DAKSHINA KANNADA
ಊರೂರು ಅಲೆಯುತ್ತಿದ್ದ ಬಿಹಾರದ ಧನಂಜಯರನ್ನು ಆರೈಕೆ ಮಾಡಿ ಮರಳಿ ಮನೆಗೆ ಕಳಿಸಿದ ವೈಟ್ ಡೌವ್ಸ್ ..!
ಅಶಕ್ತರ, ಅಂಧರ, ದೀನದಲಿತರ ಬಾಳಿಗೆ ಸದಾ ಬೆಳಕಾಗುವ ಮಂಗಳೂರಿನ ವೈಟ್ ಡೌವ್ಸ್ ಸೇವಾ ಸಂಸ್ಥೆ ಇದೀಗ ಇನ್ನೊಂದು ಮಹತ್ತರವಾದ ಸಾಧನೆ ಮೂಲಕ ಒಂದು ಕುಟುಂಬದ ಕಣ್ಣೀರು ಒರೆಸುವ ಕೆಲಸ ಮಾಡಿದೆ.
ಮಂಗಳೂರು : ಅಶಕ್ತರ, ಅಂಧರ, ದೀನದಲಿತರ ಬಾಳಿಗೆ ಸದಾ ಬೆಳಕಾಗುವ ಮಂಗಳೂರಿನ ವೈಟ್ ಡೌವ್ಸ್ ಸೇವಾ ಸಂಸ್ಥೆ ಇದೀಗ ಇನ್ನೊಂದು ಮಹತ್ತರವಾದ ಸಾಧನೆ ಮೂಲಕ ಒಂದು ಕುಟುಂಬದ ಕಣ್ಣೀರು ಒರೆಸುವ ಕೆಲಸ ಮಾಡಿದೆ.
ಮಂಗಳೂರಿನ ಹಲವು ಸೇವಾ ಸಂಸ್ಥೆಗಳಲ್ಲಿ ಮರೋಳಿಯಲ್ಲಿರುವ ವೈಟ್ ಡೌವ್ಸ್ ಸೇವಾ ಸಂಸ್ಥೆಯೂ ಒಂದಾಗೊದ್ದಿ. ಮನೆ ಬಿಟ್ಟು ಬರುವ, ಹಾದಿ ತಪ್ಪಿ ಬರುವ ಅದೆಷ್ಟೋ ಮಂದಿಯನ್ನು ಮತ್ತೆ ಅವರ ಮನೆ ಮಂದಿ ಜೊತೆಗೆ, ಹೆಂಡತಿ, ಮಕ್ಕಳೊಂದಿಗೆ ಒಂದಾಗುವಂತೆ ಮಾಡಿದೆ. ಕುಟುಂಬದ ಕಣ್ಣೀರನ್ನು ಒರೆಸುವ ಕೆಲಸ ಮಾಡುತ್ತಿದೆ.
ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕೋಪಿಷ್ಟ, ಬಿಹಾರದ ಬರಿಹಾರ್ ಪೂರ್ ಠಾಣಾ ವ್ಯಾಪ್ತಿಯ ರೋಥಾನ್ನ ಧನಂಜಯ(35) ಮನೆ ಬಿಟ್ಟು ಬಂದಿದ್ದಾತ ಮಂಗಳೂರು ತಲುಪಿದ್ದ. ಆದರೆ ತೀವ್ರ ಮಾನಸಿಕ ಖಿನ್ನತೆಗೊಳಗಾಗಿ ಈತನಿಗೆ ಚಿಕಿತ್ಸೆ ಕೊಡಿಸಬೇಕಾಗಿತ್ತು.
ನಗರದ ರಸ್ತೆಗಳಲ್ಲಿ ಅಲೆದಾಡುತ್ತಿದ್ದ ಈತನನ್ನು ಕಂಡವೈಟ್ ಡೌವ್ಸ್ನ ಸಂಸ್ಥಾಪಕಿ ಕೊರಿನ್ನಾ ರಸ್ಕಿನಾ ಸೇವಾ ಸಂಸ್ಥೆ ಸದಸ್ಯರು ಇಲ್ಲಿಗೆ ಸೇರ್ಪಡೆಗೊಳಿಸಿದ್ದರು. ಆತನಿಗೆ ಚಿಕಿತ್ಸೆ ನೀಡಿದ ಬಳಿಕ ಗುಣಮುಖನಾಗಿದ್ದ.
ಈ ನಡುವೆ ಧನಂಜಯನಿಗೆ ಹೆಂಡತಿ ಮಕ್ಕಳ ನೆನಪಾಗಿದೆ. ಕೊನೆಗೆ ಕೊರಿನಾ ಅವರು ಮನೆ ಮಂದಿ ವಿಳಾಸ ಬಿಹಾರದ ರೋಥಾನ್ಗೆ ಠಾಣಾ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲಿಂದ ಬಂದ ಧನಂಜಯನ ಇಬ್ಬರು ಸಹೋದರರು ಮತ್ತು ಭಾವನನ್ನು ಕಂಡು ಧನಂಜಯ ಭಾವುಕನಾಗಿದ್ದಾನೆ.
ಧನಂಜಯ ತನ್ನ ಹೆಂಡತಿ, ಮಕ್ಕಳೊಂದಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾನೆ. ಈತನಿಗೆ ತಾನು ಮಾಡಿದ ತಪ್ಪಿನ ಅರಿವಾಗಿದೆ.
ಕೋಪವನ್ನು ಬಿಟ್ಟು ಬಿಡು ಎಂದು ಬುದ್ಧಿವಾದ ಹೇಳಿದ್ದೇವೆ. ಮರಳಿ ಮನೆಗೆ ಹೋಗಿ ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಈತ ಭರವಸೆ ನೀಡಿದ್ದಾನೆ.
ಜುಲೈ 22ರಂದು ನಮಗೆ ಈತ ಸಿಕ್ಕಿದ್ದ ಈಗ ಆತನಿಗೆ ಚಿಕಿತ್ಸೆ ನೀಡಿ ಉಷಾರಾಗಿದ್ದಾನೆ.
ಆತನನ್ನು ಮನೆಗೆ ಕರೆದುಕೊಂಡು ಹೋಗಲು ಅವರ ಸಹೋದರರು , ಭಾವ ಬಂದಿದ್ದಾರೆ. ಇದೊಂದು ನಮಗೆ ಭಾವನಾತ್ಮಕ ಸನ್ನಿವೇಶ ಎನ್ನುತ್ತಾರೆ ಸಂಸ್ಥಾಪಕಿ ಕೊರಿನಾ ರಸ್ಕಿನಾ.
ಕಳೆದ ಆರೇಳು ತಿಂಗಳಿನಿಂದ ಮನೆಮಗನಂತೆ ನೋಡಿಕೊಂಡು ಇದೀಗ ಕುಟುಂಬವನ್ನು ಒಂದುಗೂಡಿಸುತ್ತಿರುವ ಸಮಾಜ ಸೇವಕಿ ವೈಟ್ ಡೌವ್ಸ್ ಕೊರಿನಾ ರಸ್ಕಿನಾ ಸೇವಾ ಕಾರ್ಯಕ್ಕೆ ನಾವೆಷ್ಟೇ ಕೃತಜ್ಞತೆ ಹೇಳಿದರೂ ಸಾಲದು.
ಕೇವಲ ಹಣವೊಂದಿದ್ದರೆ ಏನೂ ಮಾಡಬಹುದು ಎನ್ನುವುದು ಬಿಟ್ಟು, ಪ್ರೀತಿ, ಮಾನವೀಯತೆ, ಮಮತೆ ತೋರಿಸುವ ವೈಟ್ ವೈಟ್ ಡೌವ್ಸ್ ಸೇವಾ ಸಂಸ್ಥೆ ಕಾರ್ಯ ನಿಜಕ್ಕೂ ಪ್ರಶಂಸನೀಯ..
DAKSHINA KANNADA
ಪುತ್ತೂರಿನಲ್ಲಿ ಭೀ*ಕರ ಅಪಘಾ*ತ; ರಿಕ್ಷಾ ಚಾಲಕ ಸಾ*ವು
ಪುತ್ತೂರು : ಲೋಕಸಭಾ ಚುನಾವಣಾ ಕರ್ತವ್ಯ ಮುಗಿಸಿ ಮಡಿಕೇರಿಯಿಂದ ಪುತ್ತೂರಿಗೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಡಿ*ಕ್ಕಿ ಸಂಭವಿಸಿ ರಿಕ್ಷಾ ಚಾಲಕ ಮೃ*ತಪಟ್ಟ ಘಟನೆ ಮುಕ್ರಂಪಾಡಿಯಲ್ಲಿ ನಸುಕಿನ ಜಾವ 2 ಗಂಟೆ ಸುಮಾರಿಗೆ ನಡೆದಿದೆ.
ಆಟೋ ರಿಕ್ಷಾ ಚಾಲಕ 30 ವರ್ಷದ ಜೈಸನ್ ಮೃ*ತಪಟ್ಟವರು. ಪುತ್ತೂರಿಗೆ ಬರುತ್ತಿದ್ದ ಬಸ್ ಮತ್ತು ವಿರುದ್ಧ ದಿಕ್ಕಿನಿಂದ ಚಲಿಸುತ್ತಿದ್ದ ರಿಕ್ಷಾ ನಡುವೆ ಡಿ*ಕ್ಕಿ ಸಂಭವಿಸಿದೆ.
ಇದನ್ನೂ ಓದಿ : ಕಡೆ ಕ್ಷಣ ವರನಿಂದ ತಾಳಿ ಕಟ್ಟಲು ನಿರಾಕರಿಸಿದ ವಧು; ಮುರಿದು ಬಿದ್ದ ಮದುವೆ
ಅಪಘಾತದ ತೀವ್ರತೆಗೆ ರಿಕ್ಷಾ ನಜ್ಜುಗುಜ್ಜಾಗಿದೆ. ಚಾಲಕ ಜೈಸನ್ ರಿಕ್ಷಾದ ಒಳಗೆ ಸಿಲುಕಿ ಹಾಕಿಕೊಂಡಿದ್ದರು. ಪುತ್ತೂರು ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಜೈಸನ್ ಅವರನ್ನು ಹೊರತೆಗೆದಿದ್ದಾರೆ. ಆದರೆ, ಜೈಸನ್ ಆಗಲೇ ಇಹಲೋಕ ತ್ಯಜಿಸಿದ್ದರು.
DAKSHINA KANNADA
ಕಡೆ ಕ್ಷಣ ವರನಿಂದ ತಾಳಿ ಕಟ್ಟಲು ನಿರಾಕರಿಸಿದ ವಧು; ಮುರಿದು ಬಿದ್ದ ಮದುವೆ
ಉಪ್ಪಿನಂಗಡಿ: ಇತ್ತೀಚಿನ ದಿನಗಳಲ್ಲಿ ಕಡೆ ಕ್ಷಣದಲ್ಲಿ ಅದೆಷ್ಟೋ ಮದುವೆಗಳು ಮುರಿದು ಬಿದ್ದ ಘಟನೆ ನಡೆದಿದೆ. ಹಾಗೆಯೇ ಇಲ್ಲೊಂದು ಮದುವೆ ಮಂಟಪದಲ್ಲಿ ಕೊನೆಯ ಕ್ಷಣ ವರನಿಂದ ತಾಳಿ ಕಟ್ಟಲು ವಧು ನಿರಾಕರಸಿದ ಕಾರಣ ಮದುಮೆ ಮುರಿದು ಬಿದ್ದ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ನಡೆದಿದೆ.
ಕೊಣಾಲು ಗ್ರಾಮದ ಕೋಲ್ಪೆ ದಿ। ಬಾಬು ಗೌಡ ಅವರ ಪುತ್ರ ಉಮೇಶ ಅವರ ಮದುವೆಯು ಬಂಟ್ವಾಳ ತಾಲೂಕು ಕುಳ ಗ್ರಾಮದ ಕಂಟ್ರಮಜಲು ದಿ। ಕೊರಗಪ್ಪ ಗೌಡ ಅವರ ಪುತ್ರಿ ಸರಸ್ವತಿ ಅವರೊಂದಿಗೆ ನಿಗದಿಯಾಗಿತ್ತು. ಎ.26 ರಂದು ಬೆಳಗ್ಗೆ 11.35ರ ಮೂಹೂರ್ತದಲ್ಲಿ ಕಾಂಚನ ಪೆರ್ಲದ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಮದುವೆ ನಿಗದಿಯಾಗಿತ್ತು. ಅದರಂತೆ ವರ ಹಾಗೂ ವಧುವಿನ ಕಡೆಯವರು ಮದುವೆಯ ದಿಬ್ಬಣದಲ್ಲಿ ಬಂದಿದ್ದರು. ವಧು ದಾರೆ ಸೀರೆ ಹಾಕಿ ಪರಸ್ಪರ ಹೂಮಾಲೆ ಕೂಡ ಹಾಕಿದ್ದರು. ಆದರೆ ತಾಳಿ ಕಟ್ಟಲು ಮುಂದಾದಗ ನನಗೆ ಈ ಮದುವೆ ಇಷ್ಟ ವಿಲ್ಲ ಎಂದು ವಧು ಹೇಳಿದ್ದಾಳೆ.
ಇದರಿಂದ ಎರಡೂ ಕಡೆಯವರು ಕಂಗಾಲಾಗಿ ವಧುವಿನ ಮನವೊಲಿಕೆಗೆ ಮುಂದಾದರು. ಆದರೆ ವಧು ಒಪ್ಪಲಿಲ್ಲ. ಬಳಿಕ ಎರಡೂ ಕಡೆ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದರು.
ಔತಣ ಕೂಟಕ್ಕೆ ಸಿದ್ಧತೆ:
ವರನ ಮನೆಯಲ್ಲಿ ಮಧ್ಯಾಹ್ನದ ಔತಣ ಕೂಟಕ್ಕೆ ಸುಮಾರು 500 ಜನರಿಗೆ ಮಾಂಸಾಹಾರಿ ಊಟ ತಯಾರಾಗಿತ್ತು. 1 ಸಾವಿರದಷ್ಟು ಐಸ್ಕ್ರೀಮ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಮದುವೆ ಮುರಿದು ಬಿದ್ದ ಕಾರಣ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಮತ್ತೆ ಮದುವೆಯಾಗಲು ಒಪ್ಪಿದ ವಧು:
ಪೊಲೀಸ್ ಠಾಣೆಯಲ್ಲಿ ನಡೆದ ಮಾತುಕತೆ ವೇಳೆ ವಧು ಸರಸ್ವತಿ ಮತ್ತೆ ಮದುವೆ ಆಗಲು ಒಪ್ಪಿದ್ದರು. ಆದರೆ ಆಗ ವರ ಉಮೇಶ್ ಅವರು ಮದುವೆ ಆಗಲು ನಿರಾಕರಿಸಿದರು. ಇದರಿಂದಾಗಿ ಎರಡೂ ಕಡೆಯವರು ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಯಿಸಿಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಿದರು.
BANTWAL
ಮತ ಚಲಾಯಿಸಿದ ನವ ದಂಪತಿ…! ಶುಭ ಹಾರೈಸಿದ ಸ್ನೇಹಿತರು..!
ಮಂಗಳೂರು : ಇಂದು ಹೊಸ ಬಾಳಿಗೆ ಕಾಲಿಡುತ್ತಿದ್ದ ಆ ಜೋಡಿಗಳು ಹೊಸ ಬಾಳಿನ ಚಿಂತನೆಯ ಜೊತೆಗೆ ದೇಶದ ಚಿಂತನೆಯನ್ನೂ ಮಾಡಿದ್ದಾರೆ. ಮದುವೆಯ ಸಮಾರಂಭದಲ್ಲಿ ಹಸಮಣೆ ಏರಿ ಪತಿ ಪತ್ನಿಯರಾಗಿ ಒಂದಾದ ಜೋಡಿ ಎಲ್ಲಾ ಸಂಪ್ರದಾಯಗಳು ಪೂರ್ಣಗೊಂಡ ತಕ್ಷಣ ಮದುವೆ ಮನೆಯಿಂದ ಹೊರ ನಡೆದಿದ್ದಾರೆ. ಮದುವೆ ಮನೆಯಿಂದ ಬಂದವರೇ ನೇರವಾಗಿ ಮತಗಟ್ಟೆಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಹೌದು ಇದು ನಡೆದಿರುವುದು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಬೂತ್ ಸಂಖ್ಯೆ 16 ರಲ್ಲಿ . ಇವರ ಮದುವೆ ನಿಗದಿಯಾದ ದಿನಂದಂತೆ ಪ್ರಜಾಪ್ರಭುತ್ವದ ಹಬ್ಬವಾಗಿರೋ ಚುನಾವಣೆ ದಿನಾಂಕ ಕೂಡಾ ಘೋಷಣೆ ಆಗಿದೆ. ಒಂದು ಕಡೆ ಹಸೆಮಣೆ ಏರಿ ತಮ್ಮ ಸ್ವಂತ ಭವಿಷ್ಯ ಕಟ್ಟಿಕೊಳ್ಳುವ ಜೊತೆಗೆ ದೇಶದ ಭವಿಷ್ಯವನ್ನೂ ಕಟ್ಟಲು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಮಾದರಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಮಲ್ಲೆರ್ಮಳಕೋಡಿ ಜಯರಾಮ ಕುಲಾಲ್ ಎಂಬ ವರ ವದುವಿವೊಂದಿಗೆ ಬಂದು ತನ್ನ ಮತ ಚಲಾಯಿಸಿದ್ದಾರೆ. ಇವರಿಬ್ಬರ ಈ ಕಾಳಜಿಗೆ ಜನರು ಹಾಗೂ ಮತಗಟ್ಟೆ ಅಧಿಕಾರಿಗಳು ಶುಭ ಹಾರೈಸಿದ್ದಾರೆ. ಇದೇ ವೇಳೆ ಜಯರಾಮ್ ಕುಲಾಲ್ ಅವರ ಸ್ನೇಹಿತರು ಹಿತೈಷಿಗಳು ಕೂಡಾ ಶುಭ ಹಾರೈಸಿದ್ದಾರೆ.
- FILM5 days ago
ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ
- FILM5 days ago
‘ಬಘೀರ’ ಸಿನೆಮಾ ಶೂಟಿಂಗ್ ವೇಳೆ ಅವಘಡ.. ರೋರಿಂಗ್ ಸ್ಟಾರ್ ಆಸ್ಪತ್ರೆ ದಾಖಲು
- FILM6 days ago
ವಿಚ್ಛೇದನದ ಸುದ್ದಿಗೆ ಉತ್ತರ ಕೊಟ್ಟ ಐಶ್ – ಅಭಿ ಆ್ಯನಿವರ್ಸರಿ ಫೋಟೋ!
- chikkamagaluru5 days ago
ಎಟಿಎಂ ಮೆಷಿನ್ಗೆ ಬೆಂಕಿ ಅವಘಡ..! ಸುಟ್ಟು ಕರಕಲಾದ ಲಕ್ಷಾಂತರ ರೂಪಾಯಿ..!!