ಸೌದಿಯಲ್ಲಿ ಅತಂತ್ರರಾಗಿದ್ದ ಎಕ್ಸ್ಪರ್ಟೈಸ್ ಕಂಪೆನಿ ಉದ್ಯೋಗಿಗಳು ಹಾಗೂ ಅನಿವಾಸಿ ಕನ್ನಡಿಗರು ಮಂಗಳೂರಿಗೆ ವಾಪಸ್…
ಮಂಗಳೂರು: ಸೌದಿ ಅರೇಬಿಯಾದಿಂದ ಮತ್ತೊಂದು ಬಾಡಿಗೆ ವಿಮಾನ ಮಂಗಳೂರು ತಲುಪಿದೆ.
ಕೊರೊನಾ ಲಾಕ್ ಡೌನ್ ನಿಂದಾಗಿ ಸೌದಿ ಅರೇಬಿಯಾದಲ್ಲಿ ಅತಂತ್ರರಾಗಿದ್ದ ತಮ್ಮ ಕಂಪೆನಿಯ ಉದ್ಯೋಗಿಗಳು ಹಾಗೂ ಅನಿವಾಸಿ ಕನ್ನಡಿಗರಿಗಾಗಿ ಎಕ್ಸ್ ಪರ್ಟೈಸ್ ಕಂಪೆನಿಯು ದಮಾಮ್ ನಿಂದ ಈ ವಿಶೇಷ ವಿಮಾನ ಕಳುಹಿಸಿಕೊಟ್ಟಿದೆ.
ಈ ವಿಮಾನದ ಮೂಲಕ 170 ಪ್ರಯಾಣಿಕರು ತಾಯ್ನಾಡಿಗೆ ಮರಳಿದ್ದಾರೆ. ಜೂ.7ರಂದು ಎಕ್ಸ್ಪರ್ಟೈಸ್ ಕಂಪೆನಿಯ ಮೊದಲ ಬಾಡಿಗೆ ವಿಮಾನವು ಮಂಗಳೂರಿಗೆ ಆಗಮಿಸಿತ್ತು.
ಅದರಲ್ಲಿ 168 ಪ್ರಯಾಣಿಕರಿದ್ದರು. ಇವರೆಲ್ಲರೂ ಎಕ್ಸ್ಪರ್ಟೈಸ್ ಕಂಪೆನಿಯ ಅತಂತ್ರ ಸ್ಥಿತಿಯಲ್ಲಿದ್ದ ಉದ್ಯೋಗಿಗಳಾಗಿದ್ದರು.
ನಿನ್ನೆ ಅಪರಾಹ್ನ ದಮಾಮ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಎರಡನೇ ಬಾಡಿಗೆ ವಿಮಾನದಲ್ಲಿ ಕಂಪೆನಿಯ ಹೊರತಾದ 70 ಪ್ರಯಾಣಿಕರಿದ್ದರು.
ಇದರಲ್ಲಿ ಹಿರಿಯರು, ಗರ್ಭಿಣಿಯರು, ಎಳೆಯ ಮಕ್ಕಳು ಸೇರಿದ್ದರು. ಎಲ್ಲರನ್ನೂ ನಗರದ ಲಾಡ್ಜ್-ಹೊಟೇಲ್ ನಲ್ಲಿ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಇನ್ನೂ ನಾಲ್ಕು ವಿಮಾನಗಳು ಎಕ್ಸ್ಪರ್ಟೈಸ್ ಕಂಟ್ರಾಕ್ಟಿಂಗ್ ಕಂಪೆನಿ ವತಿಯಿಂದ ಮಂಗಳೂರಿಗೆ ಆಗಮಿಸಲಿವೆ..
ಈ ಮಧ್ಯೆ ಮತ್ತೊಂದು ಬಾಡಿಗೆ ವಿಮಾನ ದುಬೈಯಿಂದ ಇಂದು ಮಂಗಳೂರಿಗೆ ಆಗಮಿಸಲಿದೆ.
ಲಾಕ್ ಡೌನ್ ನಿಂದಾಗಿ ದುಬೈ ಮತ್ತು ಯುಎಇಯಲ್ಲಿ ಸಿಲುಕಿರುವ ಭಟ್ಕಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ಈ ಚಾರ್ಟರ್ಡ್ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಲಿದೆ.
ಇಂದು ರಾತ್ರಿ 9 ಗಂಟೆಗೆ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣದಿಂದ ವಿಮಾನವು ಹೊರಡಲಿದ್ದು, 175 ಪ್ರಯಾಣಿಕರು ಮತ್ತು ಒಂಬತ್ತು ಮಕ್ಕಳು ವಿಮಾನದಲ್ಲಿ ಇರಲಿದ್ದಾರೆ.
ಗರ್ಭಿಣಿಯರು, ವೃದ್ಧರು ಮತ್ತು 14 ದಿನಗಳ ವೀಸಾದಲ್ಲಿ ದುಬೈಗೆ ಬಂದು ಎರಡು ತಿಂಗಳಿಗಿಂತ ಹೆಚ್ಚು ಕಾಲ ಲಾಕ್ ಡೌನ್ ನಲ್ಲಿ ಸಿಲುಕಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ವಿಮಾನವು ಮಂಗಳೂರಿಗೆ ಬಂದ ನಂತರ ಮಂಗಳೂರಿನಿಂದ ಭಟ್ಕಳಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರನ್ನು ಭಟ್ಕಳದಲ್ಲಿ ಕ್ವಾರಂಟೈ ನ್ ಗೆ ಒಳಪಡಿಸಲಾಗುತ್ತಿದೆ.