Connect with us

LATEST NEWS

Udupi: ನೇಜಾರು ಕಗ್ಗೊಲೆ ಪ್ರಕರಣ – ಮಾಜಿ ಸಿಎಂ ವೀರಪ್ಪ ಮೊಯ್ಲಿಗೆ ಮನವಿ

Published

on

ಉಡುಪಿ: ನೇಜಾರು ತಾಯಿ ಮತ್ತು ಮೂವರು ಮಕ್ಕಳ ಕಗ್ಗೊಲೆ ಪ್ರಕರಣದ ತ್ವರಿತ ವಿಚಾರಣೆ ನಡೆಸಿ ನ್ಯಾಯ ಒದಗಿಸಲು ರಾಜ್ಯ ಸರಕಾರಕ್ಕೆ ಮಾರ್ಗದರ್ಶನ ನೀಡುವಂತೆ ಆಗ್ರಹಿಸಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿ ಅವರನ್ನು ನಿಯೋಗವೊಂದು ಉಡುಪಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.

ರಾಜ್ಯ ಸರಕಾರವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ನ್ನು ಕೂಡಲೇ ನೇಮಿಸಬೇಕು. ತ್ವರಿತಗತಿಯಲ್ಲಿ ವಿಚಾರಣೆ ಪೂರ್ಣಗೊಳಿಸಿ ಆರೋಪಿಗೆ ಶಿಕ್ಷೆ ಖಾತ್ರಿ ಪಡಿಸಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಬೇಕು. ಸಂತ್ರಸ್ತ ಕುಟುಂಬದ ನೂರ್ ಮುಹಮ್ಮದ್ ಅವರ ಮಗ ಅಸಾದ್ ಅವರಿಗೆ ಅನುಕಂಪದ ಆಧಾರದಲ್ಲಿ ಸರಕಾರಿ ಉದ್ಯೋಗ ನೀಡಬೇಕು ಎಂದು ನಿಯೋಗ ಮನವಿಯಲ್ಲಿ ಒತ್ತಾಯಿಸಿದೆ.

ನಿಯೋಗದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಂಗಳೂರು ಮಹಾ ನಗರ ಪಾಲಿಕೆ ಸದಸ್ಯ ಡಿ.ಕೆ.ಅಶೋಕ್, ಮಾಜಿ ಮೇಯರ್ ಭಾಸ್ಕರ ಮೊಲಿ, ಮುಖಂಡರಾದ ಉದಯ ಕುಮಾರ್ ಮುನಿಯಾಲು, ವ್ನಿೇಶ್ ಕಿಣಿ, ಕೃಷ್ಣಮೂರ್ತಿ ಆಚಾರ್ಯ ಕಾರ್ಕಳ, ಪ್ರಭಾಕರ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

LATEST NEWS

ಪ್ರೇಯಸಿಯ ಜೊತೆ ಗೋವಾ ಟೂರ್..! ಕ್ಷೌರಿಕನಿಗೆ ದುಬಾರಿಯಾದ ಟೂರ್..!

Published

on

ಗೋವಾ/ಮಂಗಳೂರು: ಆತ ತಾನು ಪ್ರೀತಿಸಿದ ಹುಡುಗಿ ಜೊತೆಗೆ ಗೋವಾ ಟೂರ್ ಹೋಗೋದಿಕ್ಕೆ ಎಲ್ಲಾ ಪ್ಲ್ಯಾನ್ ಮಾಡಿಕೊಂಡಿದ್ದ. ಇದಕ್ಕಾಗಿ ಸರಿ ಸುಮಾರು ತಿಂಗಳ ಕಾಲ ತಾನು ದುಡಿದ ಹಣವನ್ನು ಕೂಡಿಟ್ಟಿದ್ದ. ಹೀಗೆ ಕೂಡಿಟ್ಟ ಹಣದಲ್ಲಿ ಫ್ಲೈಟ್‌ ಟಿಕೆಟ್ ಬುಕ್ ಮಾಡಿ ತನ್ನ ಪ್ರೇಯಿಸಿ ಜೊತೆ ಗೋವಾಕ್ಕೂ ತಲುಪಿದ್ದ. ಆದ್ರೆ ಗೋವಾದಲ್ಲಿ ಲ್ಯಾಂಡ್‌ ಆಗ್ತಾ ಇದ್ದಂತೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾನೆ.

flight

ಇದು ಉತ್ತರ ಪ್ರದೇಶದ ಪ್ರೇಮಿಗಳ ಕಥೆಯಾಗಿದ್ದು, ತನ್ನ ಪ್ರಿಯತಮೆಯ ಜೊತೆ ಗೋವಾ ಸುತ್ತುವ ಪ್ರಿಯಕರನ ಕನಸು ಭಗ್ನವಾಗಿದೆ. ಲಕ್ನೋದ ಮೋಹನ್‌ಲಾಲ್‌ಗಂಜ್‌ ನ ಮೊಹಮ್ಮದ್ ಅಮನ್‌ ವೃತ್ತಿಯಲ್ಲಿ ಕ್ಷೌರಿಕನಾಗಿದ್ದು ತನ್ನ ಪ್ರಿಯತಮೆಯನ್ನು ಗೋವಾ ತಿರುಗಿಸುವ ಕನಸು ಕಂಡಿದ್ದ. ಇದಕ್ಕಾಗಿ ಆತನ ಆರು ತಿಂಗಳಿನಿಂದ ಹಣ ಕೂಡಿಟ್ಟು ಗೋವಾಕ್ಕೆ ಹೊರಟಿದ್ದ. ಲಕ್ನೋದಿಂದ ದೆಹಲಿಗೆ ಬಂದು ಅಲ್ಲಿಂದ ಗೋವಾಕ್ಕೆ ತನ್ನ ಪ್ರಿಯತಮೆಯ ಜೊತೆ ಪ್ರಯಾಣ ಮಾಡಿದ್ದ. ಆದ್ರೆ ಗೋವಾ ವಿಮಾನ ನಿಲ್ದಾಣದಲ್ಲಿ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಖಾಲಿ ಬಿಯರ್ ಬಾಟಲಿಗಳಿಂದ ಲಕ್ಷಾಧಿಪತಿಯಾದ ವ್ಯಕ್ತಿ..!

flight

ಮೊಹಮ್ಮದ್ ಅಮಾನ್ ಮೋಹನ್‌ಲಾಲ್‌ಗಂಜ್‌ನ ನಿವಾಸಿಯಾಗಿದ್ದು, ತನ್ನ ನೆರೆಮನೆಯ ಯುವತಿಯನ್ನು ಪ್ರೀತಿಸಿದ್ದ. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿದ್ದು, ಮನೆಯವರಿಗೆ ಹೇಳದೆ ಗೋವಾ ಟೂರ್ ಹೊರಟಿದ್ದರು. ಯಾವಾಗ ಮನೆಯ ಮಗಳು ನಾಪತ್ತೆಯಾಗಿದ್ದಾಳೋ ಆವಾಗ ಮನೆಯವರು ಪೊಲೀಸರಿಗೆ ದೂರು ನಿಡಿದ್ದಾರೆ. ಈ ವೇಳೆ ಮೊಹಮ್ಮದ್ ಅಮಾನ್ ಕೂಡಾ ಇಲ್ಲದ ಕಾರಣ ಆತನ ಬಗ್ಗೆಯೇ ಸಂಶಯ ವ್ಯಕ್ತಪಡಿಸಿದ್ದರು.

ದೂರಿನ ಹಿನ್ನಲೆಯಲ್ಲಿ ಅಮಾನ್‌ನನ್ನು ಹುಡುಕಲು ಆರಂಭಿಸಿದ ಪೊಲೀಸರು ಸೈಬರ್ ಸೆಲ್‌ ಮತ್ತು ಡಿಜಿಟಲ್‌ ಟ್ರಾಕ್‌ ಮೂಲಕ ಆತ ಫ್ಲೈಟ್ ಟಿಕೆಟ್ ಬುಕ್ ಮಾಡಿರುವುದು ಪತ್ತೆ ಹಚ್ಚಿದ್ದಾರೆ. ಈ ವೇಳೆ ದೆಹಲಿ ಹಾಗೂ ಗೋವಾ ಟಿಕೆಟ್ ಬುಕ್ ಮಾಡಿರೋದು ಗೊತ್ತಾಗಿ ಗೋವಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಗೋವಾದಲ್ಲಿ ಇಳಿಯುತ್ತಿದ್ದಂತೆ ಪೊಲೀಸರು ಪ್ರೇಮಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಷ್ಟಪಟ್ಟು ಹಣ ಉಳಿಸಿ ಗೋವಾ ಸುತ್ತುವ ಕನಸಿಗೆ ತಣ್ಣೀರು ಬಿದ್ದಿದ್ದು, ಇದೀಗ ಯುವತಿಯ ಅಪಹರಣ ಪ್ರಕರಣದಲ್ಲಿ ಮೊಹಮ್ಮದ್ ಅಮಾನ್ ಕಂಬಿ ಎಣಿಸುವಂತಾಗಿದೆ.

Continue Reading

FILM

ಅಪಘಾತದಲ್ಲಿ ಕನ್ನಡದ ನಟಿಯ ದುರಂತ ಸಾ*ವು..!

Published

on

ಅಂಧ್ರಪ್ರದೇಶ:  ಕಿರುತೆರೆ ನಟಿ ಪವಿತ್ರಾ ಜಯರಾಂ(35 ವರ್ಷ) ಅಪಘಾತದಲ್ಲಿ ಸಾ*ವಿಗೀಡಾಗಿದ್ದಾರೆ. ಆಂಧ್ರಪ್ರದೇಶದ ಕರ್ನೂಲು ಸಮೀಪದಲ್ಲಿ ಅಪಘಾತ ಸಂಭವಿಸಿದ್ದು ಪವಿತ್ರ ಸ್ಥಳದಲ್ಲೇ ಮೃ*ತಪಟ್ಟಿದ್ದಾರೆ. ಮೂಲತಃ ಕನ್ನಡಿಗರಾದ ಪವಿತ್ರ ಜಯರಾಂ, ತೆಲುಗಿನ ‘ತ್ರಿನಯನಿ’ ಧಾರವಾಹಿಯಲ್ಲಿ ಜನಪ್ರಿಯರಾಗಿದ್ದರು. ಕನ್ನಡದ ‘ರೋಬೋ ಫ್ಯಾಮಿಲಿ’ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದರು. ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು.

pavithra jayaram

ನಟಿ ಪವಿತ್ರಾ ಅವರು ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಜನಪ್ರಿಯರಾಗಿದ್ದರು. ಇನ್ನು ತೆಲುಗಿನ ‘ತ್ರಿನಯನಿ’ ಧಾರಾವಾಹಿ ಮೂಲಕ ತೆಲುಗರ ಮನೆಮಾತಾಗಿದ್ದರು.  ಈ ಧಾರಾವಾಹಿ ಕನ್ನಡದಲ್ಲೂ ಪ್ರಸಾರಗೊಳ್ಳುತ್ತಿದ್ದು ಇಲ್ಲಿಯೂ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದರು.

ಪುಷ್ಟಾ-2 ರಿಲೀಸ್ ಕ್ರೇಜ್‌ನಲ್ಲಿರುವಾಗಲೇ ‘ಅಲ್ಲು ಅರ್ಜುನ್’ ವಿರುದ್ಧ ಪೊಲೀಸ್ ಕೇಸ್.!

ಪವಿತ್ರ ಜಯರಾಂ ಇಂದು(ಮೇ.12) ಮುಂಜಾನೆ ಕಾರು ಅಪಘಾತದಲ್ಲಿ ಸಾ*ವಿಗೀಡಾಗಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಸಮೀಪ ಮೆಹಬೂಬ್ ನಗರದಲ್ಲಿ ನಡೆದ ಕಾರು ಅಪಘಾತದಲ್ಲಿ ನಟಿ ಪವಿತ್ರಾ ಸ್ಥಳದಲ್ಲೇ ಮ*ರಣ ಹೊಂದಿದ್ದಾರೆ. ಪವಿತ್ರ ಪ್ರಯಾಣಿಸುತ್ತಿದ್ದ ಕಾರು ಹಾಗೂ ಬಸ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಪವಿತ್ರ ಸ್ಥಳದಲ್ಲೇ ಅಸುನೀಗಿದ್ದಾರೆ. ಶೂಟಿಂಗ್‌ ಎಂದು ಹೋಗಿದ್ದವರು ಮರಳಿ ಬಾರದ ಲೋಕ್ಕಕೆ ಹೊರಟಿದ್ದು ಇವರ ದುರಂತ ಸಾವಿಗೆ ಎಲ್ಲರೂ ಕಂಬನಿ ಮಿಡಿದಿದ್ದಾರೆ.

ನಟಿ ಪವಿತ್ರಾ ಜಯರಾಂ ಸಾವಿಗೆ ಕನ್ನಡ ಹಾಗೂ ತೆಲುಗಿನ ಕಿರುತೆರೆಯವರು ಸಂತಾಪ ಸೂಚಿಸಿದ್ದಾರೆ. ಈ ಅನಿರೀಕ್ಷಿತ ಸಾವಿನಿಂದ ಕಂಗಾಲಾಗಿರುವ ಕುಟುಂಬದ ಸದಸ್ಯರನ್ನು ನೆನೆದು ಹಲವರು ಕಂಬನಿ ಮಿಡಿದಿದ್ದಾರೆ.

Continue Reading

DAKSHINA KANNADA

ಕುಟುಂಬ ಸದಸ್ಯರ ಮಾರಣ ಹೋಮ..! ಆರು ಜೀವಗಳು ಬಲಿ..!

Published

on

ಮಂಗಳೂರು ( ಉತ್ತರ ಪ್ರದೇಶ ) : ಮದರ್ ಡೇ ದಿನವೇ ತಾಯಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪಾಪಿ ಮಗ ತನ್ನ ಇಡೀ ಕುಟುಂಬದವರನ್ನು ಸಾಯಿಸಿದ್ದಾನೆ. ತಾಯಿ, ಪತ್ನಿ ಹಾಗೂ ಮೂವರು ಮಕ್ಕಳನ್ನು ಬರ್ಭರವಾಗಿ ಹ*ತ್ಯೆಮಾಡಿದ ಆರೋಪಿ ಬಳಿಕ ತಾನೂ ಕೂಡಾ ಗುಂಡು ಹಾರಿಸಿ ಜೀವಾಂತ್ಯಗೊಳಿಸಿದ್ದಾನೆ.

ಈ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ. ಆರೋಪಿ ಅನುರಾಗ್ ಸಿಂಗ್ ಎಂಬಾತ ತನ್ನ ಪತ್ನಿಯ ತಲೆಗೆ ಹ್ಯಾಮರ್‌ನಿಂದ ಹೊಡೆದಿದ್ದು, ತಾಯಿಗೆ ಗುಂಡು ಹೊಡೆದು ಸಾ*ಯಿಸಿದ್ದಾನೆ. ಬಳಿಕ ತನ್ನ ಮೂವರು ಮಕ್ಕಳನನ್ನು ಮಹಡಿಯಿಂದ ಕೆಳಕ್ಕೆ ಎಸೆದಿದ್ದಾನೆ. ಅನುರಾಗ್ ಸಿಂಗ್ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ಆದ್ರೆ ವಿಪರೀತವಾಗಿ ಮದ್ಯ ಸೇವನೆಯ ಚಟ ಹೊಂದಿದ್ದ ಅಂತಾನೂ ಪೊಲೀಸರು ತಿಳಿಸಿದ್ದಾರೆ. ಇದೇ ಕಾರಣದಿಂದ ತಾಯಿ , ಪತ್ನಿ, ಹಾಗೂ ಮೂವರು ಮಕ್ಕಳು ಹ*ತ್ಯೆ ಮಾಡಿದ್ದಾನೆ ಎನ್ನಲಾಗಿದೆ.

62 ವರ್ಷ ಪ್ರಾಯದ ಸಾವಿತ್ರಿ ಸಿಂಗ್, 40 ವರ್ಷ ಪ್ರಾಯದ ಪ್ರಿಯಾಂಕ, ಮಕ್ಕಳಾದ 12 ವರ್ಷದ ಅಸ್ವಿ, 8 ವರ್ಷದ ಅರ್ನಾ, ಹಾಗೂ 4 ವರ್ಷದ ಅದ್ವಿಕ್‌ ಅನುರಾಗ್ ಸಿಂಗ್ ಕೈನಿಂದ ಹತರಾದವರಾಗಿದ್ದಾರೆ. ಬಳಿಕ ಆರೋಪಿ ಕೂಡಾ ಗುಂಡು ಹಾರಿಸಿ ಸ್ವಯಂ ಹ*ತ್ಯೆ ಮಾಡಿಕೊಂಡಿದ್ದಾನೆ.

 

Continue Reading

LATEST NEWS

Trending