FILM
ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ – ತುಪ್ಪದ ಬೆಡಗಿ ರಾಗಿಣಿ ಆರೆಸ್ಟ್
ಬೆಂಗಳೂರು : ಸ್ಯಾಂಡಲ್ ವುಡ್ ನ ಡ್ರಗ್ ಮಾಫಿಯಾ ಸಂಬಂಧ ನಟಿ ರಾಗಿಣಿ ದ್ವಿವೇದಿಯವರನ್ನು ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಬಂಧಿಸಿದ್ದರೆ.
ಈಗಾಗಲೇ ರಾಜ್ಯಾದ್ಯಂತ ಭಾರೀ ಕುತೂಹಲ ಮೂಡಿಸಿರುವ ಸ್ಯಾಂಡಲ್ ವುಡ್ ನ ಡ್ರಗ್ಸ್ ಮಾಫಿಯಾದಲ್ಲಿ ಮೊದಲ ಬಾರಿಗೆ ನಟಿಯೊಬ್ಬರು ಬಂಧನವಾಗಿದೆ. ಇಂದು ಬೆಳಿಗ್ಗೆ ಸಿಸಿಬಿ ಪೊಲೀಸರು ರಾಗಿಣಿ ಅಪಾರ್ಟ್ ಮೆಂಟ್ ಗೆ ತೆರಳಿ ಸಂಪೂರ್ಣ ತಪಾಸಣೆ ನಡೆಸಿದ್ದರು. ನಂತರ ಅವರನ್ನು ವಶಕ್ಕೆ ಪಡೆದು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದರು.
ಈ ನಡುವೆ ನಟಿ ರಾಗಿಣಿ ವಿರುದ್ಧ ಕಾಟನ್ಪೇಟೆ ಠಾಣೆಯಲ್ಲಿ ಸ್ವಯಂಪ್ರೇರಿತ ದೂರನ್ನು ಪೊಲೀಸರು ದಾಖಲಿಸಿದ್ದರು. ಇದೀಗ ರಾಗಿಣಿ ಅವರನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ. ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾದ ಎರಡನೇ ಆರೋಪಿ ರಾಗಿಣಿ ಆಗಿದ್ದಾರೆ.
FILM
ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಆರೋಪದಡಿ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ್, ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಜುಲೈ 18 ರವರೆಗೆ ವಿಸ್ತರಿಸಿ 24ನೇ ಎಸಿಎಂಎಂ ಕೋರ್ಟ್ ಗುರುವಾರ(ಜು.4) ಆದೇಶ ಹೊರಡಿಸಿದೆ.
ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಹಾಗೂ ಇತರ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದು(ಜು.4) ಅಂತ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಡ್ಜ್ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು.
ಇದನ್ನೂ ಓದಿ : WATCH : ಕೂದಲು ಕತ್ತರಿಸಿಕೊಂಡ ಹೀನಾ ಖಾನ್; ಗೆಲ್ಲಬೇಕು ಅಂದ್ರೆ ಕಠಿಣ ನಿರ್ಧಾರ ತೆಗೆದುಕೊಳ್ಳಲೇ ಬೇಕು ಎಂದ ನಟಿ
ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸುವಂತೆ ಎಸ್ಪಿಪಿ ರಿಮ್ಯಾಂಡ್ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನವನ್ನು ಜುಲೈ 18ರ ವರೆಗೆ ವಿಸ್ತರಿಸಿ ಕೋರ್ಟ್ ಆದೇಶಿಸಿದೆ.
FILM
WATCH : ಕೂದಲು ಕತ್ತರಿಸಿಕೊಂಡ ಹೀನಾ ಖಾನ್; ಗೆಲ್ಲಬೇಕು ಅಂದ್ರೆ ಕಠಿಣ ನಿರ್ಧಾರ ತೆಗೆದುಕೊಳ್ಳಲೇ ಬೇಕು ಎಂದ ನಟಿ
ಮಂಗಳೂರು/ಮುಂಬೈ : ‘ಕ್ಯಾನ್ಸರ್‘ ಈ ಮಹಾಮಾರಿಗೆ ಅನೇಕ ಮಂದಿ ಬ*ಲಿಯಾಗಿದ್ದಾರೆ. ಅದನ್ನು ಗೆದ್ದು ಬೀಗಿದವರೂ ಇದ್ದಾರೆ. ಸೆಲೆಬ್ರಿಟಿ ಎಂದ ಮಾತ್ರಕ್ಕೆ ಕ್ಯಾನ್ಸರ್ ಬಿಡುತ್ತಾ? ಇಲ್ಲ. ಸೆಲೆಬ್ರಿಟಿಗಳೂ ಕ್ಯಾನ್ಸರ್ ಗೆ ತುತ್ತಾದ ಅನೇಕ ಉದಾಹರಣೆಗಳಿವೆ.
ನಟಿ ಹಿನಾ ಖಾನ್ ಕೂಡ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಹಾಗಂತ ಮುದುಡಿ ಕುಳಿತ್ತಿಲ್ಲ. ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ತನ್ನ ಚಿಕಿತ್ಸೆಯ ಅಪ್ಡೇಟ್ ನೀಡುತ್ತಿರುತ್ತಾರೆ. ಮೂರನೇ ಹಂತದಲ್ಲಿರುವ ಸ್ತನ ಕ್ಯಾನ್ಸರ್ಗೆ ಕೀಮೋ ಥೆರಫಿ ಚಿಕಿತ್ಸೆಗೆ ಒಳಗಾದ ಸಂದರ್ಭದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದರು.
ಇದೀಗ ಕಿಮೋ ಬಳಿಕ ಕೂದಲು ಉದುರಲು ಆರಂಭವಾಗಿದ್ದು, ಅದಕ್ಕಾಗಿ ತನ್ನ ಕೂದಲನ್ನು ಕತ್ತರಿಸಿಕೊಂಡ ವಿಡಿಯೋ ಶೇರ್ ಮಾಡಿ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.
ದಿಟ್ಟ ನಿರ್ಧಾರ ಎಂದ ನಟಿ :
ತನಗೆ ಕ್ಯಾನ್ಸರ್ ಎಂದು ಗೊತ್ತಾದಾಗ ನೋವಿನಿಂದ ಖಿನ್ನರಾಗುವವರು ಅನೇಕರಿದ್ದಾರೆ. ಆದರೆ, ಹಿನಾ ಇದಕ್ಕಿಂತ ಭಿನ್ನ. ಹಾಗಂತ ಹೆತ್ತವರ ಪರಿಸ್ಥಿತಿ ಹೇಗಿರಬೇಡ…ಮಗಳಿಗೆ ಕ್ಯಾನ್ಸರ್ ಎಂಬ ಕಾಯಿಲೆ ಭಾದಿಸಿದೆ ಎಂದರೆ ಮರುಗದಿರಬಲ್ಲರೇ? ಈ ವೀಡಿಯೋದಲ್ಲಿ ಡ್ರೆಸ್ಸಿಂಗ್ ಟೇಬಲ್ ಮುಂದೆ ಕುಳಿತು ಅಳುತ್ತಿರುವ ಹಿನಾ ತಾಯಿಯನ್ನು ಕಾಣಬಹುದು. ತಾಯಿಯನ್ನು ಸಮಾಧಾನ ಪಡಿಸುತ್ತಾ ಹಿನಾ ಖಾನ್ ತನ್ನ ತಲೆಕೂದಲನ್ನು ಕತ್ತರಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಸುದೀರ್ಘ ಸಂದೇಶವೊಂದನ್ನು ನೀಡಿದ್ದಾರೆ.
“ನನ್ನ ತಾಯಿ ಯಾವುದನ್ನು ನೋಡಲು ಬಯಸುತ್ತಿಲ್ಲವೋ ಅದಕ್ಕಾಗಿ ನಾನು ಅವರನ್ನು ಸಿದ್ಧಪಡಿಸುತ್ತಿದ್ದೇನೆ. ಇದು ಬಹಳ ಕಷ್ಟಕರವಾದ ಘಳಿಗೆಯಾಗಿದ್ದು ತಮ್ಮ ತಲೆಯ ಕಿರೀಟದಂತಿರುವ ಕೂದಲನ್ನು ಯಾರೂ ತೆಗೆಯಲು ಬಯಸುವುದಿಲ್ಲ. ಆದ್ರೆ, ಅನಿವಾರ್ಯವಾದ ಪರಿಸ್ಥಿತಿಯನ್ನು ಎದುರಿಸುವಾಗ ಇಂತಹ ನಿರ್ಧಾರ ಮಾಡಲೇಬೇಕಾಗಿದೆ. ಗೆಲ್ಲಬೇಕು ಅಂದ್ರೆ ಕಠಿಣ ನಿರ್ಧಾರ ತೆಗೆದುಕೊಳ್ಳ
ಲೇ ಬೇಕು” ಎಂದು ಕ್ಯಾನ್ಸರ್ ವಿರುದ್ಧ ಹೋರಾಟಕ್ಕಾಗಿ ಈ ದಿಟ್ಟ ನಿರ್ಧಾರ ಎಂದು ತಿಳಿಸಿದ್ದಾರೆ.
“ಕೀಮೋ ಥೆರಫಿಯಿಂದ ನನ್ನ ಕೂದಲುಗಳು ಉದುರಿ ಹೋಗಲಿದೆ. ಅದಕ್ಕೂ ಮೊದಲು ನನ್ನ ಸುಂದರ ಕೂದಲನ್ನು ನಾನೇ ತೆಗೆಸಿಕೊಂಡಿದ್ದೇನೆ. ಕೂದಲು ಹಾಗೂ ಹುಬ್ಬು ಮುಂದೆ ಬೆಳೆಯಬಹುದು. ಈಗಿನ ನೋವು ಕೂಡಾ ಮಾಸಬಹುದು. ಆದ್ರೆ, ಆತ್ಮ ಸ್ಥೈರ್ಯ ಉಳಿಯಬೇಕಾಗಿದೆ. ಇದಕ್ಕಾಗಿ ನನ್ನ ಶಕ್ತಿಯೇ ಮುಂದೆ ನನ್ನ ತಲೆಯ ಕಿರೀಟವಾಗಿ ಇರಲಿದೆ. ತೆಗೆದಿರುವ ಕೂದಲಿನಿಂದ ಮುಂದೆ ಒಂದು ವಿಗ್ ಮಾಡಿಸಿಕೊಳ್ಳುತ್ತೇನೆ. ಕ್ಯಾನ್ಸರ್ ಜೊತೆಗಿನ ನನ್ನ ಪ್ರಯಾಣವನ್ನು ರೆಕಾರ್ಡ್ ಮಾಡುತ್ತಿದ್ದೇನೆ. ನನ್ನನ್ನು ಪ್ರೀತಿಸುವ ಜನರಿಗಾಗಿ ನಾನು ಇದನ್ನು ಹಂಚಿಕೊಳ್ಳುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ಕೊನೆಯದಾಗಿ, ದೇವರು ನಮ್ಮ ನೋವು ಕಡಿಮೆ ಮಾಡಲು ದಯವಿಟ್ಟು ಪ್ರಾರ್ಥಿಸಿ ಎಂದು ಹೃದಯ ಸ್ಪರ್ಶಿಯಾಗಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಬಾಡಿಗೆ ಗೆಳತಿ ಜೊತೆ ಡೇಟಿಂಗ್..! ದುಬಾರಿ ಬಿಲ್ ನೋಡಿ ಯುವಕ ಶಾ*ಕ್..!
ಇನ್ನು, ಈ ವೀಡಿಯೋಗೆ 9 ಲಕ್ಷಕ್ಕೂ ಅಧಿಕ ವ್ಯೂಸ್ ಬಂದಿದ್ದು, ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಧೈರ್ಯವಂತ ಮಹಿಳೆ, ದೇವರು ಒಳಿತು ಮಾಡಲಿ, ಹೀಗಿ ಧೈರ್ಯವಾಗಿರಿ ಎಂದು ಪ್ರತಿಕ್ರಿಯಿಸುವ ಮೂಲಕ ಹುರಿದುಂಬಿಸಿದ್ದಾರೆ.
ಹಿನಾ ಖಾನ್ ಹಿಂದಿ ಕಿರುತೆರೆ, ಹಿರಿತೆರೆಯಲ್ಲಿ ತನ್ನದೇ ಆದ ಛಾಪು ಹಬ್ಬಿರುವ ನಟಿ. ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿಯೂ ಆಗಿದ್ದರು.
FILM
ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ರಕ್ಷಿತ್ ಶೆಟ್ಟಿ ಭೇಟಿ
ಉಡುಪಿ: ಖ್ಯಾತ ನಟ ರಕ್ಷಿತ್ ಶೆಟ್ಟಿ ಕುಟುಂಬ ಸಮೇತರಾಗಿ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಪ್ರಾರ್ಥನೆ ನೆರವೇರಿಸಿದರು. ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ ವಾಸುದೇವ ಶೆಟ್ಟಿ ಮಾರಿಯಮ್ಮನ ಸನ್ನಿಧಾನದಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು.
Udupi: ಬಹುಭಾಷಾ ಚಲನಚಿತ್ರ ನಟ ಪ್ರಕಾಶ್ ರೈ ಕಾಪು ಮಾರಿಗುಡಿ ಸನ್ನಿಧಾನಕ್ಕೆ ಭೇಟಿ
ದೇವಳದ ಜೀರ್ಣೋದ್ಧಾರದ ಆರ್ಥಿಕ ಸಮಿತಿಯ ಕಾತ್ಯಾಯಿನಿ ತಂಡದ ಮುಖ್ಯ ಸಂಚಾಲಕಿ ಬೀನಾ ವಿ. ಶೆಟ್ಟಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ನಟ ರಕ್ಷಿತ್ ಶೆಟ್ಟಿ ಕುಟುಂಬಸ್ಥರೊಂದಿಗೆ ದೇವಳದ ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿದರು. ಈ ಸಂದರ್ಭ ರಶ್ಮಿತ್ ನಿಖಿಲ್ ಶೆಟ್ಟಿ ಇವರು ಕಾಪುವಿನ ಅಮ್ಮನ ಸ್ವರ್ಣ ಗದ್ದುಗೆಗೆ 9 ಗ್ರಾಂ ಸ್ವರ್ಣ ಸಮರ್ಪಿಸಿದರು. ರಕ್ಷಿತ್ ಶೆಟ್ಟಿ ಅವರ ತಾಯಿ ರಂಜನಾ ಶ್ರೀಧರ್ ಶೆಟ್ಟಿ ಮತ್ತು ಸಹೋದರ ರಂಜಿತ್ ಶೆಟ್ಟಿ ಉಪಸ್ಥಿತರಿದ್ದರು.
- DAKSHINA KANNADA7 days ago
ಕರಾವಳಿಯಲ್ಲಿ ಮಳೆಗೆ ಮತ್ತೊಂದು ಬ*ಲಿ; ವಿದ್ಯುತ್ ತಂತಿ ಸ್ಪರ್ಶಿಸಿ ಯುವತಿ ಸಾ*ವು
- FILM1 day ago
‘ಪೆಂಡ್ರೈವ್’ನಲ್ಲಿ ಬಿಗ್ಬಾಸ್ ತನಿಷಾ ಕುಪ್ಪಂಡ..!
- DAKSHINA KANNADA5 days ago
ಶಿರಾಡಿಘಾಟ್ ನಲ್ಲಿ ಸರಣಿ ಅಪಘಾ*ತ; ರಾಜಹಂಸ, ಐರಾವತ ಬಸ್ ಮುಖಾಮುಖಿ ಡಿ*ಕ್ಕಿ
- DAKSHINA KANNADA6 days ago
ಜೀವ ಉಳಿಸಿದ ನಾಯಿಯ ನಿಯತ್ತು ಹಾಗೂ ಯುವಕನ ಸಮಯ ಪ್ರಜ್ಞೆ!