯವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. ಬಳಿಕ ಪೊಲೀಸರ ಮಧ್ಯ ಪ್ರವೇಶದ ನಂತರ ಆ ಯುವತಿ ತನಗೆ ಬೇರೊಬ್ಬನೊಂದಿಗೆ ಸಂಬಂಧವಿದ್ದು, ಆತನೇ ತನ್ನ ಹೊಟ್ಟೆಯಲ್ಲಿರುವ ಮಗುವಿನ ತಂದೆ ಎಂದು ಹೇಳಿದ್ದಾಳೆ.
LATEST NEWS
8 ಜನರ ಆಹುತಿ ಪಡೆದ ಪಟಾಕಿ ಸ್ಪೋಟ…! 9 ಜನ ಗಂಭೀರ
ಮಂಗಳೂರು (ಶಿವಕಾಶಿ) : ಪಟಾಕಿ ಫ್ಯಾಕ್ಟರಿಯಲ್ಲಿ ನಡೆದ ಭೀಕರ ಸ್ಫೋಟದಿಂದ 8 ಜನರು ಇಹಲೋಕ ತ್ಯಜಿಸಿದ್ದು, 9 ಜನ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಮೇ9 ರ ಮದ್ಯಾಹ್ನ ಊಟದ ವಿರಾಮದಲ್ಲಿ ಈ ಸ್ಫೋಟ ನಡೆದಿರುವ ಕಾರಣ ಹಲವು ಕಾರ್ಮಿಕರು ಬದುಕಿ ಉಳಿದಿದ್ದಾರೆ.
ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿ ಫ್ಯಾಕ್ಟರಿಯಲ್ಲಿ ಈ ಭೀಕರ ಸ್ಪೋಟ ಸಂಭವಿಸಿದೆ. ಶ್ರೀ ಸುಧರ್ಶನ್ ಫೈರ್ ವರ್ಕ್ಸ್ ಅನ್ನೋ ಫ್ಯಾಕ್ಟರಿ ಇದಾಗಿದ್ದು, ಮದ್ಯಾಹ್ನ ಊಟದ ವೇಳೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಫ್ಯಾಕ್ಟರಿಯಲ್ಲಿ ಸುಮಾರು 50 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಬಹುತೇಕರು ಊಟ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ಈ ಸ್ಫೋಟ ನಡೆದಿದೆ. ವಿಪರೀತವಾಗಿ ಏರಿದ್ದ ತಾಪಮಾನದಿಂದ ಪಟಾಕಿ ಸ್ಫೋಟಗೊಂಡಿದೆ ಎನ್ನಲಾಗಿದೆ.
ವೃದುನಗರ ಜಿಲ್ಲೆಯಲ್ಲಿರುವ ಶಿವಕಾಶಿಯ ಸೆಂಗಮಲೆಪೆಟ್ಟಿ ಎಂಬಲ್ಲಿ ಈ ಅವಘಡ ಸಂಭವಿಸಿದೆ. ಇದೊಂದು ದೊಡ್ಡ ಪ್ರಮಾಣದಲ್ಲಿ ಪಟಾಕಿ ತಯಾರಿಸುವ ಫ್ಯಾಕ್ಟರಿಯಾಗಿದೆ. ಸ್ಫೋಟದ ತೀವ್ರತೆಗೆ 7 ಕೊಠಡಿಯ ಕಟ್ಟಡ ಸಂಪೂರ್ಣ ನೆಲಸಮವಾಗಿ ಹೋಗಿದೆ. ಇಲ್ಲಿ ಪೂರ್ಣವಾಗಿ ಸಿದ್ಧಗೊಂಡಿದ್ದ ಪಟಾಕಿಗಳನ್ನು ಶೇಖರಿಸಿ ಇಡಲಾಗಿತ್ತು ಮತ್ತು ಪಕ್ಕದಲ್ಲೇ ಅರ್ಧ ತಯಾರಿಸಿದ್ದ ಪಟಾಕಿಗಳೂ ಕೂಡಾ ಇಡಲಾಗಿತ್ತು. ಪಟಾಕಿ ತಯಾರಿಸಲು ಇಟ್ಟಿದ ಮದ್ದಿಗೆ ಬೆಂಕಿ ತಗುಲಿ ಭಾರಿ ಸ್ಫೋಟ ಸಂಭವಿಸಿದೆ. 8 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಂಭತ್ತು ಜನ ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 9 ಜನರಲ್ಲಿ ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಊಟಕ್ಕೆ ರೆಸ್ಟ್ ಇದ್ದ ಕಾರಣ ಇನ್ನಷ್ಟು ಜೀವ ಹಾನಿಯಾಗುವುದು ತಪ್ಪಿದ್ದು , ಘಟನೆ ನಡೆಯುವ ಸಮಯದಲ್ಲಿ ಕಟ್ಟಡದ ಸಮೀಪ ಕೇವಲ 17 ಜನ ಮಾತ್ರ ಇದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ. ಪಟಾಕಿ ಸ್ಫೋಟವಾಗುತ್ತಿದ್ದಂತೆ ಸ್ಥಳದಿಂದ ಓಡಿ ರಕ್ಷಿಸಿಕೊಳ್ಳುವ ವೇಳೆ ಕಟ್ಟಡ ಉರುಳಿ ಅದರ ಅಡಿಗೆ ಬಿದ್ದು 8 ಜನ ಮೃತ ಪಟ್ಟಿದ್ದಾರೆ ಎಂದು ಮಾಹಿತಿ ಲಭಿಸಿದೆ. ಘಟನೆ ನಡೆಯುತ್ತಿದ್ದಂತೆ ರಕ್ಷಣೆಗೆ ಉಳಿದ ಕಾರ್ಮಿಕರು ಧಾವಿಸಿದ್ರೂ ಯಾರನ್ನೂ ರಕ್ಷಣೆ ಮಾಡುವ ಪರಿಸ್ಥಿತಿ ಅಲ್ಲಿ ಇರಲಿಲ್ಲ . ಹೀಗಾಗಿ ಸುಮಾರು 1 ಗಂಟೆಯ ಬಳಿಕ ಅಲ್ಲಿ ರಕ್ಷಣಾ ಕಾರ್ಯ ನಡೆಸಲಾಗಿದ್ದು, ಆ ವೇಳೆಗಾಗಲೇ 8 ಜನ ಮೃತ ಪಟ್ಟಿದ್ದಾರೆ.
LATEST NEWS
ಕಣಗಿಲೆ ಹೂ ತಿಂದು ಇಹಲೋಕ ತ್ಯಜಿಸಿದ ಯುವತಿ!
ತಿರುವನಂತಪುರಂ : ಕಣಗಿಲೆ(Oleander flower) ಹೂವು ಹಾಗೂ ಅದರ ಎಲೆಯ ರಸವನ್ನು ಸೇವಿಸಿ ಯುವತಿಯೊಬ್ಬಳು ಮೃ*ತಪಟ್ಟ ಘಟನೆ ಕೇರಳದ ಹರಿಪಾಡ್ ಸಮೀಪದ ಪಲ್ಲಿಪ್ಪಾಡ್ ನಲ್ಲಿ ನಡೆದಿದೆ. ಪಲ್ಲಿಪ್ಪಾಡ್ನ ನೀಂದೂರ್ನ ಕೊಂಡುರೆತ್ತು ಮನೆಯ ಸುರೇಂದ್ರನ್ ಅವರ ಪುತ್ರಿ ಸೂರ್ಯ ಸುರೇಂದ್ರನ್(24) ಮೃ*ತಪಟ್ಟವರು.
ಯುಕೆಗೆ ಹೋಗಬೇಕಿದ್ದವಳು ಸಾ*ವಿನ ಕದ ತಟ್ಟಿದಳು :
ಸೂರ್ಯ ಸುರೇಂದ್ರನ್ ಅವರ ಭಾನುವಾರ ನರ್ಸಿಂಗ್ ಕೆಲಸಕ್ಕೆ ಸೇರಲು ಯುಕೆಗೆ ತೆರಳುತ್ತಿದ್ದರು. ಕೆಲಸಕ್ಕಾಗಿ ವಿಮಾನ ನಿಲ್ದಾಣಕ್ಕೆ ಬಂದಾಗ ನೆಡುಂಬಶ್ಶೇರಿ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದಿದ್ದಾರೆ. ನಂತರ ಆಕೆಯನ್ನು ಅಂಗಮಾಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ತಿರುವಲ್ಲಾ ಬಳಿಯ ಪರುಮಳದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಸೋಮವಾರ ಮೃ*ತಪಟ್ಟಿದ್ದಾಳೆ.
ಫೋನ್ ನಲ್ಲಿ ಮಾತನಾಡುತ್ತಾ ಹೂ ತಿಂದ ಯುವತಿ :
ಸೂರ್ಯ ಸುರೇಂದ್ರನ್ ಅವರ ಭಾನುವಾರ ನರ್ಸಿಂಗ್ ಕೆಲಸಕ್ಕೆ ಸೇರಲು ಯುಕೆಗೆ ತೆರಳುವ ತಯಾರಿಯಲ್ಲಿದ್ದರು. ಭಾನುವಾರ ಬೆಳಗ್ಗೆ ಮನೆಯಿಂದ ಫೋನ್ ಮೂಲಕ ಸಂಬಂಧಿಕರು ಮತ್ತು ಸ್ನೇಹಿತರಿಗೆ ತನ್ನ ಪ್ರಯಾಣದ ವಿಷಯವನ್ನು ತಿಳಿಸಿದ್ದಾಳೆ.
ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಾ ಓಡಾಡುವಾಗ, ಗೊತ್ತಿಲ್ಲದೆ ಎಲೆ ಮತ್ತು ಹೂವನ್ನು ಕಚ್ಚಿದ್ದಾರೆ. ತಕ್ಷಣವೇ ಅದನ್ನು ಉಗುಳಿದ್ದಾರೆ. ಆದರೂ, ಎಲೆ ಮತ್ತು ಹೂವಿನ ರಸದ ಕೆಲವು ಹನಿಗಳು ದೇಹಕ್ಕೆ ಸೇರಿಕೊಂಡಿದ್ದವು ಎಂದು ಮೃ*ತ ಯುವತಿ ಸೂರ್ಯ ಸುರೇಂದ್ರನ್ ತನ್ನ ಪೋಷಕರು ಮತ್ತು ವೈದ್ಯರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಶವರ್ಮಾ ತಿಂದು ಪ್ರಾಣಬಿಟ್ಟ 19 ವರ್ಷದ ಯುವಕ
ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಆಕೆಯ ರಕ್ತದಲ್ಲಿ ವಿಷಕಾರಿ ಅಂಶ ಕಂಡುಬಂದಿದೆ ಎಂದು ಬಹಿರಂಗಪಡಿಸಿದ್ದಾರೆ. ಆದರೆ, ಆಕೆಯ ಹೊಟ್ಟೆಯಲ್ಲಿ ಹೂವು ಅಥವಾ ಎಲೆಯ ಅವಶೇಷಗಳು ಕಂಡುಬಂದಿಲ್ಲ. ಆಕೆಯ ಸಾ*ವಿಗೆ ನಿಜವಾಗಿಯೂ ಕಣಗಿಲೆ ಹೂ ಕಾರಣವಾಯ್ತ ಅನ್ನೋದು ತನಿಖೆಯಿಂದ ತಿಳಿಯಬೇಕಿದೆ.
LATEST NEWS
WATCH VIDEO : ಮರಗಳನ್ನು ತಬ್ಬಿಕೊಂಡು ಗಿನ್ನೆಸ್ ರೆಕಾರ್ಡ್ ಮಾಡಿದ ಯುವಕ; ಈತ ತಬ್ಬಿಕೊಂಡ ಮರಗಳೆಷ್ಟು?
ಮಂಗಳೂರು : ಗಿನ್ನೆಸ್ ದಾಖಲೆ ಮಾಡುವುದು ಹಲವು ಮಂದಿಯ ಕನಸಾಗಿರುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯ ಗಿನ್ನೆಸ್ ದಾಖಲೆ ಮಾಡುವ ಕಾರ್ಯ ಮಾಡುತ್ತಾರೆ. ಇಲ್ಲೊಬ್ಬ ಮರಗಳನ್ನು ತಬ್ಬಿಕೊಂಡು ಗಿನ್ನೆಸ್ ರೆಕಾರ್ಡ್ ಮಾಡಿದ್ದಾನೆ. ಘಾನಾದ ವಿದ್ಯಾರ್ಥಿ 29 ವರ್ಷದ ಅಬುಬಕರ್ ತಾಹಿರು ಮರಗಳನ್ನು ತಬ್ಬಿ ಗಿನ್ನೆಸ್ ದಾಖಲೆ ಬರೆದಾತ.
ಎಷ್ಟು ಮರಗಳನ್ನು ತಬ್ಬಿಕೊಂಡ ಗೊತ್ತಾ!?
ಮರಗಳನ್ನು ತಬ್ಬಿಕೊಳ್ಳುವ ಮೂಲಕ ವಿಶಿಷ್ಟ ರೀತಿಯಲ್ಲಿ ರೆಕಾರ್ಡ್ ಮಾಡಿದ್ದಾನೆ. ಈತ 1 ಗಂಟೆಯಲ್ಲಿ 1,123 ಮರಗಳನ್ನು ತಬ್ಬಿಕೊಳ್ಳುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ. ಅಮೆರಿಕಾದ ಅಲಬಾಮಾದಲ್ಲಿರುವ ಟುಸ್ಕೆಗೀ ರಾಷ್ಟ್ರೀಯ ಅರಣ್ಯದಲ್ಲಿ ಒಂದು ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡಿದ್ದಾನೆ.
ಕೃಷಿ ಸಮುದಾಯದಿಂದ ಬಂದಿರುವ ಅಬುಬಕರ್ ತಾಹಿರು ಪ್ರಕೃತಿ ಮತ್ತು ಸಂರಕ್ಷಣೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಯುವಕ. ಅರಣ್ಯ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. 2023 ರಲ್ಲಿ ಉಎಸ್ಎಯ ಅಲಬಾಮಾದ ಆಬರ್ನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುವ ಮೂಲಕ ತಮ್ಮ ಅಧ್ಯಯನವನ್ನು ಮುಂದುವರೆಸಿದ್ದಾರೆ. ಅಬುಬಕರ್ ತಾಹಿರಿಗೆ ಪ್ರಕೃತಿ ಮೇಲಿನ ಆಸಕ್ತಿಯಿಂದಾಗಿಯೇ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ : ಶವರ್ಮಾ ತಿಂದು ಪ್ರಾಣಬಿಟ್ಟ 19 ವರ್ಷದ ಯುವಕ
ವೀಡಿಯೋ ವೈರಲ್ :
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಬುಬಕರ್ ತಾಹಿರು ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋಗೆ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಮೂರು ದಿನಗಳಲ್ಲಿ 9 ಲಕ್ಷದ 98 ಸಾವಿರ ವೀಕ್ಷಣೆಯನ್ನು ಪಡೆದುಕೊಂಡಿದೆ. ಸದ್ಯ ವೀಡಿಯೋ ಭಾರೀ ವೈರಲ್ ಆಗುತ್ತಿದೆ.
- DAKSHINA KANNADA7 days ago
ಸುಬ್ರಹ್ಮಣ್ಯ: ಕೆಎಸ್ಸಾರ್ಟಿಸಿ ಬಸ್ಗಳ ಹಗಲು ದರೋಡೆ..! ಏನಿದು ಘಟನೆ?
- LATEST NEWS7 days ago
ಎರಡು ಬಾರಿ ಅಕ್ರಮವಾಗಿ ಗರ್ಭಿಣಿಯಾದ ಅಪ್ರಾಪ್ತೆ..! ಪೋಷಕರ ವಿರುದ್ಧ ದೂರು.!!ಮುಂದೇನಾಯ್ತು?
- LATEST NEWS7 days ago
ಅಜೆಕಾರು : ಮನೆ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಸಾ*ವು
- DAKSHINA KANNADA6 days ago
ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ನೆಟ್ಟರೆ ಏನಾಗುತ್ತದೆ ನೋಡಿ..!