ಕೆ.ಐ.ಎ.ಡಿ.ಬಿ ಭೂಸ್ವಾಧೀನ ಅಧಿಕಾರಿಗೆ ಸೇರಿದ ಮಂಗಳೂರು, ಮಂಡ್ಯ ಮತ್ತು ಬೆಂಗಳೂರು ನಿವಾಸಗಳ ಮೇಲೆ ರೈಡ್…
ಮಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ ಹಲವೆಡೆ ಧಾಳಿ ಮಾಡಿದ ಎಸಿಬಿ ಅಧಿಕಾರಿಗಳು ಕೆ.ಐ.ಎ.ಡಿ.ಬಿ ವಿಶೇಷ ಭೂಸ್ವಾಧೀನಾಧಿಕಾರಿ ನಿವಾಸ ಮೇಲೂ ದಾಳಿ ನಡೆಸಿದ್ದಾರೆ.
ಕೆ.ಐ.ಎ.ಡಿ.ಬಿ ಭೂ ವಿಶೇಷ ಸ್ವಾಧೀನ ಅಧಿಕಾರಿ ದಾಸೇಗೌಡನಿಗೆ ಸೇರಿದ ಮಂಗಳೂರು, ಮಂಡ್ಯ ಮತ್ತು ಬೆಂಗಳೂರು ನಿವಾಸಗಳ ಮೇಲೆ ಎಸಿಬಿ ರೈಡ್ ನಡೆದಿದೆ.
ಭೂಸ್ವಾಧೀನದ ಪರಿಹಾರ ಮೊತ್ತದಲ್ಲಿ ಕಮಿಷನ್ ಪಡೆದು 2019ರ ಡಿಸೆಂಬರ್ ನಲ್ಲಿ ಸಿಕ್ಕಿಬಿದ್ದಿದ್ದ ದಾಸೇಗೌಡ, ಎಸಿಬಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿ ಜಾಮೀನು ಪಡೆದು ಹೊರ ಬಂದಿದ್ದ.
ಕೊರೊನಾ ಬಳಿಕ ಮತ್ತೆ ದಾಳಿಯಿಟ್ಟ ಎಸಿಬಿ ಅಧಿಕಾರಿಗಳು ಮಂಡ್ಯದ ಮನೆಯಲ್ಲಿದ್ದ ದಾಸೇಗೌಡನ ವಿಚಾರಣೆ ನಡೆಸಿದ್ದಾರೆ.
ಜೊತೆಗೆ ಮಂಗಳೂರಿನ ಬಿಜೈನಲ್ಲಿರುವ ಪ್ಲಾಟ್ ಗೂ ಧಾಳಿ ಮಾಡಿದ್ದಾರೆ. ಮಂಗಳೂರಿನ ಪ್ಲಾಟ್ ಗೆ ಬೀಗ ಹಾಕಿರುವ ದಾಸೇಗೌಡ, ಕುಟುಂಬ ಮಂಡ್ಯದ ಮನೆಯಲ್ಲಿದೆ.
ಮಂಗಳೂರಿನಲ್ಲಿ ಡಿ.19 ರಂದು 5 ಲಕ್ಷ ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದಿದ್ದ ದಾಸೇಗೌಡ, ಕೊರೊನಾ ಕಾರಣಕ್ಕೆ ಕಾರ್ಯಾಚರಣೆ ಮುಂದೂಡಲಾಗಿತ್ತು.
ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾಗೂ ಚಿನ್ನಾಭರಣ ಪತ್ತೆಯಾಗಿದ್ದು, ಮಂಗಳೂರಿನಲ್ಲಿ ಒಂದು ಫ್ಲಾಟ್ ಸೇರಿ ಮೂರು ಮನೆ ಪತ್ತೆಯಾಗಿದೆ.
ಬೆಂಗಳೂರು ಸೇರಿದಂತೆ ವಿವಿಧ ಕಡೆ 11 ಸೈಟ್, ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ.
ಮಂಗಳೂರು ಎಸಿಬಿ ಎಸ್ಪಿ ಉಮಾಪ್ರಶಾಂತ್, ಡಿವೈಎಸ್ಪಿ ಮಂಜುನಾಥ್, ಇನ್ಸ್ ಪೆಕ್ಟರ್ ಯೋಗೀಶ್ ನಾಯ್ಕ್ ನೇತೃತ್ವದಲ್ಲಿ ಧಾಳಿ ನಡೆಸಲಾಗಿದೆ.