HomeBELTHANGADYಮದುವೆ ಗಂಡಿನ ಚೆಂಡೆ ಸದ್ದಿಗೆ ಹೆಜ್ಜೆ ಹಾಕಿದ ಮದುಮಗಳು...!!

ಮದುವೆ ಗಂಡಿನ ಚೆಂಡೆ ಸದ್ದಿಗೆ ಹೆಜ್ಜೆ ಹಾಕಿದ ಮದುಮಗಳು…!!

ಬೆಳ್ತಂಗಡಿ : ಮದುವೆ ಸಂಭ್ರಮದಲ್ಲಿ ವಿಶೇಷವಾಗಿ ಯಕ್ಷಗಾನ ಪ್ರದರ್ಶನವಾಗುವುದನ್ನು ನಾವು ಕಂಡಿದ್ದೇವೆ. ಆದರೆ ಮದುವೆ ಬಳಿಕ ನಡೆದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಯಕ್ಷಗಾನ ಗಾನ ವೈಭವ ಕಾರ್ಯಕ್ರಮದಲ್ಲಿ ಮದುಮಗನ ಚೆಂಡೆ ಪೆಟ್ಟಿಗೆ ಮದುಮಗಳೇ ನಾಟ್ಯ ಮಾಡಿದ್ದಾಳೆ.

ಇಂತಹ ಅಪೂರ್ವ ಕಾರ್ಯಕ್ರಮವೊಂದು ನಡೆದಿರೋದು ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಮದ್ದಡ್ಕ ಸಮೀಪದ ಮೈರಾರುವಿನಲ್ಲಿ. ಯಕ್ಷಗಾನ ಭಾಗವತಿಕೆಗೆ ಚೆಂಡೆ ಬಾರಿಸಿದ್ದು ಸುರೇಶ್ ಕೆರ್ಮುಣ್ಣಾಯರ ಪುತ್ರ , ಮದುಮಗ ಸುಹಾಸ್ ಅವರು. ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ್ದು ಮದುಮಗಳು ಕಟೀಲು ಎಕ್ಕಾರಿನ ಭಾಸ್ಕರ ರಾವ್‌ ಮತ್ತು ನಿರ್ಮಲಾ ಭಟ್‌ ಅವರ ಪುತ್ರಿ ಅನುಜ್ಞಾ ಸುಹಾಸ್‌. ಆಗಸ್ಟ್‌ 30ರಂದು ಇವರ ಮದುವೆ ಕಟೀಲಿನಲ್ಲಿ ಜರುಗಿತ್ತು. 31ರಂದು ಸುಹಾಸರ ಗೃಹಪ್ರವೇಶ ಮೈರಾರುವಿನಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭ ಗಾನವೈಭವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು 3 ಗಂಟೆಗಳ ಕಾಲ ಹಿರಿಯ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ರೈ ಕಕ್ಕೆಪದವು, ಕಾವ್ಯಶ್ರೀ ಅಜೇರು, ಮಹೇಶ ಮೊದಲಾವರ ಹಾಡುಗಾರಿಕೆ ನೆರೆದವರನ್ನು ಯಕ್ಷಲೋಕದತ್ತ ಕರೆದೊಯ್ದರೆ, ಖುದ್ದು ಮದುಮಗ ಸುಹಾಸ್ ಅವರು ಚೆಂಡೆ ಬಾರಿಸಿ ಸೈ ಅನ್ನಿಸಿಕೊಂಡರು. ಇದೇ ವೇಳೆ ಮದುಮಗಳು ಅನುಜ್ಞಾ ಅವರೂ ಕುಣಿದೇ ಬಿಟ್ಟರು.

ನೆರೆದವರು ಈ ಅದ್ಭುತ ಗಾನಮಾರ್ಧುರ್ಯಕ್ಕೆ ಮನಸೋತರು. ಸುಹಾಸ್‌ ಅವರು ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದರೆ, ಅನುಜ್ಞಾ ಮಂಗಳೂರಿನಲ್ಲಿ ಸಿಎ ವಿದ್ಯಾರ್ಥಿನಿ. ಕಟೀಲು ದುರ್ಗಾ ಮಕ್ಕಳ ಮೇಳದಲ್ಲಿ ರಾಜೇಶ್ ಅವರಿಂದ ನೃತ್ಯಾಭ್ಯಾಸ ಕಲಿತಿರುವ ಈಕೆ ಇದೀಗ ಹವ್ಯಾಸಿ ಕಲಾವಿದೆಯಾಗಿಯೂ ಆಗಿದ್ದಾರೆ. ಕೃಷ್ಣ, ಬಲರಾಮ, ಬಬ್ರವಾಹನ, ಜಾಂಬವಂತ ಹೀಗೆ ಯಾವುದೇ ಪಾತ್ರ ಮಾಡಲು ಸಿದ್ಧ ಎನ್ನುವ ಇವರ ದಾಂಪತ್ಯ ಜೀವನದೊಂದಿಗೆ ಕಲಾ ಬದುಕು ಸುಂದರವಾಗಲಿ.

Latest articles

ಕೆಲಸ ಇಲ್ಲದವನು ಎಂದು ಬೈಯುತ್ತಿದ್ದ ಅಜ್ಜಿಯನ್ನು ಕೊಂದು ಸುಟ್ಟು ಹಾಕಿದ ಕಿರಾತಕ ಮೊಮ್ಮಗ

ಮೈಸೂರು: ದುಡಿಯುವ ವಯಸ್ಸಿನಲ್ಲಿ ಪುಂಡ ಪೋಕರಿಯಂತೆ ಅಲೆಯುತ್ತಿದ್ದುದಕ್ಕೆ ಬೈಯುತ್ತಿದ್ದ ಅಜ್ಜಿಯನ್ನು ಸ್ವಂತ ಮೊಮ್ಮಗನೇ ಕೊಂದು ಸುಟ್ಟು ಹಾಕಿ ಶವವನ್ನು...

ಚಿತ್ರದುರ್ಗ : ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ಅಕ್ರಮ ಗೋಸಾಗಾಟ- ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ..!

ಚಿತ್ರದುರ್ಗದಲ್ಲಿ ರಾತ್ರಿ ವೇಳೆ ಕಳ್ಳರು ಬೀದಿ ಬದಿಯ ಗೋವುಗಳನ್ನು ಕಳ್ಳತನ ಮಾಡಿ ಟೆಂಪೋದಲ್ಲಿ ತುಂಬಿಸಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ...

ಕೇರಳಕ್ಕೆಮುಂಗಾರು ಪ್ರವೇಶ- ಮಂಗಳೂರಿನಲ್ಲಿ ಸಂಜೆ ಬಿರುಸಿನ ಮಳೆ..!

ಕೇರಳದಲ್ಲಿ ಇಂದು ಮುಂಗಾರು ಪ್ರವೇಶಿಸಿದ್ದು ಈ ಹಿನ್ನೆಲೆಯಲ್ಲಿ ಕರಾವಳಿಯ ಬಂದರು ನಗರ ಮಂಗಳೂರಿನಲ್ಲಿ ಇಂದು ಸಂಜೆ ಬಿರುಸಿನ ಮಳೆಯಾಗಿದೆ.ಮಂಗಳೂರು...

ಬೆಂಗಳೂರು: ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ರನ್ನು ಭೇಟಿಯಾದ ಸ್ಪೀಕರ್ ಯು.ಟಿ.ಖಾದರ್

ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ ಸ್ಪೀಕರ್ ಯು.ಟಿ.ಖಾದರ್ ಅವರು ಮೊದಲ ಬಾರಿಗೆ ದೆಹಲಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು...