DAKSHINA KANNADA
ದಿಲ್ರಾಜ್ ಆಳ್ವರ ‘ಮಂಗಳೂರು ಬೆಂಗಳೂರು ಚಿನ್ನದ ರಸ್ತೆಯ ಬಣ್ಣದ ಕಥೆ’ಯ ಕೇಳಿ
ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೈವೇ ಬಗ್ಗೆ ಸಾಮಾಜಿಕ ಹೋರಾಟಗಾರ ದಿಲ್ ರಾಜ್ ಆಳ್ವ ತನ್ನ ಫೇಸ್ಬುಕ್ನಲ್ಲಿ ಬರೆದ ಬರಹ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದ್ದು, ಅದರ ಯಥಾವತ್ತು ಇಲ್ಲಿದೆ.
ದಕ್ಷಿಣ ಕನ್ನಡಕ್ಕೆನಾದ್ರೂ ಶಾಪ ಉಂಟಾ ಮಾರ್ರೆ!!* ಹೀಗಂತ ನಾನು ಯಾವಾಗಲೂ ಆಲೋಚನೆ ಮಾಡ್ತಿರುತ್ತೇನೆ.
ಮೊನ್ನೆ ನಾನು ರಸ್ತೆಯ ಮೂಲಕ ಬೆಂಗಳೂರಿಗೆ ಹೋಗುವಾಗ ನರಕದರ್ಶನ ಆಯ್ತು! ಇಪ್ಪತ್ತೊಂದನೇ ಶತಮಾನದಲ್ಲಿಯೂ ಇಂಥ ರಸ್ತೆಗಳ ಮೇಲೆ ಓಡಾಡುವ ದುರವಸ್ಥೆ ತುಳುವರದು.
ಮಂಗ್ಳೂರ್ ಬೆಂಗ್ಳೂರ್ ಹೈವೆ ಕಾಮಗಾರಿ ನಾಲ್ಕಾರು ವರ್ಷಗಳ ಹಿಂದೆ ಭರ್ಜರಿಯಾಗಿಯೇ ಆರಂಭವಾಗಿತ್ತು.
ಪ್ರತಿಷ್ಠಿತ ಎಲ್ ಆಂಡ್ ಟಿ ಕಂಪನಿ ಕಾಮಗಾರಿಯನ್ನು ಗುತ್ತಿಗೆ ಪಡೆದಾಗ ನಾವೆಲ್ಲರೂ ಖುಷಿಪಟ್ಟಿದ್ದೇವು.
ಇನ್ನು ಬೆಂಗ್ಳೂರು ಹಾದಿ ಮೂರುನಾಲ್ಕು ಗಂಟೆ ಮಾತ್ರ! ಅಂತ ಕನಸು ಕಟ್ಟಿಕೊಂಡೆವು. ಹಾವಿನಂತೆ ಹರಿದಾಡಿಕೊಂಡು ಸಾಗುತ್ತಿದ್ದ ಹಳೆಯ ರಸ್ತೆಯನ್ನು ನೇರವಾಗಿ ನೆಟ್ಟಗೆ ಮಾಡಲಾಗುತ್ತಿತ್ತು.
ಅನವಶ್ಯಕವಾಗಿ ಸುತ್ತಿಸುಸ್ತುಮಾಡಿಕೊಳ್ಳುತ್ತಿದ್ದ ಸುಮಾರು ಇಪ್ಪತ್ತು ಮೂವತ್ತು ಕಿಲೋಮೀಟರ್ ದಾರಿಯನ್ನು ಕಡಿಮೆ ಮಾಡುವ ಕಾರ್ಯವನ್ನು ನೋಡಿಯೇ ಹೆಮ್ಮೆಯಾಗುತ್ತಿತ್ತು.
ದೇಶದ ದಿಸೆಯೂ ಬದಲಾದಂತೆ ಭರವಸೆ ಹುಟ್ಟಿಸುತ್ತಿದ್ದವು ಅಂದಿನ ದಿನಗಳು.
ಅದೇನಾಯ್ತೋ ಏನೋ ಇದ್ದಕ್ಕಿದ್ದಂತೆ ಲಾರ್ಸನ್ ಆಂಡ್ ಟರ್ಬೋ ಕಂಪನಿ ಪ್ಯಾಕ್ ಅಪ್ ಮಾಡಲು ಶುರುವಿಟ್ಟುಕೊಂಡಿತು.
ವಿದೇಶದಲ್ಲಿಯೂ ಶ್ರೇಷ್ಠ ರಸ್ತೆಗಳನ್ನು ನಿರ್ಮಿಸಿದ ಸಂಸ್ಥೆಗೆ ಅಡ್ಡಗಾಲು ಹಾಕಲಾಯಿತು. ತನ್ಮೂಲಕ ತುಳುವರ ಕನಸುಗಳನ್ನು ನುಚ್ಚುನೂರು ಮಾಡಲಾಯಿತು.
ಚಿನ್ನದ ರಸ್ತೆಯ ಬಣ್ಣದ ಮಾತುಗಳು ನಮಗೆ ಮುಳುವಾಯಿತೆ? ಆಕಾಶದಲ್ಲಿ ಚಂದಿರನನ್ನು ತೋರಿಸಿ ಯಾಮಾರಿಸಿದರೆ ? ಎನ್ನುವ ಸಂಶಯ ಕಾಡ್ತಿದೆ.
ಹೆದ್ದಾರಿಗಳ ನಿರ್ಮಾಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ನಮ್ಮ ದೇಶದಲ್ಲಿ ವಿದೇಶಿ ರಸ್ತೆಗಳನ್ನು ಮೀರಿಸುವಂಥಹ ರಸ್ತೆಗಳನ್ನು ಹತ್ತಿಪ್ಪತ್ತು ವರ್ಷಗಳ ಹಿಂದೆ ಉತ್ತರ ಕರ್ನಾಟಕದಲ್ಲಿಯೇ ನಿರ್ಮಿಸಿದ್ದಾರೆಂದರೆ ನಮ್ಮ ಜಿಲ್ಲೆಗೆ ಬರುವಾಗ ಮಾತ್ರ ಯಾಕೆ ಒಬೇರಾಯನ ಕಾಲದ ತಂತ್ರಜ್ಞಾನವೋ ಗೊತ್ತಿಲ್ಲ.
ಹೈವೇ ನೋಡಬೇಕಾ ನೀವು! ಹಾಗಾದ್ರೆ ಬೆಳಗಾವಿಯಿಂದ ಪುಣೆ ರಸ್ತೆಯಲ್ಲಿ ಒಂದ್ಸಲ ಡ್ರೈವ್ ಹೋಗಿ. ಅಂದಿನ ಪ್ರಧಾನಿ ವಾಜಪೇಯಿ ಕನಸಿನ ಸುವರ್ಣ ಚತುಷ್ಪತ ಹೆದ್ದಾರಿ ಅದು. ಅದನ್ನು ದಾಖಲೆಯ ಸಮಯದಲ್ಲಿ ಮಾಡಿ ಮುಗಿಸಲಾಗಿದೆ.
ಆರುಲೈನ್ ರಸ್ತೆಯ ಏರಿಳಿತಗಳನ್ನು ಸಮಮಾಡಿ, ನೇರವಾಗಿ ಚಲಿಸುವ ರಸ್ತೆಯನ್ನು ಕಾಂಕ್ರೀಟ್ ಮತ್ತು ಬಿಟುಮಿನ್ ಕಾಂಬಿನೇಷನಲ್ಲಿ ಮಾಡಲಾಗಿದೆ.
ಹತ್ತು ಅಡಿ ಅಗಲದ ನೂರಾರು ಕಿಲೋಮೀಟರ್ ಡಿವೈಡರ್ಗಳಲ್ಲಿ ಗಾರ್ಡನ್ ಮಾಡಲಾಗಿದೆ. ರಾತ್ರಿ ಸಂಚರಿಸುವಾಗ ಎದುರಿನ ವಾಹನದ ಲೈಟ್ ನಿಮ್ಮ ಕಣ್ಣಿಗೆ ಬೀಳುವ ಪ್ರಮೇಯವೇ ಇಲ್ಲ.
ರಸ್ತೆ ಅಗಲೀಕರಣ ಮಾಡುವಾಗ ಕಡಿದ ಮರಗಳ ಮೂರು ಪಟ್ಟು ಅಧಿಕ ಗಿಡಗಳನ್ನು ಹೈವೇ ಮತ್ತು ಸರ್ವೀಸ್ ರಸ್ತೆ ಮಧ್ಯದ ಇಳಿಜಾರು ಮಾಡಿ,
ಅಲ್ಲಿ ನೆಟ್ಟು ಜೊತೆಗೆ ಮಳೆಕೊಯ್ಲು ಮಾಡಿ ನೀರನ್ನು ಭೂಮಿಗೆ ಬಿಡಲಾಗ್ತಿದೆ. ಟೋಲ್ ನಲ್ಲಿ ಒಂದು ನಿಮಿಷಕ್ಕಿಂತ ಅಧಿಕ ಸಮಯ ವಾಹನಗಳು ಕ್ಯೂನಲ್ಲಿ ನಿಂತ ಇತಿಹಾಸವಿಲ್ಲ.
ರಸ್ತೆಯಲ್ಲಿ ಅಪಘಾತವಾದರೆ ಏರ್ ಅಂಬ್ಯುಲನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ.
ಇನ್ನು ಪ್ರತಿ 5 ಕಿಲೋಮೀಟರ್ ಗೆ ವ್ಯವಸ್ಥಿತ ಶೌಚಾಲಯ ನಿರ್ಮಿಸಿ ಇಂದಿಗೂ ಅತ್ತ್ಯುತ್ತಮವಾಗಿ ನಿರ್ವಹಣೆ ಮಾಡ್ತಿದಾರೆ. ಬಸ್ ಬೇ, ಲಾರಿ ಬೇ ಅಲ್ಲಲ್ಲಿ ಕಾಣಸಿಗುತ್ತವೆ.
ಹೈವೆಯ ಎರಡೂ ಬದಿ ಸರಿಸಮವಾಗಿ ಸರ್ವಿಸ್ ಲೈನ್ ಗಳಿವೆ. ಗ್ರಾಮೀಣ ಪ್ರದೇಶದ ಜನರು ಅಲ್ಲಿಯೇ ಓಡಾಡಬಹುದು.
ಜೊತೆಗೆ ಕಡಿದಾದ ಬೆಟ್ಟಗಳನ್ನು ಕತ್ತರಿಸಿ ರಸ್ತೆ ನಿರ್ಮಿಸಿದಾರೆ,
ಜೊತೆಗೆ ಲ್ಯಾಂಡ್ ಸೈಡ್ ಆಗದಂತೆ ಕಿಲೋಮಿಟರ್ ಉದ್ದದ್ದ ನೂರಾರು ಅಡಿ ಎತ್ತರದ ಬೆಟ್ಟಗಳಿಗೆ ಕಬ್ಬಿಣದ ಮೆಶ್ ಹಾಕಿ ಬಿಗಿಗೊಳಿಸಲಾಗಿದೆ, ಅಂದ್ರೆ ಆ ಹೆದ್ದಾರಿಯ ಕಾರ್ಯನಿಷ್ಠೆ ಬದ್ದತೆಯನ್ನು ಊಹಿಸಬಹುದು.
ಕೊನೆಯದಾಗಿ ಟೋಲ್ ರೇಟ್ ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ವರ್ಷದಿಂದ ವರ್ಷಕ್ಕೆ ಟೋಲ್ ಫೀಯನ್ನು ಕಡಿಮೆಗೊಳಿಸುತ್ತ ಬರ್ತಿದಾರೆ. ಅಂತಹ ಅತ್ತ್ಯುತ್ತಮ ರಸ್ತೆಯಲ್ಲಿ ಈಗ ಕಾರಿಗೆ ಹದಿನೈದು ರೂಪಾಯಿ ಮಾತ್ರ.
ಇಂತಹ ರಸ್ತೆಗಳು ನಮ್ಮ ರಾಜ್ಯದಲ್ಲಿಯೇ ಇವೆ. ಈ ರಸ್ತೆಗಳ ನಿರ್ಮಾತೃರು ನಮ್ಮವರೇ. ಉತ್ತರ ಕರ್ನಾಟಕದ ಜನರಿಗೆ ಅದೇಷ್ಟು ಅನುಕೂಲವಾಗಿರಬಹುದು ಊಹಿಸಿ.
ನೂರು ಕಿಮಿ ರಸ್ತೆ ಸಂಚರಿಸಲು ಉತ್ತಮ ವಾಹನದಲ್ಲಿ ಕೇವಲ ಒಂದು ಗಂಟೆಯ ಸಮಯ ಸಾಕು. ವಾಹನಗಳ ನಿರ್ವಹಣಾ ಶುಲ್ಕಕ್ಕೂ ಕಡಿತ ಬೀಳುತ್ತಿದೆ.
ದಕ ಬುದ್ದಿವಂತರ ಜಿಲ್ಲೆ ಎಂಬ ಜಂಭದ ನಮಗೆ ಉತ್ತಮ ರಸ್ತೆಗಳು ಮರಿಚೀಕೆಯಾಗಿವೆ. ಜಗತ್ತಿನ ಯಾವುದೇ ಹೆದ್ದಾರಿಯಲ್ಲಿ ಕಾಣಸಿಗದ ಸಿಂಗಲ್ ಸೈಡ್ ಪ್ಲೈಓವರ್ ನಮ್ಮಲ್ಲೆ ಇವೆ ! ಅಂದ್ರೆ ಅದು ನಮ್ಮ ಜಿಲ್ಲೆಯ ದೌರ್ಭಾಗ್ಯ ಅಲ್ಲದೇ ಬೇರಲ್ಲ.
ರಸ್ತೆಯನ್ನು ಪೂರ್ಣಗೊಳಿಸದೇ ಟೋಲ್ ಆರಂಭವಾದರೂ ನಾವು ಕೇಳಲ್ಲ, ಟೋಲ್ ಕಟ್ಟಿದ ಬಳಿಕವೂ ರಸ್ತೆಯನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ಏನು ಧಾಡಿ ಈ ಕಂಪನಿಗಳಿಗೆ ಎಂದೂ ಪ್ರಶ್ನಿಸುವುದಿಲ್ಲ. ನಮ್ಮ ಅಧಿಕಾರಿಗಳಿಗೆ ಬೇಜಾವಾಬ್ದಾರಿ ಹಾಗೂ ಜನಪ್ರತಿನಿಧಿಗಳಿಗೆ ಉಢಾಪೆ ಮತ್ತು ಆಲಸ್ಯ.
ನಮ್ಮ ಜನಪ್ರತಿನಿಧಿಗಳನ್ನು ಏನಾದ್ರೂ ಪ್ರಶ್ನೆ ಮಾಡಿದರೆ ಸಾಕು ಅವರು ಸಾಕಿದ ಚೇಲಾಗಳು ಮಂಗಗಳಂತೆ ಮೇಲೆರಗಿ ಕೇಳಿದವನನ್ನು ಹೈರಾಣು ಮಾಡುತ್ತಾರೆ.
ಇದಕ್ಕಾಗಿ ಊರದ ಉಸಾಬರಿ ಎಂಕ್ಲೆಗ್ ದಾಯ್ ಮಾರೆ! ಅಂತ ಕಾಳಜಿ ಇರುವವರೂ ಹಿಂದೆ ಸರಿತಿದಾರೆ. ಆದರೆ ಇದು ಹಿಂದೆ ಸರಿಯುವ ಸಮಯವಲ್ಲ ಪ್ರಶ್ನಿಸುವ ಸಮಯ.
ಅಂದು ಪಡೀಲ್ ಅಂಡರ್ ಪಾಸ್ ಅಡಿಯಲ್ಲಿ ಸಿಕ್ಕಿಹಾಕಿಕೊಂಡ ಬೃಹತ್ ಮಶೀನ್ ಹೊತ್ತ ಲಾರಿ ಸಿಕ್ಕಿಹಾಕಿಕೊಂಡಿತ್ತು. ಮತ್ತೊಮ್ಮೆ ಪಂಪವೆಲ್ ಪ್ಲೈಒವರ್ ಅಡಿಯಲ್ಲಿ ಕಂಟೆನರ್ ಸಿಕ್ಕಿಹಾಕಿಕೊಂಡಿತ್ತು. ಯಾವುದೇ ಹೈವೆಯಲ್ಲಿ ಹದಿನೆಂಟು ಅಡಿ ಅಂಡರ್ ಪಾಸ್ ಇಲ್ಲ.
ಇಪ್ಪತ್ತು ನಾಲ್ಕು ಅಡಿ ದೊಡ್ಡದಿರುತ್ತೆ. ಇಲ್ಲಿಯ ಹೈವೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ನಮ್ಮ ಪಡೀಲ್ ಅಂಡರ್ ಪಾಸ್ ಮತ್ತು ಪಂಪವೆಲ್ ಪ್ಲೈಒವರ್ 18 ಅಡಿ ಎತ್ತರ ಮಾತ್ರವಾಗಿದೆ. ಇದನ್ನು ಅನೇಕರು ಅಂದೇ ಪ್ರಶ್ನೆ ಮಾಡಿದ್ದರು.
ಯಾರಾದರೂ ಅಂಡರ್ ಪಾಸ್ ಬಗ್ಗೆ ಮಾತನಾಡಿದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕುತ್ತೇವೆ ಅಂತ ನಮ್ಮ ಜನಪ್ರತಿನಿಧಿಗಳು ನ್ಯೂಸ್ ಪೇಪರ್ ನಲ್ಲಿಯೇ ಧಮಕಿ ಹಾಕಿದ್ದರು. ಏನ್ ಸ್ವಾಮಿ ನಮ್ಮ ಕಥೆ!! ಹೀಗಾದರೆ ಮುಗೀತು. ನಿಮ್ಮನ್ನ ಪ್ರಶ್ನಿಸಬಾರದು, ನಿಮ್ಮನ್ನ ಏನೂ ಕೇಳಬಾರದು,
ಐದು ವರ್ಷಕ್ಕೆ ಒಮ್ಮೆ ನಿಮಗೆ ಓಟು ಹಾಕಬೇಕು ಅಂತಿರಲ್ಲ. ನಿಮಗೆಲ್ಲ ಆತ್ಮಸಾಕ್ಷಿ ಅನ್ನುವುದಿದ್ದರೆ ನಿಮಗೆ ನೀವೆ ಪ್ರಶ್ನೆ ಹಾಕಿಕೊಳ್ಳಿ.
ಕೊನೆಯದಾಗಿ ಅನ್ಯ ಜಿಲ್ಲೆಯವರನ್ನು ನೋಡಿ ಕಲಿಯಬೇಕಾದದ್ದು ಬೆಟ್ಟದಷ್ಟಿದೆ. ಶಿವಮೊಗ್ಗ ರಸ್ತೆಗಳನ್ನು
ನೋಡಿ, ಹಾಸನದ ಅಭಿವೃದ್ಧಿ ಕಾರ್ಯ ನೋಡಿ, ಉತ್ತರ ಕರ್ನಾಟಕದಲ್ಲಿರುವ ಹೆದ್ದಾರಿಗಳನ್ನು ನೋಡಿ! ಹೇಗಿವೆ ಅಂತ ತಿಳಿಯುತ್ತೆ. ನಾವುಗಳು ಅವರನ್ನು
‘ಘಟ್ಟದಕಲ’ ಅಂತ ಲೇವಡಿ ಮಾಡಿದ್ದೆ ಬಂತು. ಆಮೆ ಮೊಲದ ಕಥೆಯಂತೆ ನಮಗೆ ಪರಿಸ್ಥಿತಿ ಬಂದೊದಗಿದೆ. ಆದ್ದರಿಂದ ತುಳುವರೇ ನಾವು ಎಚ್ಚರಗೊಳ್ಳಬೇಕಿದೆ.
ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳು ನಮ್ಮ ಹಕ್ಕು. ರಾಜಕಾರಣಿ ಅಧಿಕಾರಿಗಳಾದಿಯಾಗಿ ಸಂಬಂಧಪಟ್ಟವರನ್ನು ಪ್ರಶ್ನಿಸುವ ಧಾರ್ಷ್ಯವನ್ನು ತೋರೋಣ ಅಭಿವೃದ್ಧಿಯತ್ತ ಹೆಜ್ಜೆ ಹಾಕೋಣ.
ದಿಲ್ ರಾಜ್ ಆಳ್ವ
#ಹೃದಯಾಂತರಾಳದಿಂದ
DAKSHINA KANNADA
15 ಸಾವಿರ ಸಂಬಳ..! ಮನೆಯಲ್ಲಿ ಕಂತೆ ಕಂತೆ ನೋಟು..! ED ಅಧಿಕಾರಿಗಳೇ ಶಾಕ್..!
ಮಂಗಳೂರು ( ಜಾರ್ಖಂಡ್ ): ಆತ ತಿಂಗಳಿಗೆ 15 ಸಾವಿರ ಸಂಬಳ ಪಡೆಯುವ ಒಬ್ಬ ಸಾಮಾನ್ಯ ನೌಕರ. ಆದ್ರೆ ಆತನ ಮನೆಗೆ ಇಡಿ ದಾಳಿ ಮಾಡಿ ಬರೋಬ್ಬರಿ 30 ಕೋಟಿ ಹಣವನ್ನು ಜಪ್ತಿ ಮಾಡಿದೆ. ಇದು ಜಾರ್ಖಂಡ್ನಲ್ಲಿ ನಡೆದ ಘಟನೆಯಾಗಿದ್ದು, ಹತ್ತು ಸಾವಿರ ಲಂಚ ಪ್ರಕರಣದ ಸಂಬಂಧ ತನಿಖೆ ನಡೆಸಿದ್ದ ಇಡಿ ಸಾಮಾನ್ಯ ನೌಕರನ ಮನಗೆ ದಾಳಿ ಮಾಡಿತ್ತು. ಅಲ್ಲಿ ಅಡಗಿಸಿಟ್ಟಿದ್ದ ಹಣ ನೋಡಿ ಇಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಹಣ ಎಣಿಸಲು ಮೆಷಿನ್ ಹಾಗೂ ಹೆಚ್ಚುವರಿ ನೌಕರರನ್ನು ಮನೆಗೆ ಕರೆಸಿಕೊಂಡಿದ್ದಾರೆ.
ನೌಕರನ ಮನೆಗೆ ಲಂಚದ ಹಣ…!
ಜಾರ್ಖಂಡ್ ನ ಸಚಿವ ಅಲಂಗೀರ್ ಆಲಂ ಅವರ ಖಾಸಗಿ ಕಾರ್ಯದರ್ಶಿ ಮನೆ ಮೇಲೆ ರಾಂಚಿಯ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಅಲಂಗೀರ್ ಆಲಂ ಅವರ ಸಚಿವಾಲಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಅಲ್ಲಿನ ಲಂಚದ ಹಣ ನೌಕರನ ಮನೆಗೆ ಹೋಗುತ್ತದೆ ಅನ್ನೋ ಮಾಹಿತಿ ಸಿಕ್ಕಿತ್ತು. ಹೀಗಾಗಿ ಸಚಿವರ ಆಪ್ತ ಕಾರ್ಯದರ್ಶಿಯ ಅಡಿಯಲ್ಲಿ ಮಾಸಿಕ 15 ಸಾವಿರಕ್ಕೆ ಕೆಲಸ ಮಾಡುತ್ತಿದ್ದ ನೌಕರನ ಮನೆಗೆ ದಾಳಿ ಮಾಡಿದಾಗ ಇಷ್ಟೊಂದು ಪ್ರಮಾಣದ ಹಣ ಪತ್ತೆಯಾಗಿದೆ.
ವಿಡಿಯೋ ನೋಡಿ :
ಹತ್ತು ಸಾವಿರ ಲಂಚದ ಹಿಂದೆ ಬಿದ್ದಿದ್ದ ಇಡಿ..!
ಕಳೆದ ವರ್ಷ ಹತ್ತು ಸಾವಿರ ರೂಪಾಯಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಇಂಜೀನಿಯರ್ ಮನೆ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ ಇಂಜೀನಿಯರ್ ಅವರ ಹೇಳಿಕೆಯನ್ನು ದಾಖಲಿಸಿದಾಗ ಲಂಚದ ಹಣ ಸಚಿವರಿಗೆ ತಲುಪಿಸಲಾಗುತ್ತದೆ ಎಂಬ ಸ್ಪೋಟಕ ಹೇಳಿಕೆ ನೀಡಿದ್ದರು. ಬಳಿಕ ಜಾರ್ಖಂಡ್ನ ಗ್ರಾಮೀಣ ಅಭಿವೃದ್ದಿ ಸಚಿವ ಅಲಂಗೀರ್ ಆಲಂ ಹಾಗೂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಹೆಸರು ಮುನ್ನಲೆಗೆ ಬಂದಿತ್ತು . ಹೀಗಾಗಿ ಸಂಜೀವ್ ಲಾಲ್ ಅವರ ಬಳಿ ನೌಕರನಾಗಿದ್ದ ವ್ಯಕ್ತಿಯ ಮನೆಗೆ ದಾಳಿ ಮಾಡಲಾಗಿದೆ.
ಇದನ್ನೂ ಓದಿ : ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು..!
ಜಾರ್ಖಂಡ್ ಕಾಂಗ್ರೆಸ್ ಸರ್ಕಾರದ ಸಚಿವ…!
ಅಲಂಗೀರ್ ಆಲಂ ಜಾರ್ಖಂಡ್ನ ಪಾಕುರ್ ಕ್ಷೇತ್ರದಿಂದ ನಾಲ್ಕು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈಗ ಸರ್ಕಾರದಲ್ಲಿ ಸಂಸದೀಯ ವ್ಯವಹಾರ ಮತ್ತು ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದಾರೆ. ಈ ಹಿಂದೆ 2006 ರಿಂದ 2009 ರ ವರೆಗೆ ಅವರು ಸ್ಪೀಕರ್ ಕೂಡಾ ಆಗಿದ್ದರು. 2023ರ ಡಿಸೆಂಬರ್ ತಿಂಗಳಲ್ಲಿ ಜಾರ್ಖಂಡ್ನ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಉದ್ಯಮಿ ಧೀರಜ್ ಸಾಹು ಮನೆ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಮನೆಯಲ್ಲಿ 350 ಕೋಟಿಯಷ್ಟು ಹಣ ಪತ್ತೆಯಾಗಿತ್ತು. ಈ ವೇಳೆ ಧೀರಜ್ ಸಾಹು ಅದು ಮದ್ಯದ ವ್ಯವಹಾರದ ಹಣವಾಗಿದ್ದು, ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದರು.
DAKSHINA KANNADA
ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು..!
ಬಂಟ್ವಾಳ : ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ಬಂಟ್ವಾಳದ ನಾವೂರು ಎಂಬಲ್ಲಿ ಭಾನುವಾರ(ಎ.5) ಸಂಜೆ ನಡೆದಿದೆ. ಉಳ್ಳಾಲ ನಿವಾಸಿಗಳಾದ ಅನ್ಸಾರ್ ಅವರ ಪುತ್ರಿ ಅಶ್ರಾ (11) ಮತ್ತು ಇಲಿಯಾಸ್ ಅವರ ಪುತ್ರಿ ಮರಿಯಮ್ ನಾಶೀಯಾ (14 )ಮೃತಪಟ್ಟ ಬಾಲಕಿಯರು.
ಮುಂದೆ ಓದಿ..; ಬರ್ಬರ ಹತ್ಯೆಯಾದ ಬ್ಯೂಟಿ ಕ್ವೀನ್.!! ಮುಳುವಾಯಿತಾ ಇನ್ಸ್ಟಾಗ್ರಾಮ್ ಪೋಸ್ಟ್..! ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ
ಮೂಲತಃ ನಾವೂರ ನಿವಾಸಿಯಾದ ಇಲಿಯಾಸ್ ಅವರು ಇತ್ತೀಚಿಗೆ ಉಳ್ಳಾಲದಲ್ಲಿ ಮನೆ ಕಟ್ಟಿಸಿದ್ದರು. ನಿನ್ನೆ ನಾವೂರು ಮೈಂದಾಳದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಸಂಜೆ ವೇಳೆ ಮನೆಯವರ ಜತೆಗೆ ನಾವೂರಿನ ನೀರಕಟ್ಟೆ ಎಂಬಲ್ಲಿ ನೇತ್ರಾವತಿ ನದಿಗೆ ತೆರಳಿದ್ದರು. ಈ ವೇಳೆ ಮನೆ ಮಂದಿ ಇರುವಾಗಲೇ ಮಕ್ಕಳು ನೀರಿನಲ್ಲಿ ಆಟ ಆಡುತ್ತಾ ಇದ್ದರು. ಈ ಸಂದರ್ಭದಲ್ಲಿ ಇಬ್ಬರು ಮಕ್ಕಳು ಏಕಾ ಏಕಿ ನೀರಿನಲ್ಲಿ ಮುಳುಗಿದ್ದಾರೆ. ನೀರಿನಲ್ಲಿ ಮುಳುಗುವುದನ್ನು ಕಣ್ಣಾರೆ ಕಂಡರೂ ಈಜು ಬಾರದ ಕಾರಣ ಮಕ್ಕಳನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
DAKSHINA KANNADA
‘ಅಡ್ಡಣ ಪೆಟ್ಟು’ ದೈವಾರಾಧನೆಯ ವಿಶೇಷ ಆಚರಣೆ…! ಇದು ಸೌಹಾರ್ದತೆ ಬಯಸೋ ದೈವ..!
ಮಂಗಳೂರು : ತುಳುನಾಡಿನ ದೈವಾರಾಧನೆಯಲ್ಲಿ ಒಂದಕ್ಕಿಂತ ಒಂದು ವಿಶೇಷವಾದ ಆಚರಣೆ ಹಾಗೂ ನಂಬಿಕೆಗಳು ಇದೆ. ಅದು ಪ್ರದೇಶದಿಂದ ಪ್ರದೇಶಕ್ಕೆ ಒಂದಷ್ಟು ಬದಲಾವಣೆಯೊಂದಿಗೆ ನಡೆಯುತ್ತದೆ ಕೂಡಾ. ಕೇರಳದ ಗಡಿಗೆ ಹೊಂದಿಕೊಂಡಿರುವ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ನಡೆಯೋ ದೈವಾರಾಧನೆ ಕೂಡಾ ಅದೇ ರೀತಿಯಾದ ವಿಶೇಷ ಆಚರಣೆಯೊಂದಕ್ಕೆ ಹೆಸರಾಗಿದೆ. ಇಲ್ಲಿನ ಶ್ರೀ ಮಹಾವಿಷ್ಣುಮೂರ್ತಿ ದೇವರ ಜಾತ್ರೆಯ ಬಳಿಕ ನಡೆಯುವ ದೈವದ ನೇಮದಲ್ಲಿ ‘ಅಡ್ಡಣ ಪೆಟ್ಟು’ ಅನ್ನೋ ಸಂಪ್ರದಾಯವಿದೆ. ಗ್ರಾಮದ ಜಾತ್ರೆಯ ಪ್ರಮುಖ ಆಕರ್ಷಣೆ ಕೂಡಾ ಇದೇ ಆಗಿದ್ದು, ಇದನ್ನು ನೋಡಲೆಂದೆ ಸಾವಿರಾರು ಜನ ಬರ್ತಾರೆ.
ನಾಲ್ಕು ಮನೆತನಗಳ ನಡುವೆ ಹೊಡೆದಾಟ…!
‘ಅಡ್ಡಣ ಪೆಟ್ಟು’ ಇದು ಮಂಡೆಕೋಲು ಗ್ರಾಮದ ಜಾತ್ರೆ ಮುಗಿದ ಬಳಿಕ ನಡೆಯುವ ಉಳ್ಳಾಕುಲು ಹಾಗೂ ಪರಿವಾರ ದೈವದ ನೇಮದಲ್ಲಿ ಕಾಣುವ ದೃಶ್ಯ. ನಾಲ್ಕು ಗೌಡ ಮನೆತನದವರು ಬೆತ್ತದ ಗುರಾಣಿ ಹಿಡಿದು ಕೋಲಿನಿಂದ ಹೊಡೆದಾಡುವುದೇ ಈ ‘ಅಡ್ಡಣ ಪೆಟ್ಟು’ ಅನ್ನೋ ವಿಶಿಷ್ಠ ಆಚರಣೆ. ದೇವಸ್ಥಾನಕ್ಕೆ ಸಂಬಂಧಪಟ್ಟ ಕೇನಾಜೆ- ಮಾವಜಿ, ಮುರೂರು- ಬೊಳುಗಲ್ಲು ಎಂಬ ನಾಲ್ಕು ಗೌಡ ಮನೆತನಗಳು ಈ ರೀತಿ ಹೊಡೆದಾಟ ನಡೆಸ್ತಾರೆ. ಈ ವೇಳೆ ಉಳ್ಳಾಕುಲು ದೈವ ಮದ್ಯಪ್ರವೇಶ ಮಾಡಿ ಜಗಳ ಬಿಡಿಸುತ್ತದೆ. ಇದು ನೋಡಲು ಕೂಡಾ ಸಾಕಷ್ಟು ಕುತೂಹಲವಾಗಿದ್ದು, ಇದರ ಜೊತೆ ದೈವದ ಸಂದೇಶ ಕೂಡಾ ಇದೆ.
‘ಅಡ್ಡಣ ಪೆಟ್ಟು’ವಿನ ಹಿಂದೆ ಇದೆ ದೈವದ ಸಂದೇಶ..!
ಮಂಡೆಕೋಲು ನೇಮದಲ್ಲಿ ಅಡ್ಡಣ ಪೆಟ್ಟು ಸಂಪ್ರದಾಯಕ್ಕೆ ಬೇರೆ ಬೇರೆ ಐಹಿತ್ಯವಿದೆ. ಅಡ್ಡಣಪೆಟ್ಟು ನಡೆದರೆ ಊರಲ್ಲಿ ಮುಂದೆ ಗಲಾಟೆ, ಹೊಡೆದಾಟಗಳು ಸಂಭವಿಸುವುದಿಲ್ಲ ಎಂಬ ನಂಬಿಕೆಯೂ ಊರಿನ ಭಕ್ತ ಜನರಲ್ಲಿದೆ. ನಾಲ್ಕೂರಿನ ಜಗಳವನ್ನು ದೈವ ಬಿಡಿಸುವುದು, ಗಲಾಟೆ ಮಾಡದೆ ಸೌಹಾರ್ದದಿಂದ ಬಾಳಿ ಎನ್ನುವ ಸಂದೇಶವೂ ಈ ಆಚರಣೆಯಲ್ಲಿದೆ. ಪುರಾತನ ಕಾಲದಲ್ಲಿ ಯಾವುದೋ ಗಲಾಟೆ ನಡೆದ ಸಂದರ್ಭ ಉಳ್ಳಾಕುಲು ದೈವ ಬಂದು ಗಲಾಟೆ ಬಿಡಿಸಿ ಪರಸ್ಪರ ಸಂದಾನ ನಡೆಸಿತ್ತು ಎಂಬ ಪ್ರತೀತಿಯೂ ಇದೆ. ಇದೇ ಕಾರಣದಿಂದ ಪ್ರತಿ ವರ್ಷ ಉಳ್ಳಾಕುಲು ನೇಮದ ಸಂದರ್ಭ “ಅಡ್ಡಣ ಪೆಟ್ಟು” ಒಂದು ಸಂಪ್ರದಾಯವಾಗಿ ನಡೆದು ಬರುತ್ತಿದೆ.
‘ಅಡ್ಡಣ ಪೆಟ್ಟು’ವಿನ ಆಚರಣೆ ಹೇಗೆ ?
ನೇಮೋತ್ಸವ ದಿನದಂದು ಉಳ್ಳಾಕುಲು ದೈವದ ಭಂಡಾರ ತೆಗೆದ ಬಳಿಕ ದೈವ ಸಹಿತ ನಾಲ್ಕೂರಿನ ಪ್ರತಿನಿಧಿಗಳು, ದೈವರ ಪರಿಚಾರಕರು ದೇವಸ್ಥಾನದ ಸಮೀಪದ ಗದ್ದೆಯಲ್ಲಿರುವ ಕಟ್ಟೆಗೆ ತೆರಳುತ್ತಾರೆ. ಕೇನಾಜೆ- ಮಾವಜಿ, ಮುರೂರು-ಬೊಳುಗಲ್ಲು ಮನೆತನಕ್ಕೆ ಸೇರಿದ ನಾಲ್ವರು ಪ್ರತಿನಿಧಿಗಳು ಸಮವಸ್ತ್ರ ಧರಿಸಿ ದಂಡ ಮತ್ತು ಗುರಾಣಿ (ಅಡ್ಡಣ) ಹಿಡಿದು ದೈವದ ಜತೆಯಲ್ಲಿ ತೆರಳುತ್ತಾರೆ. ಕಟ್ಟೆಯ ಬಳಿ ತೆರಳಿದ ಬಳಿಕ ಕೆಲವೊಂದು ಸಂಪ್ರದಾಯ ಆಚರಣೆಗಳು ನಡೆದು ಅಡ್ಡಣ ಹಿಡಿದ ಯುವಕರು ಅಡ್ಡಣವನ್ನು ನೆಲದಲ್ಲಿ ಎದುರು ಬದುರಾಗಿ ಇಡುತ್ತಾರೆ. ಲಾಠಿ ಮಾದರಿಯ ಹೊಡೆಯುವ ದಂಡವನ್ನು ಕೈಯಲ್ಲಿ ಹಿಡಿದಿರುತ್ತಾರೆ. ಇತ್ತ ಅಡ್ಡಣ ಹೊಡೆತದಲ್ಲಿ ಭಾಗವಹಿಸುವ ನಾಲ್ವರು ಯುವಕರಿಗೆ ಬೆನ್ನು ಹಾಕಿ ನಿಂತಿರುವ ಉಳ್ಳಾಕುಲು ದೈವಕ್ಕೆ ಅಣಿಯನ್ನು ಕೂರಿಸಲಾಗುತ್ತದೆ. ಅಣಿ ಇಟ್ಟ ಬಳಿಕ ತುಳು ನುಡಿಗಟ್ಟೊಂದನ್ನು ಹೇಳಲಾಗುತ್ತದೆ. ಈ ನುಡಿಗಟ್ಟು ಮುಗಿಯುತ್ತಿದ್ದಂತೆ ದೈವದ ಪರಿಚಾರಕರೊಬ್ಬರು ಅಡ್ಡಣ ಹೊಡೆತಕ್ಕೆ ಅಣಿಯಾಗಿ ನಿಂತಿರುವ ಯುವಕರತ್ತ ಕಲಶದ ನೀರಿನಿಂದ ಪ್ರೋಕ್ಷಣೆ ಮಾಡುತ್ತಾರೆ. ಕಲಶ ಪ್ರೋಕ್ಷಣೆ ಆಗುತ್ತಿದ್ದಂತೆ ಎದುರು ಬದುರಾಗಿ ನಿಂತಿರುವ ಯುವಕರು ನೆಲದಲ್ಲಿಟ್ಟ ಅಡ್ಡಣವನ್ನು ಕೈಗೆ ಎತ್ತಿಕೊಂಡು ಅದನ್ನು ಗುರಾಣಿಯಂತೆ ಹಿಡಿದು ಎದುರುಬದುರಾಗಿ ಹೊಡೆದಾಟ ಆರಂಭಿಸುತ್ತಾರೆ. ಪ್ರತಿಯೊಬ್ಬರೂ ಎದುರು ಪ್ರತಿನಿಧಿಯ ಕೈಯಲ್ಲಿ ಹಿಡಿದಿರುವ ಅಡ್ಡಣಕ್ಕೆ ಹೊಡೆಯಬೇಕೆಂಬ ನಿಯಮವೂ ಇದೆ. ಹೊಡೆದಾಟ ಜೋರಾಗುತ್ತಿದ್ದಂತೆ ಬೆನ್ನು ಹಾಕಿ ನಿಂತಿರುವ ಉಳ್ಳಾಕುಲು ದೈವ ಬಂದು ಹೊಡೆದಾಟವನ್ನು ಬಿಡಿಸುತ್ತದೆ.
- DAKSHINA KANNADA3 days ago
ಸುಬ್ರಹ್ಮಣ್ಯ: ಕೆಎಸ್ಸಾರ್ಟಿಸಿ ಬಸ್ಗಳ ಹಗಲು ದರೋಡೆ..! ಏನಿದು ಘಟನೆ?
- FILM5 days ago
ಬಿಗ್ ಬಾಸ್ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ನಮ್ರತಾ ಗೌಡ!
- dehali4 days ago
ನಾಯಿಗಳಿಗೂ ಬಂತು ಆಧಾರ್ ಕಾರ್ಡ್.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?
- BELTHANGADY4 days ago
ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು