LATEST NEWS
ಚೆಕ್ ಬೌನ್ಸ್ ಪ್ರಕರಣ: ತಲೆಮರೆಸಿಕೊಂಡ ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ
ಉಳ್ಳಾಲ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದ್ದು, ಕೊಣಾಜೆ ಠಾಣಾ ಪೊಲೀಸರು ಅಧ್ಯಕ್ಷೆ ತಲೆಮರೆಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಕೊಣಾಜೆ ಗ್ರಾ.ಪಂ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷೆ ಚಂಚಲಾಕ್ಷಿ ತಲೆಮರೆಸಿಕೊಂಡಿದ್ದಾರೆ. ಈಕೆ ಮಮತಾ ಶೈನಿ ಡಿಸೋಜ ಎಂಬವರಿಗೆ ರೂ.3 ಲಕ್ಷ ಅಂದಾಜು ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಯಾಗಿದ್ದು, ಇದೀಗ ತಲೆಮರೆಸಿಕೊಂಡಿದ್ದಾರೆ.
2020 ರ ಜ.6 ರಂದು ಪ್ರಕರಣ ಸಂಬಂಧ ಕೇಸು ದಾಖಲಾಗಿತ್ತು. ಆ ಬಳಿಕ ನ್ಯಾಯಾಲಯದಲ್ಲಿ ಒಂಭತ್ತು ಬಾರಿ ವಾದ ವಿವಾದಗಳು ನಡೆದಿತ್ತು. ಇದೀಗ ನ್ಯಾಯಾಲಯ ಬಂಧನದ ಆದೇಶ ಹೊರಡಿಸಿದ್ದು, ಅಧ್ಯಕ್ಷೆ ತಲೆಮರೆಸಿಕೊಂಡಿದ್ದಾರೆ.
ಕೊಣಾಜೆ ಠಾಣಾ ಪೊಲೀಸರು ಶೋಧ ನಡೆಸಿದ್ದಾರೆ. ಆರೋಪಿತೆ ಚಂಚಲಾಕ್ಷಿ ಕೊಣಾಜೆ ಗ್ರಾಮದ ಪ್ರಥಮ ಪ್ರಜೆಯಾಗಿದ್ದು, ಆದರೆ ಇದೀಗ ಅಪರಾಧ ಪ್ರಕರಣದಲ್ಲಿ ಒಳಪಟ್ಟಿರುವುದರಿಂದ ಕೂಡಲೇ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿಗರು ಒತ್ತಾಯಿಸಿದ್ದಾರೆ.
`ಜ.1, 2019 ರಲ್ಲಿ ಮನೆಯಲ್ಲಿ ಕಷ್ಟ ಇದೆ, ಬ್ಯಾಂಕ್ ಸಾಲ ತೀರಿಸಲಾಗುತ್ತಿಲ್ಲ, ಮನೆ ಹರಾಜಿಗೆ ಬಂದಿದೆ, ಪತಿ ವಿದೇಶಕ್ಕೆ ಹೋಗುತ್ತಾರೆ. ಅದಕ್ಕಾಗಿ ಸಹಾಯ ಮಾಡಿ ಅಂದಿದ್ದರು. ಒಂದೇ ಪಕ್ಷದವಳು ಹಾಗೂ ಗೆಳತಿಯಾಗಿರುವುದರಿಂದ ಮೊದಲಿಗೆ ರೂ.2.5 ಲಕ್ಷ ನೀಡಿ ಬಳಿಕ ಮತ್ತೆ ರೂ. 50,000 ನೀಡಿದ್ದೆನು.
ಕರಾರುಪತ್ರದಲ್ಲಿ ಮೂರು ತಿಂಗಳೊಳಗೆ ಹಣವನ್ನು ವಾಪಸ್ಸು ನೀಡುವುದಾಗಿ ಒಪ್ಪಿಕೊಂಡಂತೆ ರೂ. 3 ಲಕ್ಷದ ಚೆಕ್ ಅನ್ನು ಪಡೆದುಕೊಂಡಿದ್ದೆನು. ಆದರೆ ಮೂರು ತಿಂಗಳಾದರೂ ಹಣ ನೀಡದೇ ಸತಾಯಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದೆನು.
ಅಲ್ಲಿ ಎರಡು ಬಾರಿ ವಿಚಾರಣೆಗೆ ಹಾಜರಾದರೂ ಆನಂತರ ನಡೆದು ಐದು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿದೆ.
ಜ.7 ರಂದು ಬಂಧನದ ವಾರೆಂಟ್ ಜಾರಿಯಾಗಿದ್ದರೂ ಪೊಲೀಸರು ಆರೋಪಿತೆಯನ್ನು ಹಿಡಿದಿರಲಿಲ್ಲ. ಅದಕ್ಕಾಗಿ ಉಳ್ಳಾಲ ನಿವಾಸಿ ಮಮತಾ ಶೈನಿ ಡಿಸೋಜ ಅವರು ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ್ದರು. ಬಳಿಕ ಕೊಣಾಜೆ ಪೊಲೀಸರ ಜೊತೆಗೆ ಶೈನಿಯವರು ಆಕೆಯ ಮನೆಗೆ, ಪಂಚಾಯಿತಿಗೆ ತೆರಳಿದ್ದರೂ ಆಕೆ ಪತ್ತೆಯಾಗಲಿಲ್ಲ.
ಮನೆಗೆ ಬೀಗ ಹಾಕಲಾಗಿತ್ತು, ಮೊಬೈಲ್ ಸ್ವಿಚ್ ಆಫ್ ಆಗಿದ್ದು, ತಾನು ಪೊಲೀಸ್ ಠಾಣೆಗೆ ಎರಡು ದಿನಗಳಿಂದ ಅಲೆದಾಡುತ್ತಿದ್ದೇನೆ ‘ ಎಂದು ಮಮತಾ ಶೈನಿ ಡಿಸೋಜ ಮಾಧ್ಯಮಕ್ಕೆ ತಿಳಿಸಿದ್ದಾರೆ.
LATEST NEWS
ಒಡೆಯನನ್ನು ಹಾವಿನಿಂದ ಬಚಾವ್ ಮಾಡಿದ ಸಾಕು ನಾಯಿ.!
ಮಂಗಳೂರು: ನಾಯಿಗೆ ಇರುವಷ್ಟು ನಿಯತ್ತು ಬಹುಶಃ ಯಾವುದೇ ಪ್ರಾಣಿಗಳಲ್ಲೂ ಇಲ್ಲ ಅನ್ನೋ ಮಾತು ಸಾಕಷ್ಟು ಬಾರಿ ರುಜುವಾತಾಗಿದೆ. ಇದೀಗ ಚಿತ್ರದುರ್ಗದ ಗ್ರಾಮವೊಂದರಲ್ಲಿ ಯಜಮಾನನ ಪ್ರಾಣ ಕಾಪಾಡುವ ಮೂಲಕ ಇದು ಮತ್ತೊಮ್ಮೆ ಸಾಬೀತಾಗಿದೆ. ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಎಂಬಲ್ಲಿ ಈ ಘಟನೆ ನಡೆದಿದ್ದು ಜನರು ನಾಯಿಯ ನಿಯತ್ತಿಗೆ ಶರುಣು ಎಂದಿದ್ದಾರೆ. ಪ್ರಗತಿಪರ ರೈತ ಡಾ. ಆರ್.ಎ.ದಯಾನಂದ ಮೂರ್ತಿ ಎಂಬವರನ್ನು ಅವರ ಸಾಕು ನಾಯಿ ನಾಗರ ಹಾವಿನಿಂದ ರಕ್ಷಣೆ ಮಾಡಿದೆ.
ಈ ನಾಲ್ಕು ತಿಂಗಳ ಮಗುವಿನ ಸಾಧನೆ ಕೇಳಿದ್ರೆ ಶಾಕ್ ಆಗ್ತೀರಾ..!
ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ದಯಾನಂದ ಮೂರ್ತಿ ಅವರು ವಿಶ್ರಾಂತಿಗೆ ಅಂತ ಮಾವಿನ ಮರಕ್ಕೆ ಒರಗಿಕೊಂಡು ಮಲಗಿದ್ದಾರೆ. ಈ ವೇಳೆ ಮರದ ಇನ್ನೊಂದು ಪಕ್ಕದಲ್ಲಿದ್ದ ನಾಗರಹಾವು ಇವರನ್ನು ಗಮನಿಸಿ ಹೆಡೆಯೆತ್ತಿ ನಿಂತಿದೆ. ಆದ್ರೆ ನಾಗರ ಹಾವು ತನ್ನ ಹಿಂದೆ ಇದೆ ಅನ್ನೋ ವಿಚಾರ ದಯಾನಂದ ಮೂರ್ತಿ ಅವರ ಗಮನಕ್ಕೆ ಬಂದಿರಲಿಲ್ಲ. ಇದೇ ವೇಳೆ ಮಾಲೀಕನನ್ನು ಹಿಂಬಾಲಿಸಿಕೊಂಡು ಬಂದಿದ್ದ ನಾಯಿ ಹಾವನ್ನು ಗಮನಿಸಿದೆ. ತಕ್ಷಣ ಬೊಗಳುತ್ತಾ ಇನ್ನೊಂದು ಬದಿಗೆ ಹಾವಿನ ಗಮನವನ್ನು ಸೆಳೆದಿದೆ. ನಾಯಿ ಯಾಕೆ ಹೀಗೆ ತನ್ನ ಹಿಂದಿನಿಂದ ಬೊಗಳುತ್ತಿದೆ ಅಂತ ಗಮನಿಸಿದ ರೈತನಿಗೆ ತನ್ನ ಹಿಂದೆ ಇದ್ದ ದೊಡ್ಡ ನಾಗರ ಹಾವು ಕಾಣಿಸಿದೆ. ತಕ್ಷಣ ಅಲ್ಲಿಂದ ಎದ್ದು ದೂರು ಹೋದ ರೈತ ದಯಾನಂದ ಮೂರ್ತಿ ಬಳಿಕ ಹಾವನ್ನು ತೋಟದಿಂದ ದೂರ ಓಡಿಸಿದ್ದಾರೆ. ಸಾಕು ನಾಯಿ ತೋರಿದ ನಿಯತ್ತಿನಿಂದಾಗಿ ನಾಗರ ಹಾವು ಕಚ್ಚುವುದರಿಂದ ದಯಾನಂದ ಮೂರ್ತಿ ಅವರು ಬಚಾವ್ ಆಗಿದ್ದಾರೆ. ಇದೀಗ ಈ ವಿಚಾರ ಸಾಕಷ್ಟು ಸುದ್ದಿಯಾಗಿದ್ದು, ನಾಯಿಯ ನಿಯತ್ತನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.
FILM
ಕನ್ನಡ ಸಿನೆಮಾ ನಟನ ಮೇಲೆ ಮಾರಣಾಂತಿಕ ಹಲ್ಲೆ..! ‘ನ್ಯಾಯ ಬೇಕು’ ಎಂದು ವೀಡಿಯೋ ಮಾಡಿದ ನಟ
ಬೆಂಗಳೂರು: ಕನ್ನಡದ ಹಲವು ಸಿನೆಮಾಗಳಲ್ಲಿ ನಟಿಸಿರುವ ಚೇತನ್ ರವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿದೆ. ಬೆಂಗಳೂರಿನ ಕಗ್ಗಲಿಪುರದಲ್ಲಿ ಈ ಕೃತ್ಯ ನಡೆದಿದೆ. ಸುಮಾರು 20 ಜನರ ತಂಡದಿಂದ ಚೇತನ್ ರವರ ಮೇಲೆ ಅಟ್ಯಾಕ್ ಆಗಿದ್ದು ರಕ್ತ ಸುರಿಯುವ ಹಾಗೆ ಹಲ್ಲೆ ನಡೆಸಿದ್ದಾರೆ. ತಾಯಂದಿರ ದಿನದಂದೆ ಈ ಘಟನೆ ನಡದಿದ್ದು ಚೇನತ ಬೇಸರ ವ್ಯಕ್ತಪಡಿಸಿದ್ದಾರೆ.
ನಿನ್ನೆ ತಾಯಂದಿರ ದಿನವಾಗಿದ್ದರಿಂದ ಚೇತನ್ ತಾಯಿ ಜೊತೆ ದೇವಸ್ಥಾನಕ್ಕೆ ಹೋಗಿ ಮರಳಿ ಬರುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ. ಕಾರು ಅಡ್ಡ ಗಟ್ಟಿ ಸುಮಾರು 20 ಜನರ ಕಿಡಿಗೇಡಿಗಳ ತಂಡ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ‘ನನ್ನ ಕಾರಿಗೂ ಹಾನಿ ಮಾಡಿದ್ದಾರೆ. ಕಿಡಿಗೇಡಿಗಳು ಮದ್ಯ ಸೇವನೆ ಮಾಡಿದ್ದರು. ಇದು ನನ್ನ ಜೀವನದಲ್ಲಿ ನಡೆದಿರುವ ಅತೀ ಕೆಟ್ಟ ಘಟನೆ. ನನಗೆ ನ್ಯಾಯ ಸಿಗಬೇಕು ಎಂದು ನಟ ಚೇತನ್ ಹೇಳಿದ್ದಾರೆ. ಸುಮಾರು 20 ಜನ ಸೇರಿಕೊಂಡು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅದರ ವಿಡಿಯೋ ಇದೆ. ಮೂಗು ಮುರಿದು ಹಾಕಿದ್ದಾರೆ. ಕಗ್ಗಲಿಪುರ ಪೊಲೀಸ್ ಠಾಣೆ ಪಕ್ಕದಲ್ಲಿ ಪ್ರಥಮ ಚಿಕಿತ್ಸೆ ಪಡೆಯಲು ಬಂದಿದ್ದೇನೆ. ಈಗ ಮತ್ತೆ ಬಂದು ಕಾರು ಒಡೆದು ಹಾಕಿದ್ದಾರೆ. ಅವರು ತುಂಬ ಕೆಟ್ಟ ಜನ ಎಂದು ಚೇತನ್ ಚಂದ್ರ ಹೇಳಿದ್ದಾರೆ.
ಅಪಘಾತದಲ್ಲಿ ಕನ್ನಡದ ನಟಿಯ ದುರಂತ ಸಾ*ವು..!
ಇನ್ನು ಹಲ್ಲೆಗೊಳಗಾದ ಚೇತನ್ ಪ್ರಥಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದು ಅಲ್ಲಿchetan_chanddrra ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ವೀಡಿಯೋ ಮಾಡಿ ತಮ್ಮ ಮೇಲೆ ನಡೆದಿರುವ ಹಲ್ಲೆಯ ಬಗ್ಗೆ ತಿಳಿಸಿದ್ದಾರೆ.
LATEST NEWS
ಈ ನಾಲ್ಕು ತಿಂಗಳ ಮಗುವಿನ ಸಾಧನೆ ಕೇಳಿದ್ರೆ ಶಾಕ್ ಆಗ್ತೀರಾ..!
ಬೆಂಗಳೂರು: ಹುಟ್ಟಿದ ನಾಲ್ಕು ತಿಂಗಳಿನಲ್ಲಿ ಮಗುವೊಂದು ವಿಶ್ವದಾಖಲೆಯನ್ನು ನಿರ್ಮಿಸಿದೆ. ಬೆಂಗಳೂರಿನ ಪ್ರಜ್ವಲ್ ಹಾಗೂ ಸ್ನೇಹಾ ದಂಪತಿ ಪುತ್ರಿ ಇಶಾನ್ವಿ.ಪಿ ಹೆಸರಿನ ನಾಲ್ಕು ತಿಂಗಳ ಮಗು ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಈ ಪುಟ್ಟ ಕಂದಮ್ಮ ಎರಡು ತಿಂಗಳಿದ್ದಾಗಲೇ ಪೋಷಕರು ಎರಡು ಫ್ಲಾಶ್ ಕಾರ್ಡ್ ಇಟ್ಟು ಒಂದನ್ನು ಗುರುತಿಸುವಂತೆ ಹೇಳಿದರೆ, ಅದಕ್ಕೆ ಸರಿಯಾದ ಕಾರ್ಡ್ ಸೆಲೆಕ್ಟ್ ಮಾಡುತ್ತಿದ್ದಳು. ಇದನ್ನು ತಾಯಿ ಸ್ನೇಹಾ ಗಮನಿಸಿದ್ದಾರೆ.
125 ಫ್ಲಾಶ್ ಕಾರ್ಡ್ಗಳನ್ನು ಗುರುತಿಸುತ್ತಾಳೆ ಇಶಾನ್ವಿ:
ಇಶಾನ್ವಿ ಸುಮಾರು 125 ವಿವಿಧ ರೀತಿಯ ವಸ್ತುಗಳು, ಪ್ರಾಣಿ-ಪಕ್ಷಿಗಳು, ತರಕಾರಿ ಫೊಟೋಗಳನ್ನು ಗುರುತಿಸುತ್ತಾಳೆ. ಅದರಲ್ಲಿ 10 ಹಕ್ಕಿಗಳು, 15 ತರಕಾರಿಗಳು, 10 ಕಾಡು ಪ್ರಾಣಿಗಳು, 10 ಸಾಕು ಪ್ರಾಣಿಗಳು, 11 ಕಲರ್ಸ್, 10 ವಿವಿಧ ದೇಶದ ಧ್ವಜಗಳು, 10 ವಾಹನಗಳು, 14 ಹಣ್ಣುಗಳು, 13 ಜನರಲ್ ಇಮೇಜ್, 12 ಶೇಪ್ಸ್ಗಳನ್ನು ಗುರತಿಸುವ ಸಾಮರ್ಥ್ಯ ಹೊಂದಿದ್ದಾಳೆ ಈ ಪುಟ್ಟ ಪೋರಿ. 125 ಫ್ಲಾಶ್ ಕಾರ್ಡ್ಗಳನ್ನು ಗುರುತಿಸುವ ಮೂಲಕ ಇಡೀ ಜಗತ್ತೇ ಬೆರಗಾಗುವಂತೆ ಮಾಡಿದ್ದಾಳೆ.
ಮುಲ್ಕಿ: ಚಿಪ್ಪು ಹೆಕ್ಕಲು ಹೋಗಿ ನೀರಲ್ಲಿ ಕಣ್ಮರೆಯಾದ ಯುವಕ.! ಪತ್ತೆಗೆ ಶೋಧ
ಇನ್ನು ಮಗುವಿನ ಸಾಮರ್ಥ್ಯವನ್ನು ಅರಿತ ಮಗುವಿನ ತಾಯಿ ಸ್ನೇಹಾ ತನ್ನ ಕುಟುಂಬದವರ ಸಹಾಯದಿಂದ ವೀಡಿಯೋ ರೆಕಾರ್ಡ್ ಮಾಡಿ ನೋಬಲ್ ವರ್ಲ್ಡ್ ರೆಕಾರ್ಡ್ಗೆ ಕಳುಹಿಸಿಕೊಟ್ಟಿದ್ದರು. ಅಲ್ಲಿ ಮಗುವಿನ ಅಸಾಮಾನ್ಯ ಪ್ರತಿಭೆಯನ್ನು ಗುರುತಿಸಿ ವಿಶ್ವ ದಾಖಲೆಗೆ ಆಯ್ಕೆ ಮಾಡಿದೆ. ಆಂಧ್ರಪ್ರದೇಶದ ನಾಲ್ಕು ತಿಂಗಳ ಮಗು ಕೈವಲ್ಯ ಮಾಡಿದ್ದ ಸಾಧನೆಯನ್ನು ಇಶಾನ್ವಿ ಹಿಂದಿಕ್ಕಿದ್ದಾಳೆ. ಕೈವಲ್ಯ 120 ಫ್ಲಾಶ್ಗಳನ್ನು ಗುರುತಿಸಿದ್ರೆ, ಇಶಾನ್ವಿ 125 ಫ್ಲಾಶ್ಗಳನ್ನು ಗುರುತಿಸುವ ಮೂಲಕ ವಿಶ್ವ ದಾಖಲೆಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾಳೆ.
- LATEST NEWS7 days ago
ಐವರು ಮೆಡಿಕಲ್ ವಿದ್ಯಾರ್ಥಿಗಳು ನೀರುಪಾಲು…!
- DAKSHINA KANNADA7 days ago
ಆಸ್ಪತ್ರೆ ಸೆಲ್ ನಲ್ಲಿ ಕುಣಿಕೆಗೆ ಕೊರೊಳೊಡ್ಡಿದ ಖೈದಿ..!
- LATEST NEWS7 days ago
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ; ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ನಿರ್ಬಂಧ..!
- LATEST NEWS7 days ago
SSLC ಫಲಿತಾಂಶ ಪ್ರಕಟಿಸಲು ದಿನಾಂಕ ನಿಗದಿ; ಯಾವಾಗ?