Connect with us

    FILM

    ಕಿರುತೆರೆಗೆ ಕಂಬ್ಯಾಕ್ ಮಾಡಿದ ‘ವಿಕ್ರಾಂತ್ ರೋಣ’ ಬೆಡಗಿ

    Published

    on

    ಝೀ ಕನ್ನಡದಲ್ಲಿ ಈಗಾಗಲೇ ಹಲವಾರು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಹೊಸ ಡಬ್ಬಿಂಗ್ ಧಾರಾವಾಹಿಗಳೂ ಲಗ್ಗೆ ಇಟ್ಟಿವೆ. ‘ಮೇಘ ಸಂದೇಶ’ ಮತ್ತು ‘ಮೊಮ್ಮಗಳು’ ಎಂಬ ತೆಲುಗು ಭಾಷೆಯ ಡಬ್ಬಿಂಗ್ ಧಾರಾವಾಹಿಗಳು ಸೋಮವಾರ(ಅ.28)ದಿಂದ ಪ್ರಸಾರವಾಗಲಿದೆ. ಈ ನಡುವೆ ಮತ್ತೊಂದು ಹೊಸ ಧಾರಾವಾಹಿಯ ಆರಂಭದ ಮುನ್ಸೂಚನೆ ಸಿಕ್ಕಿದೆ.

    ಗಮನ ಸೆಳೆದ ಪ್ರೋಮೋ :

    ಈಗಾಗಲೇ ಪ್ರೋಮೋ ಪ್ರಸಾರ ಮಾಡುತ್ತಿರುವ ಝೀ ಕನ್ನಡ ವಾಹಿನಿ ಈ ಮೂಲಕ ಧಾರಾವಾಹಿಯ ಕುರಿತು ಕುತೂಹಲ ಹುಟ್ಟಿಸಿದೆ. ‘ನಾ ನಿನ್ನ ಬಿಡಲಾರೆ’ ಎಂಬ ಹೆಸರಿನ ಈ ಧಾರಾವಾಹಿ ಹಾರರ್ ಥ್ರಿಲ್ಲರ್ ಎಂಬ ಸೂಚನೆ ನೀಡಿದೆ.
    ತಾಯಿ ಮಗುವಿಗೆ ಲಾಲಿ ಹಾಡಿ ಮಲಗಿಸುವುದನ್ನು ಈ ಪ್ರೋಮೋದಲ್ಲಿ ಕಾಣಬಹುದು. ಆಕೆ ತೀರಿಕೊಂಡಿದ್ದು, ತನ್ನ ಮಗುವಿನ ಜೊತೆ ಸದಾ ಇರುವಂತೆ ತೋರಿಸಲಾಗಿದೆ. ಅಲ್ಲದೇ ಆಕೆ, ‘ನಾ ನಿನ್ನ ಬಿಡಲಾರೆ’ ಎನ್ನುತ್ತಾಳೆ. ಹಾಗಾಗಿ, ಮೃ*ತ ತಾಯಿ ತನ್ನ  ಮಗುವಿನ ರಕ್ಷಣೆಯಲ್ಲಿ ಜೊತೆಯಾಗಿರುತ್ತಾಳೆ ಎಂದು ಊಹಿಸಬಹುದಾಗಿದೆ.

    ಮತ್ತೆ ಬಂದ ಯಶೋಧೆ :

    ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಯಾವ ಧಾರಾವಾಹಿ ಮುಗಿಯುತ್ತದೆ ಎಂಬ ಮಾಹಿತಿ ಇಲ್ಲ. ‘ಪುಟ್ಟಕ್ಕಳ ಮಕ್ಕಳು’ ಕೊನೆಯ ಹಂತ ತಲುಪಿದ್ದರೂ, ಮತ್ತೆ ಕಥೆ ಮುಂದುವರಿಸುವಂತೆ ಕಾಣಿಸುತ್ತಿದೆ. ‘ಶ್ರೀರಸ್ತು ಶುಭಮಸ್ತು’ ಮುಗಿಸುವಂತೆಯೂ ಪ್ರೇಕ್ಷಕರು ಹೇಳುತ್ತಿದ್ದಾರೆ. ಹಾಗಾಗಿ ಯಾವ ಧಾರಾವಾಹಿಯ ಜಾಗಕ್ಕೆ ‘ನಾ ನಿನ್ನ ಬಿಡಲಾರೆ’ ಬರುತ್ತೆ ಅನ್ನೋದು ಗೊತ್ತಿಲ್ಲ.

    ಅಂದಹಾಗೆ ಈ ಧಾರಾವಾಹಿ ಮೂಲಕ ನೀತಾ ಅಶೋಕ್ ಮತ್ತೆ ಕಿರುತೆರೆಗೆ ಲಗ್ಗೆ ಇಡುತ್ತಿದ್ದಾರೆ. ಈ ಹಿಂದೆಯೂ ‘ನಾ ನಿನ್ನ ಬಿಡಲಾರೆ’ ಶೀರ್ಷಿಕೆಯ ಧಾರಾವಾಹಿಯಲ್ಲಿ ಅವರು ನಟಿಸಿದ್ದರು. ‘ಯಶೋಧೆ’ ಧಾರಾವಾಹಿ ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತ್ತು.

    ‘ನೀಲಾಂಬರಿ’, ‘ನಾ ನಿನ್ನ ಬಿಡಲಾರೆ’, ‘ಒಲವಿನ ನಿಲ್ದಾಣ’ ಧಾರಾವಾಹಿಗಳಲ್ಲಿ ನಟಿಸಿದ್ದರು. ಬಳಿಕ ಹಿರಿತೆರೆಗೆ ಎಂಟ್ರಿಕೊಟ್ಟ ಅವರು, ಕಿಚ್ಚ ಸುದೀಪ್ , ನಿರೂಪ್ ಭಂಡಾರಿ ಕಾಂಬಿನೇಷನ್ ನ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ನಟಿಸಿ ಜನ ಮನ ಗೆದ್ದರು. ಅದಾದ ಮೇಲೆ ಪ್ರೀತಿಸಿದ ಹುಡುಗನ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವರು, ಇದೀಗ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಬಿಡುಗಡೆಯಾಗಿರುವ ಪ್ರೋಮೋ ನೋಡಿದ ವೀಕ್ಷಕರು, ವ್ಹಾವ್ ಎಂದಿದ್ದು ಮಾತ್ರವಲ್ಲದೆ, ಯಶೋಧೆ ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ.

    ಇದನ್ನೂ ಓದಿ : ಮಂಗಳೂರು: ಸೈಟ್ ತೋರಿಸುವ ನೆಪದಲ್ಲಿ ಲೈಂ*ಗಿಕ ಕಿರುಕುಳ

    ಮಗಳಾಗಿ ಚುಕ್ಕಿ :

    ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ ‘ಚುಕ್ಕಿ ತಾರೆ’ ಜನಮನ ಗೆದ್ದಿತ್ತು. ಈ ಧಾರಾವಾಹಿಯಲ್ಲಿ ಚುಕ್ಕಿಯಾಗಿ ಮಹಿತಾ ನಟಿಸಿದ್ದರು. ಇದೀಗ ಮಹಿತಾ ‘ನಾ ನಿನ್ನ ಬಿಡಲಾರೆ’ಯಲ್ಲಿ ಪ್ರಮುಖ ಪಾತ್ರವಾಗಲಿದ್ದಾರೆ. ತಾಯಿ – ಮಗಳಾಗಿ ನೀತಾ ಅಶೋಕ್ – ಮಹಿತಾ ಕಾಣಿಸಿಕೊಳ್ಳಲಿದ್ದಾರೆ.

    ಇನ್ನು ಧಾರಾವಾಹಿ ಯಾವಾಗ ಪ್ರಸಾರವಾಗಲಿದೆ? ಸಮಯ? ಯಾವುದೂ ರಿವೀಲ್ ಆಗಿಲ್ಲ. ಸದ್ಯ ಮತ್ತೆ ನೀತಾ ಅಶೋಕ್ ಅವರನ್ನು ಕಿರುತೆಯಲ್ಲಿ ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಕಾಯುತ್ತಿರೋದು ಸುಳ್ಳಲ್ಲ.

    BIG BOSS

    BBK 11 : ಸೃಜನ್ ಲೊಕೇಶ್ ಜೊತೆ ಬಂದ ಹೊಸ ಕಾರಲ್ಲಿ ಹೊರ ಹೊಗೋದು ಯಾರು ಗೊತ್ತಾ ??

    Published

    on

    BBK 11 : ಬಿಗ್ ಬಾಸ್ ಕನ್ನಡ ಶೋ ನಲ್ಲಿ ವಾರದ ಕೊನೆಯಲ್ಲಿ ಕಿಚ್ಚನ ಜೊತೆಗೆ ಪಂಚಾಯತಿ ನಡೆಯುತ್ತೆ. ಆದ್ರೆ ಈ ವಾರ ಸುದೀಪ್ ಬಂದಿಲ್ಲ. ಹಾಗಾಗಿ ಶನಿವಾರದ ಎಪಿಸೋಡ್​ಗೆ ನಿರ್ದೇಶಕ ಯೋಗರಾಜ್ ಭಟ್ ಮನೆಗೆ ಬಂದಿದ್ದರು. ಇನ್ನು ಭಾನುವಾರದ ಎಪಿಸೋಡ್​ಗೆ ಹೊಸ ಅತಿಥಿ ಬಂದಿದ್ದು ತಮ್ಮೊಟ್ಟಿಗೆ ಕಾರುಗಳನ್ನು ಸಹ ಕರೆತಂದಿದ್ದಾರೆ.

    ಕಳೆದ ಶನಿವಾರ ಸುದೀಪ್ ಅವರ ತಾಯಿ ಸರೋಜಮ್ಮ ನಿಧನರಾದ ಕಾರಣ ಸುದೀಪ್ ಆ ನಂತರದ ತಮ್ಮ ಎಲ್ಲ ಚಿತ್ರೀಕರಣ, ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. ಈ ವೀಕೆಂಡ್​ನ ವಾರದ ಪಂಚಾಯಿತಿಗೆ ಸಹ ಸುದೀಪ್ ಬಂದಿಲ್ಲ. ಹಾಗಾಗಿ ಬಿಗ್​ಬಾಸ್ ಆಯೋಜಕರು ಇಬ್ಬರು ಅತಿಥಿಗಳನ್ನು ಮನೆಯ ಒಳಕ್ಕೆ ಕಳಿಸಿದ್ದಾರೆ. ಶನಿವಾರದ ಎಪಿಸೋಡ್​ಗೆ ನಿರ್ದೇಶಕ ಯೋಗರಾಜ್ ಭಟ್ ಅವರು ಬಂದಿದ್ದರು. ಮನೆಯ ಸದಸ್ಯರ ಕೈಲಿ ಕೆಲವು ತಮಾಷೆಯ ಟಾಸ್ಕ್​ಗಳನ್ನು ಮಾಡಿದ್ದರು. ಕೆಲವರಿಗೆ ಬುದ್ಧಿವಾದ ಹೇಳಿದ್ದರು. ಇದೀಗ ಭಾನುವಾರದ ಎಪಿಸೋಡ್​ಗೆ ಸೃಜನ್ ಬಂದಿದ್ದಾರೆ.

    ಈ ಹಿಂದೆ ಸೃಜನ್ ಸ್ಪರ್ಧಿಯಾಗಿ ಬಿಗ್‌ಬಾಸ್‌ಗೆ ಬಂದಿದ್ದರು, ಆದರೆ ಈಗ ಅತಿಥಿಯಾಗಿ ಬಂದಿದ್ದಾರೆ. ಖಾಲಿ ಕೈಯಲ್ಲಿ ಬಾರದೆ ತಮ್ಮೊಡನೆ ದುಬಾರಿ ಟಾಟಾ ಕರ್ವ್ ಕಾರುಗಳನ್ನು ತಂದಿದ್ದರು. ಮನೆಗೆ ಬಂದಿದ್ದ ಕಾಲಿ ಕಾರುಗಳು ಎಲಿಮಿನೇಟ್ ಆಗಲಿರುವ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿವೆ. ಆದರೆ ಆ ವ್ಯಕ್ತಿ ಯಾರು ಎಂದು ಇವತ್ತಿನ ಎಪಿಸೋಡ್‌ನಲ್ಲಿ ಕಾದು ನೋಡಬೇಕಷ್ಟೇ.

    ಮುಖ್ಯವಾಗಿ ಬಿಗ್‌ಬಾಸ್ ಮನೆಗೆ ಬಂದ ಸೃಜನ್ ಮೊದಲಿಗೆ ಟಾಸ್ಕ್ ನೀಡಿ ಕೆಲವು ತಾಷೆ ಆಟಗಳನ್ನೂ ಆಡಿದ್ದಾರೆ. ಬಳಿಕ ಮನೆಯಿಂದ ಯಾರು ಹೊರಹೋಗಬೇಕು ಹಾಗೂ ಯಾಕೆ ? ಎಂಬ ಸೂಕ್ತ ಕಾರಣ ಸ್ಪರ್ಧಿಗಳಿಗೆ ನೀಡಿದ್ದಾರೆ. ಐಶ್ವರ್ಯ ಸೇರಿದಂತೆ ಇನ್ನೂ ಹಲವರು ವಿಕ್ರಮ ಹೆಸರು ಹೇಳಿದ್ದಾರೆ. ಒಬ್ಬೊಬ್ಬರ ಹೆಸರು ಕೆಳಿ ಬಂದಿದ್ದು, ಕೊನೆಗೆ ಮತಗಲ ಆಧಾರದಲ್ಲಿ ಒಬ್ಬ ಸ್ಪರ್ಧಿಯನ್ನು ಇಂದು ಬಿಗ್‌ಬಾಸ್ ಮನೆಯಿಂದ ಹೊರ ಹಾಕಲಿದೆ.

    Continue Reading

    BIG BOSS

    BBK11: ಬಿಗ್​ ಬಾಸ್​ ಇತಿಹಾಸದಲ್ಲೇ ಇದೇ ಮೊದಲು ಮನೆಯೊಳಕ್ಕೆ ನುಗ್ಗಿ ಬಂದ ಜನರು! ಯಾಕೆ ಗೊತ್ತಾ?

    Published

    on

    ಬಿಗ್​ ಬಾಸ್​​ ಕನ್ನಡ ಸೀಸನ್​ 11 ಭಾರೀ ಕುತೂಹಲದಿಂದ ಸಾಗುತ್ತಿದೆ. ಸದ್ಯ ಮನೆಯಲ್ಲಿ ರಾಜಕೀಯ ಟಾಸ್ಕ್​ ನಡೆಯುತ್ತಿದೆ. ಈಗಾಗಲೇ ಮನೆಯಲ್ಲಿ ಎರಡು ಬಣಗಳಾಗಿದ್ದು, ಇತ್ತಂಡಗಳು ತಮ್ಮ ಚಿಹ್ನೆಯೊಂದಿಗೆ ಪ್ರಚಾರ ನಡೆಸುತ್ತಿವೆ. ಹೀಗಿರುವಾಗ ಬಿಗ್​ ಬಾಸ್​​ ಟಾಸ್ಕ್​ನಲ್ಲಿ ಕೊಂಚ ಟ್ವಿಸ್ಟ್​ ಕೊಟ್ಟಿದ್ದಾರೆ. ಅದೇನೆಂದರೆ ಬಿಗ್​ ಬಾಸ್​ ಮನೆಗೆ ಜನಸಾಮಾನ್ಯರನ್ನು ಕರೆಸಲಾಗಿದೆ.

    ಹೌದು. ರಾಜಕೀಯ ಎಂದ ಮೇಲೆ ಜನರು ಇರಲೇಬೇಕು. ಜನರಿಂದಲೇ ಪ್ರತಿನಿಧಿಯೊಬ್ಬ ರಾಜಕಾರಣಿಯಾಗಿ ಆಯ್ಕೆಯಾಗುತ್ತಾನೆ. ಆದರೀಗ ಜನರನ್ನೇ ಮನೆಯೊಳಕ್ಕೆ ಕರೆಸಿಕೊಂಡಿರುವ ಬಿಗ್​ ಬಾಸ್​ ಸ್ಪರ್ಧಿಗಳಿಗೆ ದೊಡ್ಡ ಟಾಸ್ಕ್​ ನೀಡಿದ್ದಾರೆ. ಆ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.

    ಬಿಗ್​​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು ಈಗಾಗಲೇ ಎರಡು ಪಕ್ಷವನ್ನು ರಚಿಸಿದ್ದಾರೆ. ತೋಳ ಮತ್ತು ಹದ್ದು ಎಂಬ ಎರಡು ಪಕ್ಷ ರಚಿಸಿ ಪ್ರಚಾರ ಮಾಡುತ್ತಿದ್ದಾರೆ. ಆದರೀಗ ಜನ ಸಾಮಾನ್ಯರ ಮುಂದೆ ತಮ್ಮ ಪಕ್ಷವನ್ನು ಗೆಲ್ಲಿಸುವುದೇ ಪ್ರಮುಖ ಗುರಿಯಾಗಿದೆ.

    ತೋಳ ಪಕ್ಷವು ಧರ್ಮ ಪರ ಸೇನಾ ಪಕ್ಷ ಎಂಬ ಧ್ಯೇಯದೊಂದಿಗೆ ಪ್ರಚಾರ ಮಾಡಿದರೆ, ಇತ್ತ ಹದ್ದು ಪಕ್ಷವು ಪ್ರಮಾಣಿಕ ಸಮರ್ಥ ನ್ಯಾಯವಾದಿ ಪಕ್ಷ ಹೆಸರಿನಲ್ಲಿ ಪ್ರಚಾರ ಮಾಡುತ್ತಿದೆ.

    ಒಟ್ಟಿನಲ್ಲಿ ಮನೆಯೊಳಕ್ಕೆ ಕಾಲಿಟ್ಟ ಜನರ ಮನಗೆಲ್ಲುವುದೇ ರಾಜಕಾರಣಿಗಳ ಪ್ರಮುಖ ಗುರಿಯಾಗಿದೆ. ಜೊತೆಗೆ ಸ್ಪರ್ಧಿಗಳಿಗೆ ಜನಸಾಮಾನ್ಯರು ನಾನಾ ರೀತಿಯ ಪ್ರಶ್ನೆಯನ್ನು ಕೇಳುವ ಅವಕಾಶವನ್ನು ಕೊಡಲಾಗಿದೆ. ಇಂದಿನ ಎಪಿಸೋಡ್​ ಭಾರೀ ಕುತೂಹಲತೆಯಿಂದ ಕೂಡಿದ್ದು, ಜನಸಾಮಾನ್ಯರು ಮತ್ತು ಪಕ್ಷದ ಪ್ರತಿನಿಧಿಗಳ ಜೊತೆಗಿನ ಮಾತುಕತೆಯನ್ನು ಕಾಣಲು ವೀಕ್ಷಕರು ಕಾದು ಕುಳಿತ್ತಿದ್ದಾರೆ.

    Continue Reading

    BIG BOSS

    ಬಿಗ್ ಬಾಸ್ ಮನೆಯ ರಾಜಕೀಯ ವಿಚಾರಿಸಲು ನ್ಯೂಸ್ ಆ್ಯಂಕರ್ ರಾಧಾ ಹಿರೇಗೌಡರ್ ಎಂಟ್ರಿ

    Published

    on

    ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಸೀಸನ್ 11 ಬರೀ ಗಲಾಟೆಯಲ್ಲಿ ಮುಂದುವರೆದಿದೆ. ಬಿಗ್ ಬಾಸ್ ನಲ್ಲಿ ಇತ್ತೀಚೆಗೆ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಹನುಮಂತು ಅವರು ಆಗಮಿಸಿದ್ದರು. ಇದೀಗ ಮತ್ತೊಬ್ಬರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ.

    ಬಿಗ್ ಬಾಸ್ ನಲ್ಲಿ ಈ ವಾರ ಸ್ಪರ್ಧಿಗಳಿಗೆ ರಾಜಕೀಯದ ಟಾಸ್ಕ್ ನೀಡಿದ್ದಾರೆ. ಅದರಂತೆ ಎರಡು ಪಕ್ಷಗಳನ್ನು ರಚಿಸಿ ಕೆಲವು ಟಾಸ್ಕ್ ನೀಡಿದ್ದಾರೆ. ಈ ನಡುವೆ ಬಿಗ್ ಬಾಸ್ ನಲ್ಲಿ ನಡೆಯುತ್ತಿರುವ ರಾಜಕೀಯ ವಿಚಾರಿಸಿಕೊಳ್ಳಲು ಬಿಗ್ ಬಾಸ್ ನ್ಯೂಸ್ ಆ್ಯಂಕರ್ ರಾಧಾ ಹಿರೇಗೌಡರ್ ಅವರನ್ನು ಬಿಗ್ ಬಾಸ್ ಮನೆಗೆ ಕಳುಹಿಸಿದೆ. ಬಿಗ್ ಬಾಸ್ ಮನೆಯ ರಾಜಕೀಯ ಆಟವನ್ನು ಪ್ರಶ್ನೆ ಮಾಡೋಕೆ ಬರ್ತಾ ಇದ್ದಾರೆ ರಾಧಾ ಹಿರೇಗೌಡರ್. ನೀವು ಬಂದಿದ್ದೀರಿ ಅಂದರೆ ನಮಗೆ ‌ನೀರು ಕುಡಿಸುತ್ತೀರಿ. ನೀವು ಸ್ಪರ್ಧಿಯಾಗಿ ಬಂದಿದ್ದೀರೋ ಹೇಗೋ ಅಂಥ ಚೈತ್ರಾ ರಾಧಾ ಅವರನ್ನು ಪ್ರಶ್ನಿಸಿದ್ದಾರೆ.

    ನನಗೆ ಪಕ್ಷ ಎಲ್ಲ ಹೊಸತಲ್ಲ. ಭಾಷಣ ರಾಜಕೀಯ. ಐಶ್ವರ್ಯಾ ಅವರೇ ಎದೆ ಮುಟ್ಟಿಕೊಂಡು ಹೇಳಿ ನಿಮ್ಮ ಪಕ್ಷದಲ್ಲಿ ಎಲ್ಲರೂ ಪ್ರಾಮಾಣಿಕರಾಗಿದ್ದಾರಾ? ಏನು ಕೊಡ್ತೀರಾ ಜನರಿಗೆ ಎಂದು ಪ್ರಶ್ನಿಸಿದ್ದಾರೆ‌. ಅದಕ್ಕೆ ತಿವಿಕ್ರಮ್ ಕಾಫಿ ಕೊಡುತ್ತೇವೆ ಅಂದಿದ್ದಾರೆ. ಐಶ್ವರ್ಯಾ ಅವರು ಮನರಂಜನೆ ಕೊಡುತ್ತೇವೆ ಅಂದಿದ್ದಾರೆ. ಅದಕ್ಕೆ ರಾಧಾ ಅವರು ಅದನ್ನು ನಿವೇನು ಕೊಡೋದು ಬಿಗ್ ಬಾಸ್ ಕೊಡುತ್ತಾರೆ. ನನ್ನನ್ನು ನಗಿಸುತ್ತೀರಾ ನಗಿಸಿ ಎಂದು ಮರು ಪ್ರಶ್ನಿಸಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ. ರಾಧಾ ಹಿರೇಗೌಡರ್ ಸ್ಪರ್ಧಿಯಾಗಿ ಬಂದಿದ್ದಾರೋ ಅಥವಾ ಗೆಸ್ಟ್ ಆಗಿ ಬಂದಿದ್ದಾರಾ ಎನ್ನುವುದನ್ನು ಕಾದು‌ ನೋಡಬೇಕಿದೆ.

    Continue Reading

    LATEST NEWS

    Trending