dehali
ಬೆಡ್ರೂಮ್, ಬಾತ್ರೂಮ್ನಲ್ಲಿ ರಹಸ್ಯ ಕ್ಯಾಮರಾ !! ಯುವತಿಯರೇ ಹುಷಾರ್
ಮಂಗಳೂರು/ದೆಹಲಿ: ಪೂರ್ವ ದೆಹಲಿಯ ಶಕರ್ಪುರ ಪ್ರದೇಶದ ಬಾಡಿಗೆ ಮನೆಯಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಕೆಲವು ತಿಂಗಳುಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಒಂಟಿ ಮಹಿಳೆಯ ಮಲಗುವ ಕೋಣೆ ಹಾಗೂ ಬಾತ್ ರೂಮ್ನಲ್ಲಿ ಕರಣ್ ರಹಸ್ಯ ಕ್ಯಾಮರ ಅಳವಡಿಸಿರುವುದು ತಿಳಿದು ಬಂದಿದೆ.
ಯುವತಿ ಹೊರಗೆ ಹೋಗುವಾಗ ಅವರ ಮನೆಯ ಕೀಯನ್ನು ಓನರ್ ಮಗ ಕರಣ್ ಕೈಯಲ್ಲಿ ಕೊಟ್ಟು ಹೋಗುತ್ತಿದ್ದಳು. ಇದನ್ನೇ ಬಂಡವಾಳ ಮಾಡಿಕೊoಡ ಕಿರಾತಕ ಅವಳ ರೂಮ್ನಲ್ಲಿ ಸಿಸಿ ಕ್ಯಾಮರಾವನ್ನು ಬಲ್ಬ್ನ ಹೋಲ್ಡರ್ನಲ್ಲಿ ಅಳವಡಿಸಿ ಇಟ್ಟಿದ್ದಾನೆ. ಯುವತಿಗೆ ವಾಟ್ಸಾಪ್ನಲ್ಲಿ ಕೆಲವು ಅಶ್ಲೀಲ ಫೋಟೋ, ವಿಡಿಯೋಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಯುವತಿ ಪೊಲೀಸ್ ಉಪ ಕಮಿಷನರ್ ಅಪೂರ್ವ ಗುಪ್ತಾ ಗೆ ಮಾಹಿತಿ ನೀಡಿದ್ದಾಳೆ. ನಂತರ ದೂರಿನ ಅನ್ವಯ ಪೊಲೀಸ್ ತಂಡವು ಸಂಪೂರ್ಣ ಹುಡುಕಾಟ ನಡೆಸಿದಾಗ, ಯುವತಿ ಮಲಗುವ ಕೋಣೆಯ ಬಲ್ಬ್ ಹೋಲ್ಡರ್ನಲ್ಲಿ ಹಾಗೂ ಬಾತ್ ರೂಮ್ನಲ್ಲಿ ಅಳವಡಿಸಿದ್ದ ಕ್ಯಾಮರಾಗಳು ಪತ್ತೆಯಾಗಿವೆ.
ವಿಚಾರಣೆ ವೇಳೆ ಕರಣ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ. ಆರೋಪಿ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಮೂರು ಸ್ಪೈ ಕ್ಯಾಮೆರಾಗಳನ್ನು ಖರೀದಿಸಿ, ಅವುಗಳಲ್ಲಿ ಒಂದನ್ನು ಯುವತಿಯ ಮಲಗುವ ಕೋಣೆಯಲ್ಲಿ ಮತ್ತು ಇನ್ನೊಂದನ್ನು ಬಾತ್ರೂಮ್ನಲ್ಲಿ ಇಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕರಣ್ ಕೈಯಲ್ಲಿದ್ದ ಮತ್ತೊಂದು ಸ್ಪೈ ಕ್ಯಾಮೆರಾವನ್ನು ಹಾಗೂ ರೆಕಾರ್ಡ್ ಮಾಡಿದ ವೀಡಿಯೊಗಳ ಸಂಗ್ರಹಕ್ಕೆ ಬಳಸಿದ ಎರಡು ಲ್ಯಾಪ್ಟಾಪ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಿಎನ್ಎಸ್ನ ಸೆಕ್ಷನ್ 77 ಅಡಿಯಲ್ಲಿ ಶಕರ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪದವೀಧರನಾಗಿದ್ದು, ಕಳೆದ ಏಳು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
dehali
ಹುಟ್ಟುಹಬ್ಬಕ್ಕೆ 2 ದಿನ ಕಡ್ಡಾಯ ರಜೆ ಘೋಷಣೆ ಮಾಡಿದ ಕಂಪೆನಿ..!
ಹೊಸದಿಲ್ಲಿ/ಮಂಗಳೂರು: ಹುಟ್ಟುಹಬ್ಬ ಅಂದ್ರೆ ಎಲ್ಲರಿಗೂ ಸಂಭ್ರಮದ ದಿನ. ಅದರಲ್ಲೂ ಕಛೇರಿಯಲ್ಲಿ ಹುಟ್ಟುಹಬ್ಬದ ದಿನದಂದು ರಜೆ ಕೊಟ್ಟರೆ..? ಅದು ಕೂಡಾ ಒಂದು ದಿನವಲ್ಲ ಎರಡು ದಿನ.. ಹುಟ್ಟುಹಬ್ಬದ ದಿನ ಹಾಗೂ ಮರುದಿನ ಕಂಪೆನಿಯೊಂದು ಸಿಬಂದಿಗಳಿಗೆ ರಜೆ ನೀಡುತ್ತೇ ಅಂದ್ರೆ ನಂಬುತ್ತೀರಾ?
ಹೌದು, ಇಲ್ಲೊಂದು ಕಂಪೆನಿ ಎಲ್ಲಾ ಸಿಬ್ಬಂದಿಗಳಿಗೆ ಹುಟ್ಟು ಹಬ್ಬದ ದಿನದಂದು ಹಾಗೂ ಅದರ ಮರುದಿನ ರಜೆಯನ್ನು ಕಡ್ಡಾಯವಾಗಿ ಘೋಷಣೆ ಮಾಡಿದೆ. ಇಂತಹದೊಂದು ಅಪರೂಪದ ರಜೆ ಘೋಷಣೆ ಮಾಡಿರುವುದು ‘ಎಕ್ಸ್ಪೆಡಿಫೈ’ ಎಂಬ ಕಂಪೆನಿ. ಇದು ಅಚ್ಚರಿ ಎನಿಸಿದ್ರೂ ನಿಜವಾದ ಸಂಗತಿ. ಇಂತಹ ನೀತಿಯನ್ನು ರೂಪಿಸಿದ ವಿಶ್ವದ ಮೊದಲ ಕಂಪೆನಿ ಎಂಬ ಹೆಗ್ಗಳಿಕೆಗೆ ‘ಎಕ್ಸ್ಪೆಡಿಫೈ’ ಕಂಪೆನಿ ಪಾತ್ರವಾಗಿದೆ.
ಜನ್ಮದಿನ ಹಾಗೂ ಮರುದಿನ ದೊರೆಯುವ ರಜೆಗೆ ‘ಬರ್ತ್ ಡೇ ಪ್ಲಸ್ ಒನ್’ ಎಂದು ಹೆಸರಿಸಲಾಗಿದೆ. ಈ ರಜೆಗೆ ಪ್ರಮುಖ ಕಾರಣವೆಂದರೆ ‘ಎಕ್ಸ್ಪೆಡಿಫೈ’ ಕಂಪೆನಿಯ ಸಿಇಒ ಆದ ಅಭಿಜಿತ್ ಚಕ್ರವರ್ತಿ. ಇವರು ಸಾಮಾನ್ಯ ಉದ್ಯೋಗಿಯಾಗಿದ್ದ ವೇಳೆ ಅವರಿಗಾದ ಕಹಿ ಅನುಭವದಿಂದಾಗಿ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಹಿಂದೆ ಅಭಿಜಿತ್ ರವರು ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವರ ಬಾಸ್ ಜೊತೆ ಬರ್ತ್ಡೇ ಸೆಲೆಬ್ರೇಷನ್ಗಾಗಿ ರಜೆ ಕೊಡುವಂತೆ ಕೇಳಿಕೊಂಡಿದ್ದಾರೆ. ‘ನಿಮಗೆ ರಜೆ ಯಾಕೆ ಬೇಕು?’ ಎಂದು ನನ್ನ ಹಳೆಯ ಬಾಸ್ ಕೇಳಿದ್ದರು. ನಾನು ಹುಟ್ಟುಹಬ್ಬ ಆಸಚರಿಸಲು ಎಂದು ಹೇಳಿದಾಗ ನಾನೇನೋ ಅಪರಾಧ ಮಾಡಿದೇ ಎಂಬ ರೀತಿಯಲ್ಲಿ ವಿಚಿತ್ರವಾಗಿ ನನ್ನತ್ತ ತಿರುಗಿ ನೋಡಿದ್ದರು ಎಂದು ಅಭಿಜಿತ್ ಚಕ್ರವರ್ತಿ ತಮ್ಮ ಹಿಂದಿನ ದಿನಗಳನ್ನು ಮೆಲಕು ಹಾಕಿದ್ದಾರೆ.
ಬಿಗ್ ಬಾಸ್ ಆರಂಭಕ್ಕೂ ಮೊದಲೇ ಸ್ಪರ್ಧಿಗಳ ಹೆಸರು ಘೋಷಣೆ- ಯಾರದು?
ಆ ದಿನವೇ ಅಭಿಜಿತ್ ರವರು ಮುಂದೊಂದುದಿನ ನಾನು ಕಂಪೆನಿ ತೆರೆದಾಗ ಎಲ್ಲಾ ಸಿಬಂದಿಗಳಿಗೂ ಹುಟ್ಟುಹಬ್ಬ ದಿನದಂದು ಮಾತ್ರವಲ್ಲದೇ ಅದರ ಮರುದಿನವೂ ರಜೆಯನ್ನು ನೀಡಲು ನಿರ್ಧರಿಸಿದ್ದರಂತೆ.
ರಜೆಯೇ ಗಿಫ್ಟ್:
ಸಿಬಂದಿಗಳು ಹುಟ್ಟುಹಬ್ಬದ ಅವರಿಗೆ ಉಡುಗೊರೆ ನೀಡಬೇಕೆ ಹೊರತು ರಜೆ ಮಾಡಿದಕ್ಕಾಗಿ ಅಗಿ ಸಂಬಳ ಕಟ್ ಮಾಡುವುರ ಮೂಲಕ ಟೆಂಶನ್ ಕೊಡುವುದಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಇನ್ನು ಮುಂದಿನ ದಿನಗಳಲ್ಲಿ ಕಂಪೆನಿ ಬೆಳೆದಂತೆ ರಜೆಯನ್ನು ಎರಡು ದಿನಗಳಿಂದ ಮೂರು ದಿನಗಳಿಗೆ ವಿಸ್ತರಿಸಿ ‘ಬರ್ತ್ಡೇ ಪ್ಲಸ್ ಟೂ’ ಎಂದು ಹೆಸರಿಸಲಾಗುತ್ತದೆ ಎಂದು ಅಭಿಜಿತ್ ಚಕ್ರವರ್ತಿಯವರು ಲಿಂಕ್ಡ್ಇನ್ನಲ್ಲಿ ತಮ್ಮ ಕಂಪೆನಿಗೆ ನೀಡುವ ರಜೆ ವೃತ್ತಾಂತದ ಬಗ್ಗೆ ವಿವರಿಸಿದ್ದಾರೆ.
ಹುಟ್ಟುಹಬ್ಬಕ್ಕೆ ‘ಚರ್ಮ ಕುಟೀರ’ ಕೊಡುಗೆ ನೀಡಿದ ಮಾಜಿ ಮೇಯರ್..!
ಎಕ್ಸ್ಪೆಡಿಫೈ ಕಂಪೆನಿ ಸಿಇಒ ಅಭಿಜಿತ್ ಚಕ್ರವರ್ತಿ ಯವರ ಈ ಕಾರ್ಯಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದ್ದರೆ ನಿಮ್ಮಂಥ ಬಾಸ್ ಇರಬೇಕು ಎಂದು ಹಾಡಿ ಹೊಗಳಿದ್ದಾರೆ.
dehali
Paralympics 2024: 29 ಪದಕಗಳೊಂದಿಗೆ ದಾಖಲೆ ಬರೆದ ಭಾರತ
Paralympics 2024: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ ಅದ್ಭುತ ಸಾಧನೆಯೊಂದಿಗೆ ಪಯಣ ಮುಗಿಸಿದೆ. ಕ್ರೀಡಾಕೂಟದ ಕೊನೆಯ ದಿನವಾದ ಇಂದು ಭಾರತ ದಾಖಲೆಯ 29 ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇವುಗಳಲ್ಲಿ ಏಳು ಚಿನ್ನ, ಒಂಬತ್ತು ಬೆಳ್ಳಿ ಮತ್ತು 13 ಕಂಚು ಸೇರಿವೆ.
ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಇಷ್ಟು ಸಂಖ್ಯೆಯ ಪದಕಗಳನ್ನು ಗೆದ್ದಿದ್ದು, ಇದೇ ಮೊದಲು. ಇದಕ್ಕೂ ಮೊದಲು ಟೊಕಿಯೋ ಪ್ಯಾರಾಲಿಂಪಿಕ್ನಲ್ಲಿ 19 ಪದಕಗಳನ್ನು ಗೆದ್ದಿದ್ದು, ಭಾರತದ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದೆ.
dehali
ಸ್ಪೀಕರ್ ಹುದ್ದೆಗೆ ಚುನಾವಣೆ..! ಇತಿಹಾಸದಲ್ಲೇ ಮೊದಲು..!
ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ವಿರೋಧ ಪಕ್ಷಗಳಿಗೆ ಬಿಟ್ಟುಕೊಡಲು ಎನ್ಡಿಎ ಹಿಂದೇಟು ಹಾಕಿದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ.
ಹದಿನೆಂಟನೇ ಲೋಕಸಭೆಯಲ್ಲಿ ಹತ್ತು ವರ್ಷಗಳ ಬಳಿಕ ಇಂಡಿಯಾ ಮೈತ್ರಿಕೂಟ ಪ್ರಬಲ ವಿರೋಧ ಪಕ್ಷವಾಗಿ ಮೂಡಿಬಂದಿದೆ. ಇದೇ ಕಾರಣದಿಂದ ಮೊದಲ ಅಧಿವೇಶನ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳು ಸರ್ಕಾರದ ಪ್ರತಿಯೊಂದು ನಡೆಯನ್ನು ಪ್ರಶ್ನೆ ಮಾಡಲು ಆರಂಭಿಸಿವೆ. ಅಧಿವೇಶನದ ಆರಂಭದಲ್ಲಿ ಹಂಗಾಮಿ ಸ್ಪೀಕರ್ ಆಯ್ಕೆಯಲ್ಲಿ ಹಿರಿಯ ಕಾಂಗ್ರೆಸ್ ಸಂಸದರನ್ನು ಕಡೆಗಣಿಸಿ ಭರ್ತೃಹರಿ ಅವರನ್ನು ನೇಮಿಸಲಾಗಿತ್ತು. ಇದೀಗ 18 ನೇ ಲೋಕಸಭೆಯ ಸ್ಪೀಕರ್ ಆಗಿ ಎನ್ಡಿಎ ನಿಂದ ಓಂ ಬಿರ್ಲಾ ಅವರ ಹೆಸರು ಮತ್ತೆ ಮುಂದಿಡಲಾಗಿದೆ. ಒಮ್ಮತದ ಸ್ಪೀಕರ್ ಆಯ್ಕೆಯ ವಿಚಾರವಾಗಿ ಆಡಳಿತ ಪಕ್ಷ ಮತ್ತು ವಿರೊಧ ಪಕ್ಷದ ನಡುವೆ ನಡೆದ ಮಾತುಕತೆ ವಿಫಲವಾಗಿದೆ.
ಇದನ್ನು ಓದಿ: ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಂಸದ ಬ್ರಿಜೇಶ್ ಚೌಟ
ಓಂ ಬಿರ್ಲಾ ಅವರನ್ನು ಒಮ್ಮತದ ಆಯ್ಕೆಯಾಗಿ ಪರಿಗಣಿಸಲು ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ಕಾನೂನುಬದ್ಧವಾಗಿ ವಿರೋಧ ಪಕ್ಷಕ್ಕೆ ಬಿಟ್ಟು ಕೊಡಲು ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಮನವಿ ಮಾಡಿತ್ತು. ಇದೇ ವಿಚಾರವಾಗಿ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಅವರ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ ಕೂಡ ನಡೆದಿತ್ತು. ಆದರೆ ವಿರೋಧ ಪಕ್ಷದ ಮನವಿಗೆ ಎನ್ಡಿಎನಿಂದ ಸಕಾರಾತ್ಮಕ ಉತ್ತರ ಬಾರದ ಹಿನ್ನೆಲೆಯಲ್ಲಿ ವಿರೋಧ ಪಕ್ಷದಿಂದ ಹಿರಿಯ ಕಾಂಗ್ರೆಸ್ ನಾಯಕ ಕೆ. ಸುರೇಶ್ ಅವರನ್ನು ಸ್ಪೀಕರ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಹೀಗಾಗಿ ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ.
ಎನ್ಡಿಎ ಒಕ್ಕೂಟಕ್ಕೆ ಸ್ಪಷ್ಟ ಬಹುಮತ ಇರುವ ಕಾರಣ ಓ ಬಿರ್ಲಾ ಅವರು ಸ್ಪೀಕರ್ ಆಗಿ ಆಯ್ಕೆಯಾಗಲು ಯಾವುದೇ ತೊಂದರೆ ಇಲ್ಲ. ಆದ್ರೆ ಸರ್ಕಾರಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದ ಪ್ರಧಾನಿ ಮೋದಿ ಅವರು ವಿರೋಧ ಪಕ್ಷದ ಜೊತೆ ಸರಿಯಾಗಿ ವರ್ತಿಸುತ್ತಿಲ್ಲ . ಹೀಗಾಗಿ ಅಸಹಕಾರದ ಹೆಜ್ಜೆಯನ್ನು ವಿರೋಧ ಪಕ್ಷ ಇಡಲು ಅವರೇ ಪ್ರೇರೇಪಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
- FILM4 days ago
ಕನ್ನಡದ ಸೀರಿಯಲ್ನಲ್ಲಿ ಮಿಂಚುತ್ತಿರುವ ಉಡುಪಿಯ ಬೆಡಗಿ
- NATIONAL6 days ago
ಶ್ವಾನ ನೆಗೆದು ಗರ್ಭಪಾತ; ಮಾಲಿಕನಿಗೆ 10 ಲಕ್ಷ ದಂಡ
- NATIONAL6 days ago
ವಿಶ್ವದ ಶ್ರೀಮಂತ ಭಿಕ್ಷುಕ ಇವರೇ ನೋಡಿ ! ಭರತ್ ಜೈನ್ ಒಟ್ಟು ಆಸ್ತಿ ಎಷ್ಟು ಗೊತ್ತಾ ???
- DAKSHINA KANNADA4 days ago
ಕನ್ನಡದಲ್ಲಿ ಔಷಧ ಚೀಟಿ ಬರೆದು ಗಮನ ಸೆಳೆದ ಕಾಸರಗೋಡು ಜಿಲ್ಲೆಯ ದಂತ ವೈದ್ಯ..!