Connect with us

DAKSHINA KANNADA

NK special: ಕರಾವಳಿಯ ಮೊದಲ ಲೇಡಿ ನ್ಯೂಸ್‌ ಆ್ಯಂಕರ್‌ ಇವರೇ…..

Published

on

ಕಳೆದ ಒಂದೂವರೆ ದಶಕದಿಂದಾಚೆಗೆ ಕನ್ನಡ ಪತ್ರಿಕೋದ್ಯಮ ಹೆಮ್ಮರವಾಗಿ ಬೆಳೆದು ನಿಂತಿದೆ. ಈಗಿನ ಕನ್ನಡ ಸುದ್ದಿವಾಹಿನಿಗಳನ್ನು ನೋಡಿದರೆ ಹುಡುಗಿಯರದ್ದೇ ಮೇಲುಗೈ.

ಯಾವುದೇ ಸುದ್ದಿಯನ್ನು ಅತ್ಯಂತ ಸುಲಲಿತವಾಗಿ ನಿರೂಪಣೆ ಮಾಡುವ ಘಟಾನುಘಟಿ ಮಹಿಳಾ ನಿರೂಪಕರಿದ್ದಾರೆ. ಆದರೆ 90ರ ದಶಕದಲ್ಲಿ ಈಗಿನಂತೆ ಹೆಣ್ಮಕ್ಕಳು ಮನೆಯಿಂದ ಮುಕ್ತವಾಗಿ ಹೊರಬಂದು ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳುವಷ್ಟು ಸ್ವಾತಂತ್ರ್ಯಇರಲಿಲ್ಲ.

ಈ ಕಷ್ಟಸಾಧ್ಯಗಳ ಮಧ್ಯೆ ಕಳೆದ 25 ವರ್ಷದಿಂದ ಕರಾವಳಿಗರ ನೆಚ್ಚಿನ ಈಗಲೂ ಸುದ್ದಿ ಓದುತ್ತಿರುವ ಆ ನಿರೂಪಕಿಯನ್ನು ನಿಮಗೆ ಪರಿಚಯಿಸಲೇಬೇಕು.
ಅವರೇ ಶೀಲಾ ಕುಂದರ್‌


ಈ ಹೆಸರು ಕೇಳಿದಾಕ್ಷಣ ಕರಾವಳಿಗರು ಅದರಲ್ಲೂ ಮಂಗಳೂರಿಗರ ಮನಸ್ಸಿನಲ್ಲಿ ಬರುವ ಚಿತ್ರ ಎಂದರೆ ಸ್ಪಷ್ಟ ಉಚ್ಛಾರದ,

ಸುದ್ದಿಯನ್ನು ಅತ್ಯಂತ ಸುಲಲಿತವಾಗಿ ಓದುವ ವಾರ್ತಾ ವಾಚಕಿ. ನಮ್ಮ ಕುಡ್ಲ ವೆಬ್‌ ಅವರ ಸಂದರ್ಶನ ನಡೆಸಿದೆ. ಅದನ್ನ ಅವರ ಮಾತಿನಲ್ಲೇ ಕೇಳುವ……
ನಾನು ಮೂಲತಃ ಮಂಗಳೂರು ನಗರದ ಬೊಕ್ಕಪಟ್ಣದವಳು.

ಪ್ರೌಢ ಶಾಲಾ ದಿನಗಳಲ್ಲಿ ನನಗೆ ಕಥೆ, ಕವನ ಬರೆಯುವ ಮೂಲಕ ಸಾಹಿತ್ಯದ ಒಲವು ಇತ್ತು. 1988ರಲ್ಲಿ ಪಿಯುಸಿ ಶಿಕ್ಷಣ ಕಲಿಯುತ್ತಿರುವಾಗ ನನ್ನ ಸಾಹಿತ್ಯಾಸಕ್ತಿ ಕಂಡು ಆಗಿನ ಮಂಗಳೂರು ಆಕಾಶವಾಣಿಯ

ನಿಲಯ ನಿರ್ದೇಶಕ ಅಬ್ದುಲ್‌ ರೆಹಮಾನ್‌ ಪಾಷಾ ಅವರು ನನ್ನನ್ನು ತಾತ್ಕಾಲಿಕ ಉದ್ಘೋಷಕಿಯಾಗಿ ಆಯ್ಕೆ ಮಾಡುತ್ತಾರೆ. ಅಲ್ಲಿ ಹಿನ್ನೆಲೆ ಧ್ವನಿ, ಎಡಿಟಿಂಗ್‌, ಪ್ರೊಡಕ್ಷನ್‌ ಸೇರಿದಂತೆ ಹಲವು ಕಾರ್ಯಗಳನ್ನು ಮಾಡಬೇಕಿತ್ತು.


ಆಗ ಚಂದನ ವಾಹಿನಿ ಬಿಟ್ಟರೆ ಖಾಸಗಿಯಾಗಿ ಸನ್‌ ನೆಟ್‌ವರ್ಕ್‌ನ ‘ಉದಯ’ ವಾಹಿನಿಯಲ್ಲಿ ಉದಯ ವಾರ್ತೆ ಪ್ರಸಾರವಾಗುತ್ತಿತ್ತು.

ಅದರಲ್ಲಿ ರಾಷ್ಟ್ರ ಹಾಗೂ ಬೆಂಗಳೂರಿನ ಸುದ್ದಿಗಳಿಗೆ ಮಾತ್ರ ಆ ಚಾನೆಲ್‌ಗಳು ಸೀಮಿತವಾಗಿದ್ದವು.

ಕರ್ನಾಟಕ ವಾಣಿಜ್ಯ ಹೆಬ್ಬಾಗಿಲಾಗಿರುವ ಮಂಗಳೂರು ಆರ್ಥಿಕವಾಗಿ ಬೆಳೆದಿದ್ದರೂ, ಇಲ್ಲಿನ ಸುದ್ದಿಗಳು ಸ್ಥಳೀಯ ಪತ್ರಿಕೆಗಳಲ್ಲಿ ಮಾತ್ರ ಪ್ರಕಟವಾಗುತ್ತಿದ್ದವು.

ಆದರೆ ಪತ್ರಿಕೆ ಎಲ್ಲರಿಗೂ ತಲುಪುವುದು ಕಷ್ಟಸಾಧ್ಯ ಜೊತೆಗೆ ಅನಕ್ಷರಸ್ಥರಿಗೆ ಸುದ್ದಿಗಳು ತಲುಪುತ್ತಿರಲಿಲ್ಲ.


ಈ ವೇಳೆಗೆ ಮಂಗಳೂರಿನಲ್ಲಿ ದಿ. ರೋಹಿತ್‌ ರಾಜ್‌ ಎಂಬುವವರ ಒಡೆತನದ ‘ಮಂಗಳೂರು ಚಾನೆಲ್‌’ ಕೇಬಲ್‌ ಮೂಲಕ ಕಾರ್ಯ ನಿರ್ವಹಿಸುತಿತ್ತು. ಅದರಲ್ಲಿ ಪ್ರತಿನಿತ್ಯ ರಾತ್ರಿ 8 ಗಂಟೆಗೆ ಸ್ಥಳೀಯ ಸುದ್ದಿ ಪ್ರಸಾರವಾಗುತ್ತಿದ್ದವು.

ಆ ಸುದ್ದಿಯನ್ನು ಹಿರಿಯ ಪತ್ರಕರ್ತ ಮನೋಹರ್‌ ಪ್ರಸಾದ್‌ ಓದುತ್ತಿದ್ದರು.

1996ರಲ್ಲಿ ಅದೇ ಚಾನೆಲ್‌ನಲ್ಲಿ ಸುದ್ದಿ ನಿರೂಪಕರು ಬೇಕಾಗಿದ್ದಾರೆಂಬ ಜಾಹೀರಾತು ಬಂದಿತ್ತು. ಆ ಜಾಹೀರಾತು ನೋಡಿ ಅರ್ಜಿ ಸಲ್ಲಿಸಿ, ಸುದ್ದಿ ನಿರೂಪಕಿಯಾಗಿ ಆಯ್ಕೆಯಾದೆ.
ತಂತ್ರಜ್ಞಾನ ಭಾರತದಲ್ಲಿ ಅಂಬೆಗಾಲಿಡುತ್ತಿದ್ದ ಸಮಯ, ಕಂಪ್ಯೂಟರ್‌ನ ಮುಖ ನೋಡದ ಕಾಲವದು.

ಆಗ ಮಂಗಳೂರಿನ ಸರ್ಕ್ಯೂಟ್‌ ಹೌಸ್‌ನ ಒಂದು ಸಣ್ಣ ಕೊಠಡಿಯಲ್ಲಿ ಅದರ ನ್ಯೂಸ್‌ ರೆಕಾರ್ಡಿಂಗ್‌ ಕಾರ್ಯ ಮಾಡಲಾಗುತ್ತಿತ್ತು.

ಬಳಿಕ ಅದನ್ನು ನಂತೂರ್‌ ಪದವಿನ ಅಜ್ಜಿಯೊಬ್ಬರ ಮನೆಯ ಕೋಣೆಯನ್ನು ಬಾಡಿಗೆಗೆ ಪಡೆದು ಅಲ್ಲಿ ಗ್ರೀನ್‌ ಮ್ಯಾಟ್‌ ಬಳಸಿ ಸುದ್ದಿ ಓದಲಾರಂಭಿಸಿದೆವು ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.


ಇದಾದ ಕೆಲ ತಿಂಗಳಲ್ಲಿ ಆ ಸುದ್ದಿ ವಾಹಿನಿ ಕಾರಣಾಂತರದಿಂದ ನಿಂತುಹೋಯಿತು.

ಅದಾಗಲೇ ಮಂಗಳೂರಿನಲ್ಲಿ ಮತ್ತೊಂದು ಸುದ್ದಿವಾಹಿನಿ ಪ್ರಾರಂಭವಾಗಿತ್ತು. ಅದುವೇ ‘ನ್ಯೂ ಮಂಗಳೂರು ಚಾನೆಲ್‌’ ಸರಿಯಾಗಿ ನೆನಪಿಗೆ ನನಗೆ 1997ರ ಸೆ.5ರಂದು ಮದರ್‌ ತೆರೇಸಾ ನಿಧನ ಹೊಂದಿದ್ದರು.

ಆ ಸುದ್ದಿಯನ್ನು ನ್ಯೂ ಮಂಗಳೂರು ಚಾನೆಲ್‌ನಲ್ಲಿ ಮೊದಲ ಬಾರಿಗೆ ನಾನೇ ಬರೆದು ಓದಿದ ನೆನಪು. ಪ್ರತಿನಿತ್ಯ 3 ಗಂಟೆಗೆ ಬಂದು ನಾನೇ ಸುದ್ದಿ ಬರೆದು ಅದನ್ನು ಕ್ಯಾಮಾರಾದ ಮುಂದೆ ಓದುತ್ತಿದ್ದೆ.

ಬಳಿಕ ಆ ಸುದ್ದಿಯನ್ನು ಎರಡು ವಿಸಿಆರ್‌ ಇಟ್ಟು ವಿಎಚ್‌ಎಸ್‌ ಕ್ಯಾಸೆಟ್‌ನಲ್ಲಿ ಫೈನಲ್‌ ರೆಕಾರ್ಡ್‌ ಮಾಡಿ ಅದನ್ನು ಮಂಗಳೂರಿನಲ್ಲಿರುವ 20 ಕೇಬಲ್‌ ಆಪರೇಟರ್‌ಗಳಿಗೆ ತಲುಪಿಸಲಾಗುತ್ತಿತ್ತು.

ರೆಕಾರ್ಡಿಂಗ್‌ ತಡವಾದ ಸಂದರ್ಭ ನಾನೇ ಎಷ್ಟೋ ಬಾರಿ ಆಪರೇಟರ್‌ಗಳಿಗೆ ಕ್ಯಾಸೆಟ್‌ ಕೊಟ್ಟು ಮನೆಗೆ ಹೋದದ್ದಿದ್ದೆ. ಆ ಸುದ್ದಿ ರಾತ್ರಿ 8.30ರ ಹೊತ್ತಿಗೆ ಏಕಕಾಲದಲ್ಲಿ ಮಂಗಳೂರಿನಾದ್ಯಂತ ಪ್ರಸಾರವಾಗುತ್ತಿತ್ತು.


ಆಗ ಪತ್ರಿಕೆ ಬಿಟ್ಟರೆ ಜನರಿಗೆ ಯಾವುದೇ ಸುದ್ದಿ ಮೂಲ ಇರಲಿಲ್ಲ. ಹಾಗಾಗಿ ರಾತ್ರಿ 8.30ರ ವೇಳೆಗೆ ಟಿವಿ ಇರುವ ಮನೆಯಲ್ಲಿ ಸುದ್ದಿ ನೋಡಲು ಜನವೋ ಜನ.

ವಿಶೇಷ ಎಂದರೆ ಆಗ ನಾನು ನ್ಯೂಸ್‌ ಓದುತ್ತಿದ್ದರೂ ನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ. ನಾನು ನ್ಯೂಸ್‌ ಓದಿ ಮತ್ತೆ ರಾತ್ರಿ ವೇಳೆ ಪಕ್ಕದವರ ಮನೆಗೆ ನನ್ನದೇ ನ್ಯೂಸ್‌ ನೋಡಲು ಹೋಗುತ್ತಿದೆ ಎನ್ನುತ್ತಾರೆ ಶೀಲಾ.
ಚಲನಚಿತ್ರ ಶೂಟಿಂಗ್‌ಗೆ ಕನ್ನಡ ಸೇರಿದಂತೆ ಹಲವು ಭಾಷೆಗಳ ನಟ-ನಟಿಯರು ಮಂಗಳೂರಿಗೆ ಬರುತ್ತಿದ್ದರು.

ಅದರಲ್ಲಿ ನಟ ಅನಂತ್‌ನಾಗ್‌, ಶ್ರೀನಾಥ್‌, ದಿ.ಅಂಬರೀಷ್‌, ರಮೇಶ್‌, ನಟಿ ಲಕ್ಷ್ಮೀ ಸೇರಿದಂತೆ ಹಲವರ ಸಂದರ್ಶನ ಸಹ ಮಾಡಿದ್ದೇನೆ.

ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿಯವರ 3 ಚುನಾವಣೆಗಳನ್ನು ಫೀಲ್ಡಿಗಿಳಿದು ಪ್ರತ್ಯಕ್ಷವಾಗಿ ವರದಿ ಮಾಡಿದ ಚಿತ್ರಣ ಇಂದಿಗೂ ಕಣ್ಣ ಮುಂದಿದೆ.

ನಾನು ಅವರ ಇಷ್ಟದ ಸುದ್ದಿ ನಿರೂಪಕಿಯಾಗಿದ್ದೆ, ಅವರು ನನಗೆ ಸೀರೆಯೊಂದನ್ನು ಉಡುಗೊರೆಯಾಗಿ ನೀಡಿದ್ದರು.

ಆ ಸೀರೆ ಇಂದಿಗೂ ನನ್ನ ಕಪಾಟಿನಲ್ಲಿ ಜೋಪಾನವಾಗಿ ಇಟ್ಟಿದ್ದೇನೆ.
ಅದಾದ ನಂತರ 1999ರ ಗಣೇಶ ಚತುರ್ಥಿಯಂದು ನಮ್ಮ ಕುಡ್ಲ ತುಳು ವಾರ್ತಾ ವಾಹಿನಿ ಪ್ರಾರಂಭವಾಯಿತು.

ಅದರಲ್ಲಿ ಪ್ರಥಮ ಬಾರಿಗೆ ತುಳು ವಾರ್ತೆ ಆರಂಭವಾಯಿತು. ಇದರ ಮೊದಲ ವಾರ್ತೆಯನ್ನು ನವನೀತ್‌ ಶೆಟ್ಟಿ ಕದ್ರಿ ವಾಚಿಸಿದರು.

ಎರಡನೇ ವಾರ್ತೆಯನ್ನು ನಾನು ಓದಿದ್ದೆ. ಅಷ್ಟು ವರ್ಷ ಕನ್ನಡ ನ್ಯೂಸ್‌ ಓದುತ್ತಿದ್ದ ನಾನು, ತುಳು ವಾರ್ತೆ ಓದಲು ಈ ಮೂಲಕ ಆರಂಭಿಸಿದೆ.

ಆಗ ಇಬ್ಬರು ಒಂದೇ ಸ್ಕ್ರೀನ್‌ನಲ್ಲಿ ವಾರ್ತೆ ವಾಚಿಸುವ ಪರಿಪಾಠವಿತ್ತು. ಅದಾಗಿ ಕದ್ರಿ ನವನೀತ್‌ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ನಾನು ನ್ಯೂಸ್‌ ಓದುತ್ತಿದ್ದೆವು.


ಅದಾಗಿ ಮಧ್ಯಭಾಗದಲ್ಲಿ ದುಬೈಗೆ ಹೋದೆ. ಮತ್ತೆ ಊರಿಗೆ ಬಂದು ಸುದ್ದಿ ನಿರೂಪಣೆಯ ಕಾರ್ಯ ಮುಂದುವರೆಸಿದೆ.

ಈಗಲೂ ನಮ್ಮ ಕುಡ್ಲದಲ್ಲಿ ತುಳು ವಾರ್ತೆ ಓದುತ್ತಿದ್ದೇನೆ. ನಾನು ದುಬೈಗೆ ಹೋಗುವಾಗಲೂ ಅಲ್ಲಿನ ತುಳುವರು ‘ಈರ್‌ ವಾರ್ತೆ ಓದುನಾರ್‌ ಅತಾ?

ಎಂದು ಕೇಳುತ್ತಿದ್ದಾಗ ತುಂಬಾ ಖುಷಿಯಾಗುತ್ತದೆ ಎನ್ನುತ್ತಾರೆ ನಿರೂಪಕಿ ಶೀಲಾ ಕುಂದರ್‌. ಇವರ ಪತಿ ದುಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದು,

ಇಬ್ಬರು ಮಕ್ಕಳ ತುಂಬು ಸಂಸಾರ ಇವರದು ಮತ್ತು ಸುದ್ದಿ ಸಂಸಾರ ಜೊತೆ ಜೊತೆ ಸಾಗುತ್ತಿದ್ದಾರೆ. ಕಳೆದ 24 ವರ್ಷಗಳಿಂದ ನಿರಂತರವಾಗಿ ಸುದ್ದಿ ಓದುತ್ತಿದ್ದ ಶೀಲಾ ಕುಂದರ್‌ ಇದೀಗ ಬೆಳ್ಳಿ ಸಂಭ್ರಮದ ಹೊಸ್ತಿಲಲ್ಲಿದ್ದಾರೆ. ಅವರಿಗೆ ಮುಂದಿನ ಜೀವನ ಸುಖಮಯವಾಗಿರಲೆಂದು ಹಾರೈಸುವ…..

ರಾಜೇಶ್‌ ಫೆರಾವೋ

BELTHANGADY

ಮುಂದಿನ ನಾಲ್ಕು ದಿನ ಕರಾವಳಿಯಲ್ಲಿ ಮಳೆಯ ಸಿಂಚನ..! ಹವಾಮಾನ ಇಲಾಖೆ ಮುನ್ಸೂಚನೆ

Published

on

ಮಂಗಳೂರು: ಕಳೆದ ಕೆಲವು ದಿನಗಳಿಂದ ಸುಡು ಬಿಸಿಲಿಗೆ ಬಸವಳಿದು ಜನರು ಕಂಗಾಲಾಗಿದ್ದು, ಕೆಲವೊಂದು ಕಡೆ ವರುಣನ ಕೃಪೆಗಾಗಿ ಜನರು ದೇವರಿಗೆ ಪ್ರಾರ್ಥನೆ ಸಲ್ಲಿಸಿ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ.

rain

ಈ ನಡುವೆ ಬಿಸಿ ಶಾಖದಿಂದ ಕಂಗೆಟ್ಟಿದ್ದ ರಾಜಧಾನಿ ಬೆಂಗಳೂರಿನ ಜನರು ನಿನ್ನೆ ಕೆಲವೆಡೆ ಸುರಿದ ಮಳೆಯಿಂದಾಗಿ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಇನ್ನು ಬೆಂಗಳೂರಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಅಲ್ಲಲ್ಲಿ ಅಲ್ಪಾ ಸ್ವಲ್ಪ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ. ಇದೇ ವೇಳೆ ರಾಜ್ಯದ ​ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ.

ಮುಂದೆ ಓದಿ..; ಈ ಸರ್ವಾಧಿಕಾರಿಗೆ ಬೇಕಂತೆ ವರ್ಷಕ್ಕೆ 25 ಕನ್ಯೆಯರು..!! ಏನಿದು ಕಾಮಕಾಂಡ?

ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಹಗುರ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ. ಅದರಲ್ಲೂ ಬೆಂಗಳೂರಿನಲ್ಲಿ ಗುಡುಗು, ಮಿಂಚಿನ ಜತೆಗೆ ಅಲ್ಲಲ್ಲಿ ಚದುರಿದ ಮಳೆ ಬೀಳುವ ಸಂಭವವಿದೆ. ಮೇ 6 ಮತ್ತು 7 ರಂದು ಸಾಧಾರಣ ಅಥವಾ ಅದಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಿಜಾಪುರ, ಬಾಗಲಕೋಟೆ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಬಿಸಿಗಾಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Continue Reading

DAKSHINA KANNADA

ಕೋಸ್ಟಲ್ ವುಡ್ ಅಂಗಳದಲ್ಲಿ ‘ಗಬ್ಬರ್ ಸಿಂಗ್’ ಹವಾ ಶುರು

Published

on

ಮಂಗಳೂರು : ಬಹುನಿರೀಕ್ಷಿತ ಚಿತ್ರ ‘ಗಬ್ಬರ್ ಸಿಂಗ್’ ಇಂದು (ಮೇ 3) ತೆರೆಗಪ್ಪಳಿಸಿದೆ. ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ಚಂದ್ರಶೇಖರ ನಾನಿಲ್, ನಾಗೇಶ್ ಪೂಜಾರಿ ಅರ್ಪಿಸುವ ಸತೀಶ್ ಪೂಜಾರಿ ಬಾರ್ಕೂರು ನಿರ್ಮಾಣದ “ಗಬ್ಬರ್ ಸಿಂಗ್” ಮಂಗಳೂರಿನ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ತೆರೆಕಂಡಿದೆ.


ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಟ್ರಸ್ಟಿ ಎಂ.ಶೇಖರ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಚಲನಚಿತ್ರಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿ ನಿರ್ಮಾಪಕ ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ, ತುಳು ಸಿನಿಮಾ ತೆರೆಕಾಣದೆ ಕೆಲವು ಸಮಯ ಆಗಿದೆ. ಬೇಸಿಗೆ ಕಾಲದಲ್ಲಿ ತರೆಕಾಣುತ್ತಿರುವ ಗಬ್ಬರ್ ಸಿಂಗ್ ಸಿನಿಮಾ ಹಾಸ್ಯಭರಿತವಾಗಿದ್ದು, ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ಒದಗಿಸಿದೆ. ಭೋಜರಾಜ್ ವಾಮಂಜೂರು ಅವರ ಹಾಸ್ಯಕ್ಕೆ ಒತ್ತು ಕೊಟ್ಟ ಪಾತ್ರ ಜೊತೆಗೆ ಗಿರೀಶ್ ಶೆಟ್ಟಿಯವರ ಖಡಕ್ ವಿಲನ್ ಪಾತ್ರ, ನಾಯಕ ಶರಣ್ ಶೆಟ್ಟಿ, ನಾಯಕಿ ವೆನ್ಸಿಟಾ ಡಯಾಸ್ ಪಾತ್ರಗಳು ಗಮನ ಸೆಳೆಯುತ್ತದೆ ಎಂದರು.

ಸಮಾರಂಭದಲ್ಲಿ ಡಾ ಮೆಲ್ವಿನ್ ಡಿ ಸೋಜಾ, ರಂಜಿತಾ ಹೇಮನಾಥ ಶೆಟ್ಟಿ ಕಾವು, ಭೋಜರಾಜ ವಾಮಂಜೂರು, ತುಳು ಚಲನ ಚಿತ್ರನಿರ್ಮಾಪಕರ ಸಂಘದ ಅಧ್ಯಕ್ಷ ಆರ್ ಧನರಾಜ್, ಉದ್ಯಮಿ ಗಿರೀಶ್ ಎಂ ಶೆಟ್ಟಿಕಟೀಲ್, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಮೋಹನ್ ಕೊಪ್ಪಲ, ತಮ್ಮಲಕ್ಷ್ಮಣ, ಮಧು ಸುರತ್ಕಲ್, ಚಂದ್ರಶೇಖರ ನಾನಿಲ್ ಹಳೆಯಂಗಡಿ, ಜಯಾನಂದ ಅಮೀನ್, ನಿರ್ಮಾಪಕ ಸತೀಶ್ ಪೂಜಾರಿ ಬಾರ್ಕೂರು, ನಟ ಶರಣ್ ಶೆಟ್ಟಿ, ನಟಿ ವೆನ್ಸಿಟಾ ಡಯಾಸ್, ರಾಹುಲ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

ಎಲ್ಲೆಲ್ಲಿ ತೆರೆಗೆ?

ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಸಿನಿಪೊಲೀಸ್, ಪಿವಿಆರ್, ಉಡುಪಿಯಲ್ಲಿ ಕಲ್ಪನಾ ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್ ಚಿತ್ರ ಮಂದಿರಗಳಲ್ಲಿ “ಗಬ್ಬರ್ ಸಿಂಗ್” ಸಿನಿಮಾ ತೆರೆ ಕಂಡಿದೆ.

ನೈಜಘಟನೆಯಾಧಾರಿತ ಚಿತ್ರ :


‘ಗಬ್ಬರ್ ಸಿಂಗ್’ ಸಿನಿಮಾ ವಿಭಿನ್ನ ಕತೆಯನ್ನೊಳಗೊಂಡಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಕತೆಯನ್ನು ಹೆಣೆಯಲಾಗಿದೆ. ಉತ್ತಮ‌ ಕತೆ, ನವಿರಾದ ಹಾಸ್ಯದೊಂದಿಗೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ಆರು ಹಾಡು, ನಾಲ್ಕು ಫೈಟ್ಸ್ ಇದೆ. ಸಿನಿಮಾಕ್ಕೆ ಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಸಿನಿಮಾಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಇದನ್ನೂ ಓದಿ : ಅಜೆಕಾರು : ಮನೆ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಸಾ*ವು

ತಾರಾಂಗಣ :

ನಾಯಕ ನಟನಾಗಿ ಶರಣ್ ಶೆಟ್ಟಿ, ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಯಾದಾಗ ಮತ್ತೆ ಶಾಂತಿ ನೆಲೆಸುವಂತೆ ಮಾಡುವ ಖಡಕ್ ಅಧಿಕಾರಿ ಪಾತ್ರದಲ್ಲಿ ಶರಣ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. “ಗಬ್ಬರ್ ಸಿಂಗ್” ಆ್ಯಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಫಿಲ್ಮ್ ಆಗಿದೆ.

ಸಿನಿಮಾ ಕತೆ, ಚಿತ್ರಕತೆ, ಸತೀಶ್ ಪೂಜಾರಿ ಬಾರ್ಕೂರ್, ಮಧು ಸುರತ್ಕಲ್ ಸಂಭಾಷಣೆ, ಮುಖ್ಯ ಪಾತ್ರದಲ್ಲಿ ಕುಸೇಲ್ದರಸೆ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಾಯಿಕೃಷ್ಣ, ಉಮೇಶ್ ಮಿಜಾರ್, ರವಿರಾಮ ಕುಂಜ, ಗಿರೀಶ್ ಎಂ. ಶೆಟ್ಟಿ ಕಟೀಲ್, ವೀಣಾ ಶೆಟ್ಟಿ ಉಡುಪಿ, ಅಥರ್ವ ಪ್ರಕಾಶ್, ಉದಯ ಆಳ್ವ ಇಡ್ಯಾ, ಸಂದೀಪ್ ಭಕ್ತ, ಕಿರಣ್ ಮಲ್ಪೆ, ಪೂರ್ಣಿಮಾ ಶೆಟ್ಟಿ, ಪವಿತ್ರ ಶೆಟ್ಟಿ,ಚಂದ್ರಹಾಸ ಶೆಟ್ಟಿ ಮಾಣಿ, ಸಂಪತ್ ಲೋಬೋ, ಆಶಾ ಶೆಟ್ಟಿ ಶಿಬರೂರು, ಲಹರಿ ಶೆಟ್ಟಿ ಪಡ್ರೆ, ಶಿಲ್ಪಾ ಶೆಟ್ಟಿ, ಭವ್ಯಾ ಶೆಟ್ಟಿ ಸುರತ್ಕಲ್ ಸಂತೋಷ್, ಚಂದ್ರಹಾಸ ಶೆಟ್ಟಿ ಕಪ್ಪೆಟ್ಟು, ಫ್ರಾಂಕಿ ಕೊಳಲಗಿರಿ, ಉಮೇಶ್ ಶೆಟ್ಟಿ ಹಾವಂಜೆ, ಬೇಬಿ ಆಧ್ಯಾ ಉಡುಪಿ ಮೊದಲಾದವರಿದ್ದಾರೆ.

Continue Reading

DAKSHINA KANNADA

ಸುಬ್ರಹ್ಮಣ್ಯ: ಕೆಎಸ್ಸಾರ್ಟಿಸಿ ಬಸ್‌ಗಳ ಹಗಲು ದರೋಡೆ..! ಏನಿದು ಘಟನೆ?

Published

on

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಸೇರಿದಂತೆ ಆಸುಪಾಸಿನ ಜನತೆಗೆ ಸರಕಾರಿ ಬಸ್ಸು ಸಿಬ್ಬಂದಿ ಹಗಲು ದರೋಡೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕುಕ್ಕೆ ಕೆಎಸ್‌ಆರ್‌ಟಿಸಿ ಡಿಪೋದಿಂದ ಹೊರಡುವ ಸರಕಾರಿ ಬಸ್ ಸಿಬ್ಬಂದಿ ಹಗಲು ದರೋಡೆ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಏಪ್ರಿಲ್ 28ರಂದು ಹುಬ್ಬಳ್ಳಿ ಕಡೆಯ ದಂಪತಿ ಕುಕ್ಕೆ ಸುಬ್ರಹ್ಮಣ್ಯದಿಂದ ಹುಬ್ಬಳ್ಳಿ‌ಗೆ ಹೋಗುವ ಸಲುವಾಗಿ ಬಿಎಂಟಿಸಿಯ KA 57 F 3463 ನಂಬರಿನ ಬಸ್ಸಿಗೆ ಹತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯ ರೋಡ್ ಅಥವಾ ನೆಟ್ಟಣ ರೈಲ್ವೆ ನಿಲ್ದಾಣಕ್ಕೆ ಬಸ್ ಹೋಗುತ್ತದೆ ಎಂದು ಬಸ್ಸಿನ ಸಿಬ್ಬಂದಿ ಹೇಳಿದ್ದಾರೆ ಎನ್ನಲಾಗಿದೆ. ಈ ಭಾಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಮತ್ತು ಬಸ್ಸಿನ ಸಿಬ್ಬಂದಿ ಹೇಳಿದ್ದನ್ನೇ ನಂಬಿದ ಹುಬ್ಬಳ್ಳಿ ಈ ದಂಪತಿ ಬೆಂಗಳೂರು ಮಹಾನಗರ ಪಾಲಿಕೆಯ ಡಿಪೋ ನಂಬರ್‌2ರ ಈ ಸರಕಾರಿ ಬಸ್ ಹತ್ತಿದ್ದಾರೆ. ಬಸ್ಸಿನ ನಿರ್ವಾಹಕ ಮಹಿಳೆಗೆ ಧರ್ಮಸ್ಥಳ ದಿಂದ ಸುಬ್ರಹ್ಮಣ್ಯ ಎಂಬುದಾಗಿ ಉಚಿತ ಟಿಕೆಟ್ ನೀಡಿದ್ದೂ, ಜೊತೆಯಲ್ಲಿ ಇದ್ದ ಪತಿ ಮತ್ತು ಮಕ್ಕಳಿಂದ 150 ರೂಪಾಯಿ ಹಣ ಪಡೆದು ಟಿಕೆಟ್ ನೀಡಿಲ್ಲ ಎನ್ನಲಾಗಿದೆ. ಇಷ್ಟು ಹಣ ಪಡೆದು ಇವರನ್ನು ಕುಕ್ಕೆ ಸುಬ್ರಹ್ಮಣ್ಯದಿಂದ ಸುಮಾರು ಮೂರು ಕಿಲೋ ಮೀಟರ್ ದೂರದ ಕೈಕಂಬ ಎಂಬಲ್ಲಿ ಬಸ್ಸಿಂದ ಇಳಿಸಿ ಹೋಗಿದ್ದಾರೆ. ನಂತರದಲ್ಲಿ ಈ ದಂಪತಿಗಳು ತಮ್ಮ ಮಕ್ಕಳೊಂದಿಗೆ ಸುಮಾರು ಆರು ಕಿಲೋ ಮೀಟರ್ ದೂರ ನಡೆದು ಕುಕ್ಕೆ ಸುಬ್ರಹ್ಮಣ್ಯ ರೋಡ್ (ನೆಟ್ಟಣ) ರೈಲು ನಿಲ್ದಾಣ ತಲುಪಿದ್ದಾರೆ. ನಂತರದಲ್ಲಿ ಸ್ಥಳೀಯರಲ್ಲಿ ತಮಗಾದ ಅನ್ಯಾಯದ ಬಗ್ಗೆ ಕಣ್ಣೀರಿಟ್ಟು ಇಂತಹ ಬಸ್ಸ್‌ಗಳ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

subrahmanya

ಇಂತಹ ಘಟನೆಗಳು ಈ ಭಾಗದಲ್ಲಿ ಪದೇಪದೇ ಮರುಕಳಿಸುತ್ತಿದ್ದೂ,ಈ ಬಗ್ಗೆ ಹಲವು ಬಾರಿ ಮೇಲಧಿಕಾರಿಗಳಿಗೆ ತಿಳಿಸಿದರೂ ಸಹಾ ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಮುಂದೆ ಓದಿ..;ನಾಯಿಗಳಿಗೂ ಬಂತು ಆಧಾರ್‌ ಕಾರ್ಡ್‌.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?

ಆದುದರಿಂದ ಈ ಭಾಗದಲ್ಲಿ ನಡೆಯುವ ಈ ಹಗಲು ದರೋಡೆಗೆ ಅಧಿಕಾರಿಗಳೂ ಸಾಥ್ ನೀಡುತ್ತಿದ್ದಾರೆ ಎನ್ನಲಾಗಿದೆ. ಆದುದರಿಂದ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕು ಎಂದು ರೈಲು ಬಳಕೆದಾರರ ವೇದಿಕೆ ನೆಟ್ಟಣ ಸಂಘವು ಆಗ್ರಹಿಸಿದೆ.

Continue Reading

LATEST NEWS

Trending