LATEST NEWS
“ಬಂಟನಾಗಬೇಕಾದರೆ ಆತನಿಗೆ ಎಂಟೆದೆ ಬೇಕು ಅದು ನಿಮ್ಮ ರಕ್ತದಲ್ಲಿದೆ”
ಮಂಗಳೂರು: ಬಂಟನಾಗಬೇಕಾದರೆ ಆತನಿಗೆ ಎಂಟೆದೆ ಬೇಕು. ಅದು ನಿಮ್ಮ ರಕ್ತದ ಕಣದಲ್ಲಿದೆ. ಯಾವುದು ಜಗತ್ತಿಗೆ ಅಸಾಧ್ಯವೋ ಅದನ್ನು ನೀವು ಸಾಧ್ಯ ಮಾಡಿ ತೋರಿಸಿದ್ದು ಬಂಟರು ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಹಾರಾಷ್ಟ್ರದ ಬಂಟ ಸಂಘ ಪುಣೆ ಇದರ ನಾಲ್ಕನೇ ವರ್ಷಾಚರಣೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನೀವು ನಮ್ಮವರು ನಮ್ಮೂರಿನವರು. ಮಣ್ಣಿನ ಹಾಗೂ ತಾಯಿ ಖುಣ ಭಾರೀ ಮಹತ್ವದ್ದು.
ಯಾರೂ ಮಣ್ಣಿನ ಖುಣವನ್ನು ಮನಸ್ಸಿನಲ್ಲಿಟ್ಟುಕೊಂಡು ತೀರಿಸುವ ಪ್ರಯತ್ನ ಮಾಡುತ್ತಾರೆ ಅವರೇ ನಿಜವಾದ ಬಂಟರು ಎಂದು ತಿಳಿದುಕೊಂಡಿದ್ದೇನೆ. ಬಂಟ ಅನ್ನು ಹೆಸರಿನಲ್ಲಿಯೇ ಶಕ್ತಿ ಇದೆ. ಈ ನಾಮ ಪಡೆದ ನೀವು ಧನ್ಯರು.
ನಿಮ್ಮೂರಲ್ಲಿ ಶಕ್ತಿ ಪ್ರದರ್ಶನ ಮಾಡುವುದು ದೊಡ್ಡದಲ್ಲ. ಆದರೆ ನೀವು ಎಲ್ಲೆ ಹೋದರೂ ನಿಮಗೊಂದು ಗೌರವ ಇದೆ. ಕೆಲವೆಡೆ ಬಂಟರ ಹೆಸರು ಕೇಳಿದರೆ ಎರಡು ಹೆಜ್ಜೆ ಹಿಂದೆ ನಿಂತು ಮಾತನಾಡುತ್ತಾರೆ.
ನೀವು ಎಲ್ಲಿದ್ದಿರಿ ಅಲ್ಲಿ ಸ್ನೇಹ, ಪ್ರೀತಿ ವಿಶ್ವಾಸದಿಂದ ಗೆದ್ದಿದ್ದೀರಿ. ಬಂಟ ಸಂಘದಿಂದ ಕನ್ನಡದ ಗುರುತಿಸಿದ್ದೀರಿ. ನಿಮ್ಮ ಹೆಸರಿನ ಜೊತೆ ಊರಿನ ಹೆಸರು ಹಾಕುವುದನ್ನು ಮರೆತಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಪ್ರಕಾಶ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಸಂತೋಷ್ ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಪ್ರವೀಣ್ ಶೆಟ್ಟಿ ಗುರ್ಮೆ, ಸುರೇಶ್ ಶೆಟ್ಟಿ ಸೇರಿ ಹಲವರಿದ್ದರು.
DAKSHINA KANNADA
ದೈವದ ಕಾರ್ಯಕ್ಕೆ ಮುಸ್ಲೀಮರಿಗೆ ಆಹ್ವಾನ…!
ಮಂಗಳೂರು : ಕರಾವಳಿಯಲ್ಲಿ ಅದೆಷ್ಟೇ ಹಿಂದೂ ಮುಸ್ಲಿಂ ಅನ್ನೋ ಸಂಘರ್ಷಗಳು ನಡೆದರೂ ಬಹುತೇಕ ಕಡೆಗಳಲ್ಲಿ ಎರಡೂ ಧರ್ಮದವರು ಸಾಮರಸ್ಯದಿಂದಲೇ ಇದ್ದಾರೆ. ಇಂತಹ ಒಂದು ಸಾಮರಸ್ಯಕ್ಕೆ ಸಾಕ್ಷಿಯಾಗಿ ಮಂಗಳೂರು ತಾಲೂಕಿನ ತೆಂಕ ಎಡಪದವು ಗ್ರಾಮ ಸುದ್ದಿಯಾಗಿದೆ. ಇಲ್ಲಿ ಮಾರ್ಚ್ 24 ರಿಂದ 27 ರ ವರೆಗೆ ನಡೆಯುವ ದೈವಗಳ ಕಾರ್ಯಕ್ರಮಕ್ಕೆ ಪದರಂಗಿ ಮಸೀದಿಯವರಿಗೆ ಆಹ್ವಾನ ನೀಡಿದ್ದಾರೆ.
ತೆಂಕ ಎಡಪದವಿನ ಕೊಂದೋಡಿ ಗಡುಸ್ಥಳ ವ್ಯಾಘ್ರ ಚಾಮುಂಡಿ ಮೈಸಂದಾಯ ದೈವಗಳ ಗರ್ಭಕುಂಡ ಹಾಗೂ ಮಹಮ್ಮಾಯಿ ಅಮ್ಮನವರ ಶಿಲಾಮಯ ಕಟ್ಟಯ ಪುನರ್ ಪ್ರತಿಷ್ಠೆ ಹಾಗೂ ನೇಮೋತ್ಸವಕ್ಕೆ ಈ ಆಹ್ವಾನ ನೀಡಲಾಗಿದೆ. ರಂಝಾನ್ ಪ್ರಯುಕ್ತ ನಮಾಜ್ ನಡೆಸುತ್ತಿದ್ದ ಮುಸ್ಲಿಂ ಬಾಂದವರ ನಮಾಜ್ ಮುಗಿಯುವರೆಗೂ ಕಾದೂ ಆಹ್ವನಾ ಪತ್ರ ನೀಡಿ ಸಾಮರಸ್ಯ ಮೆರೆಯಲಾಗಿದೆ. ಇವತ್ತಿನ ದಿನಗಳಲ್ಲಿ ಹಿಂದೂ-ಮುಸ್ಲಿಮರ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಕೋಮು ಸೌಹಾರ್ದತೆ ಹದಗೆಡುತ್ತಿರುವ ದಿನಗಳಲ್ಲಿ ಇವರ ಸಾಮರಸ್ಯದ ನಡೆ ಇತರರಿಗೆ ಮಾದರಿಯಾಗಿದೆ. ಸಮಿತಿಯ ಪದಾಧಿಕಾರಿಗಳಾದ ಸುದರ್ಶನ್ ಪ್ರಭು.ಕೆ, ಇವರ ಮುಂದಾಳತ್ವದಲ್ಲಿ ಪದರಂಗಿಯ ಮುಸ್ಲಿಂ ಬಾಂದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಗ್ರಾಮದ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.
bangalore
35 ಗ್ರಾಮ್ ಕೊಕೇನ್ ಸಹಿತ ಇಬ್ಬರ ಬಂಧನ..!
ಮಂಗಳೂರು : ಕೊಕೇನ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 35 ಗ್ರಾಂ ತೂಕದ ಅಂದಾಜು 2.72 ಲಕ್ಷದ ಕೊಕೇನ್ ವಶಕ್ಕೆ ಪಡೆದುಕೊಂಡಿದ್ದಾರೆ.
ಉಳ್ಳಾಲ ತಾಲೂಕಿನ ಅಂಬ್ಲಮೊಗೆರು ಎಂಬಲ್ಲಿ ಸಿಸಿಬಿ ಈ ಕಾರ್ಯಾಚರಣೆ ನಡೆಸಿದೆ. ಡ್ರಗ್ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಹಿನ್ನಲೆಯಲ್ಲಿ ಕಾರ್ಯಾಚರಣೆ ಮಾಡಲಾಗಿತ್ತು. ಸ್ಥಳೀಯರೇ ಆಗಿರುವು ಸದಕತ್ ಯು. ಹಾಗೂ ಮಹಮ್ಮದ್ ಅಶ್ವಫಕ್ ಎಂಬವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗೋವಾದಿಂದ ಕೋಕೆನ್ ಸಂಪಾದಿಸಿಕೊಂಡು ತಂದಿದ್ದ ಆರೋಪಿಗಳು ಮಂಗಳೂರು ಹಾಗೂ ಕೇರಳದಲ್ಲಿ ಮಾರಾಟದ ಉದ್ದೇಶ ಹೊಂದಿದ್ದರು. ಆದ್ರೆ ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಇವರ ಜೊತೆ ಇನ್ನೂ ಕೆಲವರು ಶಾಮೀಲು ಆಗಿರುವ ಬಗ್ಗೆ ಪೊಲೀಸರಿಗೆ ಅನುಮಾನ ಇದ್ದು ವಿಚಾರಣೆ ನಡೆಸುತ್ತಿದ್ದಾರೆ. ಸದಕತ್ ಈ ಹಿಂದೆಯೂ ಮಾದಕ ವಸ್ತು ಮಾರಾಟ ಜಾಲದಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು ಈತ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಹಳೇ ಪ್ರಕರಣದ ಆರೋಪಿಯಾಗಿದ್ದಾನೆ.
DAKSHINA KANNADA
MANGALORE : ಬಿಜೆಪಿಯನ್ನು ಲೇವಡಿ ಮಾಡಿದ ಪ್ರಕಾಶ್ ರಾಜ್; ಮೋದಿ ಪರಿವಾರದ ಬಗ್ಗೆ ಕಿಡಿ
ಮಂಗಳೂರು : 400 ಸೀಟು ಗೆಲ್ಲುತ್ತೇವೆ ಅಂದಿರುವ ಬಿಜೆಪಿಯ ಹೇಳಿಕೆಗೆ ನಟ ಪ್ರಕಾಶ್ ರಾಜ್ ತಿರುಗೇಟು ನೀಡಿದ್ದು, 420 ಗಳಷ್ಟೇ ಹೀಗೆ ಹೇಳ್ತಾರೆ ಎಂದು ಲೇವಡಿ ಮಾಡಿದ್ದಾರೆ. ಇದು ಅಹಂಕಾರದ ಹೇಳಿಕೆಯಾಗಿದ್ದು, ಇಲ್ಲಿ ಜನರು ಎಲ್ಲವನ್ನೂ ತೀರ್ಮಾನ ಮಾಡ್ತಾರೆ ಎಂದಿದ್ದಾರೆ.
ಹಲವು ರಾಜ್ಯಗಳ ಚುನಾವಣೆಯಲ್ಲಿ ಇಂತಹ ಹೇಳಿಕೆ ನೀಡಿದ್ರೂ ಅಲ್ಲಿ ಏನಾಗಿದೆ ಅನ್ನೋದು ಜನರು ನೋಡಿದ್ದಾರೆ. ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಬಾರದು ಎಂದಿರುವ ಪ್ರಕಾಶ್ ರಾಜ್ ಸಾವಿರಾರು ಕೋಟಿ ಹಣ ಇದೆ ಅನ್ನೋ ಧೈರ್ಯದಲ್ಲಿ ಹೀಗೆ ಮಾತನಾಡ್ತೀರಾ? ಅಂತ ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ.
ಇನ್ನು ಇದೇ ವೇಳೆ ಮೋದಿ ಪರಿವಾರದ ಬಗ್ಗೆ ಹೇಳಿಕೆ ನೀಡಿರುವ ಪ್ರಕಾಶ್ ರಾಜ್ ಇವರ ಪರಿವಾರ ಲಾಟ್ರಿ ಮಾರ್ಟಿನ್, ಫಾರ್ಮಾ ಕಂಪೆನಿ, ಅದಾನಿ ಹಾಗೂ ರೇಪ್ ಮಾಡಿದ ಬ್ರಿಜ್ ಭೂಷಣ್ ಇವರ ಪರಿವಾರ ಎಂದು ಟೀಕಿಸಿದ್ದಾರೆ.
ಪ್ರಧಾನಿ ಮೋದಿಯನ್ನು ಮಹಾಪ್ರಭುಗಳು ಎಂದು ಸಂಭೋದಿಸಿ ಚುನಾವಣಾ ಬಾಂಡ್ ಬಗ್ಗೆ ಮನ್ಕಿ ಬಾತ್ ನಲ್ಲಿ ಮಾತಾಡಿ ಎಂದು ಆಗ್ರಹಿಸಿದ್ದಾರೆ.
ಇಡಿ ರೇಡ್ ಆದ ಕಂಪನಿ ಮಾರನೇ ದಿನವೇ 200 ಕೋಟಿ ಇಲೆಕ್ಟೋರಲ್ ಬಾಂಡ್ ತಕೊಂಡ್ರೆ ಓಕೇನಾ ? ನಿಮ್ಮಲ್ಲಿ ಯಾಕೆ ಇಡಿ ರೇಡ್ ಆಗಲ್ಲ, ನೀವು ದುಡ್ಡು ತಗೋತಿಲ್ವಾ ಅದನ್ನು ಕೇಳಬಾರದಾ? ನಿಮ್ಮ ಮನ್ ಕಿ ಬಾತ್ ನಲ್ಲಿ ಅದನ್ನೆಲ್ಲ ಹೇಳುತ್ತೀರಾ? ಎಂದು ಪ್ರಧಾನಿ ಮೋದಿಗೆ ಪ್ರಶ್ನೆ ಮಾಡಿದ್ದಾರೆ.
ಚುನಾವಣೆಗೆ ಸ್ಪರ್ಧಿಸೋಲ್ಲ :
ಚುನಾವಣೆಯಲ್ಲಿ ದೇಶ ಗೆಲ್ಲಬೇಕು, ದೇಶ ಗೆದ್ದರೆ ದೇಶದ ಜನ ಗೆದ್ದ ಹಾಗೆ ಎಂದು ಹೇಳಿರುವ ಪ್ರಕಾಶ್ ರಾಜ್ ಒಳ್ಳೆಯ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಕರೆ ನೀಡಿದ್ದಾರೆ. ನಾನು ಜನರ ಪಕ್ಷವಾಗಿದ್ದು ನಾನು ಚುನಾವಣೆಗೆ ಸ್ಪರ್ಧಿಸೋದಿಲ್ಲ ಯಾರ ಪರವೂ ಪ್ರಚಾರ ಮಾಡೋದಿಲ್ಲ, ದುಡ್ಡಿನಿಂದ ಪ್ರಕಾಶ್ ರಾಜ್ನನ್ನು ಕೊಂಡು ಕೊಳ್ಳಲು ಆಗೋದಿಲ್ಲ. ಅಂತಹ ದುಡ್ಡು ನಾನು ಪಡೆಯೋದಿಲ್ಲ ಎಂದು ಚುನಾವಣಾ ಪ್ರಚಾರಕ್ಕೆ ಹೋಗದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನಾನು ಜನರ ನಡುವೆ ನಿಂತು ಜನರ ಪರವಾಗಿ ಜನರಿಗೋಸ್ಕರ ಪ್ರಶ್ನೆ ಮಾಡ್ತೇನೆ ಎಂದು ಹೇಳಿದ್ದಾರೆ.
ನನಗೆ ಎಲ್ಲಾ ಪಕ್ಷದವರೂ ಒಂದೇ ಆಗಿದ್ದಾರೆ. ರಾಜಕಾರಣಿಗಳಲ್ಲಿ ಒಬ್ಬನಿಗೆ ಬಿಲ್ಡಿಂಗ್ ಇದ್ರೆ ಮತ್ತೊಬ್ಬ ಅಲ್ಲಿ ಬಾರ್ ನಡೆಸ್ತಾನೆ. ಎಲ್ಲಾ ಪಕ್ಷದ ನಾಯಕರದ್ದೂ ಹೊಂದಾಣಿಕೆಯ ರಾಜಕೀಯ ಎಂದು ರಾಜಕೀಯ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಣಿಪುರ ಹೆಣ್ಣುಮಕ್ಕಳ ಬಗ್ಗೆ ಮಾತನಾಡದವರು ಮಹಿಳಾ ದಿನಾಚರಣೆಗೆ ಗ್ಯಾಸ್ ಬೆಲೆ ಕಡಿಮೆ ಮಾಡ್ತಾರೆ. ಎಲೆಕ್ಟ್ರೋರಲ್ ಬಾಂಡ್ ಮೂಲಕ ಹಣ ಲೂಟಿ ಮಾಡ್ತಾರೆ. ಬಾಂಡ್ ಕೊಟ್ಟವರಿಗೆ ಕಾಂಟ್ರಾಕ್ಟ್ ಕೊಡ್ತಾರೆ. ಆದ್ರೆ ಅಭಿವೃದ್ದಿ ಮಾಡಿದ್ದಾಗಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಆರೊಪಿಸಿದ್ದಾರೆ.
- FILM7 days ago
ಡೀಪ್ಫೇಕ್ ಮೂಲಕ ಮತ್ತೊಮ್ಮೆ ಸುದ್ದಿಯಾದ ರಶ್ಮಿಕಾ ಮಂದಣ್ಣ…!
- LATEST NEWS7 days ago
ಜೆ.ಪಿ.ಹೆಗ್ಡೆಗೆ ಉಡುಪಿ-ಚಿಕ್ಕಮಗಳೂರು “ಕೈ” ಟಿಕೇಟ್.!!!
- LATEST NEWS3 days ago
ಡಿವಿಜಿ ಸಾಲು ಹಂಚಿಕೊಂಡು ವಿರೋಧಿಗಳಿಗೆ ಟಾಂಗ್ ಕೊಟ್ಟ ಪ್ರತಾಪ್ ಸಿಂಹ!
- DAKSHINA KANNADA6 days ago
Vitla ; 1400 ಕೋಟಿ ಅನುದಾನ ತಂದಿರುವ ಬಗ್ಗೆ ನಾನು ಲೆಕ್ಕ ಕೊಡ್ತೇನೆ ಬನ್ನಿ : ಪುತ್ತೂರು ಶಾಸಕ ರೈ ಸವಾಲು