Connect with us

    LATEST NEWS

    ಗೇಮ್ ಝೋನ್ ಹೊತ್ತಿ ಉರಿದು 27 ಮಂದಿ ಸಜೀವ ದಹ*ನ..! ಮಾಲಕನ ಬಂಧನ

    Published

    on

    ಗುಜರಾತ್‌: ಗುಜರಾತಿನ ರಾಜ್‌ಕೋಟ್‌ ನಲ್ಲಿರುವ ಮನರಂಜನಾ ಕೇಂದ್ರ ‘ಜಿಆರ್‌ಪಿ ಗೇಮ್‌ ಝೋನ್‌’ನಲ್ಲಿ ಶನಿವಾರ(ಮೇ.25) ಸಂಜೆ ಭಾರಿ ಅಗ್ನಿ ದುರಂತ ಸಂಭವಿಸಿದ್ದು, 12 ವರ್ಷ ಪ್ರಾಯದ ನಾಲ್ವರು ಮಕ್ಕಳೂ ಸೇರಿದಂತೆ 27 ಮಂದಿ ಸಜೀವ ದಹನಗೊಂಡಿದ್ದಾರೆ.

    FIRE ATTACK-GAME ZONE

    ದುರಂತದ ತೀವ್ರತೆ ಸಾವು‌ ನೋವಿನ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸ ಬಹುದು ಎಂದು ಹೇಳಲಾಗಿದೆ. ಘಟನೆಗೆ ಸಂಬಂಧಿಸಿ ಗೇಮ್ ಜೋನ್ ನ ಮಾಲೀಕರನ್ನು ಇಂದು ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಘಟನೆಯ ತನಿಖೆಯ ಹೊಣೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿ ಸರಕಾರ ಆದೇಶ ಹೊರಡಿಸಿದೆ. ಆಟದ ಚಟುವಟಿಕೆಗಳಿಗೆ ನಿರ್ಮಿಸಲಾಗಿದ್ದ ಫೈಬರ್‌ ಗೊಮ್ಮಟದಲ್ಲಿ ನಿನ್ನೆ ಸಂಜೆ ಸುಮಾರು 4:30 ಗಂಟೆಗೆ ಬೆಂಕಿ ಕಾಣಿಸಿಕೊಂಡಿತ್ತು. ಹೊತ್ತಿ ಉರಿದಾಗ ಕಟ್ಟಡ ಕುಸಿಯಿತು. ಈ ಸಂದರ್ಭದಲ್ಲಿ ಮಕ್ಕಳು ಸೇರಿದಂತೆ ಹಲವರು ಅದರಡಿಯಲ್ಲಿ ಸಿಲುಕಿ ಹೊರ ಬರಲಾಗದೆ ಸಜೀವ ದಹನಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

    Read More..;ಹಾಸನದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾ*ತ; ಮಗು ಸೇರಿ 6 ಜನ ಸಾ*ವು

    ‘ಸ್ಥಳದಲ್ಲಿ ರಕ್ಷಣಾ ಕಾರ್ಯಗಳು ಇಂದು(ಮೇ.26) ಬೆಳಗ್ಗೆ 4:30ರವರೆಗೂ ನಡೆದಿದ್ದವು. ಬೇಸಿಗೆ ರಜೆ ಕಾರಣ ಗೇಮ್‌ ಝೋನ್‌ನಲ್ಲಿ ಮಕ್ಕಳು ಅಧಿಕ ಸಂಖ್ಯೆಯಲ್ಲಿ ಸೇರಿದ್ದರು. ಹಾಗಾಗಿ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಬೆಂಕಿ ತಗುಲಿದ್ದು ಹೇಗೆ ಎಂಬುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ತನಿಖೆ ನಡೆಸಲಾಗುವುದು. ಇದೇ ವೇಳೆ ರಾಜ್‌ ಕೋಟ್‌ ನಗರದಲ್ಲಿರುವ ಎಲ್ಲಾ ಗೇಮ್‌ ಝೋನ್‌ಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ರಾಜ್‌ಕೋಟ್‌ ಪೊಲೀಸ್ ಆಯುಕ್ತ ರಾಜು ಭಾರ್ಗವ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    DAKSHINA KANNADA

    ಮಕ್ಕಳಿಗೆ ಯಾವ ವಯಸ್ಸಿನಿಂದ ಚಹಾ, ಕಾಫಿ ಕೊಡಬಹುದು?

    Published

    on

    ಮಂಗಳೂರು: ಪೋಷಕರು ಅಥವಾ ಮನೆಯವರು ಚಹಾ, ಕಾಫಿ ಕುಡಿಯುವುದು ನೋಡಿ ಮಕ್ಕಳು ತಮಗೂ ಕೊಡಿ ಎಂದು ಹಟ ಮಾಡುತ್ತಾರೆ. ಮಕ್ಕಳಿಗೆ ಯಾವ ವಯಸ್ಸಿನಿಂದ ಚಹಾ, ಕಾಫಿ ಕೊಡಬಹುದು ಎಂದು ಸಂದಿಗ್ಧತೆ ಪೋಷಕರಲ್ಲಿ ಇರುವುದು ಸಹಜ. ಮಕ್ಕಳಿಗೆ ಈ ಪಾನೀಯವನ್ನು ಕೊಡುವ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡೋಣ.

    ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಾರ 12 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಚಹಾ, ಕಾಫಿ ಕೊಡಬಾರದು ಹಾಗೂ ಎನರ್ಜಿ ಡ್ರಿಂಕ್ ಕೂಡ ನೀಡುವಂತಿಲ್ಲ. 12 ರಿಂದ 18 ವರ್ಷ ಮಕ್ಕಳು 100 ಮಿಲಿ ಗ್ರಾಂ ನಷ್ಟು ಕೆಫಿನ್ ಹೊಂದಬಹುದು.

    12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಫಿನ್ ನೀಡುವುದರಿಂದ ಅವರ ಹೃದಯ, ಮೆದುಳು, ಮೂತ್ರಪಿಂಡ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಕೆಫಿನ್ ಅಂಶ ಇರುವ ಚಹಾ ಮತ್ತು ಕಾಫಿ ಮಾತ್ರವಲ್ಲು ಚಾಕೊಲೇಟ್ ಪಾನೀಯಗಳು, ಬೇಕರಿ ಐಟಂಗಳು, ಕುಕ್ಕೀಸ್ ಇತ್ಯಾದಿಗಳು ಕೂಡ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೊಡುವಂತಿಲ್ಲ.

    12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಫಿನ್ ನೀಡುವುದರಿಂದ ಇದು ಅವರ ಒಟ್ಟಾರೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

    Continue Reading

    LATEST NEWS

    ಉಳ್ಳಾಲ : ಒಂದೇ ಕುಟುಂಬದ ನಾಲ್ವರ ಪ್ರಾ*ಣ ಬ*ಲಿ ಪಡೆಯಿತಾ ಅಡಿಕೆ ಗಿಡ?

    Published

    on

    ಉಳ್ಳಾಲ : ಮುನ್ನೂರು ಗ್ರಾಮದ ಮದನಿ ನಗರದ ಮನೆಯ ಗೋಡೆ ಕುಸಿದು ಯಾಸೀರ್, ಪತ್ನಿ ಮರಿಯಮ್ಮ, ಮಕ್ಕಳಾದ ರಿಯಾನಾ ಹಾಗೂ ರಿಫಾನಾ ಇಹಲೋಕ ತ್ಯಜಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಬೂಬಕ್ಕರ್ ಮನೆಯ ಹಿಂಭಾಗದಲ್ಲೇ ಬೆಳೆದಿದ್ದ ಎರಡು ಅಡಿಕೆ ಗಿಡ ನಾಲ್ವರ ಪ್ರಾ*ಣ ತೆಗೆದಿದೆ ಎಂಬ ಮಾತು ಕೇಳಿ ಬಂದಿದೆ. ಮೇಲ್ಭಾಗದ ಕಂಪೌಂಡ್ ವಾಲ್ ಗೆ ತಾಗಿ ಬೆಳೆದಿದ್ದ ಅಡಿಕೆ ಗಿಡ ಭಾರೀ ಗಾಳಿ ಮಳೆಗೆ ಅಲುಗಾಡಿದ ಪರಿಣಾಮ ಮಣ್ಣು ಸಡಿಲಗೊಂಡು ಜೊತೆಗೆ ಮಳೆ ನೀರು ಶೇಖರಣೆಗೊಂಡ ಪರಿಣಾಮ ಮತ್ತಷ್ಟು ಮೃದುವಾಗಿ ಕಂಪೌಂಡ್ ವಾಲ್ ಕುಸಿದು ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ನಾಲ್ವರ ಜೀ*ವ ಹೋಗಿದೆ.

    ಮಳೆ ನೀರು ಹೋಗಲು ವ್ಯವಸ್ಥೆ ಇಲ್ಲದೇ ಭಾರೀ ಪ್ರಮಾಣದಲ್ಲಿ ನೀರು ಶೇಖರಣೆಯಾಗಿ ಜೊತೆಗೆ ಅಡಿಕೆ ಮರ ಗಾಳಿಗೆ ಅಲುಗಾಡಿದ ಪರಿಣಾಮ ಕಂಪೌಂಡ್ ಕುಸಿತ ಗೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

    ಒಬ್ಬಳು ಬಾಲಕಿಯ ಕೈ ಅಲುಗಾಡ್ತಿತ್ತು, ಆದರೆ ಪ್ರಾಣ ಉಳಿಸಲು ಆಗಲಿಲ್ಲ :

    ಅಗ್ನಿಶಾಮಕ, ಪೊಲೀಸರು ಬರೋ ಮೊದಲೇ ಮೃತದೇಹವನ್ನು ಪೊಲೀಸರು ಹೊರ ತೆಗೆದಿದ್ದಾರೆ ಸ್ಥಳೀಯ ಯುವಕರ ತಂಡ.
    “ಬೆಳಗ್ಗೆ ಆರು ಗಂಟೆಗೆ ಭಾರೀ ಶಬ್ದ ಕೇಳಿ ಹೊರಗೆ ಬಂದು ನೋಡಿದೆವು. ಆಗ ಮನೆಯ ಮೇಲೆ ಗೋಡೆ ಕುಸಿದು ಬಿದ್ದಿರೋದು ಗೊತ್ತಾಯ್ತು. ತಕ್ಷಣ ಸ್ಥಳೀಯರೆಲ್ಲ ಸೇರಿ ಮನೆಯ ಬಾಗಿಲು ಒಡೆದವು. ಆ ಬಳಿಕ ಒಳಗೆ ಹೋದಾಗ ನಮಗೆ ಕರೆಂಟ್ ಶಾಕ್ ಹೊಡೀತು. ಮಳೆ ನೀರು ನುಗ್ಗಿ ವಯರಿಂಗ್ ನಲ್ಲಿ ಕರೆಂಟ್ ಹೊಡೀತಾ ಇತ್ತು. ಬಳಿಕ ನಮ್ಮಲ್ಲೇ ಇದ್ದ ಎಲೆಕ್ಟ್ರಿಷನ್ ಒಬ್ಬರು ಲೈನ್ ಆಫ್ ಮಾಡಿದ್ರು.
    ಆ ಬಳಿಕ ನಾವು ಕಾರ್ಯಾಚರಣೆ ನಡೆಸಲು ಶುರು ಮಾಡಿದೆವು.

    ಮೂವರು ಹಾಲ್ ನಲ್ಲಿದ್ದರು, ಒಬ್ಬಳು ಕೋಣೆಯಲ್ಲಿ ಇದ್ದಳು. ನಾವು ಮೊದಲು ಮೂವರನ್ನ ತೆಗೆದಾಗ ಅದರಲ್ಲಿ ಬಾಲಕಿ ಕೈ ಅಲುಗಾಡ್ತಿತ್ತು. ಆದರೆ, ರಸ್ತೆ ಕಿರಿದಾಗಿ ಆ್ಯಂ*ಬುಲೆನ್ಸ್ ಬರಲಾಗದೇ ಆಸ್ಪತ್ರೆ ದಾರಿ ಮಧ್ಯೆ ಮೃ*ತಪಟ್ಟಿದ್ದಾಳೆ. ನಾವು ಮೂರು ಮೃ*ತದೇಹ ಹೊರ ತೆಗೆದ ಬಳಿಕ ಅಗ್ನಿಶಾಮಕ, ಪೊಲೀಸರು ಬಂದಿದ್ದಾರೆ.ನಾಲ್ಕನೇ ಮೃತದೇಗ ಸ್ವಲ್ಪ ತಡವಾಗಿ ತೆಗೆದೆವು. ಕಳೆದ ಬಾರಿಯೂ ಇದೇ ಗೋಡೆ ಬಿದ್ದು, ಈ ಮನೆಗೆ ಹಾನಿ ಆಗಿತ್ತು .ಆದರೆ ಆಗ ಅವರು ಇರಲಿಲ್ಲ, ಮಂಗಳೂರಿನಲ್ಲಿ ವಾಸ ಇದ್ರು ಎಂದು ಕಾರ್ಯಾಚರಣೆ ನಡೆಸಿದ ವ್ಯಕ್ತಿ ತಿಳಿಸಿದ್ದಾರೆ.

    ಇದನ್ನೂ ಓದಿ : ULLALA : ಕಂಪೌಂಡ್ ಕುಸಿದು ಮನೆ ಮೇಲೆ ಬಿದ್ದು ಮಕ್ಕಳು ಸಹಿತ ನಾಲ್ವರ ದು*ರ್ಮರಣ

    ಪ್ರಾಣಾ*ಪಾಯದಿಂದ ಪಾರಾದ ರಶೀನಾ!

    ಮೃತ ಯಾಸೀರ್ ಅವರ ದೊಡ್ಡ ಮಗಳು ರಶೀನಾಳನ್ನ ಕೇರಳ ಭಾಗಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ಬಕ್ರೀದ್ ಹಿನ್ನೆಲೆಯಲ್ಲಿ ತಂದೆಯ ಮನೆಗೆ ರಶೀನಾ ಬಂದಿದ್ದರು. ನಿನ್ನೆ ಸಂಜೆ ವೇಳೆ ಪತಿಯ ಜೊತೆಗೆ ವಾಪಸ್ಸಾಗಿದ್ದರು. ರಶೀನಾ ತೆರಳಿದ ಬಳಿಕ ಪಕ್ಕದ ಮನೆಯಲ್ಲಿ ಕೂತು ಮಾತನಾಡ್ತಿದ್ದ ಮರಿಯಮ್ಮ ದಂಪತಿ ಬಳಿಕ ಮಕ್ಕಳ ಜೊತೆ ಊಟ ಮುಗಿಸಿ ನಿದ್ದೆಗೆ ಜಾರಿದ್ದರು. ನಂತರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಅಬೂಬಕ್ಕರ್ ಮನೆಯ ಕಂಪೌಂಡ್ ಕುಸಿದು ಬಿದ್ದು ದುರಂತವೇ ಸಂಭವಿಸಿದೆ.

    Continue Reading

    LATEST NEWS

    ಸದನದಲ್ಲಿ ಪ್ಯಾಲೆಸ್ತೀನ್‌ ಪ್ರಸ್ತಾಪ..! ಓವೈಸಿ ವಿರುದ್ಧ ಎರಡು ದೂರು ದಾಖಲು..!

    Published

    on

    ನವದೆಹಲಿ : 18ನೇ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕಾರದ ವೇಳೆ ಪ್ಯಾಲೆಸ್ತೀನ್ ಹೆಸರು ಪ್ರಸ್ತಾಪಿಸಿದ್ದಕ್ಕೆ ಅಸಾದುದ್ದಿನ್ ಓವೈಸಿ ಮೇಲೆ ಎರಡು ದೂರು ದಾಖಲಾಗಿದ್ದು, ಸದನದ ಕಡತದಿಂದಲೂ ಆ ಹೇಳಿಕೆಯನ್ನು ತೆಗೆದು ಹಾಕಲಾಗಿದೆ.


    ಸಮರ್ಥಿಸಿಕೊಂಡಿದ್ದ ಓವೈಸಿ :

    ಎಐಎಂಐಎಂ ನಾಯಕ ಅಸಾದುದ್ದಿನ್ ಓವೈಸಿ ಐದನೇ ಭಾರಿಗೆ ಹೈದ್ರಾಬಾದ್ ಲೋಕಸಭಾ ಕ್ಷೇತ್ರದಿಂದ ಗೆದ್ದು ಲೋಕಸಭೆ ಪ್ರವೇಶ ಮಾಡಿದ್ದಾರೆ. ಜೂನ್ 25 ರಂದು ಸಂಸದರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಓವೈಸಿ ಆರಂಭದಲ್ಲಿ ದೇವರ ನಾಮ ಸ್ಮರಣೆ ಮಾಡಿ ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಪ್ರಮಾಣ ವಚನದ ಕೊನೆಯಲ್ಲಿ ಜೈ ಭೀಮ್‌ , ಜೈ ತೆಲಂಗಾಣ ಘೋಷಣೆಯೊಂದಿಗೆ ಪ್ಯಾಲೆಸ್ತೀನ್‌ ಹೆಸರನ್ನೂ ಬಳಕೆ ಮಾಡಿದ್ದಾರೆ. ಇದು ಟೀಕೆಗೆ ಕಾರಣವಾಗಿದ್ದು, ಸದನದ ಹೊರಗೆ ಈ ವಿಚಾರ ಚರ್ಚೆಗೆ ಬಂದಿತ್ತು.

    ಸದನದ ಹೊರಗೆ ಈ ಬಗ್ಗೆ ಮಾತನಾಡಿದ ಓವೈಸಿ, “ಹೀಗೆ ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲಾ ಸದಸ್ಯರು ವಿಭಿನ್ನವಾಗಿ ಹೇಳಿದ್ದಾರೆ. ಹಾಗೇ ನಾನೂ ಕೂಡಾ ಹೇಳಿದ್ದೇನೆ. ಪ್ಯಾಲೆಸ್ತೀನಿಯರು ತುಳಿತಕ್ಕೆ ಒಳಗಾದ ಜನರು” ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

    ಇದನ್ನೂ ಓದಿ : ಉಪಮುಖ್ಯಮಂತ್ರಿ ಕಚೇರಿ ಎದುರು ಆತ್ಮಹ*ತ್ಯೆಗೆ ಯತ್ನಿಸಿದ ಮಹಿಳೆ

    ದೂರು ದಾಖಲು :

    ಓವೈಸಿ ಅವರ ಈ ಹೇಳಿಕೆ ವಿರುದ್ಧ ವಕೀಲ ಹರಿಶಂಕರ್ ಜೈನ್ ಹಾಗೂ ವಕೀಲ್ ವಿನೀತ್ ಜಿಂದಾಲ್ ಅವರು ರಾಷ್ಟ್ರಪತಿಗಳಿಗೆ ಪ್ರತ್ಯೇಕ ದೂರು ಸಲ್ಲಿಸಿದ್ದರು. ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜ್ ದೂರುಗಳು ಬಂದ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ. ಈ ಬೆಳವಣಿಗೆಯ ಬಳಿಕ ಸಂಸತ್‌ನ ಕಡತದಲ್ಲಿ ಓವೈಸಿ ಹೇಳಿಕೆಯನ್ನು ತೆಗೆದು ಹಾಕಿದ್ದು, ಸಂಸತ್ ಟಿವಿಯಲ್ಲೂ ಓವೈಸಿ ಹೇಳಿಕೆಯ ಆ ಭಾಗವನ್ನು ತೆಗೆದು ಹಾಕಿದೆ.

    Continue Reading

    LATEST NEWS

    Trending