DAKSHINA KANNADA
ವೇಣೂರಿನ ಬರ್ಕಜೆ ಮಣ್ಣಲ್ಲಿ ಅಬ್ಬರಿಸಿದ ನವಗುಳಿಗ ದೈವಗಳು..!
ವೇಣೂರಿನ ಬರ್ಕಜೆ ಮಣ್ಣಲ್ಲಿ ಅಬ್ಬರಿಸಿದ ನವಗುಳಿಗ ದೈವಗಳು..!
The Navaguliga deities embedded in the Barkaja soil of Venur..!
ಮಂಗಳೂರು: ಮಂಗಳೂರಿನ ಕರಾವಳಿಯಲ್ಲಿ ಗುಳಿಗ ದೈವದ ಕೋಲ ಸೇವೆಯೇ ವಿಶಿಷ್ಟ. ಅಬ್ಬರ, ಆರ್ಭಟಕ್ಕೆ ಗುಳಿಗನಿಗೆ ಗುಳಿಗನೇ ಸಾಟಿ ಎನ್ನಬೇಕು.
ಅಂಥದ್ರಲ್ಲಿ ಒಂದೇ ಬಾರಿಗೆ ಒಂಬತ್ತು ಗುಳಿಗ ದೈವಗಳು ಅಬ್ಬರಿಸಲು ತೊಡಗಿದರೆ ಹೇಗಿರಬೇಡ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ . ಒಂಬತ್ತು ಗುಳಿಗ ದೈವಗಳ ಏಕಕಾಲದ ಸೇವೆ ತುಳುನಾಡಿನಲ್ಲಿ ಅತಿ ವಿಶಿಷ್ಟ ಸೇವೆಗಳಲ್ಲಿ ಒಂದು.
ತುಳುನಾಡು ಹಲವು ಜಾನಪದ ಸಾಂಸ್ಕ್ರತಿಕ ಸಂಪನ್ನಗಳ ನೆಲೆಬೀಡು. ತನ್ನದೇ ಆದ ವಿಶಿಷ್ಟ ಜಾನಪದ ಕಲೆಗಳನ್ನು, ನಂಬಿಕೆಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿರುವ ತಾಣ ಯಕ್ಷಾಧಾರವಾಗಿ ಆದಿಶಕ್ತಿ ಪಾರ್ವತಿ ದೇವಿ ಸಪ್ತ ಕನ್ನಿಕೆಯರ ರೂಪತಾಳಿ ಭೂಲೋಕ ಸಂಚಾರಕ್ಕೆ ಹೊರಟಾಗ ಕರ್ಮಭೂಮಿಗೆ ಬರಲು ಸುರಗಂಗೆಯ ಮಾರ್ಗವಾಗಿ ಪಯಣವನ್ನು ಪ್ರಾರಂಭಿಸುತ್ತಾಳೆ.
ಆಗ ಶಿವಗಣದಲ್ಲಿದ್ದ ಈ ಗುಳಿಗನನ್ನು ನಾವಿಕನನ್ನಾಗಿ ನೇಮಿಸಿ ಶಿವಗಂಗೆಯಿಂದ ಹೊರಟು ಸಪ್ತ ಸಾಗರವನ್ನು ದಾಟಿ ಪವಿತ್ರವಾದ ಪರಶುರಾಮ ಸೃಷ್ಟಿಯಾದ ತುಳುನಾಡಿಗೆ ಬರುವಾಗ ಇಲ್ಲಿನ ಪವಿತ್ರತೆಯನ್ನು ಕಂಡು ಮನಮೋಹಗೊಂಡು ವಿವಿಧ ಸ್ಥಳಗಳಲ್ಲಿ ಲಿಂಗರೂಪಿಯಾಗಿ ಕೊನೆ ನಿಲ್ಲುತ್ತಾಳೆ. ಆಗ ಸ್ವಾಮಿ ಭಕ್ತ ಗುಳಿಗನಿಗೆ ತಾನಿರುವ ಕಡೆಯಲ್ಲಿ ಕ್ಷೇತ್ರ ರಕ್ಷಕನಾಗಿ ನೀನು ನೆಲೆ ನಿಲ್ಲು ಎಂದು ಅಪ್ಪಣೆ ಮಾಡುತ್ತಾಳೆ.
ವಿಶೇಷ ಗೌರವ- ಭಯ ಭಕ್ತಿಯಿಂದ ಆಸ್ತಿಕರು ಕ್ಷೇತ್ರ ರಕ್ಷಣಾ ದೈವವಾಗಿರುವ ಗುಳಿಗನನ್ನು ಆರಾಧಿಸುತ್ತಾರೆ.
ಕರಾವಳಿಯಲ್ಲಿ ಗುಳಿಗ ದೈವದ ಕೋಲ ಸೇವೆಯೇ ವಿಶಿಷ್ಟ. ಕರಾವಳಿಯ ಇತಿಹಾಸದಲ್ಲೇ ಅತ್ಯಂತ ವಿಶೇಷ ಆಗಿರುವ ಇಂಥ ವಿದ್ಯಮಾನ ವರ್ಷಕ್ಕೊಮ್ಮೆ ಜರಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಬಳಿಯ ನಿಟ್ಟೆಡೆ ಗ್ರಾಮದ ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ, ನವಗುಳಿಗ ಕ್ಷೇತ್ರದಲ್ಲಿ ನಡೆಯುವ ಒಂಬತ್ತು ಗುಳಿಗ ದೈವಗಳ ಏಕಕಾಲದ ಸೇವೆ ತುಳುನಾಡಿನಲ್ಲಿ ಅತಿ ವಿಶಿಷ್ಟ ಸೇವೆಗಳಲ್ಲಿ ಒಂದು.
ಈ ಬಾರಿಯ ವಾರ್ಷಿಕ ಉತ್ಸವ ರಾತ್ರಿ ನಡೆದಿದ್ದು ಒಂಬತ್ತು ಗುಳಿಗ ದೈವಗಳ ಗಗ್ಗರ ಸೇವೆ. ಆ ಒಂಭತ್ತು ಗುಳಿಗಗಳ ಅಬ್ಬರದ ಸೇವೆಯಾಟ ನೋಡುವುದೇ ಒಂದು ಕಣ್ಣಿಗೆ ಹಬ್ಬ….
. ಒಟ್ಟಿಗೆ ಅಬ್ಬರಿಸುತ್ತಲೇ ಗಗ್ಗರದ ಜೊತೆಗೆ ಹಾರಾಟ ನಡೆಸುವ ಗುಳಿಗ ದೈವಗಳ ಈ ರೀತಿಯ ನರ್ತನವಾಗಲೀ, ಅರಚಾಟವಾಗಲೀ ಬೇರೆ ಯಾವ ಕೋಲದಲ್ಲೂ ಅಷ್ಟಾಗಿ ಕಂಡುಬರುವುದಿಲ್ಲ. ಅತ್ಯಂತ ವಿಶೇಷವೆನಿಸಿರುವ ಈ ಕೋಲ ಸೇವೆಯನ್ನು ನೋಡಲು ಕರಾವಳಿಯ ಉದ್ದಗಲದಿಂದ ಜನತೆ ಬರುತ್ತಾರೆಅತ್ಯಂತ ವಿಶೇಷವಾಗಿರುವ ವರ್ಷಕ್ಕೊಮ್ಮೆ ಮಾತ್ರ ನಡೆಯುವ ಈ ನವಗುಳಿಗರ ಸೇವೆಯಾಟಕ್ಕೆ ಬಂದು ಗುಳಿಗನ ಅಬ್ಬರಕ್ಕೆ ಅಚ್ಚರಿಯೊಂದಿಗೆ ಸಾಕ್ಷಿಯಾಗುತ್ತಾರೆ ಊರ ಪರಊರ ಜನತೆ.
ಹೀಗಾಗಿ ಬರ್ಕಜೆ ಎಂಬ ಈ ಪುಟ್ಟ ಊರು ಒಂಬತ್ತು ಗುಳಿಗನ ಕಾರಣಕ್ಕಾಗಿಯೇ ಭಾರೀ ಪ್ರಸಿದ್ಧಿ ಪಡೆಯುತ್ತಿದೆ.
DAKSHINA KANNADA
ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು
ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.
DAKSHINA KANNADA
ಮಂಗಳೂರು: 30.98% ಮತದಾರರಿಂದ ಮತ ಚಲಾವಣೆ
ಮಂಗಳೂರು: 17-ದ.ಕ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ 30.98 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ.
ಸುಳ್ಯದಲ್ಲಿ ಅತಿ ಹೆಚ್ಚು ಮತ ಚಲಾವಣೆಯಾಗಿದ್ದು, 16.46 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ. ಮೂಡುಬಿದಿರೆ ಕ್ಷೇತ್ರದಲ್ಲಿ ಅತಿ ಕನಿಷ್ಠ ಮತ ಚಲಾವಣೆಯಾಗಿದ್ದು, 12.2 ಪ್ರತಿಶತ ಮತದಾರರು ಮತ ಚಲಾಯಿಸಿದ್ದಾರೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ಬೇಗೆಗೆ ಕಾರ್ ಸ್ಟ್ರೀಟ್ ಸರ್ಕಾರಿ ಬಾಲಕಿಯರ ಎಪಿಯು ಕಾಲೇಜಿನಲ್ಲಿ ಮತದಾರರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಛತ್ರಿ ಹಿಡಿದು ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡುಬಂತು.
DAKSHINA KANNADA
ಮಂಗಳೂರು: ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿ; ಪೊಲೀಸ್ ಅಧಿಕಾರಿಗಳ ಜೊತೆಯಲ್ಲೇ ಅನುಚಿತ ವರ್ತನೆ
ಮಂಗಳೂರು: ನಗರದ ಕಪಿತಾನಿಯೋ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ ಚಲಾಯಿಸಿದ ಬಳಿಕ ಮಾಧ್ಯಮ ಪ್ರತಿನಿಧಿ ಜೊತೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತನೊಬ್ಬ ಪೊಲೀಸ್ ಹಾಗೂ ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿ ವಾಗ್ವಾದವುಂಟಾದ ಘಟನೆ ನಡೆಯಿತು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್. ಆರ್ ಪೂಜಾರಿಯವರು ಮತದಾನ ಮಾಡಿ ಹೊರಬಂದಾಗ ಮಾಧ್ಯಮದವರು ಗೇಟಿನ ಹೊರಭಾಗದಲ್ಲಿ ಅವರ ಹೇಳಿಕೆ ತೆಗೆದುಕೊಳ್ಳುತ್ತಿದ್ದರು. ಆಗ “ಎಷ್ಟು ಹೊತ್ತು ಪ್ರತಿಕ್ರಿಯೆ ಪಡೆಯುವುದು”ಎಂದು ಸಂದೀಪ್ ಎಕ್ಕೂರು ಎಂಬಾತ ಕ್ಯಾತೆ ತೆಗೆದಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಸೇರಿದಂತೆ ಇತರ ಪೊಲೀಸರು ಆತನನ್ನು ತಳ್ಳಿಕೊಂಡು ಒಂದಷ್ಟು ದೂರ ಹೋಗಿದ್ದಾರೆ. ಈ ವೇಳೆ ಆತನೊಂದಿಗೆ ಇದ್ದವರು ಸಮಾಧಾನ ಮಾಡಲು ಯತ್ನಿಸಿದರೂ, ಆತ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ, ವಾಗ್ವಾದ ನಡೆಸಿದ್ದಾನೆ. ಆಗ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ಪೊಲೀಸರು ಅಲ್ಲಿಂದ ಹಿಂದಿರುಗಿದ ಬಳಿಕ ತಂಡದಲ್ಲಿದ್ದ ಮತ್ತೊಬ್ಬ ಘಟನೆಯ ದೃಶ್ಯ ಚಿತ್ರೀಕರಿಸುತ್ತಿದ್ದ ಮಾಧ್ಯಮ ವರದಿಗಾರರ ಮೇಲೆ ಹರಿಹಾಯ್ದಿದ್ದಾನೆ. ಈ ವೇಳೆ ಪತ್ರಕರ್ತರೊಂದಿಗೂ ತಂಡದಿಂದ ವಾಗ್ವಾದ ನಡೆದಿದೆ. ಈ ವೇಳೆ ಸ್ಥಳದಲ್ಲಿ ಸ್ವಲ್ಪ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸಂಜೆ ವೇಳೆ ಆತನ ಮೇಲೆ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡುತ್ತೇನೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿದ ಬಳಿಕ ಪರಿಸ್ಥಿತಿ ಶಾಂತವಾಯಿತು.