WORLD
ತುಳುಕೂಟ ಕುವೈಟ್ ನಿಂದ ‘ಬಲೇ ತುಳು ಲಿಪಿ ಕಲ್ಪುಗ’
ಮಂಗಳೂರು: ತುಳುಕೂಟ ಕುವೈಟ್ ನಿನ್ನೆ ‘ಬಲೇ ತುಳು ಲಿಪಿ ಕಲ್ಪುಗ’ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಕುವೈತಿನ ಕಾಲಮಾನ 10.30 ಕ್ಕೆ ಸರಿಯಾಗಿ ಉದ್ಘಾಟನೆಗೊಂಡಿತು.
ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಫಾದರ್ ಡಾ. ಜೆರಾಲ್ಡ್ ಐಸಾಕ್ ಲೋಬೋ ಮತ್ತು ಒಡಿಯೂರು ಶ್ರೀ ಗುರುದೇವ ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಅವರ ಆಶೀರ್ವಚನದೊಂದಿಗೆ ಕಾರ್ಯಕ್ರಮ ಶುಭಾರಂಭಗೊಂಡಿತು.
ಸಮಾರಂಭಕ್ಕೆ ಆಗಮಿಸಿದ ಮುಖ್ಯ ಅತಿಥಿಗಳನ್ನು ತುಳು ಕೂಟ ಕುವೈಟ್ ನ ಅಧ್ಯಕ್ಷರಾದ ಸನತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.
ಮಂಗಳೂರಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ಸಾರ್ ಅವರು ದೀಪ ಬೆಳಗಿಸಿ ಮರಳಿನಲ್ಲಿ ಹಾಗು ಬೋರ್ಡಿನಲ್ಲಿ ತುಳು ವರ್ಣಮಾಲೆಯನ್ನು ಬರೆದು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಕುವೈಟ್ ತುಳು ಕೂಟದ ಚಟುವಟಿಕೆಗಳನ್ನು ಶ್ಲಾಘಿಸಿದರು. ಪ್ರಾಚೀನ ಭಾಷೆಗಳಲ್ಲಿ ಒಂದಾದ ತುಳು ಭಾಷೆಯ ಮಹತ್ವವನ್ನು ವಿವರಿಸಿದರು ಹಾಗೂ ತುಳುಭಾಷೆಯನ್ನು ನಮ್ಮ ಪ್ರತಿ ಮನೆ ಮನೆಗಳಲ್ಲಿ, ಕಚೇರಿಯಲ್ಲಿ ಅಳವಡಿಸುವುದು ಅವಶ್ಯಕ ಎಂದು ತಿಳಿಸಿದರು.
ಇದರೊಂದಿಗೆ ಅವರು ಈ ಸಮಯದಲ್ಲಿ ತುಳು ಕೂಟ ಕುವೈಟ್, ತುಳುನಾಡಿನ ಶಿಕ್ಷಕರಿಗೆ ಒಂದು ತಿಂಗಳಿನ ವೇತನದ ಹಣಕಾಸಿನ ನೆರವು ನೀಡಿದುದನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸ್ಥಾಪಕರಾದ ಡಾಕ್ಟರ್ ತುಕಾರಾಮ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಭಾಷೆಯ ಮಹತ್ವವನ್ನು ವಿವರಿಸಿದರು. ನಮ್ಮ ಸಮುದಾಯದ ಉನ್ನತಿಗೆ ಭಾಷೆಯ ಬೆಳವಣಿಗೆ ಅತ್ಯವಶ್ಯಕ. ಒಂದು ಭಾಷೆಯು ಸಂವಹನದ ಮೂಲ, ಭಾಷೆಯ ಏಳಿಗೆ ಹಾಗು ಉಳಿವು ನಮ್ಮ ಕೈಯಲ್ಲೇ ಇದೆ ಎಂದು ತಿಳಿಸಿದರು. ವಾಟ್ಸಾಪ್ ಗ್ರೂಪ್ ಮೂಲಕ ತುಳು ಲಿಪಿಯನ್ನು ಬೋಧಿಸಲಿರುವ ಅಕ್ಷಯ್ ಪೆಜಾವರ ಅವರು ತರಗತಿಯ ವಿವರಗಳನ್ನು ತಿಳಿಸಿದರು.
ವಿವಿಧ ತುಳು ಸಂಘಟನೆಯ ಮುಖಂಡರು, ಅಬುಧಾಬಿಯ ಸರ್ವೊತ್ತಮ ಶೆಟ್ಟಿ, ಕತಾರ್ನ ರವಿಶೆಟ್ಟಿ ಅವರು ಸಮಾರಂಭಕ್ಕೆ ಯಶಸ್ಸನ್ನು ಹಾರೈಸಿದರು.
ತುಳು ಭಾಷೆ ಮತ್ತು ತುಳು ಸಾಹಿತ್ಯ ಅಕಾಡೆಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಾಧ್ಯಮ, ಸಾಹಿತ್ಯ, ಶಿಕ್ಷಣದ ವಿವಿಧ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳಾದ, ಉಮರ್ ಯು ಹೆಚ್, ನವನೀತ್ ಶೆಟ್ಟಿ ಕದ್ರಿ, ನಿಟ್ಟೆ ವಿಶ್ವವಿದ್ಯಾಲಯದ ಡಾ. ಸಾಯಿ ಗೀತಾ, ಬೆಂಗಳೂರಿನ ಪುರುಷೋತ್ತಮ ಚೆಂಡ್ಲಾ, ಶಶಿರಾಜ್ ಕಾವೂರ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಕ್ಕೆ ಶುಭಹಾರೈಸಿದರು.
ತುಳುಕೂಟದ ಮುಖ್ಯ ಸಲಹೆಗಾರರಾದ ಸುಧಾಕರ ಶೆಟ್ಟಿ ಐಕಳ ಹಾಗೂ ಸಲಹೆಗಾರರಾದ ಸತೀಶ್ ಚಂದ್ರ ಶೆಟ್ಟಿ, ತಾರೆಂದ್ರ ಶೆಟ್ಟಿಗಾರ್, ವಿಲ್ಸನ್ ಡಿ ಸೋಜಾ ಮತ್ತು ರಮೇಶ್ ಭಂಡಾರಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕುಮಾರಿ ಮುಗ್ದ ಭಂಡಾರಿ, ಶ್ರೀ ಸುರೇಶ್ ಸಾಲಿಯಾನ್, ಕುಮಾರಿ ಲಾರೆನ್ ಮತ್ತು ರೆಚೆಲ್ ತುಳು ಹಾಡನ್ನು ಹಾಡಿದರು. ಕುಮಾರಿ ಸಾನ್ನಿಧ್ಯ ಸನತ್ ಶೆಟ್ಟಿ ಹಾಗು ರಫೀಕ್ ಉದ್ದಿನ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಸಾಂಸ್ಕೃತಿಕ ಕಾರ್ಯದರ್ಶಿ ಮನೋಜ್ ಶೆಟ್ಟಿ ನಿರ್ವಹಿಸಿದರು ಹಾಗೂ ಕಾರ್ಯದರ್ಶಿಯಾದ ರೋಷನ್ ಕ್ವಾಡ್ರಸ್ ವಂದನಾರ್ಪಣೆಗೈದರು. ಜಿಸಿಸಿಯ ಪ್ರತಿಯೊಂದು ಬಂಟ ಸಂಘ, ತುಳು ಕೂಟ, ಬಿಲ್ಲವ ಸಂಘದ ಅಧ್ಯಕ್ಷರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಊರ ಹಾಗೂ ಅನಿವಾಸಿ ತುಳುವರಿಗೆ ತುಳು ಕೂಟದ ಅಧ್ಯಕ್ಷ ಸನತ್ ಶೆಟ್ಟಿ ಅವರು ವಂದಿಸಿದರು.
ಈ ಕಾರ್ಯಕ್ರಮವು ಫೇಸ್ ಬುಕ್ ಲೈವ್ ಮೂಲಕ ಪ್ರಸಾರಗೊಂಡು 2200 ವೀಕ್ಷಕರು ವೀಕ್ಷಿಸಿದರು.
LATEST NEWS
ಸೈರನ್ನಂತೆ ಸೌಂಡ್ ಮಾಡ್ತದೆ ಈ ಪಕ್ಷಿ
ಯುಕೆ: ಕೆಲ ಪಕ್ಷಿಗಳ ಕೂಗು ಕೇಳಿದರೆ ಕೇಳಿಸುತ್ತಲೇ ಇರಬೇಕು ಅನ್ನಿಸುತ್ತದೆ. ಅದರಲ್ಲೂ ಕೋಗಿಲೆಯ ಕೂಗನ್ನು ಸಂಗೀತದ ಕಂಠಕ್ಕೆ ಹೋಲಿಸುತ್ತಾರೆ. ಕೆಲ ಪಕ್ಷಿಗಳು ನಾವು ಮಾತಾಡಿದಂತೆಯೇ ಮತ್ತೆ ಮಾತಾಡುತ್ತದೆ. ಇನ್ನು ಕೆಲವು ಗಿಣಿಶಾಸ್ತ್ರ ಹೇಳುತ್ತದೆ. ಹೀಗೆ ಬಗೆಬಗೆಯ ಪಕ್ಷಿಗಳು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಅದೇ ರೀತಿ ಇಲ್ಲೊಂದು ಪಕ್ಷಿ ಪೊಲೀಸ್ ವಾಹನದಂತೆ ಸೌಂಡ್ ಮಾಡ್ತದೆ. ಜನರು ಪೊಲೀಸ್ ಗಾಡಿಯ ಸೈರನ್ ಕೇಳುತ್ತಿದ್ದಂತೆ ಅಲ್ಲಿಂದ ಜಾಗ ಕಾಲಿ ಮಾಡುತ್ತಾರೆ.
ಆದರೆ ಇಲ್ಲೊಂದು ಸೈರನ್ ಸೌಂಡ್ ಪೊಲೀಸರನ್ನೇ ಕನ್ಫ್ಯೂಸ್ ಮಾಡಿದೆ. ಇದು ಪೊಲೀಸ್ ವಾಹನದ ಸೌಂಡ್ ಅಲ್ಲ. ಬದಲಾಗಿ ಹಕ್ಕಿಯೊಂದರ ಕೂಗು.
ಯುನೈಟೆಡ್ ಕಿಂಗ್ ಡಮ್ ನ ಥೇಮ್ಸ್ ವ್ಯಾಲಿ ಪೊಲೀಸ್ ಠಾಣೆ ಪಕ್ಕದ ಮುಖ್ಯ ರಸ್ತೆಯಲ್ಲಿ ಸೈರನ್ ಸೌಂಡ್ ರೀತಿಯಲ್ಲಿ ಕೂಗುವ ಹಕ್ಕಿಯೊಂದು ಕಾಣಿಸಿಕೊಂಡಿದೆ. ಈ ಹಕ್ಕಿಯ ಕೂಗು ಪ್ರಯಾಣಿಕರು ಹಾಗೂ ಅಧಿಕಾರಿಗಳನ್ನು ಗೊಂದಲಕ್ಕೀಡು ಮಾಡಿದೆ.
ಬಿಸೇಸ್ಟರ್ ಪೊಲೀಸ್ ಸ್ಟೇಷನ್ ಪೊಲೀಸರು ಸೋಶಿಯಲ್ ಮೀಡಿಯಾದಲ್ಲಿ ಹಕ್ಕಿ ಸೈರನ್ ನಿಂದ ಕೆಲಕಾಲ ಗೊಂದಲಕ್ಕೀಡಾದ ಬಗ್ಗೆ ಹಂಚಿಕೊಂಡಿದ್ದಾರೆ. ಸದ್ಯ ಪೊಲೀಸ್ ಸೈರನ್ ರೀತಿಯಲ್ಲಿ ಕೂಗುವ ಹಕ್ಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದೊಂದು ವಿಶೇಷ ಹಕ್ಕಿ:
ಮರದ ಮೇಲೆ ಪುಟ್ಟದಾದ ಕಪ್ಪು ಹಕ್ಕಿಯೊಂದು ಕುಳಿತು ಸೈರನ್ನಂತೆ ಕೂಗಿದೆ. ಇದೊಂದು ವಿಶೇಷ ರೀತಿಯ ಪಕ್ಷಿಯಾಗಿದ್ದು, ಸಣ್ಣ ಬಾಲ, ತ್ರಿಕೋನಾಕಾರದ ರೆಕ್ಕೆಗಳು ಇದೆ. ಇಂತಹ ಪಕ್ಷಿಗಳು ಚಳಿಗಾಲದಲ್ಲಿ ಬಿಳಿಬಣ್ಣದ ಮಚ್ಚೆಗಳನ್ನು ಹೊಂದಿರುತ್ತದೆ. ಬೇಸಿಗೆಗಾಲದಲ್ಲಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
DAKSHINA KANNADA
ಯುದ್ಧಕ್ಕೆ ಸನ್ನದ್ಧರಾಗಲು ಸರ್ವಾಧಿಕಾರಿಯ ಕರೆ..! ಹೆಚ್ಚಿದ ಜಾಗತಿಕ ಯುದ್ಧದ ಭೀತಿ..!
ಮಂಗಳೂರು (North Korea ) : ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ (King Jong Un ) ಯುದ್ಧಕ್ಕೆ ಸನ್ನದ್ಧರಾಗ್ತಾ ಇದ್ದಾರಾ ? ಇಂತಹ ಒಂದು ಆಘಾತಕಾರಿ ವಿಚಾರವನ್ನು ಕೆಸಿಎನ್ಎ(KCNA) ಸುದ್ದಿ ಸಂಸ್ಥೆ ಪ್ರಕಟಿಸಿದೆ. ಉತ್ತರ ಕೊರಿಯಾದ ಪ್ರಮುಖ ಮಿಲಿಟರಿ ವಿವಿಯನ್ನು ಪರಿಶೀಲಿಸಿದ ಕಿಮ್ ಜಾಂಗ್ ಉನ್ “ತನ್ನ ದೇಶದ ಸುತ್ತಲಿನ ಅಸ್ಥಿರ ಭಗೋಳಿಕ ಹಾಗೂ ರಾಜಕೀಯ ಪರಿಸ್ಥಿತಿಗಳು ಎಂದಿಗಿಂತಲೂ ಹೆಚ್ಚು ಯುದ್ಧಕ್ಕೆ ಸಿದ್ಧರಾಗುವ ಸಮಯ” ಎಂದು ಹೇಳಿದ್ದಾಗಿ ವರದಿ ಮಾಡಿದೆ.
ಉತ್ತರ ಕೊರಿಯಾ ಇತ್ತೀಚಿನ ವರ್ಷಗಳಲ್ಲಿ ತನ್ನ ಶಸ್ತ್ರಾಸ್ತ್ರಗಳ ಅಭಿವೃದ್ದಿಯನ್ನು ಹೆಚ್ಚಿಸಿದ್ದು, ರಷ್ಯಾದೊಂದಿಗೆ ನಿಕಟ ಮಿಲಿಟರಿ ಮತ್ತು ರಾಜಕೀಯ ಸಂಬಂಧ ಬೆಳೆಸಿಕೊಂಡಿದೆ. ಉಕ್ರೇನ್ ಯದ್ಧದಲ್ಲಿ ಗುಟ್ಟಾಗಿ ಸಹಾಯ ಮಾಡಿದೆ ಅನ್ನೋ ಆರೋಪ ಕೂಡಾ ಇದೆ. ಇತ್ತೀಚಿನ ತಿಂಗಳುಗಳಲ್ಲಿ ಅಕ್ಕ ಪಕ್ಕದ ರಾಷ್ಟ್ರಗಳು ಜಂಟಿಯಾಗಿ ಮಿಲಿಟರಿ ಕಸರತ್ತುಗಳನ್ನು ನಡೆಸಿದೆ. ಯುದ್ಧ ಕುಶಲತೆ ಹೆಸರಿನಲ್ಲಿ ಅಮೇರಿಕಾ , ದಕ್ಷಿಣ ಕೊರಿಯಾ ದೇಶಗಳು ಉತ್ತರ ಕೊರಿಯಾವನ್ನು ಪ್ರಚೋದಿಸುತ್ತಿದೆ ಎಂದು ಕಿಮ್ ಜಾಂಗ್ ಉನ್ ಆರೋಪಿಸಿದ್ದಾರೆ.
ಶತ್ರುಗಳು ಡಿಪಿಆರ್ಕೆ ( ದೆಮಾಕ್ರಟಿಕ್ ಪಿಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ)ದ ವಿರುದ್ಧ ಮುಖಾಮುಖಿಯಾದರೆ ಮಾರಣಾಂತಿಕ ಹೊಡೆತ ನೀಡುವುದಾಗಿ ಕಿಮ್ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಘನ ಇಂಧನ ಬಳಸಿದ ಹೊಸ ಹೈಪರ್ಸಾನಿಕ್ ಮಧ್ಯಂತರ ಕ್ಷಿಪಣಿಯನ್ನು ಉತ್ತರ ಕೊರಿಯ ಅಭಿವೃದ್ದಿ ಪಡಿಸಿದೆ. ಇದು ದ್ರವ ಇಂಧನದ ಬದಲಾಗಿ ಘನ ಇಂಧನವನ್ನು ಬಳಿಸಿಕೊಂಡು ಆವಿಷ್ಕರಿಸಲಾಗಿದೆ. ಇದು ಅತೀ ಹೆಚ್ಚು ದೂರವನ್ನು ಕ್ರಮಿಸುವ ಶಕ್ತಿಯನ್ನು ಹೊಂದಿದೆ ಎನ್ನಲಾಗಿದೆ. ಹೀಗಾಗಿ ಕಿಮ್ ಜಾಂಗ್ ಉನ್ ಅವರ ಯುದ್ಧಾಸಕ್ತಿಯ ಹೇಳಿಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ಲೇಷಣೆಗೆ ಒಳಗಾಗಿದೆ. ಯುದ್ಧ ದಾಹಿಯಾಗಿರುವ ಕಿಂಗ್ ಜಾಂಗ್ ಉನ್ ನೆರೆಯ ರಾಷ್ಟಗಳ ಜೊತೆ ಯುದ್ಧ ಘೋಷಣೆ ಮಾಡ್ತಾರಾ? ಇಲ್ಲಾ ಅಮೇರಿಕಾ ಅಥವಾ ದಕ್ಷಿಣ ಕೊರಿಯಾವನ್ನು ಗುರಿಯಾಗಿಸಿ ಈ ಹೇಳಿಕೆ ನೀಡಿದ್ದಾರಾ ಅನ್ನೋದು ಚರ್ಚೆ ಆಗುತ್ತಿದೆ.
LATEST NEWS
ಬೆಕ್ಕಿನಂತಿದೆ ಈ ಮಗುವಿನ ಮುಖ…! ಮಗು ಹೀಗಾಗಲು ಕಾರಣವೇನು ಗೊತ್ತಾ ?
ಮಂಗಳೂರು ( ಫಿಲಿಪ್ಪೀನ್ಸ್ ) : ಮನುಷ್ಯರ ದೇಹದ ಕೆಲ ಭಾಗಗಳಲ್ಲಿ ಕೂದಲು ಇರುವುದು ಸಹಜ. ಆದ್ರೆ ಇಲ್ಲೊಂದು ಮಗುವಿನ ದೇಹ ಹಾಗೂ ಮುಖದ ಭಾಗದಲ್ಲೆಲ್ಲ ದಟ್ಟವಾಗಿ ಕೂದಲು ಬೆಳೆದಿದೆ. ಇದಕ್ಕೆ ಕಾರಣ ನಾನು ಗರ್ಭಾವಸ್ಥೆಯಲ್ಲಿ ಕಾಡು ಬೆಕ್ಕಿನ ಮಾಂಸವನ್ನು ತಿಂದಿದ್ದೇ ಹಾಗಾಗಿ ನನ್ನ ಮಗು ಈ ಪರಿಸ್ಥಿತಿಗೆ ಬಂದಿದೆ ಎಂದು ಮಗುವಿನ ತಾಯಿ ಹೇಳಿದ್ದಾರೆ.
ಈ ಘಟನೆ ಫಿಲಿಪ್ಪೀನ್ಸ್ ಅಲ್ಲಿ ನಡೆದಿದ್ದು ಇಲ್ಲಿನ ಜರೆನ್ ಎಂಬ 2 ವರ್ಷದ ಬಾಲಕ ಮುಖದ ತುಂಬಾ ದಟ್ಟವಾದ ಕೂದಲುಗಳನ್ನು ಹೊಂದಿದ್ದಾನೆ.
ಗರ್ಭಿಣಿಯಾಗಿದ್ದಾಗ ಅಲ್ಮಾ ಅವರಿಗೆ ಕಾಡು ಬೆಕ್ಕಿನ ಮಾಂಸವನ್ನು ತಿನ್ನಬೇಕು ಎನ್ನುವ ಆಸೆ ಇತ್ತಂತೆ. ಹಾಗಾಗಿ ಅವರು ಹಳ್ಳಿಯವರಿಗೆ ಹೇಳಿ ಕಾಡುಬೆಕ್ಕಿನ ಮಾಂಸವನ್ನು ತಂದು ಅದರಿಂದ ಖಾದ್ಯ ಮಾಡಿ ತಿಂದಿದ್ದರು. ಕಾಡು ಬೆಕ್ಕಿನ ಶಾಪ ನನ್ನ ಮಗನಿಗೆ ತಟ್ಟಿದೆ ಹೀಗಾಗಿ ಮಗನ ಮೈಯೆಲ್ಲಾ ಕೂದಲುಗಳಿವೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : WATCH VIDEO : ಬೆಕ್ಕಿನ ಮರಿಯನ್ನು ನುಂಗಿ ಜೀರ್ಣಿಸಿಕೊಳ್ಳಲಾಗದೆ ಪರದಾಡಿದ ನಾಗರಹಾವು; ಆಮೇಲೇನಾಯ್ತು?
ವೈದ್ಯರು ಏನಂತಾರೆ?
ತಾಯಿಯೇನೋ ತಾನು ಗರ್ಭಿಣಿಯಾಗಿದ್ದಾಗ ಬೆಕ್ಕಿನ ಮಾಂಸ ತಿಂದಿದ್ದು ಇದಕ್ಕೆ ಕಾರಣ ಅಂತಿದ್ದಾರೆ. ಆದರೆ, ವೈದ್ಯರು ಕೊಟ್ಟಿರುವ ಕಾರಣಾನೇ ಬೇರೆ. ಅವರ ಪ್ರಕಾರ, ಈ ಮಗು ವೆರ್ ವುಲ್ಫ್ ಅಥವಾ ಹೈಪರ್ಟೀಕೋಸಿಕ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾರಣದಿಂದ ಮುಖದಲ್ಲಿ ದಟ್ಟವಾಗಿ ಕೂದಲು ಬೆಳೆಯುತ್ತದೆ. ಅಲ್ಲದೇ ಈ ಕಾಯಿಲೆಯು ಒಂದು ಬಿಲಿಯನ್ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ. ಇಲ್ಲಿಯವರೆಗೆ ಕೇವಲ 50 ವೂಲ್ಫ್ ಸಿಂಡ್ರೋಮ್ ಪ್ರಕರಣಗಳು ವರದಿಯಾಗಿದೆ ಎಂದು ಡಾ. ರಾವೆಲಿಂಡಾ ಸೊರಿಯಾನೊ ಪೆರೆಜ್ ಹೇಳಿದ್ದಾರೆ.
ಈ ಸಿಂಡ್ರೋಮ್ ಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ಲೇಸರ್ ಹೇರ್ ರಿಮೂವಲ್ ಟ್ರೀಟ್ಮೆಂಟ್ ಮೂಲಕ ಮುಖದ ಮೇಲಿನ ಈ ಕೂದಲನ್ನು ತೆಗೆಯಬಹುದಾಗಿದೆ.
- FILM4 days ago
ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ
- FILM4 days ago
‘ಬಘೀರ’ ಸಿನೆಮಾ ಶೂಟಿಂಗ್ ವೇಳೆ ಅವಘಡ.. ರೋರಿಂಗ್ ಸ್ಟಾರ್ ಆಸ್ಪತ್ರೆ ದಾಖಲು
- FILM5 days ago
ವಿಚ್ಛೇದನದ ಸುದ್ದಿಗೆ ಉತ್ತರ ಕೊಟ್ಟ ಐಶ್ – ಅಭಿ ಆ್ಯನಿವರ್ಸರಿ ಫೋಟೋ!
- chikkamagaluru4 days ago
ಎಟಿಎಂ ಮೆಷಿನ್ಗೆ ಬೆಂಕಿ ಅವಘಡ..! ಸುಟ್ಟು ಕರಕಲಾದ ಲಕ್ಷಾಂತರ ರೂಪಾಯಿ..!!