ಆಸ್ಪತ್ರೆಯಲ್ಲಿ ಬೆಂಕಿಯ ಕೆನ್ನಾಲಿಗೆಗೆ 10 ನವಜಾತ ಶಿಶುಗಳು ಬಲಿಯಾದ ಹೃದಯ ವಿದ್ರಾವಕ ಘಟನೆ..!
ಮಹಾರಾಷ್ಟ್ರ: ಭಂಡಾರ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ 2 ಗಂಟೆಯ ಸುಮಾರಿಗೆ ಸರಕಾರಿ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲೆಗೆ ಕನಿಷ್ಠ 10 ನವಜಾತ ಶಿಶುಗಳು ಮೃತಪಟ್ಟಿರುವ ಕುರಿತು ವರದಿಯಾಗಿದೆ.
ಇದೊಂದು ಮನ ಕಲಕುವ ದುರಂತ ಎಂದು ಪ್ರಧಾನಮಂತ್ರಿ ನರೆಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ನಾಲ್ಕು ಮಹಡಿಯ ಆಸ್ಪತ್ರೆಯ ವಿಶೇಷ ನವಜಾತ ಶಿಶು ಆರೈಕೆ ಘಟಕದಲ್ಲಿ 17 ಮಕ್ಕಳು ದಾಖಲಾಗಿದ್ದವು.
“ಆಸ್ಪತ್ರೆಯ ಹೊರಗಿನ ವಿಭಾಗದಲ್ಲಿ ತಡರಾತ್ರಿ 1.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ಮಕ್ಕಳ ವಾರ್ಡ್ ನಲ್ಲಿ ಇಬ್ಬರು ನರ್ಸ್ ಗಳು ಹಾಗೂ ಹೆಲ್ಪರ್ ಗಳು ಇದ್ರು.
ಅವರು ತಕ್ಷಣವೇ ಎಚ್ಚರಿಕೆ ಗಂಟೆ ಬಾರಿಸಿದ್ದರು. ಅಗ್ನಿಶಾಮಕ ದಳದವರನ್ನು ಕರೆಸಲಾಗಿತ್ತು. ಅವರು ಆಗಮಿಸುವ ಮೊದಲೇ ಸಿಬ್ಬಂದಿಗಳು ಮಕ್ಕಳನ್ನು ರಕ್ಷಿಸಲು ಯತ್ನಿಸಿದ್ದರು.
ಸಿಬ್ಬಂದಿಗಳು ಏಳು ನವಜಾತಶಿಶುಗಳನ್ನು ರಕ್ಷಿಸಿದ್ದರು ಎಂದು ಭಂಡಾರ ಜಿಲ್ಲಾಧಿಕಾರಿ ಸಂದೀಪ್ ಕದಮ್ ತಿಳಿಸಿದ್ದಾರೆ.